Thursday, September 26, 2013

ಅಭಿನಂದನೆಗಳು

 ಕರ್ಣಾಟಕ ಇತಿಹಾಸ ಅಕಾದಮಿಯ ೨೭ನೆಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನೂರಕ್ಕೂ ಹೆಚ್ಚಿನ
ಗೋಷ್ಠಿಗಳಲ್ಲಿ ಸಂಪ್ರಬಂಧಗಳನ್ನು ಮಂಡಿಸಿದ ಹಿರಿಕಿರಿಯ  ಸಂಶೋಧಕರು , ಅವರಿಗೆ ಮಾರ್ಗದರ್ಶನ ನೀಡಿದ ವಿದ್ವಾಂಸರು ,ಭಾಗವಹಿಸಿದ ಇತಿಹಾಸಕ್ತರುಗಳಿಗೆ ಅಕಾದಮಿಯ ಹೃದಯ ಪೂರ್ವಕ ಅಭಿನಂದನೆಗಳು.

ಇದೇ ಸಂದರ್ಭದಲ್ಲಿ  ದ್ವಿತಿಯ ಪದವಿಪೂರ್ವತರಗತಿಗಳಿಗೆ ಪಠ್ಯಕ್ರಮವನ್ನು ಬದಲಿಸುತ್ತಿರುವುದರಿಂದ  ಕರ್ನಾಟಕ  ಇತಿಹಾಸದ ಇತ್ತೀಚಿನ ಸಂಶೋಧನೆಗಳಿಂದ ಹೊರಬಂದ ಮಾಹಿತಿಯನ್ನು ಸೇರ್ಪಡಿಸುವ ಅಗತ್ಯವಿದೆ. ಅದಕ್ಕಾಗಿ ಡಾ. ಅ. ಸುಂದರ ಅವರಿಗೆ  ಕರ್ನಾಟಕ ಇತಿಹಾಸ ಅಕಾದಮಿಯುಸೂಕ್ತ ಕ್ರಮ ತೆಗೆದುಕೊಳ್ಳಲು ಕೋರಿದೆ. ಆದ್ದರಿಂದ ಮಾಹಿತಿ ಇರುವ ಸದಸ್ಯರು ಪಠ್ಯಪುಸ್ತಕದಲ್ಲಿ ಸೇರಿಸ ಬಹುದು ಎನಿಸಿದ ಮಾಹಿತಿಯನ್ನು ಡಾ. ಅ. ಸುಂದರ ಅವರಿಗೆ ಇಲ್ಲವೆ ಕರ್ನಾಟಕ ಇತಿಹಾಸ ಅಕಾದಮಿಗೆ ಕಳುಹಿಸಿದರೆ ಅದನ್ನು ಪಠ್ಯಪುಸ್ತಕ ಸಮಿತಿಯ ಗಮನಕ್ಕೆ ತರಲಾಗುವುದು. ಸದಸ್ಯರ ಸಹಕಾರ ಕೋರಿದೆ.
 

ಅಧ್ಯಕ್ಷರು
ಇತಿಹಾಸ ಅಕಾದಮಿ

No comments:

Post a Comment