Friday, January 9, 2015

ಕಂಚಿನ ವಜ್ರಸತ್ವದ ಹಿಂಭಾಗದಲ್ಲಿರುವ ಅಪ್ರಕಟಿತ ಶಾಸನ


ಮಂಗಳೂರಿನ ಶ್ರೀಮಂತಿಬಾಯಿ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿರುವ ಕಂಚಿನ ವಜ್ರಸತ್ವದ ಹಿಂಭಾಗದಲ್ಲಿರುವ ಅಪ್ರಕಟಿತ ಶಾಸನ
ಶೇಜೇಶ್ವರ ಆರ್.
ಕರ್ನಲ್ ಮಿರಾಜ್‍ಕರ್‍ರವರು ಮಂಗಳೂರಿನ ಬಿಜೈನಗುಡ್ಡದಲ್ಲಿ 1939ರಲ್ಲಿ ಮುಂಬೈನ ನುರಿತ ಇಂಜಿನಿಯರು ಹಡಗಿನ ಆಕಾರದಲ್ಲಿ ಕಟ್ಟಡ ನಿರ್ಮಿಸಿದರು. 1955ರಲ್ಲಿ ತನ್ನ ತಾಯಿಯ ನೆನಪಿಗೋಸ್ಕರ ಸರ್ಕಾರಕ್ಕೆ ದಾನ ನೀಡಿದ ನಂತರ ತಾಯಿಯ ಹೆಸರಿನಲ್ಲಿಯೇ ದಿನಾಂಕ: 04-05-1960ರಲ್ಲಿ ಅಧಿಕೃತವಾಗಿ ಆಗಿನ ಉಪರಾಷ್ಟ್ರಪತಿಯಾಗಿದ್ದ ಶ್ರೀಮಾನ್ ಬಿ.ಡಿ. ಜತ್ತಿಯವರು ಶ್ರೀಮಂತಿಬಾಯಿ ಸರ್ಕಾರಿ ವಸ್ತುಸಂಗ್ರಹಾಲಯ ಎಂಬ ನಾಮಕರಣದೊಂದಿಗೆ ವಸ್ತುಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದರು. ಈ ಬಂಗಲೆಯನ್ನು ಯಥಾಸ್ಥಿತಿಯಾಗಿ ಕಾಪಾಡಿಕೊಂಡು ವಸ್ತುಸಂಗ್ರಹಾಲಯವನ್ನು ಮಾಡಲಾಗಿದೆ, ಇಲ್ಲಿ ಹೆಚ್ಚಿನದಾಗಿ ಮಿರಾಜ್‍ಕರ್‍ರವರು ದೇಶವಿದೇಶದಿಂದ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ, ಇದು ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸರ್ಕಾರಿ ವಸ್ತುಸಂಗ್ರಹಾಲಯವಾಗಿದೆ.
ಕರ್ನಲ್ ಮಿರಾಜ್‍ಕರ್‍ರವರು ಸಂಗ್ರಹಿಸಿದ ಪ್ರಾಚ್ಯವಸ್ತುಗಳಲ್ಲಿ ನೇಪಾಳದಿಂದ 08-05-1957ರಲ್ಲಿ ಸಂಗ್ರಹಿಸಿದ ಕಂಚಿನ ವಜ್ರಸತ್ವ ವಿಗ್ರಹವು ಸಹಾ ಒಂದು, ಬೌದ್ಧ ಧರ್ಮದಲ್ಲಿ ನಾವು ಪ್ರಮುಖವಾಗಿ ಮೂರು ಶಾಖೆಗಳನ್ನು ನೋಡಬಹುದು, ಹೀನಯಾನ, ಮಹಾಯಾನ, ಮತ್ತು ವಜ್ರಯಾನ. ಹೀನಯಾನದಲ್ಲಿ ಬುದ್ಧನ ತತ್ವಗಳಿಗೆ ಮಹತ್ವ ಕೊಟ್ಟರೆ, ಮಹಾಯಾನಲ್ಲಿ ಬುದ್ಧನನ್ನು ಅವತಾರ ಪುರುಷನೆಂದು ಪರಿಗಣಿಸಿ ದೇವತ್ವಪಟ್ಟವನ್ನು ಕಟ್ಟಲಾಯಿತು. ಮಹಾಯಾನದಿಂದ ಮುಂದುವರಿದ ಶಾಖೆಯೇ ವಜ್ರಯಾನ (ತಾಂತ್ರಿಕ ಬೌದ್ಧಧರ್ಮ) ಎಂದು ಕರೆದರು, ಹೀನಯಾನವು ನಿರ್ವಾಣವನ್ನು ಶೂನ್ಯವೆಂದು ಕರೆದರೆ, ಮಹಾಯಾನವು ಶೂನ್ಯ ಮತ್ತು ವಿಜ್ಞಾನವೆಂದು, ವಜ್ರಯಾನವು ಶೂನ್ಯ, ವಿಜ್ಞಾನ, ಮಹಾಸುಖ ಎಂದು ಹೇಳುತ್ತದೆ.
ವಜ್ರಯಾನದಲ್ಲಿ ಅಸಂಖ್ಯಾತ ದೇವತೆಗಳು, ಅವರ ಪೂಜಾವಿಧಾನಗಳು ಮುಖ್ಯ, ಈ ವಜ್ರಸತ್ವ (ಅಥವಾ ಆದಿಬುದ್ಧನ)ನ ಪಂಚಗುಣಗಳಿಂದ ಪಂಚಧ್ಯಾನಗಳೂ ಈ ಪಂಚಧ್ಯಾನಗಳಿಂದ ಐವರು ಧ್ಯಾನಬುದ್ಧರು ಉದಯಿಸಿದರು, ವೈರೋಚನ, ರತ್ನಸಂಭವ, ಅಮಿತಾಭ, ಅಮೋಘ ಸಿದ್ಧಿ, ಅಕ್ಷೋಬ್ಯ ಈ ಐವರಿಗೂ ಕ್ರಮವಾಗಿ ವಜ್ರಧಾತೇಶ್ಚರಿ, ಲೋಚನಾ, ಮಾಮಕಿ, ಪಾಂಡರಾ, ತಾರಾ ಎಂಬ ಐವರು ಶಕ್ತಿ ದೇವತೆಗಳುಂಟು, ಬೌದ್ಧರ ದೇವತೆಗಳೆಲ್ಲ ಈ ಧ್ಯಾನಿಬುದ್ಧರ ಕುಲಗಳಿಗೆ ಸೇರಿದವರು, ಈ ದೇವತೆಗಳನ್ನು ತಾಂತ್ರಿಕ ವಿಧಾನಗಳಿಂದ ಅರ್ಚಿಸಿದವರು ವಜ್ರಸತ್ವರಾಗುತ್ತಾರೆ, ಪ್ರಜ್ಞಾ ಎಂಬ ವಧು ಉಪಾಯ ಎಂಬ ವರ ಇವರಿಬ್ಬರ ಮಿಲನದಿಂದಲೇ ಮನುಷ್ಯ ಪೂರ್ಣನಾಗುವುದು, ಇದನ್ನೇ ನೇಪಾಳದಲ್ಲಿ ಕಮಲದಿಂದೇಳುವ ಅಗ್ನಿಯ ಮೂಲಕ ತೋರಿಸಲಾಗಿದೆ, ವಜ್ರಯಾನದ ಪ್ರಕಾರ ಸ್ತ್ರೀ ಪುರುಷರಾಗಿ ಕಾಣಿಸಿಕೊಂಡಿವೆ. 500 ಸುಮಾರಿಗೆ ತಂತ್ರದ ಪ್ರಭಾವದಿಂದ ತಾಂತ್ರಿಕ ಬೌದ್ಧ ಪಂಥ ನೇಪಾಳದಲ್ಲಿ ಬೆಳೆಯಿತು ಎನ್ನಬಹುದು.
ಈ ಕಂಚಿನ ವಜ್ರಸತ್ವವು ನೇಪಾಳದಿಂದ ಸಂಗ್ರಹಿಸಿದಾಗಿದ್ದು, 57 ಸೆ.ಮೀ. ಉದ್ದ, 22 ಸೆ.ಮೀ. ಆಗಲವಿದೆ. ಹೂವಿನ ಪ್ರಭಾವಳಿಯನ್ನು ಹೊಂದಿದ್ದು, ಕಮಲದ ಪೀಠದಮೇಲೆ ಪದ್ಮಾಸನದಲ್ಲಿ ಕುಳಿತಿದೆ, ಎಡಗೈಯಲ್ಲಿ ಘಂಟೆಯನ್ನು, ಕೊರಳಲ್ಲಿ ಮಾಲೆಯನ್ನು ಧರಿಸಿದೆ, ತಲೆಯು ಹಾಗೂ ಮುಂಭಾಗದ ಪೀಠವು ಅಲಂಕಾರದಿಂದ ಕೂಡಿದೆ, ಪೀಠದ ಹಿಂಭಾಗದ ಮೇಲೆ ಹನ್ನೆರಡು ಸಾಲಿನ ಶಾಸನವಿದ್ದು, ಇದು ಸಂಸ್ಕøತ ಭಾಷೆ ಹಾಗೂ ನಾಗರಿಲಿಪಿಯಲ್ಲಿದೆ.
ಶಾಸನದ ಪಾಠ
1 ಸಿದ್ಧಮಂ ಓಂ ನಮಃ ಶ್ರೀ ರಜಸತ್ವಾಯ || ಶ್ರೀ ಗುರುಕರಾತ್ ನಾಯದಹಿ
2 ಮಹಿಸತಗುರೂಂ ಧ್ಯಾನಯಾಗತನುಮನುಬುದ್ಧಿ ಗುಹಿ
3 ಸನವಾಕ್ರಿತಃ ರಾಗ(ಶೋಕ) ಕಸೂದ್‍ಃ ಖದಾರಿ
4 ಜಾಸನಂ ತ್ವಂತಜಾಮಿ ತ್ವಂತಜಾಮಿ ಶ್ರೀ ಗುರು || ಶ್ರೀ ವಜಸ್
5 ಭೂಯಗಮ್ ಕ್ರಿತ ಕ್ರಿಲಾ ತಥಾ ನಿಮಿತಿನಂ ಚಾನಉ ಯಾಜಿಪಿ ಸಂಪನ್ನೂಂ
6 ರಾಜಾಯ ಕ£ದಾನ ಶ್ರೇಯಸ್ತು ಸಂವತೂ 1023 ಗಿ ಆಷಾರ್ ಮಾಸೆ ಶುಕ್(ಲ)
7 ಪಕ್ಷಃ ಪತಿ ಪದಿ ಪರ್ ದ್ವಿತಿಯಾಷು ಸ್ವಪಿತಾ ವಿಜಯಾಚಾರ್ಯೆ ಶ್ರೀ ಹರ್ಷ್ ದಿವಂಗತ ಜ
8 . . . . . . . ನಾಮನಂ ಸವರ್ಗರ್ ಪಿತ್ ಶ್ರೀ ವಜಸತ್ವಸ್ಯಾಮೂರ್ತಿ ದೇಯ ಕಾ(ಡಾ)   ಪಾನ್ ಪತಿಸ್ಯಾಪಾ
9 ನಾ ದೀ ನೇಜಲ್ || ಥ್ವಮಾದಾನ್ ಪತಿ ಪಯ್ ಪುತ್ರ್ ಹರ್ಷ್ ಜಾತಿ ಪುತ್ರ್ ಶ್ರೀ ಹರ್ಷದ್ವಜಃ ಪುತ್ರ್ ಶ್ರೀ ದಯಾಮುನಿ
10 ಪುತ್ರ್ ಶ್ರೀ ಪಚಾನಮುನಿ ಪಾತು ಸಿದ್ಧಿಪತಿಪಾತು ಜಲಾಜಪಾತು ರ್ದುರಮರರ್ತ್‍ನ ಪಾತು ಧಮುನಿಪಮ್
11 ಸ್ರ್ವಸ್ವ(ಸ್ವ) ತಾರ್ಯಾದಿಂ ಸಕ¯ ಪಾವಮಚಿತ್ರ ಜಯಾಜಾಂದೇವಕಾಜಲ್ || ಸ್ವದಂತ್ ಪರದಂತೆ ವಾಯೋ ಹರೇ
12 . . . . . ಷಷ್ಟಿವರ್ಷ್ ಸಹಸ್ರಾಣಿ . . ವಿಷ್ತಾಯಂ ಜಾಯತೇ ಕ್ರಿಮಿಃ ಶ್ರೀ . . . . .

ಶಾಸನದ ಸಾರಂಶ
ಈ ಶಾಸನದಲ್ಲಿ ಶ್ರೀ ಗುರುವಿನ ಶರಚರಣಗಳಿಗೆ ವಂದಿಸುತ್ತ, ವiಹಾಸತ್ವಶಾಲಿಯಾದ ಗುರುವಿಗೆ ಧ್ಯಾನದಿಂದ ಯಾಗದಿಂದ ತನುಮನಬುದ್ಧಿಯನ್ನು ಪ್ರಚೋದಿಸಿ ಶೋಕಗಳಿಂದ ಮುಕ್ತನಾಗಿ ದಾರಿಯನ್ನು ತೋರಿಸುವ ಗುರುವಿನ ಆಸನಗಳಿಗೆ ತಲೆಬಾಗುತ್ತೇನೆ. ಭೂಮಿಯಲ್ಲಿರುವ ಸಂಪನ್ಮೂಲಗಳು ಹಾಗೆಯೇ ಉಳಿಯಲಿ ರಾಜನಿಗೆ ಶ್ರೇಯಸ್ಸು ದೊರೆಯುವುದಕ್ಕೋಸ್ಕರ 1023ನೇ ಕನಿದಾನ ಸಂವತ್ಸರದ ಅಷಾಡಮಾಸ ಶುಕ್ಲಪಕ್ಷದ ಮೊದಲನೆ ದಿನದ ನಂತರ ಮರಣವನ್ನಪ್ಪಿದ ತಂದೆ ವಿಜಯಾಚಾರ್ಯ ಶ್ರೀ ಹರ್ಷಧÀ್ವಜನ ಯಶಸ್ವಿಗಾಗಿ ಶ್ರೀ ಹರ್ಷದ್ವಜನ ಮಗ ದಯಾಮುನಿಯು ವಜ್ರಸತ್ವಮೂರ್ತಿಯನ್ನು ತನ್ನ ಗುರುವಿಗೆ ದಾನ ನೀಡುತ್ತಾನೆ, ಅವರಿಗೆ ಸಿದ್ಧಿ ದೊರೆಯಲಿ ಜಲಚರ ಪ್ರಾಣಿಗಳಿಂದಲೂ ಧರ್ಮ ಅರ್ಥ ಮೋಕ್ಷ ಸರ್ವಸ್ವ ಎಲ್ಲವೂ ಇಹಲೋಕ ಪರಲೋಕದಲ್ಲಿ ಸಿಗಲಿ ಎಂದು ನದಿನೀರಿನಲ್ಲಿ ತರ್ಪಣ ಬಿಡುತ್ತಾನೆ, ಕೊನೆಯಲ್ಲಿ ಇದನ್ನು ನಾಶ ಮಾಡಿದರೆ ಕ್ರಿಮಿಯಾಗುವೆ ಎಂಬ ಶಾಪಾಶಯದೊಂದಿಗೆ ಕೊನೆಗೊಳ್ಳುತ್ತದೆ.
[ಕೃತಜ್ಞತೆ: ಈ ಪ್ರಬಂಧವನ್ನು ರಚನೆ ಮಾಡುವಲ್ಲಿ ಸಹಕರಿಸಿದ ಡಾ. ಎಸ್.ಜಿ. ಸಾಮಕ್, ಡಾ. ಜಗದೀಶ, ಹಾಗೂ ನನ್ನ ಗುರುಗಳು ಸಂಶೋಧನಾ ಮಾರ್ಗದರ್ಶಕರಾದ ಡಾ.ಹನುಮನಾಯಕರವರಿಗೆ, ಶಾಸನಶಾಸ್ತ್ರ ವಿಭಾಗ, ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ ಮೈಸೂರು, ಹಾಗೂ ಆಯುಕ್ತರು, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಇವರುಗಳಿಗೆ ನಾನು ಅಭಾರಿಯಾಗಿರುತ್ತೇನೆ]
ಆಧಾರಸೂಚಿ
1. ಚಿದಾನಂದ ಸಮಗ್ರ ಸಂಪುಟ-1, ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ (ಕ್ರಿ,ಶ.450-1150) ಸ್ವಪ್ನ ಬುಕ್ ಹೌಸ್ ಗಾಂಧಿನಗರ, ಬೆಂಗಳೂರು-9, 2002.
2. ಬುದ್ಧ ನಡೆದ ಹಾದಿ, ಕೆ,ರಾಮು, ಶ್ರೀನಿಧಿ ಪಬ್ಲಿಕೇಷನ್ಸ್ ಬೆಂಗಳೂರು-53, 2013.
 ಕ್ಯುರೇಟರ್, ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಬಿಜೈ, ಮಂಗಳೂರು-04.

No comments:

Post a Comment