Sunday, January 11, 2015

ಕ್ಯಾಸನೂರು ಮತ್ತು ದೇವಿಕೊಪ್ಪದ ಹೊಸ ಶಾಸನಗಳು


ಕ್ಯಾಸನೂರು ಮತ್ತು ದೇವಿಕೊಪ್ಪದ ಹೊಸ ಶಾಸನಗಳು
ಡಾ. ಹನುಮಾಕ್ಷಿ ಗೋಗಿ
ಹಾನುಗಲ್ಲು ತಾಲೂಕಿನ ನೈಋತ್ಯ ದಿಕ್ಕಿನಲ್ಲಿ ತಾಲೂಕಿನ ಕೊನೆಯ ಮೇರೆಯಾಗಿರುವ ಮಲೆನಾಡಿನ ಒಂದು ಸುಂದರ ಹಳ್ಳಿ ಕ್ಯಾಸನೂರು. ಸುತ್ತಲೂ ಹಚ್ಚಹಸಿರು ಕಾಡು, ಗದ್ದೆಗಳು, ತೆಂಗು ಹಾಗೂ ಅಡಕೆ ತೋಟಗಳ ಮಧ್ಯೆ ಇರುವ ಊರು. ಊರ ಕೊನೆಯಲ್ಲಿರುವ ಕೆರೆಯನ್ನು ಇಂದು ದೇವರಹೊಂಡ ಎಂದು ಕರೆಯುತ್ತಿದ್ದು, ಅದರ ಅಂಚಿನಲ್ಲಿ ರಾಮೇಶ್ವರ ಮತ್ತು ಈಶ್ವರ ದೇವಾಲಯಗಳಿದ್ದು, ಈಶ್ವರ ದೇವಾಲಯದಲ್ಲಿ ಶಿವಲಿಂಗ ಹಾಗೂ ನಂದಿಗಳು ಮಾತ್ರ ಇವೆ. ದೇವಸ್ಥಾನದ ಗರ್ಭಗುಡಿಯನ್ನು ಇತ್ತೀಚೆಗೆ ಕಟ್ಟಲಾಗಿದೆ. ಅದರ ಹೊರಭಾಗದಲ್ಲಿ ಎರಡು ಕಂಬಗಳನ್ನು ತಂದು ನಿಲ್ಲಿಸಿದ್ದು, ಎರಡರ ಮೇಲೆಯೂ ಶಾಸನಗಳಿವೆ. ರಾಮೇಶ್ವರ ದೇವಾಲಯದ ಗರ್ಭಗುಡಿ ಮತ್ತು ಸುಕನಾಸಿಗಳು ಮಾತ್ರ ಈಗ ಉಳಿದಿದ್ದು, ಅಲ್ಲಿ ಕೇಶವನ ಶಿಲ್ಪವಿದೆ. ಸ್ತ್ರೀ ದೇವತೆಯೊಬ್ಬಳ ಭಗ್ನಶಿಲ್ಪವಿದೆ. ಉಳಿದೆಲ್ಲ ಭಾಗಗಳು ಬಿದ್ದುಹೋಗಿವೆ. ದೇವಾಲಯದ ಯಾವುದೇ ಅವಶೇಷಗಳು ಸುತ್ತಮುತ್ತಲೆಲ್ಲೂ ಇಲ್ಲ. ಹೊಂಡದಲ್ಲಿ ಸ್ವಲ್ಪ ನೀರಿದ್ದು, ಅದರಲ್ಲಿ ದೊರೆತ ಶಾಸನಗಳನ್ನು ತಂದು ರಾಮೇಶ್ವರ ದೇಗುಲದ ಮುಂದೆ ನಿಲ್ಲಿಸಲಾಗಿದೆ. ಇವುಗಳಲ್ಲಿ ಎರಡು ಈ ಹಿಂದೆ ಇಐ 5ರಲ್ಲಿ ಪ್ರಕಟಿತ ಶಾಸನಗಳಿವೆ. ಊರೊಳಗೆ ವೀರಭದ್ರ ದೇವಾಲಯವಿದ್ದು, ಕಟ್ಟಡವು ಇತ್ತೀಚಿನದಾಗಿದೆ. ಮುಂದೆ ಕಂಬವೊಂದನ್ನು ನಿಲ್ಲಿಸಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಸುಂದರ ಕಂಬವಿದಾಗಿದೆ. ಅದರ ಹತ್ತಿರವೇ 18-19ನೆಯ ಶತಮಾನದ ಮಾಸ್ತಿಕಲ್ಲೊಂದನ್ನು ನಿಲ್ಲಿಸಿದ್ದು, ಲಿಪಿ ಇದೆ. ಊರ ಮಧ್ಯದಲ್ಲಿ ಮನೆಯೊಂದರ ಬೇಲಿಯಲ್ಲಿ ಪಠ್ಯ ಪ್ರಕಟಿತವಾದ ಗೋಸಾಸವೊಂದನ್ನು ನಿಲ್ಲಿಸಿದೆ. ಇನ್ನೊಂದು ಮನೆಯ ಬೇಲಿಯಲ್ಲಿ ಲಿಪಿರಹಿತ ವೀರಗಲ್ಲೊಂದಿದೆ. ವಿಜಯಕಾಂತ ಪಾಟೀಲರ ಮನೆಯ ಹಿತ್ತಲಿನಲ್ಲಿ ಮರದಡಿ ಶಾಸನವೊಂದಿದ್ದು, ಈಗ ಅದನ್ನು ಪೂಜಿಸಲಾಗುತ್ತಿದೆ. ಐತಿಹಾಸಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಸಮೃದ್ಧವಾಗಿರುವ ಈ ಊರ ಸುತ್ತಲೂ ಇನ್ನೂ ಹೊಸ ಶಾಸನಗಳು ಬಹುಶಃ ಇರುವ ಸಾಧ್ಯತೆ ಇದೆ. ಇದಲ್ಲದೇ ಆನೆಗಳು ಮತ್ತು ಕೃಷಿ ಸಂಸ್ಕøತಿಯ ನಾಡಾಗಿರುವುದರಿಂದ ಇಲ್ಲಿ ಅಪರೂಪದ ಗೋಸಾಸ ಕಲ್ಲುಗಳೂ ದೊರೆತಿವೆ ಎನ್ನುವುದನ್ನು ಗಮನಿಸಬೇಕು.
ಕರ್ನಾಟಕದಾದ್ಯಂತ ಇದುವರೆಗೆ ಸು. 230 ಗೋಸಾಸ ಕಲ್ಲುಗಳು ದೊರೆತಿದ್ದು, ಅವುಗಳಲ್ಲಿ 57 ಲಿಪಿ ಸಹಿತ ಇವೆ. ಇವುಗಳ ಕುರಿತು ಈಗಾಗಲೇ ಡಾ. ಎಂ.ಎಂ. ಕಲಬುರ್ಗಿಯವರು ಮತ್ತು ಡಾ. ಎಂ.ಬಿ. ನೇಗಿನಹಾಳ ಅವರು ಲೇಖನಗಳನ್ನು ಬರೆದು, ಅವುಗಳ ಪಟ್ಟಿ ಮಾಡಲು ಪ್ರಯತ್ನಿಸಿದ್ದಾರೆ. ತದನಂತರ ಡಾ. ಭೋಜರಾಜ ಪಾಟೀಲರು ತಮ್ಮ ಮಹಾಪ್ರಬಂಧದಲ್ಲಿ ಇವುಗಳ ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಬಸಪ್ಪ ಹುಬ್ಬಳ್ಳಿ ಎನ್ನುವವರು ಎಂ.ಫಿಲ್. ಕೂಡ ಮಾಡಿದ್ದಾರೆ.
ಪಟ್ಟದಕಲ್ಲು, ಐಹೊಳೆಯ ಪ್ರಾಚೀನ ಗೋಸಾಸಗಳಿಂದ ಹಿಡಿದು, ಕುಬಟೂರು, ಕುಪ್ಪಗಡ್ಡೆ, ಮಲ್ಲೇನಹಳ್ಳಿ, ಅಸೂಟಿ, ಹೂಲಿ, ಬೆಟಕೆರೂರು, ಎಸಳೆ, ಸೋಮನಹಳ್ಳಿ, ಹುಸ್ನಿ, ಮುತ್ತಳ್ಳಿ, ಕರಿನೆಲ್ಲಿ, ಸಾತೇನಹಳ್ಳಿ, ತಿಳವಳ್ಳಿಗಳಲ್ಲಿ ಎಂದರೆ ಉತ್ತರದ ಹುನಗುಂದ ತಾಲೂಕಿ£ಂದ ದಕ್ಷಿಣದ ಸೊರಬ, ಸಾಗರ ತಾಲೂಕುಗಳವರೆಗೆ ಇವುಗಳ ವ್ಯಾಪ್ತಿ ಹಬ್ಬಿದೆ. ಇತ್ತೀಚೆಗೆ ನಾನು ಹಾನುಗಲ್ಲು ತಾಲೂಕಿನ ನರೇಗಲ್ಲು, ಸಾವೀಕೇರಿ, ಯಳವಟ್ಟಿ, ಹಿರೂರುಗಳಲ್ಲಿ ಇವುಗಳನ್ನು ಗಮನಿಸಿದ್ದೇನೆ. ಈಗ ಮತ್ತೆ ಎರಡು ಗೋಸಾಸಗಳನ್ನು ಕ್ಯಾಸನೂರಿನಲ್ಲಿ ಪತ್ತೆ ಮಾಡಲಾಗಿದೆ.
ರಾಷ್ಟ್ರಕೂಟ ಅರಸರು ಕೃಷಿ ಪ್ರಧಾನ ಸಂಸ್ಕøತಿಗೆ ಒತ್ತನ್ನು ಕೊಟ್ಟವರು. ಕೃಷಿ ವಿಸ್ತರಣೆ ಅವರ ಪ್ರಿಯ ವಿಷಯವಾಗಿತ್ತು ಎನ್ನುವುದಕ್ಕೆ ಅವರು ಇಟ್ಟುಕೊಂಡಿರುವ ಬಿರುದುಗಳೇ ಸಾಕ್ಷಿಯನ್ನು ನೀಡುತ್ತವೆ. ಅಕಾಲವರ್ಷ, ಧಾರಾವರ್ಷ, ನಿತ್ಯವರ್ಷ, ಪ್ರಭೂತವರ್ಷ, ಅಮೋಘವರ್ಷ, ಸುವರ್ಣವರ್ಷ ಎಂಬ ಬಿರುದುಗಳನ್ನೇ ಅವರು ಬಳಸಿದ್ದಾರೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಯಾವ ಅರಸರೂ ಇಂತಹ ಬಿರುದುಗಳನ್ನು ಬಳಸಿಲ್ಲ. ಇನ್ನು ಅವರ ಶುಭತ್ತುಂಗ, ಜಗತ್ತುಂಗ, ನೃಪತುಂಗಗಳಿಗೆ ಏನು ಅರ್ಥವಿದೆ ಎನ್ನುವುದನ್ನು ಶೋಧಿಸಬೇಕಿದೆ. ಮಳೆಗೆ ಅವರು ಮಹತ್ವ ಕೊಟ್ಟಷ್ಟೇ ಕೃಷಿಗೂ ಪ್ರಾಮುಖ್ಯತೆ ನೀಡಿದರು ಎನ್ನುವುದಕ್ಕೆ ಅವರು ನೇಗಿಲನ್ನು ಲಾಂಛನವಾಗಿ ಬಳಸಿದ್ದೇ ಭಾಷ್ಯ ಬರೆಯುತ್ತದೆ. ಅವರು ಬರೆಸಿದ ಬಹುತೇಕ ಎಲ್ಲ ಶಾಸನಗಳ ಕೊನೆಯಲ್ಲಿ ನೇಗಿಲಿನ ಗುರುತಿದೆ. ಕ್ವಚಿತ್ತಾಗಿ ಪ್ರಾರಂಭದಲ್ಲಿಯೂ ಚಿತ್ರಿಸಿದ್ದಾರೆ. ಕೆಲವೆಡೆ ನೇಗಿಲಿಗೆ ಎತ್ತುಗಳನ್ನೂ ಹೂಡಲಾಗಿದೆ. ಅತ್ಯಂತ ಅಧಿಕ ಸಂಖ್ಯೆಯ ಶಾಸನಗಳಲ್ಲಿ ಕೆರೆ ಕಟ್ಟಿಸಿದ ವಿವರಗಳು ಇವರ ಕಾಲದಲ್ಲಿವೆ. ಕೆರೆ ಕಟ್ಟಿಸಿದ ನಂತರ ನೀಡುವ ಗೋಸಹಸ್ರದಾನದ ಪ್ರಸ್ತಾಪ ಮತ್ತು ಗೋಸಾಸ ಕಲ್ಲುಗಳೂ ಇದೇ ರಾಷ್ಟ್ರಕೂಟರ ಕಾಲದಲ್ಲಿ ದೊರೆಯುತ್ತವೆ. ಇನ್ನೂ ಮುಂದುವರೆದು ಹೇಳಬೇಕೆಂದರೆ ಗೋಗ್ರಹಣ ಪ್ರಸಂಗಗಳು ಮತ್ತು ತುರುಗೊಳ್ ವೀರಗಲ್ಲುಗಳೂ ಸಾಕಷ್ಟು ಪ್ರಮಾಣದಲ್ಲಿ ಸಿಗುವುದು. ಗೋಗ್ರಹಣವೆಂದರೆ ಅವರ ಸ್ವಾಭಿಮಾನ ಮತ್ತು ಶೌರ್ಯಗಳನ್ನು ಕೆಣಕಿದಂತೆ ಆಗುತ್ತಿತ್ತೆಂದು ಬೇರೆ ಹೇಳಬೇಕಿಲ್ಲ. ಇವೆಲ್ಲವುಗಳು ಅವರ ಕೃಷಿ ಸಂಸ್ಕøತಿಯನ್ನು ಎತ್ತಿ ಸಾರುತ್ತವೆ. ಇಂತಹ ಕೆರೆ ಕಟ್ಟಿಸಿದ ಮತ್ತು ಅದೇ ಸಂದರ್ಭದಲ್ಲಿ ಸಾವಿರ ಗೋವುಗಳನ್ನು ದಾನವಾಗಿ ಕೊಟ್ಟು ಮೇಂಟಿಕಲ್ಲನ್ನು ನಿಲ್ಲಿಸಿದ ಎರಡು ಸಾಕ್ಷಿಗಳು ಕ್ಯಾಸನೂರಿನಲ್ಲಿ ದೊರೆತಿವೆ.
ಕ್ಯಾಸನೂರಿನ ಶಾಸನಗಳು
1
ಈಶ್ವರ ಗುಡಿ ಮುಂದೆ ನಿಂತಿರುವ ಗೋಸಾಸÀ 1
ಸು. 9-10ನೆಯ ಶ.
3’ ಎತ್ತರ 1.6" ಅಗಲದ ಈ ಗೋಸಾಸದ ಮೇಲ್ಭಾಗದಲ್ಲಿ ಯಾವುದೇ ಚಿತ್ರಗಳಿಲ್ಲ. ಅರ್ಧ ಕೋನಾಕೃತಿಯ ಕೆಳಭಾಗದ ಚೌಕಾಕಾರದ ಭಾಗದಲ್ಲಿ ಮತ್ತು ಅದರ ಕೆಳಗಿನ ಚೌಕಾಕಾರದ ಭಾಗದಲ್ಲಿ ಕೆತ್ತಿದ ಈ ಶಾಸನವು ಇನ್ನೊಂದು ಪಟ್ಟಿಕೆಯಲ್ಲಿಯೂ ಒಂದು ಸಾಲು ಮುಂದುವರೆದಿದೆ. ಶಾಸನದ ಕೆಳಭಾಗವನ್ನು ಅಗೆಸಿದಾಗ ಯಾವುದೇ ಶಾಸನವು ಕಂಡುಬಂದಿರುವುದಿಲ್ಲ. ಶಾಸನದ ಎರಡೂ ಪಕ್ಕಗಳಲ್ಲಿಯೂ ಅಕ್ಷರಗಳಿಲ್ಲ. ಹಿಂಭಾಗದಲ್ಲಿ ಮೇಲೆ ಪೂರ್ಣ ಕುಂಭದ ಉಬ್ಬುಶಿಲ್ಪವಿದ್ದು, ಕೆಳಗೆ ನೇಗಿಲಿಗೆ ಹೂಡಿದ ಜೋಡೆತ್ತುಗಳಿವೆ.
ತ್ರುಟಿತ ಮತ್ತು ಅಪೂರ್ಣವಾದ ಪ್ರಸ್ತುತ ಶಾಸನವು ಮಣ್ಡಗೆಡೆಯಲ್ಲಿ ಕೆರೆಯನ್ನು ಕಟ್ಟಿಸಿ, ಗೋಸಹಸ್ರ ದಾನವನ್ನು ಮಾಡಿದ ಗಾಮುಣ್ಡನೊಬ್ಬನನ್ನು (ಸರಗೊವ . ಟ್ಟಯ?) ಹೆಸರಿಸುತ್ತದೆ.
ಮೊದಲನೆಯ ಪಟ್ಟಿಕೆ
1 ರ ಪ್ರವತ್ರ್ತಿಸೆ ಪವುಷ್ಯ ಮ(ಮಾ)ಸ-
2 ಮು ಪಞ್ಚಮೆಯು ಬೃಹಸ್ಪ-
3 ತಿ ವಾರದನ್ದು ಮಣ್ಡಗೆಡೆಯ
4 ಮಹಾಟರ ಭಟಕ್ಕೆ ಕೆ¾õÉಯ
5 ಕೇದಮ್ರ್ಮಮೊಕೋನ್
ಎರಡನೆಯ ಪಟ್ಟಿಕೆ
6 ದ್ದು ಗೋಸಹಶ್ರಮ-
7 ನಿ¿್ದ ಸರಗೊವ .
ಮೂರನೆಯ ಪಟ್ಟಿಕೆ
8 ಟ್ಟಯ ಗಮುಣ್ಡ ಮಙ್ಗಳ [||*]
2
ಈಶ್ವರ ಗುಡಿ ಮುಂದೆ ಇರುವ ಗೋಸಾಸ 2
ಸು. 9-10ನೆಯ ಶ.
3’ ಎತ್ತರ 1.6" ಅಗಲದ ಈ ಗೋಸಾಸದ ಮೇಲ್ಭಾಗದಲ್ಲಿ ಯಾವುದೇ ಚಿತ್ರಗಳಿಲ್ಲ. ಅರ್ಧ ಕೋನಾಕೃತಿಯ ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೆತ್ತಿದ ಈ ಶಾಸನವು ಇನ್ನೊಂದು ಗೋಸಾಸ ಕಲ್ಲಿನಲ್ಲಿಯೂ ಮುಂದುವರೆದಿರಬಹುದು. ಶಾಸನದ ಕೆಳಭಾಗವನ್ನು ಅಗೆಸಿದಾಗ ಯಾವುದೇ ಶಾಸನವು ಕಂಡುಬಂದಿರುವುದಿಲ್ಲ. ಎರಡೂ ಪಕ್ಕಗಳಲ್ಲಿಯೂ ಅಕ್ಷರಗಳಿಲ್ಲ. ಹಿಂಭಾಗದಲ್ಲಿ ಆನೆಯ ಉಬ್ಬುಶಿಲ್ಪವಿದೆ. ಕೆಲವು ಗೋಸಾಸಗಳು ಅಪೂರ್ಣವಾಗಿದ್ದಾಗ ಅಲ್ಲಿಯೇ ದೊರೆಯುವ ಇನ್ನೊಂದು ಗೋಸಾಸ ಕಲ್ಲಿನಲ್ಲಿ ಪಠ್ಯ ಮುಂದುವರೆದ ಉದಾಹರಣೆಗಳಿವೆ. ಸದ್ಯ ದೊರೆತ ಇನ್ನೊಂದು ಗೋಸಾಸದಲ್ಲಿ ಗೋಸಾಸ ದಾನ ಮಾಡಿದ ಕಾಲ ಮತ್ತು ವ್ಯಕ್ತಿಯ ಹೆಸರುಗಳಿದ್ದರೂ ಅಕ್ಷರಗಳ ಸ್ವರೂಪ ಭಿನ್ನವಾಗಿದೆ ಎನ್ನುವುದನ್ನು ಗಮನಿಸಬೇಕು.
ಮಹಾ ಸಾಮಂತ ಕನ್ನಯ್ಯನು ಬನವಾಸಿ 12000ವನ್ನು ಆಳುತ್ತಿರುವಾಗ, ಎಡೆವೊಳಲೆಳ್ಪತ್ತು ವಿಭಾಗವನ್ನು ಪೊಲೆಗ ನಾಳ್ಗಾವುಂಡನಾಗಿ ಆಳುತ್ತಿದ್ದ ಮತ್ತು ಊರ ಗಾವುಂಡನಾಗಿ ಸಿಂಗ ಎನ್ನುವವ ಆಳುತ್ತಿದ್ದನೆಂಬ ಉಲ್ಲೇಖಗಳನ್ನು ತಿಳಿಸುತ್ತ ಅಪೂರ್ಣಗೊಳ್ಳುತ್ತದೆ. ಶಾಸನವು ತ್ರುಟಿತ ಮತ್ತು ಅಪೂರ್ಣವಾಗಿ ಕೊನೆ ಕಾಣುವುದರಿಂದ ವಿವರಗಳು ಲಭ್ಯವಿಲ್ಲ.
1 . . . . ಮಹಾಸಬ್ದ ಮಹಾ ಸಾಮನ್ತನ-
2 ಧಿಪತಿ ಶ್ರೀಮತ್ಕನ್ನಯ್ಯ ಬನವಾಸೀ ಪ-
3 ನ್ನಿ¿õÁ್ಛಸಿರಮನಾಳೆ @ ಶ್ರೀಮತ್ ಎಡೆ-
4 ವೊ¿ಲೆ¿್ಪತ್ತಕ್ರ್ಕೆ ಪೊಲೆಗ ನ(ನಾ)¿್ಗಮುಣ್ಡು-
5 ಗೆಯ್ಯೆ ಸಿಙ್ಗನೂಗ್ರ್ಗಮುಣ್ಡುಗೆಯ್ಯೆ
3
ಈಶ್ವರ ಗುಡಿ ಮುಂದೆ ಬಿದ್ದಿರುವ ಶಾಸನ
ಕ್ರಿ.ಶ. 1132
3’ ಅಗಲ ಮತ್ತು 5’ ಎತ್ತರದ ಕರಿಕಲ್ಲಿನ ಶಾಸನವಿದಾಗಿದೆ. ಮೇಲಿನ 1’ಯ ಭಾಗದಲ್ಲಿ ಸೂರ್ಯ-ಚಂದ್ರ, ಶಿವಲಿಂಗವನ್ನು ಪೂಜಿಸುತ್ತಿರುವ ಪೂಜಾರಿ, ಕುಳಿತ ನಂದಿ ಮತ್ತು ಕರುವಿಗೆ ಹಾಲೂಡುತ್ತಿರುವ ಆಕಳಿನ ಉಬ್ಬುಶಿಲ್ಪಗಳಿವೆ.
ಕಲ್ಯಾಣಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ 6ನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ, ಕದಂಬ ಮಹಾ ಮಂಡಳೇಶ್ವರ ತೈಲಪದೇವರ ಕುಮಾರ ಮಲ್ಲಿಕಾರ್ಜುನದೇವರು ಬನವಾಸೆ ಪ£್ನಚ್ರ್ಛಾಸಿರ ಮತ್ತು ಪಾನುಂಗಲ್ಲೈ ನೂರುಗಳನ್ನು ಪಾಲಿಸುತ್ತಿದ್ದಾಗ, ಎಡೆವೊಳಲೆಪ್ಪತ್ತರ ಕೆಸಲೂರಿಗೆ ಬಂದು ಅಲ್ಲಿಯ ರಾಮೇಶÀ್ವರ ದೇವರಿಗೆ ಮತ್ತು ಅಮೃತೇಶ್ವರ ದೇವರಿಗೆ ಬೊಪ್ಪೆಯಜೀಯರ ಕಾಲನ್ನು ತೊಳೆದು ಕೈಧಾರೆ ಎರೆದು ಹೊಲತಿಕೆರೆಯ ಕೆಳಗಿನ ಭೂಮಿಯನ್ನು ದಾನವಾಗಿ ಬಿಟ್ಟದ್ದನ್ನು ತಿಳಿಸುತ್ತದೆ. ಇದಲ್ಲದೆ ಸೆಗರ ಬರ್ಮಗಾಮುಣ್ಡ, ಚಾವಗಾಮುಣ್ಡ ಮತ್ತು ಕೊಣ್ಡಗಾಮುಣ್ಡರು ಹಾಗೂ ಅರುವತ್ತೊಕ್ಕಲು ಸೇರಿ ಬೊಪ್ಪೆಯಜೀಯ ಪಂಡಿತರಿಗೆ ಬಿಟ್ಟ ಮತ್ತೊಂದು ದತ್ತಿಯನ್ನು ದಾಖಲಿಸುತ್ತದೆ.
ಶಾಸನದಲ್ಲಿ ಬರುವ “ಯೈವತ್ತೆ[ಂ*]ಟನೆಯ ಪರಿಧಾವಿ ಸಂವಚ್ಚರದ ಚೈತ್ರ ಸುದ್ಧ ಪಂಚಮಿ ಬ್ರೆಹಸ್ಪತಿವಾರದನ್ದು” ಎಂಬ ಮಿತಿಯು ಕ್ರಿ.ಶ. 1132 ಮಾರ್ಚ್ 23 ಬುಧವಾರವಾಗಿದೆ. ಆದರೆ ಕಲ್ಯಾಣಚಾಲುಕ್ಯ ತ್ರಿಭುವನಮಲ್ಲದೇವನ ಕಾಲವು ಕ್ರಿ.ಶ.1126 ಕ್ಕೆ ಕೊನೆಗೊಂಡಿದೆ.      
1 @ ನಮಸ್ತುಂಗ ಸಿರಸ್ತುಂಗ ಚನ್ದ್ರ ಚಾಮರ ಚಾರವೇ ತ್ರೈಳೋಕ್ಯ ನಗರಾರಂಭ
2 ಮೂಲಸ್ತಂಭಾಯ ಸಂಭವೇ || ನಮಃ ಶಿವಾಯ ||
3 ಸ್ವಸ್ತಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀ ಪ್ರಿಥ್ವೀವಲ್ಲಭಂ ಮಹಾರಾಜಾಧಿ-
4 ರಾಜಂ ಪರಮೇಸ್ವರಂ ಪರಮ ಭಟಾರಕಂ ಸತ್ಯಾಸ್ರಯ
5 ಕುಳತಿಳಕಂ ಚಾಳುಕ್ಯಾಭರಣಂ ಸ್ರೀಮತ್ರಿಭುವನಮಲ್ಲ-
6 ದೇವರ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವದ್ರ್ಧಮಾನ-
7 ಮಾಚನ್ದ್ರಾಕ್ರ್ಕ ತಾರಂಬರಂ ಸಲುತ್ತಮಿರೆ ತತ್ಪಾದ ಪದ್ಮೋ-
8 ಪಜೀವಿ || ಸ್ವಸ್ತಿ ಸಮಧಿಗತ ಪಞ್ಚಮಹಾಸಬ್ದಂ ಮ-
9 ಹಾಮಣ್ಡಳೇಸÀ್ವರಂ ಬನವಾಸಿ ಪುರವರಾಧೀಸ್ವರಂ ಜಯ-
10 ನ್ತಿ ಮಧುಕೇಸ್ವರದೇವರ ಲಬ್ಧ ವರಪ್ರಸಾದ ಮ್ರಿಗಮದಾಮೋದಂ ತ್ರಿ(ತ್ರ್ಯ)-
11 ಕ್ಷ ಕ್ಷ್ಮಾಸಂಭವಂ ಚತುರಾಶೀತಿ ನಗರಾಧಿಷ್ಟಿತಂ ಲ-
12 ಲಾಟ ಲೋಚನಂ ಚತುಬ್ರ್ಭುಜ ಜಗದ್ವಿ[ದಿ*]ತಾಷ್ಠಾ ದಸಾಸ್ವಮೇಧ ದೀಕ್ಷಾ
13 ದೀಕ್ಷಿತಂ ಹಿಮವದ್ಗಿರೀನ್ದ್ರರುನ್ದ್ರ ಸಿಕರೀಸಕ್ತಿ ಸಂಸ್ಥಾಪಿತ ಸಿಳಾಸ್ಥಂಭಂ ಬದ್ಧಮ-
14 ದಗಜ ಮಹಾಮಹಿಮಾಭಿರಾಮಂ ಕಾಡಂಬಚಕ್ರಿ ಮಯೂರವಮ್ರ್ಮ ಮಹಾ ಮ-
15 ಹೀಪಾಳ ಕುಳಭೂಷಣಂ ಪೆಮ್ರ್ಮಟ್ಟಿತೂಯ್ರ್ಯ ನಿಗ್ರ್ಘೋಷಣಂ ಸಾಕಾಚರೇನ್ದ್ರ ಧ್ವಜ
16 ವಿರಾಜಮಾನಂ ಮಾನೋತ್ತುಂಗ ಸಿಞ್ಗಲಾಂಚನ ದತ್ತಾತ್ರ್ತಿ ಕಾಂಚನ ಸಮರ ಜಯಕಾರಣಂ
17 ಕಡಂಬರಾಭರಣಂ ಮಾಕ್ರ್ಕೊಳುವರ ಗಂಣ್ಡಂ ಪ್ರತಾಪಮಾತ್ರ್ತಣ್ಡಂ ಮಣ್ಡಳಿಕಗಣ್ಡ ಬ
18 ಂಗಾ¾ಂ £ತ್ಯಖಿಳ ನಾಮಾವಳಿ ವಿರಾಜಿತರಪ್ಪ ಸ್ರೀಮನ್ಮಹಾಮಂಣ್ಡಳೇಸ್ವರಂ ತೈ-
19 ಲಪದೇವರ ಕುಮಾರ ವೀರಗಂಣ್ಡೇಭ ಮಲ್ಲಿಕಾಜ್ರ್ಜುನದೇವರು ಬನವಾಸೆ ಪ£್ನಚ್ರ್ಛಾಸಿರಮಂ ಪಾ-
20 ನುಂಗಲ್ಲೈನೂ¾ುಮಂ ಸುಕಸಂಕತಾವಿನೋದದಿಂ ರಾಜ್ಯಂಗೆಯುತ್ತಮಿದ್ರ್ದು ಎಡೆವೊ
21 ಳಲೆಪ್ಪ[ತ್ತ*]ಕಂ ತಲೆವನ್ದು ಕೆಸಲೂರ ರಾಮೇಸ್ವರದೇವಗ್ರ್ಗಾ ಅಮ್ರಿತೇಸ್ವರ ದೇವಗ್ರ್ಗೆ ಬೊಪ್ಪೆಯಜೀಯಗ್ರ್ಗೆ ಕಾಲಂ
22 ಕಚ್ರ್ಚಿ ಕೈಯಿ ಧಾರೆಯೆ¾ದು ಬಿಟ್ಟ ಧಮ್ರ್ಮಂ ಹೊಲತಿಕೆ¾õÉಯ ಕೆಳಗೆ ಮುಗುಳಿ ಕಟ್ಟದೊಳಗೆ ಬಿಟ್ಟ ಧಮ್ರ್ಮ ಗದೆ(ದ್ದೆ) ಮತ್ತರೆ[ರ*]ಡು
23 ಯೈವತ್ತೆ[ಂ*]ಟನೆಯ ಪರಿಧಾವಿ ಸಂವಚ್ಚ್ಸರದ ಚೈತ್ರ ಸುದ್ಧ ಪಂಚಮಿ ಬ್ರೆಹಸ್ಪತಿವಾರದನ್ದು ಬಿಟ್ಟ ಧಮ್ರ್ಮ
24 ಸೆಗರ ಬಮ್ರ್ಮ ಗಾಮುಣ್ಡನು ಚಾವ ಗಾಮುಂಣ್ಡನು ಕೊಣ್ಡ ಗಾಮುಣ್ಡನುಂ ಅ¾ುವತೆ(ತ್ತೊ)ಕ್ಕಲುಂ
25 ಮಿರ್ದು ಬೊಪ್ಪೆಯಜೀಯ ಪಂಡಿತರಿಗೆ ಇ ಸ್ಥಾನಮಂ ಕ(ಕಾ)ಲಂ ಕಚ್ರ್ಚಿ ಕೈಧಾರೆ ಎ¾ದು ಕೊಟ್ಟರು
26 ಯೀ ಧಮ್ರ್ಮಮಂನಳಿದಂಗೆ ವಾರಣಾಸಿಯ ಗುರುಕ್ಷೇತ್ರ ಗಂಗೆಯ ತಡಿಯಲು ಸಾಯಿರ ಕ-
27 ವಿಲೆಯುಮಂ ಸಾಯಿರ ಬ್ರಾಮಣರುಮಂ ಅಳಿದ ಪಂಚ ಮಹಾಪಾತಕನಕ್ಕು ||
4
ಊರಿಗೆ ಉತ್ತರ ಮಾರ್ಗದಲ್ಲಿ ಮಿಟ್ಟಿಯ ಮ್ಯಾಲೆಯಿರುವ ವೀರಗಲ್ಲು ||
ಕ್ರಿ.ಶ. 1176
ಮೆಕೆಂಝಿ ಸಂಗ್ರಹ
ಕದಂಬ ಚಕ್ರವರ್ತಿ ಸೋವಿದೇವರಸನು ಆಳುತ್ತಿರುವಾಗ, ಕ್ಯಾಸನೂರ ಠಾವಿನಲ್ಲಿ ಮುದ್ದವ್ವೆಯ ಮಗನಾದ ಸುರವೈಯ್ಯ ಕ್ಯಾಸನೂರ ತುರುಗೋಳಿನಲ್ಲಿ ಹೋರಾಟ ಮಾಡಿ, ತುರುಗಳನ್ನು ಮರಳಿ ತಂದು ಸುರಲೋಕ ಪ್ರಾಪ್ತನಾದನೆಂದು ಶಾಸನವು ತಿಳಿಸುತ್ತದೆ.
“ಸೋವಿದೇವರಸರೆರಡನೆಯ ದುರ್ಮುಖಿ ಸಂವತ್ಸರದ ಜೇಷ್ಟ ಶುದ್ಧ 10 ಮಂಗಳವಾರದಂದು” ಎಂಬ ಶಾಸನೋಕ್ತ ಮಿತಿಯು ಕ್ರಿ.ಶ. 1176ರ ಮೇ 20 ಗುರುವಾರವಾಗಿದೆ.
ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಹಾಮಂಡಲೇಶ್ವರಂ | ಬನವಾಸಿ ಪುರವರಾಧೀಶ್ವರಂ | ಜಯಂತಿ ಮಧುಕೇಶ್ವರ ಲಬ್ಧ ವರಪ್ರಸಾದರುಂ | ಸಾಹಸೋತ್ತುಂಗನುಂ | ಸತ್ಯ ರಾಧೇಯನುಂ | ಕದಂಬ ಕುಲಕಮಲ ಮಾರ್ತಾಂಡನುಂ | ಕಲಿಗಳಂಕುಶಂ | ಸೋವಿದೇವರಸರೆರಡನೆಯ ದುರ್ಮುಖಿ ಸಂವತ್ಸರದ ಜೇಷ್ಟ ಶುದ್ಧ 10 ಮಂಗಳವಾರದಂದು ಕ್ಯಾಸನೂರ ಠಾವಿನಲು ಮುದ್ದವ್ವೆಯ ಸುರವೈಯ್ಯ ಕ್ಯಾಸನೂರೋತ್ತರದ ತುರುವಂ ಮರಳ್ಚಿ ಸುರಲೋಕ ಪ್ರಾಪ್ತನಾದಂ || ಮಂಗಳ ಮಹಾಶ್ರೀ ಶ್ರೀ ಶ್ರಿ [||*]
5
ಊರಿಗೆ ಉತ್ತರ ಮಾರ್ಗದಲ್ಲಿ ಮಿಟ್ಟಿಯ ಮ್ಯಾಲೆಯಿರುವ ವೀರಗಲ್ಲು ||
ಕ್ರಿ.ಶ. 1241
ಮೆಕೆಂಝಿ ಸಂಗ್ರಹ
ಹಾನುಗಲ್ಲಿನ ಕದಂಬ ವೀರಮಲ್ಲಿದೇವ ಆಳುತ್ತಿರುವಾಗ, ಯಡೆವೊಳಲ ಕಂಪಣದಲ್ಲಿರುವ ಕ್ಯಾಸನೂರ ಅಕ್ಕಸಾಲೆ ಬೀರೋಜನ ಮಗ ಬೊಪ್ಪೋಜನು ತಾವಸೆ(ತಾವಂಶಿ)ಯ ಸಿರಿಗೆರೆವೊಳೆಯ ಹಲಶಿನಡಗೆಯಲ್ಲಿ ಹೋರಾಡಿ, ವಂಟೆಯ ಕುಳ್ಳಕದಂಬರೆ(?)ಯನ್ನು ಮತ್ತು ಕುಂದವರ (ಕುಂದೂರು)ಗಳನ್ನು ಗೆದ್ದು ಸುರಲೋಕಪ್ರಾಪ್ತನಾದನೆಂದು ಶಾಸನವು ವಿವರಿಸುತ್ತದೆ. ಬಾವೋಜನ ಮಗನಾದ ಬೀರೋಜ ಮಗನಿಗಾಗಿ ವೀರಗÀಲ್ಲನ್ನು ನಿಲ್ಲಿಸಿದನಂತೆ.
“ವೀರಮಲ್ಲಿದೇವರ ವಿಜಯರಾಜ್ಯಾಭುದಯದ ಶಖ 1163ನೆಯ ಪ್ಲವ ಸಂವತ್ಸರದ ಪುಷ್ಯ ಶುಧ ಪುಂಣಮಿ ಬೃಹಸ್ಪತಿವಾರದಂದು” ಎಂಬ ಶಾಸನೋಕ್ತ ಮಿತಿಯು ಕ್ರಿ.ಶ.1241ರ 19 ಡಿಸೆಂಬರ್ ಗುರುವಾರವಾಗಿದೆ.
ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾ ಮಂಡಲೇಶ್ವರಂ | ಬನವಾಸಿ ಪುರ ವರಾಧೀಶ್ವರಂ | ಜಯಂತಿ ಮಧುಕೇಶ್ವರ ಲಬ್ಧ ವರಪ್ರಸಾದಂ | ಕಲಿಗಳಂಕುಶ ವೀರಮಲ್ಲಿದೇವರ ವಿಜಯರಾಜ್ಯಾಭುದಯದ ಶಖ(ಕ) 1163ನೆಯ ಪ್ಲವಸಂವತ್ಸರದ ಪುಷ್ಯ ಶುಧ(ದ್ಧ) ಪುಂಣಮಿ ಬೃಹಸ್ಪತಿವಾರದಂದು ಯಡೆವೊಳಲ ಕಂಪಣದೊಳು . . . . . ಕೇಸನೂರ ಅಕ(ಕ್ಕ)ಸಾಲೆ ಬೀರೋಜನ ಮಗ ಬೊಪ್ಪೋಜ ತಾವಸೆಯ ಸಿರಿಗೆರೆವೊಳೆಯ ಹಲಶಿನಡಗೆಯಲ್ಲಿ ವಂಟೆಯ ಕುಳ್ಳ ಕದಂಬರೆಯರಗಿಸಿ ಕುಂದವರಂ ಗೆಲ್ದು ತಳ್ತಿರಿದು ಸುರಲೋಕಪ್ರಾಪ್ತನಾದಂ || ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ | ಕ್ಷಣ ವಿಧ್ವಂಶಿ(ಸಿ)ನೀ ಕಾಯೇ ಕಾ ಚಿಂತಾ ಮರಣೇ ರಣೇ || ಬಾವೋಜನ ಮಗಂ ಬೀರೋಜಂ ಮಾಡಿಸಿದಂ | ಮಂಗಳ ಮಹಾ ಶ್ರೀ ಶ್ರೀ ಶ್ರೀ [||*]
6
ಈಶ್ವರ ಗುಡಿ ಮುಂದಿರುವ ಕಂಬದ ಮೇಲಿನÀ ಶಾಸನ
ಯಾದವ ಚಕ್ರವರ್ತಿ ವೀರ ರಾಮಚಂದ್ರದೇವನು ಆಳುತ್ತಿರುವಾಗ, ಆತನ ಮಹಾಪ್ರಧಾನ ಸರ್ವಾಧಿಕಾರಿ ನಾಳೊಯ್ಯ, ಅಮರಸೇನ ಪಂಡಿತರು, ನಾಳ್ಪ್ರಭು ಕೆಸಲೂರ ಸಿಂಗ ಗಾಮುಂಡರನ್ನು ಹೆಸರಿಸುತ್ತ ಆತನ ತಮ್ಮ ಮುದಿಗಾಮುಂಡನ ಮಗ ಮಾಡಿಸಿದ ಎಂದಿದೆ.
1 ಸ್ವಸ್ತಿ ಶ್ರೀಮತು ಯಾದವ ನಾರಾಯ-
2 ಣ ಭುಜಬಳ ಪ್ರವುಢ ಪ್ರತಾಪ ಚಕ್ರ-
3 ವತ್ರ್ತಿ ಶ್ರೀ ವೀರ ರಾಮಚಂದ್ರದೇವ ಜ-
4 ಯ ರಾಜ್ಯೋದಯದ 24ನೆಯ ವಾ .
5 . ಸಂವತ್ಸ[ರ*] ಪುಷ್ಯ ಸು 8 ಆದಿವಾರದಂ-
6 ದು ಸ್ವಸ್ತಿ ಶ್ರೀಮನು ಮಹಾಪ್ರಧಾನ
7 ಸವ್ರ್ವಾಧಿಕಾರಿ ನಾಳೊಯ್ಯ ಶ್ರೀಯಭ-
8 ಮರಸೇನಪಂಡಿತರು ಶ್ರೀಮಂನಾ
9 ಳ್ಪ್ರಭು ಕೆಸಲೂರ ಸಿಂಗ [ಗ*]ಮುಡನ ತಂ-
10 ಮ ಮುದಿಗಮುಡನ ಮಗನ್ ಕೆಸಲೂ-
11 ರ ವಿಲಾಕುಮಳಭೆಯರ ಲೊದೇರ ಹೆಗ-
12 ಕ(ಲ)ನೊಡ್ಡಿ ಸವಾಲ್ಪಿ ಮಾಡ್ಸಿದ [||*]*
* ಕೊನೆಯ 2 ಸಾಲುಗಳ ಅಕ್ಷರಗಳು ಅಸ್ಪಷ್ಟವಾಗಿವೆ.
7
ಹನುಮಂತದೇವರ ಗುಡಿಯ ಮುಂದಿನ ಮಾಸ್ತಿಶಾಸನ
ಸು. 17-18ನೆಯ ಶ.
ಕೆಸನೂರ ಮಲ್ಲಗೌಡರ ಮಗ ಹಲಿಗೌಡನು ಊರಳಿವಿನಲ್ಲಿ ಸತ್ತಾಗ, ಬಹುಶಃ ಆತನ ಹೆಂಡತಿ ಸಹಗಮನ ಮಾಡಿದುದನ್ನು ಸೂಚಿಸುತ್ತದೆ. ಆದರೆ ಶಾಸನವು ಅಸ್ಪಷ್ಟವಾಗಿ ಸವೆದು ಹೋಗಿರುವುದರಿಂದ ವಿವರಗಳು ತಿಳಿಯುವುದಿಲ್ಲ.
1 . . . . . . . . . . . .
2 . . . . . (ಸಯರ) . .
3 . . . . . . . (ಸೆ ರಣ)
4 (ನು ಊರು ಹಳಿ) . .
5 (ಮಾಡಿಸಿ ಕೊಟ) . . .
6 ಕೆಸನೂರ ಮಲ್ಲ
7 ಗಉಡರ ಮ-
8 ಗ ಹಲಿ ಗಉಡನು
9 ಸುರಲೋಕ ಪ್ರಾ[ಪ್ತ*]-
10 ನಾದನು ಮಂಗಳ
11 ಮಹಾ ಶ್ರೀ ಶ್ರೀ*
* ಮೊದಲಿನ 5 ಸಾಲುಗಳು ಸವೆದು ಅಸ್ಪಷ್ಟವಾಗಿವೆ.
8
ಈಶ್ವರ ಗುಡಿ ಮುಂದಿರುವ ಕಂಬದ ಮೇಲಿನÀ ಶಾಸನ
ಸು. 17-18ನೆಯ ಶ.
ಈಶ್ವರನ ಪ್ರತಿಷ್ಟಾಪನೆ ಮಾಡಿ ಬಿಟ್ಟ ದತ್ತಿಯನ್ನು ತಿಳಿಸುವಂತಿದೆ. ಶಾಸನ ಅಸ್ಪಷ್ಟವಾಗಿರುವುದರಿಂದ ವಿವರಗಳು ತಿಳಿಯುವುದಿಲ್ಲ.
1 ಶಿವಚಾರವಾದ ಪ್ರತಿಷ್ಟೆಯ
2 ಮಾಡುವಗ್ರ್ಗೆ ನಿವೇದ್ಯಯಭಿಷೇಕ
3 ಕ್ಕೆ ಕೊಳನೂರ . . . . ಕಾ . . .
4 ಆ . . . . . . || ಪ್ರತಿಪಾ-
5 ಳಿಸೂದು ಮಂಗಳ ಮಾಹಾ
6 ಶ್ರೀ ಶ್ರೀ ಶ್ರೀ || ಸ್ವದತ್ತಂ ಪರದತ್ತಂ
7 ವಾ ಯೋ ಹರೇತಿ ವಸುಂಧರಾ
8 ಷಷ್ಟಿರ್ವಷ್ ಸಹಸ್ರಾಣಿ ವಿಷ್ಟಾ-
9 ಯಾಂ ಜಾಯತೇ ಕ್ರಿಮಿ ||
9
ವಿಜಯಕಾಂತ ಪಾಟೀಲರ ಮನೆಯ ಹಿತ್ತಲಿನಲ್ಲಿರುವ ಶಾಸನ
ಸು. 19-20 ಶ.
1 ಹಾ(ವಾ)ಲೆಕಣಿ(ವೆ)ವತಿ ಮ-
2 ಟದ ಸ್ತಳಕೆ £ೀಡಿದ
3 ಮಟದ ದತ್ತಿಯ ಸೀಮೆ
4 ಯ ಕಲ್ಲು
10
ಹನುಮಂತದೇವರ ಗುಡಿ ಮುಂದೆ ನಿಲ್ಲಿಸಿದ ಶಾಸನ
ಸು. 19-20 ಶ.
ಇತ್ತೀಚಿನ ಈ ಶಾಸನವು ಕವಾರ ಬಧನಾಯಕನ ಮಾನ್ಯದ ಹೊಲವಿದೆಂದು ದಾಖಲಿಸುತ್ತದೆ.
1 ತಸರಾ ಶ್ರಾವಣ ಬ . ಚಮಿ
2 ಕವಾ¾ ಬಧನಾಯ-
3 ಕನ ಮಾಂನ್ಯ ಕೊಟ ಪೊ
4 ಸೆ(ಲ) 1
ದೇವಿಕೊಪ್ಪದ ಹೊಸ ಶಾಸನಗಳು
ಹಾನುಗಲ್ಲು ತಾಲೂಕಿನ ಕ್ಯಾಸನೂರು ಮತ್ತು ಹಿರೇಕಾಂಶಿಗಳ ಮಧ್ಯದಲ್ಲಿರುವ ಬೇಚಿರಾಕ್ ಹಳ್ಳಿಯೇ ದೇವಿಕೊಪ್ಪ. ಬಹುಶಃ ಅಲ್ಲಿ ದೊರೆತಿರುವ ದೇವಿ ವಿಗ್ರಹವೇ ಇದಕ್ಕೆ ಕಾರಣವಾಗಿದೆ ಎನಿಸುತ್ತದೆ. ಹೊಂಡದ ಅಂಚಿನ ದಿಬ್ಬದ ಮೇಲೆ ಇರುವ ಈ ಗುಡಿಯನ್ನು ಇತ್ತೀಚೆಗೆ ಕಟ್ಟಲಾಗಿದ್ದು, ಈ ರುದ್ರ ಸುಂದರ ವಿಗ್ರಹವು 4-5 ನೂರು ವರ್ಷಗಳಷ್ಟು ಹಳೆಯದೆನಿಸುತ್ತದೆ. ನಾಲ್ಕಡಿ ಎತ್ತರದ ವಿಗ್ರಹಕ್ಕೆ ಹಣೆಗಣ್ಣು ಇರುವುದು ವಿಶೇಷವಾಗಿದೆ. ದೇಗುಲದ ಎದುರಿಗೆ ಕೆಳಗಿನ ಶಾಸನಗಳನ್ನು ತಂದು ಇಡಲಾಗಿದೆ.
1
ಲೋಕೇಶ್ವರಿ ದೇವಸ್ಥಾನದ ಮುಂದಿನ ಶಾಸನ
ಸು. ಕ್ರಿ. ಶ. 750
ಶಾಸನದ ಮೇಲ್ಭಾಗ ಒಡೆದಿದೆ ಮತ್ತು ಮೇಲ್ಭಾಗದ ಬಲಭಾಗವೂ ತ್ರಿಕೋನಾಕಾರದಲ್ಲಿ ಒಡೆದಿದೆ. ಪೃಥುವೀಸೇನ ಬನವಾಸಿ ಪನ್ನಿಚ್ರ್ಛಾಸಿರವನ್ನು ಆಳುತ್ತಿರುವಾಗ, ಅರಕಸೇನ ಬಹುಶಃ ಏನನ್ನೋ ಆಳುತ್ತಿರುವಾಗ, ಕಗಸಾಸಿಯ ಮಾಳಾದನ ನಾಳ್ಗಾವುಂಡನಾಗಿದ್ದಾಗ, ಬಾದ್ದಗಿಯರ ಬಾಯಿ ದಾನ ನೀಡಿದುದನ್ನು ತಿಳಿಸುತ್ತದೆ. ಸೇನವರಸ ದೋಸಿಯರಸ ಈ ಶಾಸನವನ್ನು ಮಾಡಿಸಿದನಂತೆ.
ಈ ಶಾಸನದಲ್ಲಿ ಬರುವ ಸೇನವರಸ ದೋಸಿಯರಸನ (ದೋಸಿ, ದೋಸಿಗ, ದೋಸಿಯರ) ಕುರಿತಾಗಿ ಈಗಾಗಲೇ ಚಿಕ್ಕ ನಂದೀಹಳ್ಳಿಯ ಬಾದಾಮಿ ಚಾಲುಕ್ಯ 2ನೆಯ ವಿಕ್ರಮಾದಿತ್ಯನ 2 ಶಾಸನಗಳು (8ನೆಯ ಶ.), 2ನೆಯ ಕೀರ್ತಿವರ್ಮನ ದಿಡಗೂರ ಮತ್ತು ಮಲ್ಲೇನಹಳ್ಳಿ ಶಾಸನಗಳು (ಸು. ಕ್ರಿ.ಸ. 750), ವಕ್ಕಲೇರಿ ತಾಮ್ರಪಟಗಳು (ಶ್ರೀ ದೋಸಿರಾಜ ವಿಜ್ಞಾಪನಯಾ ಬಿಟ್ಟ ದತ್ತಿಯ ಉಲ್ಲೇಖ. ಕ್ರಿ.ಶ. 757), ಸಿಡೇನೂರ ಶಾಸನ (ಸು. ಕ್ರಿ.ಶÀ.760)ಗಳಲ್ಲಿ ಉಲ್ಲೇಖಗಳಿವೆ. ಚಿಕ್ಕ ನಂದೀಹಳ್ಳಿ ಶಾಸನದÀಲ್ಲಿ ಮುಗುಂದನಾಡನ್ನು ಆಳುತ್ತಿದ್ದ ಈತ ಮುಂದಿನ ಶಾಸನಗಳಲ್ಲಿ ಪದೋನ್ನತಿ ಹೊಂದಿ ಬನವಸೆ 12000ದ ಮಂಡಲೇಶ್ವರನೆಂದು ಕರೆಸಿಕೊಳ್ಳುತ್ತಾನೆ. ಬಾದಾಮಿ ಚಾಲುಕ್ಯ 2ನೆಯ ವಿಕ್ರಮಾದಿತ್ಯ ಮತ್ತು 2ನೆಯ ಕೀರ್ತಿವರ್ಮರಿಬ್ಬರ ಕಾಲದಲ್ಲಿ ಸೇವೆ ಸಲ್ಲಿಸಿದ ಈತ ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಮಧ್ಯೆ ನಡೆದ ಕಾಳಗದಲ್ಲಿ ಸೇಂದ್ರಕ ಶ್ರೀ ಪೊಗಿಲ್ಲಿಯೊಂದಿಗೆ ಮರಣವನ್ನು ಹೊಂದಿದುದನ್ನು ಸಿಡೇನೂರ ಶಾಸನವು ದಾಖಲಿಸುತ್ತದೆ.
ದೋಸಿಯರನÀನ್ನು ಕುರಿತು ಡಾ. ಶ್ರೀನಿವಾಸ ಪಾಡಿಗಾರ ಅವರು ತಮ್ಮ ಕೃತಿ ‘ಅhಚಿಟuಞಥಿಚಿs oಜಿ ಃಚಿಜಚಿmi’ ಯ ಅಡಿ ಟಿಪ್ಪಣಿಯೊಂದರಲ್ಲಿ “ಖಿhis ಛಿhieಜಿ is ಞಟಿoತಿಟಿ ಜಿಡಿom sಣoಟಿe iಟಿsಛಿಡಿiಠಿಣioಟಿs oಜಿ ಏiಡಿಣivಚಿಡಿmಚಿ ಚಿಟಿಜ he ತಿಚಿs iಟಿಛಿhಚಿಡಿge oಜಿ ಃಚಿಟಿಚಿvಚಿse ಟಿಚಿಜu. ಊe beಟoಟಿgeಜ ಣo ಣhe mಚಿಣuಡಿಚಿ vಚಿmsಚಿ ಚಿs ಞಟಿoತಿಟಿ ಜಿಡಿom iಟಿsಛಿಡಿiಠಿಣioಟಿs oಜಿ his ಜesಛಿeಟಿಜeಟಿಣs. ಆosi ಜಿiguಡಿes ಚಿs ಣhe goveಡಿಟಿoಡಿ oಜಿ ಃಚಿಟಿಚಿvಚಿsi 12000 iಟಿ some moಡಿe iಟಿsಛಿಡಿiಠಿಣioಟಿs.” ಎಂದು ಹೇಳಿದ್ದು, ಮೇಲ್ಕಾಣಿಸಿದ ಶಾಸನಗಳನ್ವಯ ಈತ ಮಾಟೂರ ವಂಶದವನಲ್ಲ, ಸೇನವಾರ ವಂಶಕ್ಕೆ ಸೇರಿದವನೆಂಬುದು ಖಚಿತವಾಗುತ್ತದೆ.
ಈ ಸೇನವರರು ಸೇನವಾರ, ಸೇನಾವರ, ಸೇಣವಾರ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದರೆಂದು ಅವರ ಕುರಿತು ಲೇಖನವೊಂದನ್ನು ಬರೆದ ಡಾ. ಎಂ.ಬಿ. ನೇಗಿನಹಾಳ ಅವರು ತಿಳಿಸುತ್ತ, 7ನೆಯ ಶತಮಾನದಿಂದ 12ನೆಯ ಶತಮಾನದವರೆಗಿನ ಶಾಸನಗಳಲ್ಲಿ ಇವರ ಉಲ್ಲೇಖವಿದೆ ಎಂದು ವಿವರಗಳನ್ನು ನೀಡುತ್ತಾರೆ. ಕನತಿ ಶಾಸನವು ಇವರನ್ನು ಕೂಡಲೂರ ಪರಮೇಶ್ವರ, ಮೃಗೇಂದ್ರ ಲಾಂಛನ, ಫಣಿಧ್ವಜ ವಿರಾಜಮಾನ, ಖಚರ ತ್ರಿಣೇತ್ರರು ಎಂಬ ಬಿರುದುಗಳಿಂದ ವರ್ಣಿಸುತ್ತದೆ.
ಈ ಸೇನವಾರ ವಂಶಕ್ಕೆ ಸೇರಿದ ಇನ್ನೊಬ್ಬ ಪ್ರಮುಖ ವ್ಯಕ್ತಿ ಮಾರಕ್ಕೆ ಅರಸ. ಇವನನ್ನು ಕುರಿತು 10ಕ್ಕೂ ಹೆಚ್ಚು ಶಾಸನಗಳು ಹಾನಗಲ್ಲು ಮತ್ತು ಹಿರೇಕೆರೂರು ತಾಲೂಕುಗಳÀಲ್ಲಿ ದೊರೆಯುತ್ತವೆ. ಈತ ರಾಷ್ಟ್ರಕೂಟ 1ನೆಯ ಕೃಷ್ಣ ಮತ್ತು ಧ್ರುವರ ಕಾಲದಲ್ಲಿ ಸೇವೆ ಸಲ್ಲಿಸಿ ‘ಅಕಾಲವರ್ಷ ಶ್ರೀ ಪೃಥುವೀ ವಲ್ಲಭ ಸೇನಾವರ’ ಎಂದು ಕರೆಸಿಕೊಂಡ ನಂತರ ಸು. ಕ್ರಿ.ಶ.780ರಲ್ಲಿ ಮರಣ ಹೊಂದುತ್ತಾನೆ. ಇವರಿಬ್ಬರೂ ಬಹುಶಃ ತಂದೆ ಮಕ್ಕಳಾಗಿರಬಹುದು ಎಂದು ತೋರುತ್ತದೆ. ಆದರೆ ಇದಕ್ಕೆ ಸಂಬಂಧಿಸಿ ಪೂರಕವಾದ ಯಾವುದೇ ದಾಖಲೆಗಳಿಲ್ಲ. ಶಾಸನದ ಲಭ್ಯ ಪಠ್ಯ ಇಂತಿದೆ-
1 . . . . . . ಕನ್ನವಳ . . . ಕರಾ
2  . . . . ಸ ರಾಟ್ಟಗರನ್ ಪೃಥುವೀಸೇನ
1 . . . . ನ್ನಿ¿õÁ್ಛಸಿರಕಮಾಳೆ ಅರಕಸೇನ
2 . . . . ಗೆಯೆ ಕಗಸಾಸಿಯಾ ಮಾಳಾದನಕ್ಕೆ
3 . . . . ದನಟರ ನಳ್ಗಮುಣ್ಡುಗೆಯೆ ಎ¿್ಪತ
4 . . . . ಸಾಸಿರವರ ಸಹಿತಮಾಗೆ ಕೊ¿್ಗದಿರನೆ
5 . . . . ನಾ¿õÁ್ಗಮು[ಣ್ಡು*]ಗೆಯೆ ಕಮ ಬಾದ್ದಗಿಯರ ಬಾಯಿ
6 . . . . ಲ್ಗಿಟ್ಟಣಿಬದ್ದತ್ಕಾ ಪ¿Âಗೆಯ್ದೊ ನೊಳ
7 . . . . ನಪ್ಪುಮೊ ಕನ್ದುಪ ನುರುಂದ ದಣ್ಡ ಕೊಳ್ಗೆ
8 ರಳಿದೊಗೆ ಕರ¿õÉ್ತ ಇಲ್ಲಿ ಸಾಬೊರ ಜಕೆನ
9 ವೊ¿ಲ್ಕಿದ . ಮರದಗಿಯರ ಪಿಣ್ದುಗರ¿õÉ್ತ-
10 ಯನ್ದಿದಿಸಿದನ್ ಬುದೊಕಜಸ್ನಾನ್ ಮಾಸಿಯುಟ-
11 ನ್ ಯಿಲ್ಗಿದಣಮಾನ್ನಿದಿ(¾Â)ಸಿದನ್ ದೋಸಿಯ-
12 ರಸ ಕದೇಸಟದೊ ಸೇನವರಸ ಕೇದೋರಿದ-
13 ನ¿Âದೋ (ಗುಳಿ) ಮಹಾಪಾತಕನಾದೊಂ [||*]
2
ಲೋಕೇಶ್ವರಿ ದೇವಸ್ಥಾನದ ಮುಂದಿನ ಶಾಸನ
ಸು. ಕ್ರಿ. ಶ. 870
ರಾಷ್ಟ್ರಕೂಟ ಚಕ್ರವರ್ತಿ ಇಮ್ಮಡಿ ಇಂದ್ರನು ಆಳುತ್ತಿರುವಾಗ, ಬನವಾಸಿ ನಾಡನ್ನು ಶಂಕರಗಂಡನು ಪಾಲಿಸುತ್ತಿದ್ದನು. ಕೇಸವಯ್ಯನು ಜಮ್ಬೂರ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ಮಾಸೆಯರ ಮಾರಮ್ಮ ಊರ ಗಾವುಂಡನಾಗಿದ್ದನು. ಆ ಸಮಯದಲ್ಲಿ ತು¾ುವಳ್ಳರ ದೊರವಣ್ಣ ಎನ್ನುವವನು ತು¾ುಗೋಳಿನಲ್ಲಿ ಸತ್ತು ಸ್ವÀರ್ಗಕ್ಕೆÉ ಸನ್ದನೆಂದು ಶಾಸನವು ತಿಳಿಸುತ್ತದೆ.
ಮೊದಲ ಪಟ್ಟಿಕೆ
1 [ಸ್ವ*]ಸ್ಥಿ(ಸ್ತಿ) ಶ್ರೀ ಇನ್ದರವಲ್ಲ[ಹ*] ಪೃಥುವಿ ರ(ರಾ)ಜ್ಯ
ಎರಡನೆಯ ಪಟ್ಟಿಕೆ
2 [ಗೆ*]ಯ್ಯೆ ಸಂಕರಗಣ್ಡ ಬನವಾಸಿ ನ(ನಾ)ಡಾಳೆ ಒದ
3 . ಗು ಕೇಸವಯ್ಯನು ಜಮ್ಬೂರುವುಗೆಯ್ಯೆ ಮಾಸೆಯರ ಮೂರನೆಯ ಪಟ್ಟಿಕೆ
4 ಮಾರಮ್ಮ ಊರುಗವುಡುಗೆಯ್ಯೆ ಕಾಗುಗೆÉರ ತು¾ುವ
5 ಳ್ಳರ ದೊರವಣ್ಣ ತು¾ುಗೊಳ್ಸತ್ತು ಸಗ್ರ್ಗಕೆ ಸನ್ದ [||*]
3
ಲೋಕೇಶ್ವರಿ ದೇವಸ್ಥಾನದ ಮುಂದಿನ ಇನ್ನೊಂದು ಶಾಸನ
ಸು. 9ನೆಯ ಶ.
ರಾಷ್ಟ್ರಕೂಟ ಚಕ್ರವರ್ತಿಗಳ ಕಾಲದ ಈ ಶಾಸನವು ಸವೆದು ಅಸ್ಪಷ್ಟವಾಗಿರುವುದರಿಂದ ವಿವರಗಳು ತಿಳಿದು ಬರುವುದಿಲ್ಲ. ವನವಾಸಿ ನಾಡ ಉಲ್ಲೇಖವಿದೆ. ಆ ಸಮಯದಲ್ಲಿ ವಿಜಯರಸ, ನಾ¿õÉ್ಬೂಯ್ಯ ಎನ್ನುವ ಅಧಿಕಾರಿಗಳು, ಜಯ್ಬುರಾ ಸ¿Â್ಬಯ ಎನ್ನುವ ಗಾಮುಂಡನ ಹೆಸರುಗಳಿವೆ. ಸ್ತ್ರೀ ದೇವತೆ(ಎ¾ತಿ) ಒಬ್ಬಳಿಗೆ ಬರುವ ಧನವೆಲ್ಲವನ್ನೂ ದಾನವಾಗಿ ಬಿಟ್ಟ ಕುರಿತು ಉಲ್ಲೇಖ ಮತ್ತು ಫಲಶ್ರುತಿಯೂ ಇದೆ.
1 . . . . . . . . . . . . . . ್ಟ
2 . . ಟೆ ಪೃಥುವೀ ರಾಜ್ಯ[ಗೆ*]ಯೆ ಪೃಥಿ-
3 ವೀ ವಲ್ಲಭ ಮಹಾರಾಜರಾ ವನವಾಸಿ ಮ-
4 ಣ್ಡಲಮಾಳೆ ವಿಜಯರಸರಾ ರಾಜ್ಯ
5 ದು ರೆಟಳ್ಳೆ £ಲ್ಪಿ ಮಣ್ಗಿಬ್ಬೊನಾ ನಾ-
6 ¿õÉ್ಬೂಯ್ಗು(ಯ್ಯ) ಕೆಯೆ ಜಯ್ಬ್ಬುರಾ ಸ¿Â್ಬಯ
7 ಗಾಮುಡು ಕೆಯೆ ಕಾಗುಮಾಸಿಯಾನಾಳೆ-
8 ¾ತಿಯರ್ಕೆ ಬಪ್ರ್ಪ ಧನಮೆಲ್ಲಮಾ£್ವ-
9 ಟ್ಟ(ಟ್ಟಾ)ರ್ [|||*] ಇದ ಕೆಡುವೊಪ್ರ್ಪಞ್ಚ ಮಹಾ ಪಾ-
10 ತಕರಪ್ಪೋರ್*
* ಮುಂದಿನ ಕೆಲವು ಅಕ್ಷರಗಳು ಅಸ್ಪÀಷ್ಟವಾಗಿವೆ.
4
ನಾಗನಗೌಡ ಸಂಕನಗೌಡ ಪಾಟೀಲ ದೇವಿಕೊಪ್ಪ ಅವರ ಹೊಲದಲ್ಲಿ
ಕ್ರಿ.ಶ.1270
55" ಎತ್ತರ 20" ಅಗಲ ಗಾತ್ರದ ಕರಿಕಲ್ಲಿನಲ್ಲಿ ಈ ಮಾಸ್ತಿಕಲ್ಲನ್ನು ಕೆತ್ತಿದೆ. ಮೊದಲನೆಯ ಸ್ತರದ 10"   ಭಾಗದಲ್ಲಿ ಚಂದ್ರ-ಆಕಳು-ಸೂರ್ಯನ ಉಬ್ಬುಶಿಲ್ಪಗಳಿವೆ. ಎರಡನೆಯ ಸ್ತರದ 6" ಭಾಗದಲ್ಲಿ ಕೈಮುಗಿದು ಕುಳಿತ ದಂಪತಿ, ಶಿವಲಿಂಗ, ಪೂಜಾರಿ ಮತ್ತು ನಂದಿಗಳ ಉಬ್ಬುಶಿಲ್ಪಗಳಿವೆ. ಮೂರನೆಯ ಸ್ತರದಲ್ಲಿ  ಕಂಬದಿಂದ ಹೊರಬಂದ ತೋಳು, ತೋಳಿನ ಮೇಲ್ಭಾಗದಲ್ಲಿ ದಂಪತಿಗಳು, ದಂಪತಿಗಳ ಮೇಲ್ಭಾಗದಲ್ಲಿ ಕೈಮುಗಿದುಕೊಂಡು ಸತಿ ಕುಳಿತಿದ್ದಾರೆ.  ತೋಳಿನ ಕೆಳಗೆ ಬಿಲ್ಲು ಹಿಡಿದ ವೀರ ಮತ್ತು ಅವನ ಸೊಂಟ ಹಿಡಿದು ನಿಂತÀ ಸತಿ ಇದ್ದಾರೆ. ಕೆಳಗೆ ಎರಡು ಸಾಲುಗಳ ಅಪೂರ್ಣ ಶಾಸನ ವಿದೆ. ಕೇವಲ ಮಿತಿಯನ್ನು ಮಾತ್ರ ತಿಳಿಸಿ ನಿಂತುಹೋಗುತ್ತದೆ.
“ಸಕವರುಷ 1192ನೆಯ ರಉ(ರೌ)ದ್ರ ಸಂವತ್ಸರದ ಮಾ*” ಎನ್ನುವ ಅಪೂರ್ಣ ಮಿತಿಯು ಕ್ರಿ.ಶ. 1270ರಲ್ಲಿ ಬರುತ್ತದೆ.
1  ಸ್ವಸ್ತಿ ಸಕವರುಷ 1192ನೆಯ ರಉ(ರೌ)-
2  ದ್ರ ಸಂವತ್ಸರದ ಮಾ
5
ಲೋಕೇಶ್ವರಿ ದೇವಸ್ಥಾನದ ಮುಂದಿನ ಮತ್ತೊಂದು ಶಾಸನ
ಸು. 18-19 ಶ.
ಸೋನಯ್ಯ ವೊಡೆಯರಿಗೆ ತಾಮರ ನಾಣಿಕೆಯ ನಾಗೆಯನಾಯಕ ಕೊಟ್ಟ ಭೂಮಿಯ ಕುರಿತು ಸುಮಾರು 18-19ನೆಯ ಶತಮಾನದ ಅಕ್ಷರಗಳಲ್ಲಿ ತಿಳಿಸುತ್ತದೆ.
1 0 ಸೋನಯ್ಯ ವೊ-
2 0 ಡೆಯರಿಗೆ ತಾಮ-
3 0 ರ ನಾಣಿಕೆಯ ನಾ-
4 0 ಗೆಯ ನಾಯಕ ಕೊ-
5 0 ಟ್ಟ ಭೂಮಿ ಸುಭ-
6 0 ಮಸ್ತು
[ದೇವಿಕೊಪ್ಪದ ಶಾಸನಗಳ ಪಠ್ಯವನ್ನು ಪರಿಶೀಲಿಸಿ, ಪರಿಷ್ಕರಿಸಿಕೊಟ್ಟ ಡಾ. ಬಿ. ರಾಜಶೇಖರಪ್ಪನವರಿಗೆ ಅನಂತ ಕೃತಜ್ಞತೆಗಳು.]

 ಎಚ್.ಐ.ಜಿ. 27, ನವನಗರ, ಹುಬ್ಬಳ್ಳಿ.

No comments:

Post a Comment