Wednesday, January 30, 2013

ಇತಿಹಾಸಕಾರರು ಸರಣಿ


appaaji@gmail.com


                                                                                                                    
ಸ್ವ ಅಧ್ಯಯನದಿಂದ ಶಾಸನ ತಜ್ಞರಾದ ಡಾ. ಪಿ..ಬಿ ದೇಸಾಯಿ


ಡಾ. ಪಿ.ಬಿ ದೇಸಾಯಿ ಹಿಂದಿನ ನೈಜಾಮ   ಕರ್ನಾನಾಟದ ಹೆಸರಾಂತ ಪುರಾತತ್ತ್ವ ತಜ್ಞರು. ಅವರು ಶಾಸನ ಜಗತ್ತಿನಲ್ಲಿ ಒಂದುರೀತಿಯಲ್ಲಿ ಸ್ವಯಂಭೂಲಿಂಗ. ಸ್ವ ಅಧ್ಯಯನ ಮತ್ತು  ಅವಿರತ ಪರಿಶ್ರಮದಿಂದ ಮೇಲೆ ಬಂದವರು  ಅವರು  ಜನಿಸಿದ್ದು ನೈಜಾಮಪ್ರಾಂತ್ಯದ ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ . ಅವರದುಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ದೇಸಾಯಿ ಎಂದೊಡನೆ ಅವರು ದೊಡ್ಡ ಜಮೀನುದಾರರೇನೂ ಆಗಿರಲಿಲ್ಲ. ಅನೇಕ ಕಡೆ ದೇಸಾಯಿ ಎಂಬ ಹೆಸರು ಶ್ರೀಮಂತಿಕೆ ಮತ್ತು ಅಧಿಕಾರದ ಸೂಚಕವಾಗಿದೆ. ದೇಶಗತಿ ಇದ್ದವರೇ ದೇಸಾಯರು ಎಂಬುದು ವಾಡಿಕೆ. ಕೆಲವು ಕಡೆ ಮನೆತನದ ಹೆಸರು ಆಗಿದೆ.ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‌ಗಳಲ್ಲಿ ಈ ಹೆಸರು ಸಾಮಾನ್ಯ. ಅದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ವೃತ್ತಿ ಸೂಚಕವಾಗಿದೆ. ಅದು ಉನ್ನತ ಕಂದಾಯ ಅಧಿಕಾರಿಯ ಹುದ್ದೆಯ ಸಂಕೇತವಾಗಿತ್ತು.  ಡಾ. ದೇಸಾಯಿ  ಅವರ ತಂದೆ ಭೀಮರಾವ್‌,  ತಾಯಿ ಭಾಗೀರತಿ ಬಾಯಿ. ಅವರು 24ನೆಯ ಡಿಸೆಂಬರ್‌1910 ರಂದು .ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ ಜನಿಸಿದರು  ಅವರ ತಂದೆ ಭೀಮರಾವ್‌ನಿಜಾಮರ ಸರ್ಕಾರದಲ್ಲಿಕಂದಾಯ ಅಧಿಕಾರಿಯಾಗಿದ್ದರು. ಆರು ಜನ ಸೋದರರಲ್ಲಿ ಪಾಂಡುರಂಗ ಅತ್ಯಂತ ಕಿರಿಯರು. ಇವರು ಆರು ವರ್ಷದವರಿದ್ದಾಗಲೇ ತಂದೆ ಕಾಲವಾದರು
ಪಾಡುರಂಗರಾವ್‌ ಭೀಮರಾವ್‌ ದೇಸಾಯಿ (1910-1974)
ಆಗಿನ ಅವಿಭಕ್ತ ಕುಟುಂಬದ ಸಂಪ್ರದಾಯದ ಪ್ರಕಾರ  ಸಹಜವಾಗಿ ಮನೆತನ ನಡೆಸುವ ಹೊಣೆ ಅವರ ಅಣ್ಣಂದಿರಿಗೆ ಬಂದಿತು ಅವರೇ ಪಾಂಡುರಂಗನ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತರು ಅವರ ಪ್ರಾಥಮಿಕ ಶಿಕ್ಷಣ ಗುಲ್ಬರ್ಗ ಜಿಲ್ಲೆಯ ಸೇಡಂನಲ್ಲಿ ಆಯಿತು.ಮಾಧ್ಯಮಿಕ ಶಿಕ್ಷಣವು ಗುಲ್ಬರ್ಗದಲ್ಲಿ ದೊರೆಯಿತು

 ಆಗಿನ ರಾಜ್ಯ ಭಾಷೆ ಉರ್ದು.ನಿಜಾಮರ ರಾಜ್ಯದಲ್ಲಿ ಆ ಭಾಗದಲ್ಲಿ ಕನ್ನಡ ಮಕ್ಕಳು ಮರಾಠಿ ಮಾದ್ಯಮದಲ್ಲೇ ಕಲಿಯ ಬೇಕಿತ್ತು.  ಅದೇ ಒಂದು ವರದಾನವಾಯಿತು. ಆ ಸಮಯದಲ್ಲಿ ಶಿಕ್ಷಣ ಪಡೆದವರೆಲ್ಲ ಬಹು ಭಾಷೆ ಬಲ್ಲವರಾಗಿದ್ದರು.ಜೊತೆಗೆ ಹೈಸ್ಕೂಲಿನಲ್ಲಿ ಇಂಗ್ಲಿಷ್‌ಮಾದ್ಯಮದಲ್ಲಿ ಶಿಕ್ಷಣ ನೀಡುತಿದ್ದರು ಪರಿಣಾಮವಾಗಿ ಅವರಿಗೆ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ಲ್ಕು ಭಾಷೆಗಳು ನೀರು ಕುಡಿದಷ್ಟು ಸರಾಗವಾಗಿ ಬರುತ್ತಿದ್ದುವು. ಅವರಿಗೆ  ಪುರಾತನ ಇತಿಹಾಸ, ಶಾಸನ ಶಾಸ್ತ್ರ ಮತ್ತು ಹಸ್ತಪ್ರತಿ ಶಾಸ್ತ್ರಗಳಲ್ಲಿ ಆಸಕ್ತಿ  ಆದರೆ ಇದೆಲ್ಲವನ್ನೂ ಬಹಳ ಕಷ್ಟದಿಂದ ಕಲಿತರು.  ಮುಂಬಯಿ ವಿಶ್ವ ವಿದ್ಯಾಲಯದ  ಇಂಟರ್‌  ಪರೀಕ್ಷೆಗೆ ಕುಳಿತವರು ಅನಾರೋಗ್ಯದ ನಿಮಿತ್ತ  ತಮ್ಮ ಶಿಕ್ಷಣವನ್ನು ಪದವಿ ಪಡೆಯುವ ಮುನ್ನವೇ ಬಿಡಬೇಕಾಯಿತು. ಜೊತೆಗೆ ಅವರ ಆರೋಗ್ಯವೂ ನಾಜೂಕಾಗಿತ್ತು. ಕಾಲೇಜು ಬಿಟ್ಟು ಹಳ್ಳಿಗೆ ಹಿಂತಿರುಗಿದರು.ಅವರ ಅಣ್ಣ ರಾಘವೇಂದ್ರರಾವ್‌ ರಾಷ್ಟ್ರಪ್ರೇಮಿ   ಮಕ್ಕಳಿಗೆ ಸ್ವದೇಶಾಭಿಮಾನ ಹುಟ್ಟಿಸು ಶಿಕ್ಷಣ ಕೊಡಬೇಕೆನ್ನುವದು ಅವರ ಧ್ಯೇಯ. ಅದಕ್ಕಾಗಿ ಕುಕನೂರಿನಲ್ಲಿ ರಾಷ್ಟ್ರೀಯ ವಸತಿಶಾಲೆಯಲ್ಲಿ ತರೆದಿದ್ದರು. ಅಲ್ಲಿ ಕಾಲೇಜು ಕಲಿತ ತಮ್ಮ ಸಹಾಯಕ್ಕೆ ನಿಲ್ಲಬೇಕಾಯಿತು  ಅಲ್ಲಿ ಬೋಧನೆಯ ಜೊತೆ ಇತರೆ ಕಾರ್ಯಕ್ಕೂ ಸಹಕಾರ ನೀಡುತಿದ್ದರು. ಇಬ್ಬರೂ ಸೊದರರೂ ಗಾಂಧೀಜಿಯವರ ತತ್ವದಿಂದ ಪ್ರಭಾವಿತರಾಗಿದ್ದರು. ಜಾತಿ ಬೇಧವಿಲ್ಲದೆ ಎಲ್ಲರನ್ನೂ ಶಾಲೆಗೆ ಸೇರಿಸಿಕೊಂಡು ಆ ಭಾಗದಲ್ಲಿ ಆ ಕಾಲದಲ್ಲಿ ಯಾರೂ ಊಹಿಸದ ಕೆಲಸ ಮಾಡಿದರು. ಅದರಿಂದ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾದರೂ ಹೆದರದೆ ಕೆಲಸ ಮುಂದುವರಿಸಿದರು. ಅದು ಯವಕನ ಹೃದಯದಲ್ಲಿ ದೇಶಭಕ್ತಿಯ ಕಿಡಿ ಹೊತ್ತಿಸಿತು
ಕುಕುನೂರಿನಲ್ಲಿನಶಿಲಾಶಾಸನ

ಕುಕುನೂರು ಗ್ರಾಮದಲ್ಲಿ ಪುರಾತನ ದೇಗುಲಗಳು ಸಮೂಹವೇ ಇದೆ. mಅಲ್ಲಿನಮಹಾಮಾಯಿ ದೇವಾಲಯ ಬಹುಪ್ರಖ್ಯಾತ.ಅಲ್ಲಿರುವ  ಶಾಸನಗಳ ಸಂಖ್ಯೆ ಬಹಳ.ಮೊದಮೊದಲು ಕುತೂಹಲದಿಂದ ನೋಡುತಿದ್ದ ದೇಸಾಯರು ನಂತರ ಓದುವುದನ್ನು ರೂಢಿಸಿಕೊಂಡರು  ಕ್ರಮೇಣ ಅವಗಳ ಬರಹಗಳನ್ನು ಓದಿದರೆ  ಅರ್ಥ ಮಾಡಿಕೊಳ್ಳುವ ಹಂತ ತಲುಪಿದರು ಇದರಿಂದ ಶಾಸನ ಶಾಸ್ತ್ರದ ಪ್ರಾಯೋಗಿಕ ಪಾಠ ಎಳವೆಯಲ್ಲೇ ಆಯಿತು. ಅವರ ಇತಿಹಾಸ ಆಸಕ್ತಿ ಇನ್ನೂ ತೀವ್ರವಾಯಿತು.. ಕ್ರಮೇಣ ಪಾಂಡುರಂಗನು ಅ ಶಿಲಾಶಾಸನಗಳನ್ನು ಸರಾಗವಾಗಿ ಓದುವಂತಾದನು.
ಕುಕುನೂರು ಮಧ್ಯಯುಗದಲ್ಲಿ ಹೆಸರಾಂತ ಶಿಕ್ಷಣಕೇಂದ್ರವಾಗಿತ್ತು  ಅಲ್ಲಿ ಒಂದು ಹೆಸರಾಂತ ಘಟಿಕಾ ಇದ್ದಿತು ಹಿಂದಿನ ಕಾಲದಲ್ಲಿ  ಉನ್ನತಶಿಕ್ಷಣ ಕೇಂದ್ರಕ್ಕೆ ಘಟಿಕಾ ಎನ್ನುತಿದ್ದರು.. ಐದೇ ವರ್ಷದಲ್ಲಿ ಸ್ವಯಂಆದ್ಯಯನ ಮಾಡಿದ ಶಾಸನ ತಜ್ಞನಾಗಿ ಹೊರ ಹೊಮ್ಮಿದರು. ಯಾವುದೇ ಗುರು ಮುಖೇನ ಶಿಕ್ಷಣವಿಲ್ಲದಿದ್ದರೂ ಅಭ್ಯಾಸ ಬಲದಿಂದ ಶಾಸನಗಳನ್ನು ತಡವರಿಸದೆ ಓದಿ ಅರ್ಥ ಮಾಡಿಕೊಳ್ಳುವ ಶಕ್ತಿ ಸತತ ಅಧ್ಯಯನದಿಂದ ಬಂದಿತ್ತು.. ತನ್ನದೇ ಆದ ವಿಧಾನದಿಂದ ಶಾಸನ ಓದುವಂತಾಗಿದ್ದನು . ಅವರ ಆಸಕ್ತಿ ಹೆಚ್ಚಿದಂತೆ ಶಾಸನ ಸಂಗ್ರಹದ ಹವ್ಯಾಸವೂ ಬೆಳೆಯಿತು. ಕುಕುನೂರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು ೨೦೦ ಶಾಸನಗಳ ನ್ನು ಸಂಗ್ರಹಿಸಿ  ವಿಶ್ಲೇಷಣೆ ಮಾಡ ಬಲ್ಲ ಶಕ್ತಿ ಬಂದಿತ್ತು. ಹಾಗೆ ಓದುವಾಗ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಬದಲಾದ ಲಿಪಿ ಮತ್ತು ಭಾಷೆಯನ್ನು ಗುರುತಿಸುವ ಸಾಮರ್ಥ್ಯ ಬಂದಿತ್ತು.ಎಲ್ಲವೂ ಅನುಭವ ಜನ್ಯ.ಶತಮಾನಗಳಲ್ಲಿ ಆಗುವ ಲಿಪಿ  ವಿಕಾಸವನ್ನು ಸುಲಭವಾಗಿ ಗುರುತಿಸಸುವ ಶಕ್ತಿಬಂದಿತು..ಅವರ ಕುತೂಹಲವು ಈಗ ಅಭಿಲಾಷೆಯಾಯಿತು. ಬರಿ ಶಾಸನ ಓದುವುದರಲ್ಲಿಯೇ ತೃಪ್ತರಾಗದೇ ಅದರಜೊತೆಗೆ ದೇವಸ್ಥಾನಗಳ ವಾಸ್ತು, ಶಿಲ್ಪ, ಮತ್ತು ವೀರಗಲ್ಲುಗಳ ಅಧ್ಯಯನವನ್ನೂ ಮಾಡಿದರು.ಐದುವರ್ಷದಲ್ಲಿ ಹಣಕಾಸಿ ಪರಿಸ್ಥಿತಿ ತುಸು ಸುಧಾರಿಸಿತು ಅವರು ಮತ್ತೆ  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದರು.ಯಥಾರೀತಿ ಇತಿಹಾಸ ಮತ್ತು ಸಂಸ್ಕೃತ ವಿಷಯಗಳನ್ನು ಆಯ್ದುಕೊಂಡರು.. ಬಿ ಎ ಪದವಿ  1935 ರಲ್ಲಿ ಪಡೆದರು. ಸಂಸ್ಕೃತದಲ್ಲಿ ಅತ್ಯತ್ತಮ ಸ್ಥಾನ ಗಳಿಸಿದ್ದರು ಎಂ ಎ ನಲ್ಲಿ ಲಿಪಿಶಾಸ್ತ್ರವೂ ಒಂದುದು ವಿಷಯವಾಗಿತ್ತು
ವಿಜಯನಗರದ ಆರನೇ ಶತಮಾನೋತ್ಸವವನ್ನು  ೧೯೩೬ ರಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಆಸಂದರ್ಭದಲ್ಲಿ ಅವರು ಬರೆದ ಕೃತಿ “ ’ವಿಜಯ ನಗರ ಸಾಮ್ರಾಜ್ಯದ ಇತಿಹಾಸ” “( History of Vijayanagar empire )  ಅಪಾರ ಮನ್ನಣೆ ಗಳಿಸಿತು ಕನ್ನಡದ ಈ ಕೃತಿಯುಅವರನ್ನು ಚಕ್ಕವಯಸ್ಸಿನಲ್ಲಿಯೇ ಲೇಖಕನೆಂಬ ಖ್ಯಾತಿ ತಂದಿತು.ಅವರ ಎರಡನೆಯ ಪುಸ್ತಕ ಮಹಾರಾಷ್ಟ್ರದ ಪ್ರಸಿದ್ಧಪುರುಷ ಶಿವಾಜಿಯನ್ನು ಕುರಿತದ್ದು ಅವರು ಶಿವಾಜಿಯ ಜೀವನವನ್ನು ಪ್ರಮುಖವಾಗಿ ಕನ್ನಡದ ಮೂಲಗಳಿಂದಲೇ ಪಡೆದಿದ್ದರು ಎರಡೂ ಪುಸ್ತಕಗಳೂ ಬಹಳ ವರ್ಷಗಳಕಾಲ ಪಠ್ಯ ಪುಸ್ತಕಗಳಾಗಿದ್ದವು 


ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗವನ್ನು ೧೯೩೯ರಲ್ಲಿ ಸಹಯಕ ಲಿಪಿಶಾಸ್ತ್ರಜ್ಞನಾಗಿ ಕೆಲಸಕ್ಕೆ ಸೇರಿದರು. ಅವರ ವೇತನ ಹೆಚ್ಚಾಗಿರಲಿಲ್ಲ.ಆದರೆ ಈ  ಉದ್ಯೋಗ ಅವರಿಗೆ ಪ್ರಿಯವಾಗಿತ್ತು. ಅವರು ತಮ್ಮ  ಕಚೇರಿಯಿದ್ದ ಊಟಿಯಲ್ಲಿಯೇ ಮನೆಮಾಡಿ ನೆಲಸಿದರು. ಹವ್ಯಾಸವಾದ ಶಾಸನ ಸಂಗ್ರಹ ಈಗ ಉದ್ಯೋಗವಾಯಿತುಉತ್ಸಾಹದಿಂದ ಕೆಲಸ ಮಾಡಿದರು . ಅವರು ೧೭ ವರ್ಷ ಆಳವಾಗಿ ಶಾಸನಗಳ ಅಧ್ಯಯನ ಮಾಡಿದರು ಅವರು ಸಂಗ್ರಹಿಸಿದ, ಅಧ್ಯಯನ ಮಾಡಿದ ಶಾಸನಗಳ ಸಂಖ್ಯೆ ೧೦೦೦ ಕ್ಕೂ ಮಿಗಿಲು. ಅವರುವಿಶೇಷವಾಗಿ . ಅವರು ಮುಂಬಯಿ ಕರ್ನಾಟಕದ ನಾಲಕ್ಕೂ ಜಿಲ್ಲೆಗಳ ಶಾಸನ ಅಧ್ಯಯನ ಮಾಡಿದರು ಅದರಲ್ಲಿ ತಮಿಳು ಮತ್ತು ತೆಲುಗು ಶಾಸನಗಳೂ ಸೇರಿದ್ದವು. ಜಾನ್‌ಎಫ್ ಫ್ಲೀಟ್‌ ಮಾಡಿದ್ದ ಶಾಸನ ಸಂಗ್ರಹ ಕೆಲಸ ಇವರುಯಶಸ್ವಿಯಾಗಿ ಮುಂದುವರಿಸಿದರು
ಇಲಾಖೆಯ ಜರ್ನಲ್ ಆದ ಅಂತರಾಷ್ಟ್ರೀಯ ಖ್ಯಾತಿವೆತ್ತ  ಎಪಿಗ್ರಾಫಿ ಇಂಡಿಕಾಗೆ ಅವರು ನಿರಂತರ ಲೇಖನ ನೀಡುತಿದ್ದರು. ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ದಕ್ಷಿಣ ಭಾರತದ ಭಾಷೆಗಳ ಮೇಲಿನ ಪ್ರಭುತ್ವದಿಂದ ಪುರಾತನ ಶಿಲಾಲಿಖಿತ ಬರಹಗಳ ಅವರ ವಿಶ್ಲೇಣೆಯು ಪ್ರಶ್ನಾತೀತವಾಗಿರುತಿತ್ತು.
ಅವರು 1957 ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯದ ಬೋಧನಾ ಹೊಣೆಯನ್ನು ವಹಿಸಿಕೊಂಡರು. ಇಲ್ಲಿ ಅವರಿಗೆ ತಾವು ಸಂಗ್ರಹಿಸಿದ ಅಪಾರ ಶಾಸನಗಳ ಬರಹಗಳ ಅಧ್ಯಯನಕ್ಕೆ ಸಾಕಷ್ಟು ಸಮಯ ದೊರೆಯಿತು ಅದರಿಂದ ಹೈದ್ರಾಬಾದಿನ ಕನ್ನಡ ಶಾಸನ ಸಂಗ್ರಹ “. "A corpus of Kannada inscriptions from Hyderabad", "Jainism in South India and some Jaina Inscriptions" ಎಂಬಗ್ರಂಥಕ್ಕೆ ಡಿಲಿಟ್‌ ಪದವಿ ದೊರೆಯಿತು.ಮತ್ತು "Basaveshvara and his times" ಮೊದಲಾದ ವಿದ್ವತ್‌ಪೂರ್ಣ ಗ್ರಂಥಗಳನ್ನು ರಚಿಸಲು ಅನುವಾಯಿತು ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ  ತುಂಬ ಉಪಯುಕ್ತವಾದ “ಶಾಸನ ಪರಿಚಯ” ಮಾಲಿಕೆಯಲ್ಲಿ  ಸುಮಾರು ಹತ್ತು ಕಿರುಪುಸ್ತಕ ಪರಿಚಯಿಸಿದರು. ಪ್ರೊಫೆಸರ್‌ ಆದ ಮೇಲೆ ಸ್ನಾತಕೋತ್ತರ ಮಟ್ಟದಲ್ಲಿ  ಶಾಸನ ಶಾಸ್ತ್ರವನ್ನು ಒಂದುವಿಷಯವಾಗಿ ಪುರಾತನ ಇತಿಹಾಸದ ಪಠ್ಯಕ್ರಮದಲ್ಲಿ ಸೇರಿಸಿದರು.ಅದರಿಂದ ಅನೇಕ ಕಿರಿಯರು ಶಾಸನತಜ್ಞರಾಗಿ ಹೊರಹೊಮ್ಮಿ ಆಕ್ಷೇತ್ರದಲ್ಲಿ ಹೆಸರು ಮಾಡಲು ಅವಕಾಶವಾಯಿತು. ಅವರು ಪ್ರಾಚೀನ ಭಾರತದ ಇತಿಹಾಸ , ಎಂಬ ಪುಸ್ತಕವನ್ನು, ಡಾ. ಶ್ರೀನಿವಾಸ ರಿತ್ತಿ ಮತ್ತು ಡಾ. ಬರಾ ಗೋಪಾಲ್‌ ಅವರ ಸಹಯೋಗದಲ್ಲಿ  ರಚಿಸಿದರು. ಅದರಿಂದ ದಶಕಗಳವರೆಗಿನ ಅಧಿಕೃತ ಕನ್ನಡ ಪಠ್ಯ ಪುಸ್ತಗಳ ಕೊರತೆಯು ನೀಗಿತು..ದೇಸಾಯಿಯವರು ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕಾಗಿದ್ದಾಗಪುರಾತತ್ತ್ವ ವಸ್ತುಸಂಗ್ರಹಾಲಯರೂಪಿಸಿದರು.ಬಳ್ಳಾರಿ ಜಿಲ್ಲೆಯ ಸಂಗನ ಕಲ್ಲು ಮತ್ತು ಹಾವೇರಿಯ ಹಳ್ಳೂರುಗಳಲ್ಲಿ ಉತ್ಖನನ ಕಾರ್ಯ ಮಾಡಿಪ್ರಾಗ್ಯೇತಿಹಾಸ ವಸ್ತುಗಳ ಪತ್ತೆ ಮಾಡಿ. ಆಂಧ್ರ ಪ್ರಧೇಶ ಸರ್ಕಾರದ ಮನವಿಯ ಮೇರೆಗೆ “  ಕನ್ನಡ ಇನ್‌ಸ್ಕ್ರಿಪ್ಚನ್ಸ್‌  ಅಫ್ ಆಂಧ್ರ ಪ್ರದೇಶ್’  ಮತ್ತು “ಸೆಲೆಕ್ಟ್ ಇನ್‌ಸ್ಕ್ರಿಪ್ಷನ್ಸ ಅಫ್ ಆಂಧ್ರ ಪ್ರದೇಶ” ಎಂಬ ಗ್ರಂಥಗಳನ್ನು ಸಂಪಾದಿಸಿ ಕೊಟ್ಟರು

ಡಾ. ದೇಸಾಯಿಯವರ ಶಾಸನಗಳ ಸಂಪಾದನೆಯ ಕಾರ್ಯದ ಜೊತೆಗೆ  ಅವರ ಮಹತ್ವದ ಕಾಣಿಕೆ ಎಂದರೆ ಕರ್ನಾಟಕದಲ್ಲಿನ ಬೌದ್ಧಕೆಂದ್ರಗಳ ಅನ್ವೇಷನೆ., ಶಾಕ್ತ ಪಂಥದ ಮೇಲಿನ ಕೃತಿಗಳು, ಪಂಡರಾಪುರದ ಪಾಂಡುರಂಗನಮೇಲಿನ ಮತ್ತು ಸ್ಥಳ ನಾಮಗಳ ಕುರಿತಾದ ಕೃತಿಗಳು ಪ್ರಮುಖವಾಗಿವೆ. ತಮ್ಮ ಅವಿರತ ಬರವಣಿಗೆಯಿಂದ  ಕನ್ನಡ ನಾಡಿನ ಕಂಪನ್ನು ಹರಡುವಲ್ಲಿ ಅವರು ಯಶಸ್ವಿಯಾದರು..
ಅವರ ೬೦ ನೇ ವಯಸ್ಸಿನಲ್ಲಿ ಆರುನೂರು ಪುಟದ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತುStudies in Indian history and culture “  ಅದರಲ್ಲಿ ವಿದ್ಯಾರ್ಥಿಗಳ ,ಸ್ನೇಹಿತರ , ವಿದ್ವಾಂಸರ ಬರಹಗಳು ಇವೆ. ೩೦ ಕನ್ನಡ , ೧೦ ಇಂಗ್ಲಿಷ್‌ ೧ ಮರಾಠಿ ಪುಸ್ತಕ ಬರೆದುದಲ್ಲದೆ  ಜೊತೆಗೆ ಮಕ್ಕಳ ಸಾಹಿತ್ಯ ರಚಿಸಿರುವರು ಅನೇಕ ಐತಿಹಾಸಿಕ ಕಾದಂಬರಿಗಳನ್ನೂ ಬರೆದಿರುವರು. ಕುಂತಳೇಶ್ವರ, ಮದಗಜ ಮಲ್ಲ. ನಾಗರ ಮರಿ, ಜಯ ಗೋದಾವರಿ ಮೊದಲಾದ ಐತಿಹಾಸಿಕಾದಂಬರಿಗಳು ಬಹಳ ನಿರ್ಧುಷ್ಟವಾಗಿ  ಓದುಗರ ಮನ ಸೆರೆ ಹಿಡಿಯುತ್ತವೆ. ಅವರ ಸಂಶೋಧನಾ ಲೇಖನಗಳನ್ನು  ನಿರಂತರ ಬರೆಯುತ್ತಲೇ ಇದ್ದರು ಕರ್ನಾಟಕದ ಕಳಚುರಿಗಳು,ಮಿಂಚಿದ ಮಹಿಳೆಯರು ಹಬ್ಬ ಹುಣ್ಣಿಮೆಗಳುಶಾಸನ ಪರಿಚಯ ಮೊದಲಾದ ಗ್ರಂಥಗಳನ್ನು ಬರೆದರು ಅಲ್ಲದೆ “ಶಿವಚರಿತ್ರ ವೃತ್ತಸಂಗ್ರಹ “ ಎಂಬ ಮರಾಠಿ ಕೃತಿಯನ್ನೂ ರಚಿಸಿದರು . ಅವರುಅವುಗಳಲ್ಲಿ  ಇಂಗ್ಲಿಷ್‌ಲೇಖನಗಳು ೧೦೫, ಕನ್ನಡದಲ್ಲಿ ೨೩೦ ಮರಾಠಿಯಲ್ಲಿ೪೦ ಲೇಖನಗಳಿವೆ ಒಟ್ಟು  ಸುಮಾರು ೪೦೦ ಲೇಖನಗಳನ್ನು ಬರೆದಿರುವರು. ಅವರ ನಾಜೂಕಾದ ದೇಹಸ್ಥಿತಿ ಮತ್ತು  ಶಿಕ್ಷಣ ಪಡೆಯುವಲ್ಲಿ ಅವರು ಪಟ್ಟಕಷ್ಟ ಪರಿಗಣಿಸಿದರೆ ದೇಶದ ಯಾವುದೇ ರಾಜ್ಯವೂ ಅವರ ಸಾಧನೆಯಿಂದ ಹೆಮ್ಮೆಯಿಂದ ಬೀಗಬಹುದು. ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆ ಅವರೆಲ್ಲ ಕೃತಿಗಳನ್ನೂ ಜೀವಂತವಾಗಿಸುತ್ತವೆ..ನಿವೃತ್ತರಾದ ಮೇಲೂ ವಿಶ್ವ ವಿದ್ಯಾಲಯಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿದ್ದರು೧೯೭೩ರಲ್ಲಿ ಅಖಿಲಭಾರತ ಇತಿಹಾಸ ಸಮ್ಮೇಳನದಲ್ಲಿ ಶಾಸನ ಶಾಸ್ತ್ರವಿಭಾಗದ ಅದ್ಯಕ್ಷರಾಗಿದ್ದರು  ಬಹುಭಾಷಾ ಶಾಸನ ತಜ್ಞರು ಅವರು ೧೯೭೪ ಮಾರ್ಚ ೫ರಂದು ಕಾಲವಶರಾದರು..

No comments:

Post a Comment