Tuesday, November 27, 2012

ತೀರ್ಥಹಳ್ಳಿ ರಾಮಮಂಟಪದ ಸುತ್ತಮುತ್ತಲಿನ ಅಪ್ರಕಟಿತ ಶಾಸನಗಳು


ಜಿ.ಕೆ. ದೇವರಾಜಸ್ವಾಮಿ
ತಿ # ೫೬, ‘ತ್ರಯೀ, ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನಪಾಳ್ಯ, ೨ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩.

ಶಿವಮೊಗ್ಗಾ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತುಂಗಾನದಿಯ ಮಧ್ಯದಲ್ಲಿ ಪರಶುರಾಮ ತೀಥ ಹಾಗೂ ಕಲ್ಲಿನ ಮಂಟಪವಿದೆ. ಪರಶುರಾಮ ತನ್ನ ತಾಯಿಯನ್ನು ಪರಶುವಿನಿಂದ ಕಡಿದ ನಂತರ ಪಾಪ ಪರಿಹಾರಾರ್ಥವಾಗಿ ತೀರ್ಥಕ್ಷೇತ್ರ ಪರ್ಯಟನೆ ಮಾಡುತ್ತಾನೆ. ಆ ಸಂದರ್ಭದಲ್ಲಿ ಈ ತುಂಗಾನದಿಗೆ ಬಂದಾಗ ತಾಯಿಯನ್ನು ಕಡಿದ ಕೊಡಲಿಯನ್ನು ಇಲ್ಲೂ ತೊಳೆಯುತ್ತಾನಂತೆ. ಸ್ವಲ್ಪವೇ ರಕ್ತ ಸಿಕ್ತವಾದ ಕೊಡಲಿಯು ಸ್ವಚ್ಛವಾಗುತ್ತದಂತೆ. ಈ ಕಥೆಯ ಹಿನ್ನಲೆಯಲ್ಲಿ ಪುಣ್ಯ ತೀರ್ಥವೆಂದಾಗಿದೆ. ಪುರಾಣ, ಐತಿಹ್ಯವು ಜನಮನದಲ್ಲಿ ಹಾಸುಹೊಕ್ಕಾಗಿದೆ. ಈ ಹಿನ್ನಲೆಯಲ್ಲಿ ಪ್ರತಿವರ್ಷವೂ ಡಿಸೆಂಬರ್‌ನಲ್ಲಿ ಜಾತ್ರೆ, ತೀರ್ಥಸ್ನಾನ ಇಲ್ಲಿ ನಡೆಯುತ್ತಾ ಬಂದಿದೆ. ಇದರಿಂದ ಎಲ್ಲಾ ಪಾಪವೂ ಪರಿಹಾರ ವಾಗುತ್ತದೆಂಬ ನಂಬಿಕೆ ಜನರಲ್ಲಿದೆ.
ತುಂಗಾನದಿಯಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಕುಳಿಯಲ್ಲಿ ನೀರುಹರಿಯುತ್ತಿದ್ದು ತೀರ್ಥವೆನಿಸಿಕೊಂಡಿದೆ. ಇದರ ಮೇಲ್ಭಾಗದ ಬಂಡೆಯ ಮೇಲೆ ಕಲ್ಲಿನ ಮಂಟಪವಿದೆ. ಪರಶುರಾಮ ತೀರ್ಥದಬಂಡೆಯಲ್ಲಿ ಆಂಜನೇಯನ ಉಬ್ಬು ಶಿಲ್ಪ, ಭಕ್ತರ ರೇಖಾಚಿತ್ರಗಳೂ ಸೇರಿದಂತೆ ನೂರಾರು ಶಾಸನಗಳಿವೆ. ಈ ಶಾಸನಗಳಲ್ಲಿ ಭಕ್ತಾದಿಗಳು, ರಾಜರು ಮುಖ್ಯರಾದವರು ತೀರ್ಥದಲ್ಲಿ ಸ್ನಾಮಾಡಿ ತಮ್ಮಹೆಸರುಗಳನ್ನು ದಾಖಲಿಸಿದ್ದಾರೆ. ಮೇಲಿನ ಮಂಟಪದ ಸುತ್ತ ಮುತ್ತಲೂ ಕಿರುಶಾಸನಗಳನ್ನು (ಐಚಿbe Iಟಿsಛಿಡಿiಠಿಣioಟಿs) ಕೆತ್ತಲಾಗಿದೆ. ಹಾಗೆಯೇ ನದಿಯಲ್ಲಿನ ಹತ್ತಾರು ಬಂಡೆಗಳಲ್ಲಿಯೂ ಶಾಸನಗಳು ಕಂಡು ಬರುತ್ತವೆ. ಈ ತೀರ್ಥಕ್ಷೇತ್ರದಲ್ಲಿ ಸ್ನಾನದೊಂದಿಗೆ ದಾನ ಧರ್ಮಾದಿಗಳನ್ನು ಮಾಡುವುದು ಪುಣ್ಯವೆಂದು ಪ್ರತೀತಿ. ಕೆಳದಿಶಿವಪ್ಪನಾಯಕ ಮತ್ತು ಚೆನ್ನಮ್ಮಾಜಿಯವರೂ ಈ ಸ್ಥಳದಲ್ಲಿ ಗೋದಾನ ಇತ್ಯಾದಿ ಗಳನ್ನು ಮಾಡಿದ ಬಗ್ಗೆ ತಾಲ್ಲೂಕಿನ ಇತರೆ ಶಾಸನವು ದಾಖಲಿಸಿದೆ.
ಈ ಎಲ್ಲಾ ಶಾಸನಗಳೂ ವಿಜಯನಗರೋತ್ತರ ಕಾಲದ್ದಾಗಿರುತ್ತವೆ. ಬಹುತೇಕ ಶಾಸನಗಳು ಕೆಳದಿ ಅರಸರ ಕಾಲದ್ದಾಗಿವೆ. ಬಹಳ ಹಿಂದಿನಿಂದಲೂ ತೀರ್ಥಕ್ಷೇತ್ರ ವಾಗಿದ್ದರೂ ಕೂಡ ಕೆಳದಿ ಅರಸರ ಹಾಗೂ ನಂತರ ಕಾಲದಲ್ಲಿ ತೀರ್ಥವು ವಿಶೇಷ ಮಹತ್ವ ಪಡೆದಿದೆ ಎನ್ನಬಹುದು.
ಶಾಸನಗಳಲ್ಲಿ ರಾಜವಂಶಸ್ಥರು, ಅಧಿಕಾರಿಗಳು. ಶ್ರೀಸಾಮಾನ್ಯರುಗಳ ಹೆಸರು ಕೆತ್ತಲ್ಪಟ್ಟಿದೆ. ಈ ಮೂಲಕ ಊರುಗಳ ಹೆಸರು, ಉದ್ಯೋಗ ಇತ್ಯಾದಿಗಳನ್ನು ಇವುಗಳಿಂದ ತಿಳಿಯಬಹುದಾಗಿದೆ. ಇವುಗಳ ಅಧ್ಯಯನದ ಮೂಲಕ ಇತಿಹಾಸಕ್ಕೆ ಹೊಸ ವಿಷಯಗಳು ಸೇರ್ಪಡೆಯಾಗಬೇಕಿದೆ.
ಈ ಶಾಸನಗಳ ಭಾಷೆ ಸ್ಖಾಲಿತ್ಯಗಳಿಂದ ಕೂಡಿದ್ದು, ಕೆಲವೆಡೆ ಅಕ್ಷರಗಳನ್ನು ಖಚಿತವಾಗಿ ಓದಲು ಸಾಧ್ಯವಾಗುತ್ತಿಲ್ಲ. ಸಾಲುಗಳ ಸಂಖ್ಯೆಯೂ ಕೆತ್ತಿರುವ ರೀತಿಯಿಂದ ಹಿಡಿತಕ್ಕೆ ಸಿಕ್ಕುವುದಿಲ್ಲ. ಭಾಷೆ, ಬಂಧ ಅರ್ಥದ ದೃಷ್ಟಿಯಿಂದ ಸ್ಥೂಲ ವಾಗಿ ವಿಂಗಡಿಸಲಾಗಿದೆ.
ಶಾಸನ ಪಾಠ
೧        ಜಾನಿಕಂಮನ ಬಿಂನಹಾ
೨        ಲಕ್ಷ್ಮೀಪತಿ ಅಯನ ಮಕ್ಕಳು ನರಸಯನ ಬಿಂನಹಾ|| ವಾಬರಸಯನ ಬಿಂನಹ ಮಹಾಲಕ್ಷ್ಮೀ ಲಕ್ಷ್ಮಿಅಕಂಮ | ಪುಟಮ ಸೂ (ಶ್ರೀ) ಲಕ್ಷ್ಮಿಯಾ ಬಿಂನಹ
೩        ವೊಂ ನಮೋನಾರಾಯಣಾಯ
          ವೊಂ ನಮೋವೆಂಕಟೇಶಾಯ
          ದಾನಿಯನ ಮಗ....
೪        ಶ್ರೀರಾಮ ಕೃಷ್ಣಾಯ
೫        ನಮಃ ಘರುವೇನಮಃ
          ಚಿಕ್ಕತಿಂಮೈಯಣ್ಣ ಸ್ತ್ರಮ
          ಭ್ರಂಹಾ ಪುಟ್ಟಂಣ
          ನಮಗ ನಾರಸಿಂಹ
೬        ಬಿಳಿಗಿ ಸುಬಯನ ಬಿಂನಹ | ಬಿಳಿಗಿ ಲಿಂಗಣನ
          ಬಿಂನಹಾ | ಬಿಳಿಗಿ ದೇಮೌವಾ ಮಗ
          ಗುತ್ತಿ ಲಕ್ಷಮ್ನ ಪ್ನಮಗ ಅಚುತನಯ
          ದುಡ್ಯಿ ಕೃಷ್ಣದೇವನ ಬಿಂನಹಾ
೭        ಪುರಂದರ ವಿಠಲ (ನಾಗರೀಲಿಪಿ) ಂ ಸಿದಾರ್ತಿ ಸಂ| ಚೈತ್ರ.ಬ.೫
೮        ನಂಜುಂಡಯನಾ ಇಮಪುಲ
          ಕಾಮಪ್ಪಯ್ಯನವರ ಪತ್ನಿ ತಿಂಮಮನವರ ಮಂದಾನ
          ಬಿಂನಹಾ ನಂಮಃ|
೯        ಬಯಲೂರ ಕೂಸಂಣನ ಬಿಂನಹ
೧೦     ಶ್ರೀ ಕೆಳದಿ ಚಂನಂಯಾಜಿಯವರ ಮಗ ನೆಗತ್ತಿ
          ಎಡ್ಡಿ ವೆಂಕಂಣನ ಬಿಂನಹಾ
೧೧     ಕೂಳಾಲದ ವೆಂಕಟಯನ
          ಕಂದಾಚಾರ | ಸಎಟ್ಟಿ ಫಣಿಯಪ್ಪನ
          ದನಿಲಕೈನ ಮಗನ ನಮಸ್ಕಾರ
೧೨     ವಾದಿರಾಜೈನ ಬಿಂನಹಾ
೧೩     ಶ್ರೀಮುಖ ಸಂ|
          ಮಾರ್ಗಶಿರ
          ಬಹುಳ ಚೌತಿಗೆ
          ಕಳನೈಮಕ್ಕಳು
೧೪     ಶಾಮಸಂಯಾನ ಸಂಕರನ ಮಾಮಗ
೧೫     ಕಾಯಿಶಾ ಸಬುನಿಸ ಕೋಳಿವಾಡದ ಬೊಮರಸ
          ಮಯ್ಯನ ಬಿಂನಹಾ ಶ್ರೀ ಭವಾನಿ ಅಂಮನ ಬಿಂನಹ ಲಕ್ಷ್ಮಿ
೧೬     ಬಸರೂರ ನೊಳಪ್ಪನ ವಿರಂಮನ ನಮಸ್ಕಾರ
೧೭     ಸೂರಯುನ ಮಗ
          ಸೂದುಗೆಪನ ಬಿಂನಹ
೧೮     ಸೂಳೂರ ಶ್ರಿಂ ಪನಾಮಗ
          ಅಕರಯ
          ನಿಖಯನ
          ನ ಬಿಂನಹ
೧೯     ಅಭಿವಾಶಾನರತಿಗತ (ನಾಗರಿಲಿಪಿ)
          ಯಿದ ಬರೆಸಿದಾತ ನಾಗಾಭಟರ ಮಗ
          ಗಣಪಂಣ
೨೦     ಪ್ರಪ್ಪದೇವಹ
          ಯನ ಮಗ ಶಂಕರನಾರಾಯಣ ತುಂಗಭದ್ರೆಗೆ
          ಮಾಡುವ ನಮಸ್ಕಾರ
೨೧     ಪುಟ್ಟಿರಸಯ್ಯನ ಮಗ ಯ್ಯೋಗಪ್ಪಯನ ಬಿಂನಹಾ ನಮಸ್ಕಾರ
೨೨ ಶರಯ ಸ್ತ್ರಿಣಲ್ಲಂ ಮಗ ಬಿಂನಹಾ
೨೩     ಕೆಳಸಂಣ ಕೆಂಚಮನವರು ಭದ್ರಪ್ಪ ಸಿರ್ಸಿಣಿಯ
          ರಾಯಸ್ತ ವೆಂಕಯ್ಯನ ಬಿಂನಮ
೨೪     ಲಕ್ಷ್ಮೀಗೋಪಾಲದಾಸೆ (ನಾಗರೀಲಿಪಿ)
೨೫     ಬಯಲೂರ ಸೀನಪ್ಪನ ಬಿಂನಹಾ
೨೬     ಗೋದಾವರಿ ನಮ(ನಾಗರೀಲಿಪಿ)
          ಯಿದ ಬರೆಸಿದಾತ ಬಕಾಯಂಗೆ ಸೆಗ
          ಟಿ ಸಿಂಗಾಶಯ
೨೭     ಸೂರೈಟಿ ಯಳರಾಯಸ್ತ ಶಂಕರನಾರಾಯಣೈನ
          ಮಗ ಚೆಂನನ ಬಿಂನ
೨೮     ಸದಾಧ್ಯಾನಂ (ನಾಗರೀಲಿಪಿ)
          ಬೊನಗಿರಿಯ ಸನರುಮಲ್ಲನ ಮಗ ನಾಗಪ್ಪನ ಬಿಂನಹ
೨೯     ನರಸಪ್ಪಯ್ಯನ
          ಬೆಳರೆ ವೆಂಕರಸೈಯನ ಮಗ
          ಬಿಯದರಟದ ಸೂರಪ್ಪೈಚೆನಾ ಗುಣಿ
          ಶುಭನಾಮ ಯೋಡಣ ತನಯ (ನಾಗರೀಲಿಪಿ)
          ಶಾಯಣದ ಮ
          ದಗದ ದೋಮು
          ವೆಂಕಮನ ನಮಸ್ಕಾರ
೩೦     ಪೊಲಿಟ್ಟ ರಾಮಯ್ಯನ
          ವೊಂದು ಶಂಕರ ನಾವಯದಳ
          ನಮಸ್ಕಾರ.
೩೧     ಶ್ರೀ ಚಉಠರ
          ಸೀಮೇ ಪುತ್ತಿಗೆ ಹೊಳೆನೀ
          ಗಲುರಿ ಮಾದವ ಬಂಟನ
          ಮಗ ವೆಂಕಂಣ
          ನಮಗ ಮಾನಪ...
          ಸಬಾನ ಮಾಯೋಗಣನ ನಮಸ್ತೇ ||
೩೨     ಶಿವಪ್ಪ, ರಾಚಯ್ಯ,
೩೩     ನಾಲ್ವಪ್ಪ ನಾಗಪ್ಪ
೩೪     ಪಟಿ ತಿಮ್ಮಪನ ಮಗ ಶ್ರೀನಿವಾಸ
೩೫     ಲಕ್ಷ್ಮಿಪತಿ ಮಂಗರಸನ ಬಿಂನಹ
೩೬     ಕವುರಿ ಕಲ್ಲಿರಾಮಪ್ಪ
೩೭     ಬೊಕ್ಕಸದ ಸಿದ್ದಪ್ಪ
೩೮     ಗೆರೆಸ ತಿಂಯ್ಯ
೩೯     ರಾಮಪ್ಪಯ್ಯ ನಂಜುಂಡಯ್ಯ
೪೦     ಕಳಸಪ್ಪ, ದಿವಾಕರ.
ಪರಶುರಾಮ ಮಂಟಪಕ್ಕೆ ಹೊಂದಿಕೊಂಡಂತೆ ನದಿ ಪಾತ್ರವಿದೆ. ನದಿಯ ಮತ್ತೊಂದು ದಡದಲ್ಲಿ ಜೋಗಿಗುಡ್ಡವಿದೆ. ಇಲ್ಲಿಯ ಬಂಡೆಗಳಲ್ಲಿ ಜೈನ ತೀರ್ಥಂಕರರ ರೇಖಾ ಚಿತ್ರಗಳು ಹಾಗೂ ಶಾಸನಗಳಿವೆ. ಅಲ್ಲದೆ ಪ್ರಕೃತಿಯ ನೈಸರ್ಗಿಕವಾದ ಬಂಡೆಯ ದೊಡ್ಡಕುಳಿ(ಬಾವಿ)ಗಳಲ್ಲಿಯೂ ತೀರ್ಥಂಕರರ ಚಿತ್ರ ಹಾಗೂ ಶಾಸನಗಳಿವೆ. ಈ ರೀತಿಯ ಚಿತ್ರ ಹಾಗೂ ಶಾಸನಗಳು ನೈಸರ್ಗಿಕ ಕುಳಿಗಳಲ್ಲಿ ಮತ್ತೆಲ್ಲಿಯೂ ಕಂಡು ಬರುತ್ತಿಲ್ಲವೆನ್ನಬಹುದು.
ಶಾಸನ ಪಾಠ
೧        ನಿಕರಸನ ಧರ್ಮ (ಪಕ್ಕದಲ್ಲಿ ಪಾರ್ಶ್ವನಾಥ ತೀರ್ಥಕರನ ರೇಖಾ ಚಿತ್ರವಿದೆ)
ಬಂಡೆಯ ಮೇಲೆರುವ ಶಾಸನ
೧        ಪಟ್ಟಸಹಣಿ ಕಲೆಯನ
೨        ಮಡದಿ ಧಾಗಿ[ಪಾರ್ಶ್ವನಾಥ]ಮಾಡಿಸಿದಳು
ಲಿಪಿ ದೃಷ್ಟಿಯಿಂದ ಈ ಶಾಸನವು ಕ್ರಿ.ಶ.ಸು. ಹನ್ನೊಂದ ನೆಯ ಶತಮಾನದ್ದೆನ್ನಬಹುದು ಕಲ್ಲಿನ ಕುಳಿ/ಪೊಟರೆಗಳಲ್ಲಿ ಪಾರ್ಶ್ವನಾಥ ತೀರ್ಥಂಕರನ ರೇಖಾ ಚಿತ್ರ ಹಾಗೂ ಶಾಸನಗಳನ್ನು ಕೆತ್ತಲಾಗಿದ್ದು ಇದು ಸಾಂತರಸರ ಕಾಲದ್ದಾಗಿದೆ.
ಶಾಸನ ಪಾಠ
೧        ಶ್ರೀಮತು ಚಲ್ಲದೇವಿ ಮಾಡಿಸಿದ ದೇವರು
೨        ಮಗಳು ಲಕುಮ್ಮಾದೇವಿ ಮಾಡಿಸಿದ ದೇವರು
೩        ವಿಜೆಪಟ್ಟಾಚಾರಿ ಮಡಿದ ದೇವರು
ಮೂರು ಸಾಲುಗಳುಳ್ಳ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿದೃಷ್ಟಿಯಿಂದ ಕ್ರಿ.ಶ.ಸು.೧೦-೧೧ನೇ ಶತಮಾನದ್ದೆನ್ನ ಬಹುದು. ಚಲ್ಲದೇವಿ (ಚಟ್ಟಲದೇವಿ) ಸಾಂತರರ ರಾಣಿಯಾಗಿದ್ದಳು ಹಾಗೂ ಅವಳ ಮಗಳನ್ನೂ ಉಲ್ಲೇಖಿಸಿದೆ. ದೇವರನ್ನು ಕಂಡರಿಸಿದವನು ವಿಜೆಪಟ್ಟಾಚಾರಿ ಎಂಬುದು ತಿಳಿಯುತ್ತದೆ. ಜೋಗಿ ಗುಡ್ಡವು ಒಂದು ಜೈನ ತೀರ್ಥಕ್ಷೇತ್ರ ವಾಗಿತ್ತು ಎಂಬುದನ್ನು ನನ್ನ ಹಿಂದಿನ ಲೇಖನದಲ್ಲಿ ವಿಸ್ತಾರ ವಾಗಿ ಚಚಿಸಿದ್ದೇನೆ. ಬರಹಬಾಗಿನ ಹಂಪನಾ ಷಷ್ಟ್ಯಬ್ದ ಗೌರವಗ್ರಂಥ ಸಂ. ಎಚ್.ವಿ. ನಾಗೇಶ್, ಪ್ರ. ಹಂಪನಾ ಅಭಿನಂದನ ಸಮಿತಿ, ೧೯೯೬, ಪು೧ ೩೯೩-೩೬.
ತೀರ್ಥಹಳ್ಳಿ ಪರಶುರಾಮ ತೀರ್ಥ, ಕಲ್ಲುಸಾರದ ಸುತ್ತ ಮುತ್ತ ಇನ್ನೂ ನೂರಾರು ಕಿರುಶಾಸನಗಳು ಕಂಡುಬರುತ್ತವೆ. ಇವುಗಳ ಪೂರ್ಣ ದಾಖಲಾತಿಯು ಆಗಬೇಕಿದೆ. ಇದರಿಂದ ಇತಿಹಾಸಕ್ಕೆ ಹೊಸ ಆಯಾಮವು ದೊರೆಯುತ್ತದೆ.
[ಕ್ಷೇತ್ರ ಕಾರ್ಯದಲ್ಲಿ ನನ್ನೊಂದಿಗೆ ಸಹಕರಿಸಿದ ಸ್ನೇಹಿತ ಉಪಾಧ್ಯಾಯರಾದ ಎಲ್.ಎಸ್. ರಾಘವೇಂದ್ರ ಹಾಗೂ ಜಿ.ಎನ್. ಸಾತ್ವಿಕ್ ಮತ್ತು ಸ್ಕಂದ ಅವರಿಗೆ ನನ್ನ ಕೃತಜ್ಞತೆಗಳು.]



No comments:

Post a Comment