Wednesday, November 28, 2012

ಚಂದಾಲಿಂಗ ಕ್ಷೇತ್ರದಲ್ಲಿ ಜೈನರ ಕುರುಹು



ಡಾ.ಮಲ್ಲಿಕಾರ್ಜುನ ಕುಂಬಾರ.(ಎಂ.ಎ, ಪಿಎಚ್.ಡಿ)
          ‘’ವಚನ’’
      ರಾಜೂರ-೫೮೨೨೩೦
      ತಾ;ರೋಣಜಿ;ಗದಗ
ದೂರವಾಣಿ; [೦೮೩೮೧] ೨೬೨೯೨೫


                        ಚಂದಾಲಿಂಗ ಕ್ಷೇತ್ರದಲ್ಲಿ ಜೈನರ ಕುರುಹು
     ಇತಿಹಾಸ ಮೌನವಹಿಸಿದಾಗ ಆಂತರ‍್ಯದಲ್ಲಿನ ಹಲವು ವಿಷಯಗಳು ಮಾತನಾಡುತ್ತವೆ. ಎನ್ನುವ ಮಾತೊಂದಿದೆ.ಈ ಮಾತು ಇಲ್ಲಿನ ಚಂದಾಲಿಂಗದೇವಸ್ಥಾನಕ್ಕೆ ಬಹಳಷ್ಠು ಅನ್ವಯಿಸುತ್ತದೆ. ”ಹೆಸರಿಲ್ಲದ ಮರ, ನೆರಳಿಲ್ಲದ ಭಾವಿ” ಖ್ಯಾತಿಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಚಂದಾಲಿಂಗೇಂಶ್ವರಎಂಬ ಕ್ಷೇತ್ರವು ಅತೀ ಪುರಾತನವಾದದ್ದು
ಚಂದಾಲಿಂಗ ಕ್ಷೇತ್ರದ ಮಹಾದ್ವಾರ
.ಹನಮಸಾಗರದಿಂದ ೮ -೧೦ ಕಿ ಮೀ ದೂರದಲ್ಲಿರುವ ಕುರುಚಲು ಕಾಡುಗಳ ಮದ್ಯೆ ಸಣ್ಣದಾದ ಗುಡ್ಡದಲ್ಲಿರುವ ಪ್ರಶಾಂತ ಸ್ಥಳವಿದಾಗಿದೆ.ಈ ಕ್ಷೇತ್ರದಲ್ಲಿನ ಆರಾಧ್ಯ ದೇವತೆ ಚಂದಾಲಿಂಗೇಶ್ವರ. ಈ ಮಂದಿರವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆ. ಈ ಗುಡಿಯಸುತ್ತಲೂ ಎತ್ತರವಾದ ಕೋಟೆಯಂತಹ ಭದ್ರವಾದ ಗೋಡೆಯಿದೆ.ಅದರಮೇಲೆ ತೆನೆಗಳಿವೆ. ಈ ಕೋಟೆಯಂತಹಗೋಡೆಯುಮೂರು ಸುತ್ತಿನದಾಗಿದೆ. ಒಳ ಸುತ್ತಿನಲ್ಲಿ ದೇವಾಲಯದ ಸಮುಚ್ಚಯವಿದೆ. ಎರಡನೆಯದ್ದು ಗುಡಿಯ ಮಹಾದ್ವಾರವನ್ನೊಳಗೊಂಡಿದೆ. 
ಮೂರನೆಯದ್ದುಅನತಿ ದೂರದಲ್ಲಿ ಗುಡ್ಡದಲ್ಲಿ ವ್ಯಾಪಿಸಿಕೊಂಡು ಸಾಕಷ್ಥು ಹಾಳಾಗಿ ಅಳಿದುಳಿದಿದೆ.ಅದರ ಒಳಗಡೆ ಅನೇಕ ಅಳಿದುಳಿದ ಶಿಥಿಲವಾದ ಗುಡಿಗಳು, ಪಾಳು ಬಿದ್ದ ಮೂರ್ತಿಗಳು ಅಲ್ಲಲ್ಲಿ ಬಿದ್ದಿವೆ. ನಿಧಿಗಳ್ಳರು ಅಲ್ಲಲ್ಲಿನೆಲವನ್ನು ಅಗಿದಿದ್ದಾರೆ.ನಿಸರ್ಗ ರಮಣೀಯವಾದ ಚಂದಾಲಿಂಗನ ಗರ್ಭಗೃಹವು ದಕ್ಷಿಣಾಭಿಮುಖವಾಗಿದೆ. ಅದರ ಎದುರುಗಡೆ ಒಂದೇಸಾಲಿನಲ್ಲಿ ಸಣ್ಣ ಸಣ್ಣ ಗುಡಿಗಳಿವೆ.ಅದರಲ್ಲಿರುವ ಮೂರ್ತಿಗಳು ಮೂಲದಲ್ಲಿನವುಗಳಲ್ಲ. ಅವುಗಳನ್ನು ಬೇರೆಕಡೆಗಳಿಂದ ತಂದು  ಇಡಲಾಗಿದೆ. ಪೌಳಿಗೆ ಹೊಂದಿಕೊಂಡ ಇವುಗಳು ಉತ್ತರಾಭಿಮುಖವಾಗಿವೆ..ಅವು ಸರಿಯಾಗಿ೨೪ ಇವೆ.ಇದು ೨೪ತೀರ್ಥಂಕರರನ್ನು ಹೊಂದಿರಬಹುದೆ? ಈ ಸಣ್ಣದಾದ ಗುಡಿಗಳಬಾಗಿಲು ಪಟ್ಟಿಕೆಗಳುಬಹಳಷ್ಥು ಸುಣ್ಣ ಬಳಿದ ಕಾರಣದಿಂದ ಸರಿಯಾಗಿ ಕಾಣದೇ ಹೂವಿನಾಕಾರದ ಚಿತ್ರಗಳು ಅಸ್ಪಷ್ಥವಾಗಿ ಕಾಣುತ್ತವೆ.ಒಳಗಡೆ ಎಲ್ಲೂತೀರ್ಥಂಕರರ ಮೂರ್ತಿಗಳಿಲ್ಲ. 
೨೪ ಸಣ್ಣ ಸಣ್ಣ ಗುಡಿಗಳ ಸಾಲುಗಳು  

ದೇವಾಲಯದ ಮಹಾದ್ವಾರವು ಬಸದಿಯ ಶೈಲಿಯಲ್ಲಿ ಇಳಿಜಾರಾದ ಕರಿಕಲ್ಲುಗಳಿಂದ     ನಿರ್ಮಿತವಾಗಿದೆ. ಇದನ್ನು ಸ್ಥಳಿಕರು ಅರಿವಿನ ಮಂಟಪವೆಂದು ಕರೆಯುತ್ತಾರೆ.ಇದು ೫೨ ಕಂಬಗಳಿಂದಕೂಡಿದ ಕಲಾತ್ಮಕ ಶೈಲಿಯಲ್ಲಿದೆ.ಇದು ಪೂರ್ವದಲ್ಲಿ ಜೈನರ ಕ್ಷೇತ್ರವಾಗಿರಬಹುದೆ? ಏಕೆಂದರೆ ಕೊಪ್ಪಳ ಜಿಲ್ಲೆಯು ೧೨ನೇಯ ಶತಮಾನದ ಪೂರ್ವದಲ್ಲಿ ಜೈನರ ಆಡಂಬೋಲಾದದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಅಂದು ಕೊಪ್ಪಳ ಬೆಟ್ಟವು”ಕೊಪಣಾಚಲ”ಎಂದು ಪ್ರಖ್ಯಾತಿಯನ್ನುಪಡೆದಿತ್ತು.ತಿರುಳ್ಗನ್ನಡದ ನಾಡೆಂದು ಕವಿರಾಜ ಮಾರ್ಗಕಾರನಿಂದ ಹೊಗಳಿಸಿಕೊಂಡ ಈ ನಾಡು ತಿರುಳ್ಗನ್ನಡದ ನಾಡಿನ ಗಡಿಭಾಗವಾಗಿತ್ತು.ಅಂದು ಈ ಜಿಲ್ಲೆಯ ಯಲಬುರ್ಗಿ, ಕುಷ್ಟಗಿ, ಗಂಗಾವತಿ ತಾಲೂಕುಗಳು ಜೈನರಿಂದತುಂಬಿ ತುಳುಕುತ್ತಿದ್ದವು.ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವು ೧೨ನೇಯ ಶತಮಾನದ ನಂತರಜೈನರಿಂದ ಇಳಿಮುಖವಾಗಿ ಶೈವರಪ್ರಭಾವದಿಂದ ಚಂದಾಲಿಂಗೇಶ್ವರನಾಗಿ ಪರಿವರ್ತನ ಗೊಂಡಿರಬಹುದು.ಇಲ್ಲಿನ ೨೪ ಗುಡಿಗಳಲ್ಲಿನ ಜೈನ ಬಿಂಬಗಳು ನಾಶವಾಗಿರಬಹುದು ಅವುಗಳ ಕುರುಹಾಗಿ ಯಕ್ಷ-ಯಕ್ಷಿಯರ ಹಾಳಾದಒಂದುಮೂರ್ತಿವೊಂದು ಒಂದೆಡೆ ಬಿದ್ದಿದೆ ಹೊರತು ಉಳಿದಕುರುಹುಗಳೇನೂ ಉಳಿದಿಲ್ಲ.ಗುಡಿಯ ಪ್ರಾಂಗಣದಲ್ಲಿಕಾಳಾಮುಖ ಯತಿಯ ಶಿಲ್ಪ,ವೀರಗಲ್ಲುಗಳು ಅಲ್ಲಲ್ಲಿಬಿದ್ದಿವೆ.ಈ ದೇವಾಲಯದಲ್ಲಿ ಶಾಸನವೊಂದು ಸಣ್ಣ ಶಿಲಾಫಲಕವೊಂದರಲ್ಲಿದ್ದು ಅದು ಕ್ರಿ.ಶ ೧೩೪೫ ಕ್ಕೆ ಸೇರಿದೆ.ಈ ಶಾಸನವು ಬಹಳಷ್ಥು ತೃಟಿತವಾಗಿದೆ.ಈ ೭ಸಾಲಿನ ಶಾಸನದಲ್ಲಿ ಭಂಡಾರಿ,ಹೆಗ್ಗೆಡೆ ಮಾರಮಯ್ಯ ಎಂಬವರು ಭೂದಾನವನ್ನು ನೀಡಿದ ಉಲ್ಲೇಖವಿದೆ. ಅಲ್ಲದೇ ಇದರಲ್ಲಿ ನಂದಿ....ಭಂಢಾರಿ.ಎಂಬ ಹೆಸರುಗಳಿವೆ.ಈ ಹೆಸರಿನ ಮುಂದಿನ ಭಾಗ ನಾಶವಾಗಿದೆ. ಈನಂದಿ, ಭಂಢಾರಿಗಳು ಯಾರು? ಇವರು ಜೈನ ಮುನಿಗಣದವರೆ?ಈ ಶಾಸನವುಳ್ಳ ಶಿಲಾಫಲಕವು ಮೂಲದಲ್ಲಿ ಎಲ್ಲಿತ್ತು?
ಭಗ್ನ ಮೂರ್ತಿ

ಈಬಗ್ಗೆ ಸಂಶೋಧನೆ ನಡೆಯಬೇಕಾಗಿದೆ.ಗಟ್ಟಿಯಾದ ಆಧಾರಗಳು ದೊರೆಯುವತನಕ ಬರೀ ಊಹೆಯನ್ನೆಅವಲಂಬಿಸಬೇಕಾಗುತ್ತದೆ
ಜೈನರು  ಸಾಮಾನ್ಯವಾಗಿ ಜಪ,ತಪ,ಧ್ಯಾನಗಳಿಗಾಗಿ ಜನವಸತಿ ಇರದ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು.ಈ ಹಿನ್ನೆಲೆಯಲ್ಲಿ   ಜನವಸತಿ ಇರದ ಈ ಸ್ಥಳವನ್ನು ಏಕೆ ಆಯ್ಕೆಮಾಡಿಕೊಂಡಿರಬಾರದು? ಆದರೆ ಇಂದು ಅದರ ಸುಳಿವೂ ಕೂಡಾಸಿಗದಂತೆ ಈ ಕ್ಷೇತ್ರ ಪರಿವರ್ತನೆಗೊಂಡಿದೆ.ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿನ ಸಣ್ಣಗುಡಿಗಳು೨೪ ಏಕಿವೆ?ಈ ವಿಷಯವು ಸಂಶೊಧನೆಗೆ ಸಣ್ಣಬೆಳಕಿನ ಕಿಂಡಿಯಾದೀತು.                                                                                                                 
                                       -



1 comment:

  1. ಸೊಗಸಾದ ಲೇಖನ. ಸಂಶೋಧನೆಗೆ ಅವಕಾಶವಿದೆ- ಗಿರೀಶ್‌

    ReplyDelete