Wednesday, November 14, 2012

ಇತಿಹಾಸಕಾರರ ಸರಣಿ-೧




ಇತಿಹಾಸಕಾರರ -ಸರಣಿ

 ಎಲ್ಲರಿಗೂ ದೀಪಾವಳಿಯ ಶುಭಾಶಯಗಳು .ಕನ್ನಡ  ಇತಿಹಾಸಲೋಕದಲ್ಲಿ  ಹಿರಿಯ ಸಾಧಕರ ಪರಿಚಯ ಮಾಡಿಕೊಡಲು ದೀಪಾವಳಿಯಿಂದ ಒಂದು ಸರಣಿ ಪ್ರಾರಂಭಿಸಿದೆ. ಇತಿಹಾಸಪ್ರಿಯರಿಗೆ  ಆಸಕ್ತಿ ಮೂಡಿಸುವ ಪ್ರಯತ್ನದಲ್ಲಿ ತಮ್ಮೆಲ್ಲರ ಸಹಕಾರ ಕೋರಿದೆ  ಸರಣಿಯ ಬರಹಕ್ಕೆ ಅನೇಕ  ಅಭಿನಂದನ ಗ್ರಂಥಗಳು, ಎಪಿಗ್ರಾಫಿಯಾಕರ್ನಾಟಕ, ವಿಶ್ವಕೋಶ ಮತ್ತು ಅನೇಕ ಅಂತರ್‌ಜಾಲ ತಾಣಗಳನೆರವಿನಿಂದ   ಮಾಹಿತಿ  ಮತ್ತು ಚಿತ್ರಗಳನ್ನು ಪಡೆಯಲಾಗಿದೆ.ಡಾ. ಪಿ.ವಿ.ಕೆ ಸಲಹೆ, ಸಹಕಾರ ನೀಡಿದ್ದಾರೆ ಅವರಿಗೆಲ್ಲರಿಗೂ ಋಣಿಯಾಗಿರುವೆ.
.- ಎಚ್‌. ಶೇಷಗಿರಿರಾವ್





                               ಕನ್ನಡ ಖಜಾನೆ ಕೀಲಿ ಕೈ ಬೆಂಜಮಿನ್‌  ಲೂಯಿ ರೈಸ್‌
 ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು.ಅವರು ನಮ್ಮ ನಾಡಿನ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ರೈಸ್‌  ಕುಟುಂಬವು ಕನ್ನಡನಾಡಿನೊಡನೆ  ಒಂದು ಶತಮಾಕ್ಕೂ ಹೆಚ್ಚು ಒಡನಾಟ ಹೊಂದಿದೆ.  ಬಿ ಎಲ್‌ರೈಸ್‌  ಬೆಂಗಳೂರಿಗರು ಎನ್ನಬಹುದು. ಅವರ  ತಂದೆ ಬೆಂಜಮಿನ್ ಹೋಲ್ಟ್ಚ್‌.ರೈಸರು ಇಂಗ್ಲೆಂಡಿನಿಂದ ಭಾರತಕ್ಕೆ  ಬಂದಿದ್ದು  ಧರ್ಮೋಪದೇಶಕರಾಗಿ.ಅವರ ಕಾರ್ಯಕ್ಷೇತ್ರ ಹಳೇ ಮೈಸೂರು ಪ್ರಾಂತ್ಯ. ಮನೆ ಮಾಡಿ ನೆಲಸಿದ್ದು ಬೆಂಗಳೂರಿನಲ್ಲಿ. ಧರ್ಮಬೋಧೆಗೆ ಅನುವಾಗಲಿ ಎಂದು ಕನ್ನಡ ಕಲಿತರು. ಅವರ ಮಡದಿಯೂ ಪತಿಗೆ ನೆರವಾಗಲು ಕನ್ನಡ ಕಲಿತರು.  ಅವರ ಮಗ  ಬೆಂಜಮಿನ್‌ ೧೮೩೭ರಲ್ಲಿ ಬೆಂಗಳೂರಿನಲ್ಲೇ ಜನಿಸಿದ. ಕನ್ನಡ ಪರಿಸರದಲ್ಲಿ  ಮಗು ಬೆಳೆಯಿತು. ಬಿ.ಎಲ್‌. ರೈಸ್‌. ಬಾಲ್ಯವೆಲ್ಲಾ ಬೆಂಗಳೂರಿನಲ್ಲಿಯೇ ಹಾಗಾಗಿಕನ್ನಡವನ್ನು ಅವರು ಇಂಗ್ಲಿಷ್‌ಗಿಂತ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು.         


 ಅವರು ಶಿಕ್ಷಣ ಪಡೆದಿದ್ದು ಇಂಗ್ಲಂಡಿನ ಹ್ಯಾರೋ ನಗರದಲ್ಲಿ. ಪದವಿಧರರಾದಮೇಲೆ. ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್‌ ಪರೀಕ್ಷೆಗೆ ತಯಾರಿ ನಡೆಸಿರುವಾಗಲೇ ೧೮೬೦ ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಮೈಸೂರುರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ಉದ್ಯೋಗದ ಕರೆ ಬಂದಿತು.ಬೆಂಗಳೂರಿನ ಸೆಂಟ್ರಲ್‌ಹೈಸ್ಕೂಲಿನ ೨೩ ನೇ    ವಯಸ್ಸಿನಲ್ಲೇ ಮುಖ್ಯೋಪಧ್ಯಾಯ ಹುದ್ದೆ ಅವರದಾಯಿತು.ಸೇವೆಯ ಕುರಿತು ಅವರ ಬದ್ದತೆ ಅಪಾರ. ಜನಸಂಪರ್ಕದ ಮಹತ್ವ ಅರಿತ ಅವರು ತಮ್ಮ ಕಾರ್ಯ ಕ್ಷೇತ್ರದ ಜನರ ಭಾಷೆಯಮೇಲಿನ ಪ್ರಭುತ್ವದ   ಅಗತ್ಯವನ್ನು ಮನಗಂಡರು. ಬಂದ ಒಂದೇ ವರ್ಷದಲ್ಲಿ ಹೈಯರ್‌ ಸೆಕೆಂಡರಿ ಕನ್ನಡ ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು.
 ಅವರು ೧೯೬೫ ರಿಂದ ಮೂರುವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್‌ಆಗಿ ಕೆಲಸ ಮಾಡಿದರು. ನಂತರ ಇಂಗ್ಲೇಂಡಿಗೆ ಹೋಗಿ ಮದುವೆಯಾಗಿ ವಾಪಸ್ಸು ಬೆಂಗಳೂರಿಗೆ ಬಂದರು. ಆಸಮಯದಲ್ಲಿ ಮೇಜರ್‌ ಡಿಕ್ಸನ್‌  ಹಲವು ಶಾಸನಗಳ ಭಾವಚಿತ್ರ ನೀಡಿ ಅದರ ಭಾಷಾಂತರ ಮಾಡುವಂತೆ ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರಂಡನನಿವೇಶನದಲ್ಲಿ  ತಮ್ಮವಾಸಕ್ಕಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಂಡರು.ಅವರ ಮೊದಲ ಮಗು ಅಲ್ಲಿಯೇ ಜನಿಸಿತು.ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮೊದಲುಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್‌ಕೊಡುಗೆಗೆ  ಈ ಕೆಲಸವೇ ಮುನ್ನುಡಿ ಬರೆಯಿತು. ನಂತರ ೧೫ ವರ್ಷಗಳ ಕಾಲ ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಆಗಂತೂ ತಮ್ಮವ್ಯಾಪ್ತಿಯಲ್ಲಿ ಬರುವ ಎಲ್ಲ  ಪ್ರದೇಶಗಳಲ್ಲಿ ಶಾಸನ ಮತ್ತು  ಹಸ್ತಪ್ರತಿಗಳನ್ನು ಹುಡುಕುವುದೇ ಆದ್ಯ ಕೆಲಸವಾಯಿತು. ಅವುಗಳನ್ನು  ಸಂಗ್ರಹಿಸಿ  ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಗಮನಿಸಿ  ಹಂಟರ್‌  ಶಿಕ್ಷಣ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರಿದಿ ಸಿದ್ಧ ವಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯನಿರ್ದೇಶಕರಾಗಿ ವಿದ್ಯಾಇಲಾಖೆಯ ಹೊಣೆಯ ಜೊತೆಯಲ್ಲಿಯೇ ನೋಡಿಕೊಳ್ಳಲು ನೇಮಿಸಿದರು.ಹೊಸ ಹುದ್ದೆಯ ಕಾರ್ಯವನ್ನು ಅವರು ಯಶಸ್ವಿಯಾಗಿನಿರ್ವಹಿಸಿದರು.. ಈ ಇಲಾಖೆಯ ಮಹತ್ವವನ್ನು ಮನಗಂಡ ಸರ್ಕಾರವು ಅವರನ್ನು ಪುರಾತತ್ವ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರಾಗಿ ೧೮೯೦ರಲ್ಲಿ ನೇಮಿಸಿತು. ಅಲ್ಲಿಂದ ೧೬ ವರ್ಷಗಳ ಕಾಲ ಅವರು ನಿವೃತ್ತಿಯಾಗುವವರೆಗೂ ಅವಿರತವಾಗಿ ದುಡಿದು ಅಮೂಲ್ಯ ಕೊಡುಗೆ ನೀಡಿದರು. ಅವರು ಒಟ್ಟು ೮೮೬೯ ಶಾಸನಗಳನ್ನು ಸಂಗ್ರಹಿಸಿ, ಅಧ್ಯಯನಮಾಡಿ, “ ಎಪಿಗ್ರಾಫಿಯಾ ಕರ್ಣಾಟಕ”  ಎಂಬ ಹೆಸರಿನ ೧೨ ಸಂಪುಟಗಳನ್ನು ಪ್ರಕಟಿಸಿದರು. ಅದರಲ್ಲಿನ ಮೊದಲ ಸಂಪುಟ ಕೊಡಿಗಿನದಾದರೆ,೨ನೇ ಸಂಪುಟವು ಶಾಸನಗಳ ಆಗರವಾದ  ಶ್ರವಣಬೆಳಗೊಳಕ್ಕೆ ಮೀಸಲಾಯಿತು. ಅದರಲ್ಲಿ ೧೪೪ ಶಾಸನಗಳು ಪ್ರಕಟಗೊಂಡಿದ್ದವು.  ಅದು ಶ್ರವಣಬೆಳಗೊಳದಲ್ಲಿ ದೊರೆತ ೬೦೦ ಶಾಸನಗಳ  ಸಂಪಾದನಾ ಮತ್ತು ಅಧ್ಯಯನ ಕಾರ್ಯಕ್ಕೆ ಅಡಿಪಾಯವಾಯಿತು..


ಇವರು ಈಗಾಲೆ ಮೈಸೂರು ಇನಸ್ಕ್ರಿಪ್ಷನ್‌” ಎಂಬ ಶಾಸನ ಕುರಿತಾದ ಕೃತಿಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಪ್ರಥಮ ಜನಗಣತಿ ವರದಿಯೂ ಇವರದೇ. ಇವರ ಗೆಜೆಟಿಯರ್‌ಗಳು ಬರಿ ಅಂಕೆಸಂಖ್ಯೆಗಳ ದಾಖಲೆಗಳಾಗಿರದೆ  ಐತಿಹಾಸಿಕ ಮತ್ತು ಸಾಂಸ್ಕೃತಿಕ  ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತೆ ಇವೆ. ಆದ್ದರಿಂದ ಅವು  ಇಂದಿಗೂ ಆಡಳಿತ ಸಂಶೋಧನೆಯ  ಉತ್ತಮ ಮಾದರಿಗಳಾಗಿವೆ ಎನ್ನಬಹುದು.

ಇವರು ಬರಿ ಗೆಜೆಟಿಯರ್‌ ಮತ್ತು ಶಾಸನ ಸಂಪುಟಗಳ ರಚನೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ ಕನ್ನಡ ಹಸ್ತಪ್ರತಿಗಳ ಸಂಗ್ರಹಣ ,ಸೂಚೀಕರಣ, ಹಾಗೂ ಸಂಪಾದನೆಯ ಕಡೆಗೂ ಗಮನ ಹರಿಸಿದ್ದರು. ಸಾಹಿತ್ಯೋಪಸನೆಗೆ ಉಪಯುಕ್ತವಾದ “ ಬಿಬ್ಲಿಯೋಥಿಕಾ ಕರ್ಣಾಟಿಕಾ” ಎಂಬ ಗ್ರಂಥ ಮಾಲೆಪ್ರಾರಂಭಿಸಿ, ಅದರಲ್ಲಿ  ’ಪಂಪ ರಾಮಾಯಣ, ಕರ್ನಾಟಕ ಭಾಷಾಭೂಷಣ , ಪಂಪ ಭಾರತ, ಶಬ್ದಾನುಶಾಸನ, ಅಮರಕೋಶ, ಕವಿರಾಜಮಾರ್ಗ ಮೊದಲಾದ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಇತಿಹಾಸ ಅಧ್ಯಯನಕ್ಕೆ ಈಕೃತಿಗಳು ಅಡಿಪಾಯ ಹಾಕಿದವು.ಅವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿಗೆ ಹೋಗಿ ಹ್ಯಾರೋದಲ್ಲಿ ನೆಲಸಿದರು.ಅಲ್ಲಿಯೂ ಕನ್ನಡ ಸೇವೆ ಮುಂದುವರಿಸಿದರು. ನಿವೃತ್ತರಾದ ಮೂರುವರ್ಷದ ನಂತರ ತಮ್ಮ ಅಧ್ಯಯನದ ಫಲವಾದ “ ಮೈಸೂರು ಅಂಡ್‌ ಕೂರ್ಗ ಇನ್‌ಸ್ಲ್ರಿಪ್ಷನ್ಸ” ಕೃತಿ ಪ್ರಕಟಿಸಿದರು.  ಅದನ್ನು ದಕ್ಷಿಣ ಕರ್ನಾಟಕದ ಅಧಿಕೃತ ಚಾರಿತ್ರಿಕ ಕೃತಿ ಎನ್ನಬಹುದು. ತಮ್ಮ ೭೮ನೇ ವಯಸ್ಸಿನಲ್ಲೂ “ ಎಪಿಗ್ರಾಫಿಯಾ ಕರ್ನಾಟಕ” ದ ಮೊದಲನೆ ಸಂಪುಟವನ್ನು ಭಾರತ ಸಕಾರದ ಮನವಿಯ ಮೇರೆಗೆ ಪರಿಷ್ಕರಿಸಿ ಕೊಟ್ಟರು. ತೊಂಬತ್ತು ವರ್ಷದ ತುಂಬು ಜೀವನ ನಡೆಸಿ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ.

 ಕಾಲವಾಗುವ ಕೆಲವೇ ಸಮಯದ ಮುಂಚೆ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕನ್ನಡ ಮಳಿಗೆಗೆ ತಮ್ಮ ಮಕ್ಕಳ ಸಹಾಯದಿಂದ  ಭೇಟಿನೀಡಿದ್ದರು. ಅಲ್ಲಿರುವ ಗರಳೆಪುರಿ ಶಾಸ್ತ್ರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದಾಗ, ಕನ್ನಡದ ಸವಿಯನ್ನು ಕೇಳಲೆಂದೆ ಬಂದಿರುವೆ ಕನ್ನಡದಲ್ಲೇ ಮಾತನಾಡಿ ಎಂದು ಅಲ್ಲಿನವರಿಗೆ ವಿನಂತಿಸಿದರು. ಅವರ ಜತೆ ಕನ್ನೆಡದಲ್ಲೆ ಗಂಟೆಗಟ್ಟಲೇ ಬಾಯ್ತುಂಬ ಮಾತನಾಡಿದರು ’ ಕುವೆಂಪು ಅವರು ಬರೆದ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ  ಅದರಂತೆ ಬಾಳಿ ಬದುಕಿದ ಹಿರಿಯಜೀವ ಅವರು.ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ  ಅವರೂ ಒಬ್ಬರಾಗಿರುವುರು.

1 comment: