Friday, December 5, 2014

ಶಾಸನ ಸಾಹಿತ್ಯ ಪ್ರಶಸ್ತಿ


                    ಶಾಸನ ಸಾಹಿತ್ಯ ಪ್ರಶಸ್ತಿಗಳ ಸುರಿ ಮಳೆ-ಇತಿಹಾಸ ಅಕಾದಮಿಗೆ
 ಶಾನಗಳು ಇತಿಹಾಸದ ಅಡಿಗಲ್ಲುಗಳು. ಕರ್ನಾಟಕದಲ್ಲಿ  ಏಕೆ ? ಭಾರತದಲ್ಲಿಯೇ ಒಂದೇ ಕಡೆ ಶಾಸನಗಳು ಇಷ್ಟು ಅಧಿಕ ಸಂಖ್ಯೆಯಲ್ಲಿರುವುದು. ಶ್ರವಣ ಬೆಳಗೊಳದಲ್ಲಿ ಮಾತ್ರ. . ಅಲ್ಲಿನ ಚಂದ್ರಗಿರಿ ಅಥವ ಚಿಕ್ಕಬೆಟ್ಟದಲ್ಲಿ ಐದುನೂರಕ್ಕೂ ಮಿಕ್ಕಿ ಶಿಲಾಶಾಸನಗಳಿವೆ. ಶಾಸನ ಅಭ್ಯಾಸಿಗಳಿಗೆ ಚಂದ್ರಗಿರಿ ಜ್ಞಾನದ ಆಗರ . ಶ್ರವಣ ಬೆಳಗೊಳ  ಜೈನಕಾಶಿ ಎಂದು ಪ್ರಖ್ಯಾತ. ಜೊತೆಗ ಶಾಸನ ಕಾಶಿ ಎನ್ನಬಹುದು.  ಎರಡು ಸಹಸ್ರಮಾನಕ್ಕೂ ಪುರಾತನವಾದ ಈ ಕ್ಷೇತ್ರದಲ್ಲಿನ  ಬಾಹುಬಲಿಯ ಮಹಾಮಸ್ತಕಾಭಿಷೇಕ ದಂತೆಹನ್ನೆರಡುವರ್ಷಕೊಮ್ಮೆ  ಚಂದ್ರಗಿರಿ ಉತ್ಸವವನ್ನೂ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಶಾಸನ ಕ್ಷೇತ್ರದಲ್ಲಿ ಗಣನೀಯ ಸಾಧಕರಿಗೆ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ನೀಡಲು ಪೂಜ್ಯ ಚಾರು ಕೀರ್ತಿ ಭಟ್ಟಾರಕಸ್ವಾಮೀಜಿಯವರು  ನಿರ್ಧರಿಸಿರುವುರು . ಈ ಬಾರಿಯ  ಶಾಸನ ಕ್ಷೇತ್ರದಲ್ಲಿನ  ಹನ್ನೊಂದು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ . ಕರ್ನಾಟಕ ಸಾಹಿತ್ಯ ಪರಿಷತ್ತಿನ ಅದ್ಯಕ್ಷರೂ ಸೇರಿದಂತೆ ೯ ಸದಸಸ್ಯರಿಗೆ  ಪ್ರಶಸ್ತಿಗಳ ಸುರಿಮಳೆಯಾಗಿದೆ. ಹನ್ನೊಂದರಲ್ಲಿ ಹತ್ತು ಪ್ರಶಸ್ತಿಗಳು ಅವರಿಗೇ ಸಂದಿವೆ.ಅವರು ಇತಿಹಾಸ ಅಕದಮಿಯ ಗೌರವ ಪತಾಕೆ ಎತ್ತಿ ಹಿಡಿದಿರುವರು. 


                                           


                     ಹಾರ್ಧಿಕ ಅಭಿನಂದನೆಗಳು
                                      
ಎಚ್‌.ಶೇಷಗಿರಿರಾವ್
 ನಿರ್ದೇಶಕರು ಹಸ್ತಪ್ರತಿ ಅಭಿಯಾನ
                                    
  





ಕಾರ್ಯಕ್ರಮದ ವಿವರ ಹೀಗಿದೆ






                      





No comments:

Post a Comment