Friday, May 30, 2014

ವಿಷ್ಣುವರ್ಧನನ ಕಾಲದ ಶಾಸನೋಕ್ತ ಮಂಡ್ಯ ಪ್ರದೇಶ

ಹೊಯ್ಸಳ ವಿಷ್ಣುವರ್ಧನನ ಕಾಲದ   ಶಾಸನೋಕ್ತ ಮಂಡ್ಯ ಪ್ರದೇಶ

ಡಾ. ಎಸ್. ಶಿವರಾಮು

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಸುಮಾರು 246 ಶಾಸನಗಳು ವರದಿಯಾಗಿವೆ. ಈ ಶಾಸನಗಳ ಪೈಕಿ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕೆ ಸಂಬಂಧಿಸಿದಂತೆ ಸುಮಾರು 32ಕ್ಕೂ ಹೆಚ್ಚು ಶಾಸನಗಳು ಲಭ್ಯವಿದ್ದು, ರಾಜಕೀಯ ಮಹತ್ವದ ದೃಷ್ಟಿಯಿಂದ ಈತನ ಕಾಲದ ಶಾಸನಗಳು ಗಮನಾರ್ಹವಾಗಿವೆ.
ಒಂದನೆಯ ಬಲ್ಲಾಳನ ನಂತರ ಕ್ರಿ.ಶ.1108ರಲ್ಲಿ ವಿಷ್ಣುವರ್ಧನನು ಸಿಂಹಾಸನವನ್ನೇರಿ 1152ರವರೆಗೂ ಪ್ರಬಲನಾಗಿ ಆಳ್ವಿಕೆ ಮಾಡಿದನು. ಹೊಯ್ಸಳ ಚಕ್ರವರ್ತಿಗಳ ಪೈಕಿ ಈತನನ್ನು ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಅತ್ಯಂತ ಜನಪ್ರಿಯ ರಾಜನೆಂದು ಪರಿಗಣಿಸಲಾಗಿದೆ. ವಿಷ್ಣುವರ್ಧನನು ಗಂಗವಾಡಿ ಪ್ರಾಂತದ ಮೇಲೆ ಪ್ರಭುತ್ವ ಸಾಧಿಸುವ ಯತ್ನದಲ್ಲಿ ಚೋಳರನ್ನು ಮೂಲೋತ್ಪಾಟನೆ ಮಾಡಿ, ಆ ಪ್ರಾಂತವನ್ನು ವಶಪಡಿಸಿಕೊಂಡು ಜೋಳ ಸಾಮಂತ ಆದಿಯಮ ಹಾಗೂ ದಂಡನಾಯಕ ನರಸಿಂಹವರ್ಮರನ್ನು ಕಂಚಿಯವರೆವಿಗೂ ಬೆನ್ನಟ್ಟಿ ಹೋಗಿ ಚೋಳರ ಸೊಕ್ಕನ್ನು ಮುರಿಯುವಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜನ ಪಾತ್ರ ಮಹತ್ತರವಾದದು. ಈ ಮಹತ್ತರವಾದ ಸಾಧನೆಯನ್ನು ಮದ್ದೂರು ತಾಲ್ಲೂಕಿನ ಕ್ರಿ.ಶ.1117ಕ್ಕೆ ಸೇರಿದ ತಿಪ್ಪೂರಿನ ಶಾಸನವು ತಿಳಿಸುತ್ತದೆ. ಈ ಗ್ರಾಮವನ್ನು ಅರಸನಿಂದ ಕೊಡುಗೆಯಾಗಿ ಪಡೆದ ಗಂಗರಾಜನು ಅದನ್ನೇ ತನ್ನ ಗುರು ಮೂಲಸಂಘ ಕಾಣೂರ್ಗಣ ಮತ್ತು ತಿಂತ್ರಿಣಿಗಚ್ಚದ ಮೇಘಚಂದ್ರ ಸಿದ್ಧಾಂತದೇವರಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ.1 ವಿಷ್ಣುವರ್ಧನನು ತಲಕಾಡನ್ನು ಗೆಲ್ಲಲು ಹಲವು ಸಾಮಂತರ ಸಹಾಯವನ್ನು ಪಡೆದುಕೊಂಡನು. ಆನಂತರ ಈ ಕಾರ್ಯವನ್ನು ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದ್ದ ಮತ್ತು ಅಪಾರ ವಿಶ್ವಾಸವನ್ನಿಟ್ಟಿದ್ದ ದಂಡನಾಯಕ ಗಂಗರಾಜನಿಗೆ ವಹಿಸಿದ್ದನು. ಅವನಿಗೆ ತಿಪ್ಪೂರು ಗ್ರಾಮವಲ್ಲದೇ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮವನ್ನೂ ದತ್ತಿಯನ್ನಾಗಿ ನೀಡಿ ಪೆÇ್ರೀತ್ಸಾಹಿಸಿದನು.2 ಕ್ರಿ.ಶ.1114ರ ಶಾಸನಗಳು ಕೂಡ ವಿಷ್ಣುವರ್ಧನನು ‘ತಲಕಾಡುಗೊಂಡ’ ಎಂಬ ಬಿರುದನ್ನು ಧರಿಸಿದನೆಂದು ತಿಳಿಸುತ್ತವೆ.3 ಕ್ರಿ.ಶ.1114ರಿಂದ ಚೋಳರ ಶಾಸನಗಳು ತಲಕಾಡಿನಲ್ಲಿ ದೊರಕದೆ ಇರುವುದರಿಂದ ಕ್ರಿ.ಶ.1114ರ ವೇಳೆಗೆ ಅವರ ಆಳ್ವಿಕೆ ಅಂತ್ಯಗೊಂಡು ಹೊಯ್ಸಳರು ತಮ್ಮ ಅಧಿಕಾರವನ್ನು ಸ್ಥಾಪಿಸಿದುದು ಮನದಟ್ಟಾಗುತ್ತದೆ.4 ಇದರ ಜೊತೆಗೆ ಅವನು ‘ವೀರಗಂಗ’ ಎಂಬ ಬಿರುದನ್ನು ಧರಿಸಿದನೆಂದು ವಿಷ್ಣುವರ್ಧನನು ಹೊರಡಿಸಿದ ಶಾಸನಗಳಿಂದ ಮೊಟ್ಟ ಮೊದಲನೆಯದಾಗಿ ತಿಳಿದುಬರುತ್ತದೆ.5 ವಿಷ್ಣುವರ್ಧನನ ಸೋದರ ವಿನಯಾದಿತ್ಯನು ಕ್ರಿ.ಶ.1120ರ ಸುಮಾರಿಗೆ ಶ್ರೀರಂಗಪಟ್ಟಣದಲ್ಲಿ ಅಧಿಕಾರಿಯಾಗಿದ್ದು, ನಂತರ ಬಹುಶಃ ಅವನು ಚೋಳರ ವಿರುದ್ಧ ಯುದ್ಧದಲ್ಲಿ ಹತನಾದನೆಂದು ತಿಳಿದುಬರುತ್ತದೆ. ಇದಲ್ಲದೇ ಮಂಡ್ಯ ಜಿಲ್ಲೆಯ ತೊಣ್ಣೂರು ಹೊಯ್ಸಳರ ಕಾಲದಲ್ಲಿ ಒಂದು ಪ್ರಮುಖ ಆಡಳಿತ ಕೇಂದ್ರವಾಗಿತ್ತು. ತೊಣ್ಣೂರು ವಿಷ್ಣುವರ್ಧನನ ದ್ವಿತೀಯ ರಾಜಧಾನಿಯಾಗಿತ್ತೆಂಬ ಅಭಿಪ್ರಾಯವೂ ಇದೆ. ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯ ಶಾಸನವು ಹೊಯ್ಸಳ ವಿಷ್ಣುವರ್ಧನನ ಪರವಾಗಿ ಪಿರಿಯ ದಂಡನಾಯಕ ಗಂಗರಾಜನು ಚೋಳರ ವಶದಲ್ಲಿದ್ದ ತಲಕಾಡನ್ನು ದಾಳಿ ಮಾಡಿ ವಶಪಡಿಸಿಕೊಂಡ ವಿಷಯವನ್ನು ಪ್ರಸ್ತಾಪಿಸುತ್ತದೆ. ಇದೇ ಶಾಸನವು ಬಿಂಡಿಗನವಿಲೆಯ ತೀರ್ಥಕ್ಕಾಗಿ ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ.6
ಕನ್ನಂಬಾಡಿಯ ಕ್ರಿ.ಶ.1118ರ ಶಾಸನವು ವಿಷ್ಣುವರ್ಧನನು ತಲಕಾಡಿನಿಂದ ಆಳುತ್ತಿದ್ದ ಎಂದು ದಾಖಲಿಸಿದೆ.7 ವಿಷ್ಣುವರ್ಧನನು ಕ್ರಿ.ಶ.1116ರಲ್ಲಿ ಚೋಳರಿಂದ ತಲಕಾಡನ್ನು ಗೆದ್ದ ನಂತರ ಅಲ್ಲಿನ ಆಡಳಿತವನ್ನು ಸರಿಪಡಿಸಲು ಸ್ವಲ್ಪ ಕಾಲ ಅಲ್ಲಿಯೇ ನೆಲೆಸಿ, ಆಡಳಿತ ನಡೆಸಿರುವ ಸಾಧ್ಯತೆಗಳಿವೆ. ಈ ಶಾಸನದ ಪ್ರಕಾರವೇ ಕನ್ನಂಬಾಡಿಯಲ್ಲಿದ್ದುದು ಕನ್ನಗೊಂಡೇಶ್ವರ ದೇವಾಲಯ, ಅಂದರೆ ಕಣ್ಣನ್ನು ಕೊಂಡವರ ದೇವಾಲಯ ಕನ್ನಂಗೊಂಡೇಶ್ವರ ದೇವರಿಗೆ ವಿಷ್ಣುವರ್ಧನನ ಮಹಾಪ್ರಧಾನ ದಂಡನಾಯಕ ಲಿಂಗಪಯ್ಯ ನೀಡಿದ ದಾನವನ್ನು ದಾಖಲಿಸುವುದು ಶಾಸನದ ಮುಖ್ಯ ಉದ್ದೇಶವಾದರೂ, ಬೇಡರ ಕಣ್ಣಪ್ಪನ ಕಾರಣದಿಂದಾಗಿ ಕನ್ನಂಬಾಡಿ ಎಂದು ಹೆಸರು ಬಂದಿದೆ ಎಂದು ಮೊದಲ ಬಾರಿಗೆ ಅನಿಸಿದರೂ, ಕನ್ನಂಬಾಡಿಗೂ ಕನ್ನರದೇವ ಎಂಬ ವ್ಯಕ್ತಿಗೂ ಸಂಬಂಧ ಇರುವ ಸುಳಿಯನ್ನು ಶಾಸನ ನೀಡುತ್ತದೆ.
ವಿಷ್ಣುವರ್ಧನನ ಆಳ್ವಿಕೆಯ ಕಾಲದ, ಆದರೆ ಖಚಿತ ಕಾಲ ನಮೂದಾಗಿಲ್ಲದ ಶಂಭುನಹಳ್ಳಿಯ ಶಾಸನವು ವಿಷ್ಣುವರ್ಧನನು ತನ್ನ ತಾಯಿ ಮಾದಲಮಹಾದೇವಿ ಕಟ್ಟಿಸಿದ್ದ ತುವ್ವಲೇಶ್ವರ ದೇವರಿಗೆ ಗ್ರಾಮ ದಾನವನ್ನು ನೀಡಿದಾಗ, ಗ್ರಾಮಕ್ಕೆ ಮೊದಲಿದ್ದ ಯಾದವಪುರ ಎಂಬ ಹೆಸರನ್ನು ಶಂಕರನಹಳ್ಳಿ ಎಂದು ಮರುನಾಮಕರಣ ಮಾಡಿದ ಸೂಚನೆಯನ್ನು ಶಾಸನ ನೀಡುತ್ತದೆ. ಅಂದಿನ ಶಂಕರನಹಳ್ಳಿಯು ಈಗ ಶಂಭುವನಹಳ್ಳಿಯಾಗಿ ಪುನರ್ನಾಮಕರಣಗೊಂಡಿದೆ.8
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದ ಶಾಸನದಲ್ಲಿ ಕ್ರಿ.ಶ.1132ರಲ್ಲಿ ಹೊಯ್ಸಳ ವಿಷ್ಣುವರ್ಧನನು ಗಂಗವಾಡಿ-96000, ನೊಳಂಬವಾಡಿ-32000, ಬನವಾಸಿ-12000 ಮತ್ತು ಹಾನುಂಗಲ್ 500 ಮೊದಲಾದ ಆಡಳಿತ ವಿಭಾಗಗಳನ್ನು ತನ್ನ ರಾಜಧಾನಿಯಾದ ದೋರಸಮುದ್ರದಿಂದ ಆಳ್ವಿಕೆ ನಡೆಸುತ್ತಿದ್ದನೆಂದು ದಾಖಲಿಸಿದೆ.9 ಅಲ್ಲದೆ ಈ ಶಾಸನವು ಹೊಯ್ಸಳ ವಿಷ್ಣುವರ್ಧನನ ಬಹುಮುಖ್ಯವಾದ ಬಿರುದು ಗಳಾದ ‘ತಲಗಾಡುಗೊಂಡ, ಕೊಂಗು ನಂಗಲಿ ಬನವಾಸಿ, ಹಾನಗಲ್, ಉಚ್ಛಂಗಿಕೊಂಡ ಮುಂತಾದವುಗಳ ಬಗ್ಗೆಯೂ ತಿಳಿಸುತ್ತದೆ.10 ಕೃಷ್ಣರಾಜಪೇಟೆ ತಾಲ್ಲೂಕಿನ ಮಾಳಗೂರು ಕೆರೆಯ ಹಿಂದಿರುವ ಈಶ್ವರ ದೇವಾಲಯದಲ್ಲಿರುವ ಶಾಸನದಲ್ಲಿ ಕ್ರಿ.ಶ.1117ರಲ್ಲಿ ತನ್ನ ವ್ಯಾಪ್ತಿಯಲ್ಲಿದ್ದ ಮಾಳಿಗೆಯೂರು ಎಂಬ ಆಡಳಿತ ವಿಭಾಗವನ್ನು ಪಟ್ಟಮಹಾದೇವಿ ಶಾಂತಲೆಯು ತನ್ನ ಮೈದುನ ಬಲ್ಲೆಯನಾಯಕನ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದುದನ್ನು ಉಲ್ಲೇಖಿಸಿದೆ. ಮಾಳಿಗೆಯೂರು ಹೊಯ್ಸಳರ ಕಾಲದಲ್ಲಿ ತರುನಾಡಿನ ಭಾಗಕ್ಕೆ ಒಳಪಟ್ಟಿತ್ತು ಹಾಗೂ ಬಲ್ಲೆಯನಾಯಕ ಮತ್ತು ಈ ಸ್ಥಳದ ಗಾವುಂಡುಗಳು ಊರಿನ ಐವತ್ತು ಒಕ್ಕಲುಗಳ ಸಮ್ಮುಖದಲ್ಲಿ ಮಾಳಿಗೆಯ ಕರ್ಮಟೇಶ್ವರ ದೇವರಿಗೆ ನೀಡಿದ ಭೂದಾನದ ಬಗ್ಗೆ ದಾಖಲಿಸಿದೆ.11 ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಪಾಶ್ರ್ವನಾಥ ಬಸದಿಯ ದಕ್ಷಿಣಕ್ಕಿರುವ ಶಾಸನವು ಕ್ರಿ.ಶ.1118ರಲ್ಲಿ ಗಂಗವಾಡಿ-96000 ಆಡಳಿತ ವಿಭಾಗದ ಮೇಲೆ ಹೊಯ್ಸಳರ ಆಳ್ವಿಕೆಯನ್ನು ದಾಖಲಿಸಿದೆ. ಅಲ್ಲದೆ ಕತ್ತರಿಘಟ್ಟ ಎಂಬ ಸ್ಥಳದಲ್ಲಿ ನೊಳಂಬಿಸೆಟ್ಟಿ ಅಥವಾ ದೋರಸಮುದ್ರದ ಪಟ್ಟಣಸ್ವಾಮಿ ನೊಳಂಬಸೆಟ್ಟಿಯ ಪತ್ನಿ ದೇಮಿಕಬ್ಬೆಯು ತ್ರಿಕೂಟಜಿನಾಲಯವನ್ನು ನಿರ್ಮಿಸಿದ ಬಗ್ಗೆ ತಿಳಿಸುತ್ತದೆ.12 ವಿಷ್ಣುವರ್ಧನನು ಬೆಳಗೊಳ ವಿಭಾಗದ ಆಡಳಿತವನ್ನು ಮಾಡುತ್ತಿದ್ದಾಗ ಬೆಳಗೊಳಕ್ಕೆ ವಿಷ್ಣುವರ್ಧನ ಚತುರ್ವೇದಿ ಮಂಗಳಮ್ ಎಂದು ಕರೆದಿರುವುದು ಉಲ್ಲೇಖಾರ್ಹ.
ಹಿಂದಿನ ಅರಸರು ಕೊಟ್ಟಿದ ದಾನವನ್ನು ಊರ್ಜಿತಗೊಳಿಸಿ ಪುನರ್ದತ್ತಿ ನೀಡಿದ ಘಟನೆ ಆ ಕಾಲದ ಅರಸರ ಮನೋವೈಶಾಲ್ಯ ಹಾಗೂ ಜೀವನ ಮೌಲ್ಯಗಳನ್ನು ಬಿಂಬಿಸುತ್ತದೆ. ಪೂರ್ವದಲ್ಲಿ ಶಿವಮಾರಸಿಂಹನೆಂಬ ಗಂಗ ಅರಸ ನೀಡಿದ್ದ ದಾನಕ್ಕೆ ಸಂಬಂಧಿಸಿದ ತಾಮ್ರಶಾಸನವನ್ನು ನೋಡಿ, ಓದಿಸಿ ಕೇಳಿ ತಿಳಿಸಿದ ಅರಸ ವಿಷ್ಣುವರ್ಧನ ಶಿವಪುರದ ಸ್ವಯಂಭು ವೈಜನಾಥದೇವರಿಗೆ ಹಲಗೂರು ಗ್ರಾಮವನ್ನು ಒಪ್ಪಿಸಿದ ಇದು ದೇವಾಲಯದ ಪ್ರಾಚೀನತೆಯ ಬಗೆಗೂ ಬೆಳಕು ಬೀರುತ್ತದೆ.13
ಪಾಂಡವಪುರ ತಾಲ್ಲೂಕಿನ 12ನೆಯ ಶತಮಾನದ ಸುಂಕಾತೊಣ್ಣೂರು ಶಾಸನವು ಹೊಯ್ಸಳ ವಿಷ್ಣುವರ್ಧನನ ದಿಗ್ವಿಜಯದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಹೊಯ್ಸಳ ರಾಜ್ಯವನ್ನು ವಿಸ್ತರಿಸಿದ ಧೀರ. ನಂಗಲಿ, ಕೊಂಗು, ಸಿಂಗಮಲೆ, ರಾಯಪುರ, ತಲಕಾಡು, ರೊದ್ದ, ಬೆಂಗಿರಿ, ಚಕ್ರಗೊಟ್ಟ, ಉಚ್ಚಂಗಿ, ವಿರಾಟನಪೆÇಳಲು ಅಥವಾ ಹಾನುಗಲ್ಲು, ಬಂಕಾಪುರ, ಬನವಸೆ, ಕೋಯತೂರು, ನೀಳಾದ್ರಿ, ಪಡಿಯಘುಟ್ಟ, ಏಳುಮಲೆ ಅಥವಾ ತಿರುಪತಿ, ಕಂಚಿ, ತುಳುದೇಶ ರಾಜೇಂದ್ರಪುರ, ಕೋಳಾಲ, ಬಯಲ್ನಾಡು, ಹಲಸಿಗೆ, ಬೆಳುವಲ, ಹುಲಿಗೆರೆ, ಲೊಕ್ಕಿಗುಂಡಿ ಮತ್ತು ಕೃಷ್ಣಾನದಿಯವರೆಗಿನ ಪ್ರದೇಶಗಳನ್ನು ವಿಷ್ಣುವರ್ಧನ ಜಯಿಸಿದನೆಂದು ತಿಳಿಸುತ್ತದೆ.14 ಹಾಗೆಯೇ ಬಳ್ಳಾರಿ, ವಿರಾಟನಗರ, ವಲ್ಲೂರು, ಇರುಂಗೋಳನಕೊಟೆ, ಕಾರುಕನಕೊಳ್ಳ, ಕುಮ್ಮಟ, ಚಿಂಚಿಲೂರು, ರಾಚವೂರು ಮತ್ತು ಮುದಗನೂರು ಮೊದಲಾದ ದುರ್ಗಗಳು ಕೂಡ ವಿಷ್ಣುವರ್ಧನನ ವಶವಾಗಿದ್ದವೆಂದು ನಾಗಮಂಗಲ ತಾಲ್ಲೂಕಿನ ಹಟ್ಟಣದಲ್ಲಿ ದೊರೆತಿರುವ ಶಾಸನದಿಂದ ತಿಳಿದುಬರುತ್ತದೆ.15
ಕೃಷ್ಣರಾಜಪೇಟೆ ತಾಲ್ಲೂಕು, ನಾಗರಘಟ್ಟ ಕೆರೆಯ ಬಳಿಯಿರುವ ಮಲ್ಲೇಶ್ವರ ದೇವಾಲಯದ ಶಾಸನವು ಭಗ್ನಗೊಂಡಿದ್ದು, ಹೊಯ್ಸಳ ವಿಷ್ಣುವರ್ಧನನು ಯಶಸ್ವಿಯಾಗಿ ಕೈಗೊಂಡ ತಲಕಾಡು, ವಿರಾಟಪುರ ಅಥವಾ ಹಾನಗಲ್ ಮೊದಲಾದ ದಿಗ್ವಿಜಯಗಳ ಬಗ್ಗೆ ದಾಖಲಿಸುತ್ತಾ ರಾಜನ ವಿವರಗಳನ್ನು ನೀಡುತ್ತದೆ. ಈ ಶಾಸನವು ಕೇರಳನಾಯಕ ಹಾಗೂ ಮಲ್ಲಜೀಯನ ಮಗ ಮಹಾದೇವನೆಂಬ ಆಡಳಿತಾಧಿಕಾರಿಯು ನಾಗರಘಟ್ಟ ಗ್ರಾಮದಲ್ಲಿ ಮಹಾದೇವ ದೇವಾಲಯವನ್ನು ನಿರ್ಮಿಸಿ ದತ್ತಿಬಿಟ್ಟ ವಿಚಾರವನ್ನು ದಾಖಲಿಸಿದೆ.16. ನಾಗಮಂಗಲದಲ್ಲಿರುವ ಕ್ರಿ.ಶ.1134ಕ್ಕೆ ಸೇರಿದ ಸವೆದುಹೋದ ಶಾಸನ ಪಲ್ಲವವಂಶದ ಗೋವಿಂದರ ಮತ್ತು ಚಾವುಂಡಬ್ಬರಸಿಯ ಮಗಳಾದ ಹಾಗೂ ವಿಷ್ಣುವರ್ಧನನ ಪಟ್ಟದರಿಸಿಯಾದ ಬಮ್ಮಲದೇವಿಯನ್ನು ಉಲ್ಲೇಖಿಸುತ್ತದೆ. ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯು ಕ್ರಿ.ಶ.1131ರಲ್ಲಿ ಮರಣ ಹೊಂದಿದ್ದು, ಅವಳ ಸ್ಥಾನಮಾನ ಅವಳ ನಂತರ ಬಮ್ಮಲದೇವಿಗೆ ದೊರೆಯಿತು. ಈ ರಾಣಿ ಕಲ್ಕಣಿನಾಡಿಗೆ ಸೇರಿದ ನಾಗಮಂಗಲದ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ದೇವರ ಪೂಜೆ ನೈವೇದ್ಯಾದಿಗಳಿಗೆ ಅಂಕನಕಟ್ಟ ಗ್ರಾಮವನ್ನು ದಾನವಾಗಿತ್ತಳು. ದಾನವನ್ನು ಸ್ವೀಕರಿಸಿದಾತ ಸೂರ್ಯಾಭರಣ ಪಂಡಿತ.17 ಕೃಷ್ಣರಾಜಪೇಟೆ ತಾಲ್ಲೂಕಿನ ಭದ್ರನಕೊಪ್ಪಲು ಶಾಸನದಲ್ಲಿ ವಿಷ್ಣುವರ್ಧನನು ನುಂಗಲಿ ಗ್ರಾಮದ ಮೇಲೆ ದಾಳಿ ಮಾಡುವ ಮುನ್ನ ತೊಳೊಂಚೆಯ ಕರಿದೇವರಿಗೆ ಪೂಜೆ ಸಲ್ಲಿಸಿ ಹಲವು ದಾನಗಳನ್ನು ಉತ್ತರಾಯಣ ಸಂಕ್ರಾಂತಿಯ ದಿನದಂದು ನೀಡಿದ ಬಗ್ಗೆ ದಾಖಲಿಸಿದೆ.18 ಪಾಂಡವಪುರ ತಾಲ್ಲೂಕಿನ ಸುಂಕಾ ತೊಂಡನೂರು ಗ್ರಾಮದಲ್ಲಿ ದೊರೆತ ವೀರಗಲ್ಲು ಪ್ರಮುಖವಾಗಿದ್ದು, ಇದರಲ್ಲಿ ಮಹಾಮಂಡಳೇಶ್ವರ ಹೊಯಿಸಳದೇವನು ದೋರಸಮುದ್ರದಲ್ಲಿ ರಾಜ್ಯವಾಳುತ್ತಿದ್ದನೆಂದಿದೆ. ಈ ವೀರಗಲ್ಲಿನ ಮೇಲಿರುವ ಶಾಸನ ಸವೆದಿದೆ. ಮಾರಗೌಂಡನೆಂಬುವವನು ಕೆಲವರನ್ನು ಕೊಂದು ತಾನು ಹೋರಾಟದಲ್ಲಿ ಮರಣ ಹೊಂದಿದ ವಿಚಾರ ತಿಳಿಸುವುದಲ್ಲದೇ ಆತನ ಮಡದಿ ಸೋಮವ್ವದೇವಿ ದತ್ತಿ ಸ್ವೀಕರಿಸಿದಳೆಂದು ತಿಳಿಸುತ್ತದೆ. ಈ ಶಾಸನ ವಿಷ್ಣುವರ್ಧನ ದೇವನದೆಂದು ನರಸಿಂಹಾಚಾರ್ಯರು ತಿಳಿಸಿದ್ದಾರೆ.19 ಕೃಷ್ಣರಾಜಪೇಟೆ ತಾಲ್ಲೂಕಿನ ಬಸ್ತಿ ಎಂಬ ಸ್ಥಳದಲ್ಲಿಯ ಶಾಸನದಲ್ಲಿ ವಿಷ್ಣುವರ್ಧನನು ಮಂತ್ರಿಯಾಗಿದ್ದ ಪುಣಿಸಮಯ್ಯನು ಬಸದಿಯನ್ನು ನಿರ್ಮಿಸಿದ ಬಗ್ಗೆ ಹಾಗೂ ಮಾಣಿಕ್ಯ ದೊಡಲೂರು ಮತ್ತು ಮಾವಿನಕೆರೆ ಗ್ರಾಮಗಳನ್ನು ಬಸದಿಗಾಗಿ ದತ್ತಿಬಿಟ್ಟ ವಿಚಾರವನ್ನು ತಿಳಿಸುತ್ತದೆ. ಶಾಸನದ ಬಹುಭಾಗ ಭಗ್ನ ಹಾಗೂ ಅಸ್ಪಷ್ಟವಾಗಿದೆ.20 ಇದೇ ತಾಲ್ಲೂಕಿನ ಹುಬ್ಬನಹಳ್ಳಿಯ ಶಾಸನವು ಕ್ರಿ.ಶ.1140ರಲ್ಲಿ ಹೊಯ್ಸಳ ವಿಷ್ಣುವರ್ಧನನು ಹಳ್ಳದಬೀಡು (ಹಳೇಬೀಡು) ಆಳ್ವಿಕೆ ಮಾಡುತ್ತಿದ್ದಾಗ ಮಹಾಸಾಮಂತ ಮಾಚಯ್ಯ ನಾಯಕನು ಮಾರ್ಕೆಶ್ವರ ದೇವಾಲಯವನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಬಗ್ಗೆ ದಾಖಲಿಸುತ್ತದೆ. ಈ ಶಾಸನದಲ್ಲಿ ಮಾಚಯ್ಯನಾಯಕನ ವಂಶವೃಕ್ಷವನ್ನು ನೀಡಲಾಗಿದೆ.21
ಕೃಷ್ಣರಾಜಪೇಟೆ ತಾಲ್ಲೂಕು, ಹಿರೀಕಳಲೆಯ ಬಸವ ದೇವಾಲಯದ ಮುಂದೆ ನಿಂತಿರುವ ಶಾಸನವು ತ್ರಿಭುವನಮಲ್ಲ ಹೊಯ್ಸಳ ವಿಷ್ಣುವರ್ಧನನು ಗಂಗವಾಡಿ 96000ದಲ್ಲಿ ತನ್ನ ಆಡಳಿತ ಹತೋಟಿಯನ್ನು ಪ್ರತಿಷ್ಠಾಪಿಸಿದ ತರುವಾಯ ಪಿರಿಯ ಕಳಿಲೆಯು ಕಿಕ್ಕೇರಿ-12 ಆಡಳಿತ ವಿಭಾಗದ ವ್ಯಾಪ್ತಿಯಲ್ಲಿದ್ದು, ಅಲ್ಲಿನ ಚಿನ್ನಮ್ಮ ಎಂಬ ಅಧಿಕಾರಿಯು ಆಡಳಿತ ನಡೆಸುತ್ತಿದ್ದುದರ ಬಗ್ಗೆ ತಿಳಿಸುತ್ತದೆ.22 ಇದೇ ತಾಲ್ಲೂಕಿನ ಸಾಸಲು ಗ್ರಾಮದ ಶಾಸನ ಹೊಯ್ಸಳ ಬಿಟ್ಟಿದೇವನು ಕ್ರಿ.ಶ.1121ರಲ್ಲಿ ಭೋಗೇಶ್ವರ ದೇವರಿಗೆ ನೀಡಿದ ಭೂದಾನವನ್ನು ದಾಖಲಿಸಿದೆ.23
ಪಾಂಡವಪುರ ತಾಲ್ಲೂಕಿನ ತೊಣ್ಣೂರಿನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಅಮ್ಮನವರ ಗುಡಿಯ ನವರಂಗ ಮಂಟಪದ ಕಂಬದಲ್ಲಿರುವ ಶಾಸನದಲ್ಲಿ ವಿಷ್ಣುವರ್ಧನ ಪ್ರತಾಪ ಹೊಯ್ಸಳ ದೇವರನ್ನು ಪ್ರಸ್ತಾಪಿಸಿ ಮಹಾಪ್ರಧಾನ, ತಂತ್ರಾಧಿಷ್ಟಾಯಕ, ಮಹಾಪಸಾಯಿತ, ಹೆಗ್ಗಡೆ ಸುರಿಗೆಯ ನಾಗಯ್ಯನು ಓಲಗ ಶಾಲೆಯನ್ನು (ನವರಂಗ ಮಂಟಪ) ಮಾಡಿಸಿದನೆಂದು ಹೇಳಿದೆ.24 ಕೃಷ್ಣರಾಜಪೇಟೆ ತಾಲ್ಲೂಕಿನ 21ನೆಯ ಶಾಸನದಲ್ಲಿ ವಿಷ್ಣುವರ್ಧನನ ಹಿರಿಯ ರಾಣಿಯಾದ ಚಂದಲದೇವಿಯು ತನ್ನ ತಮ್ಮನಾದ ದುದ್ದಮಲ್ಲ ದೇವನೊಡಗೂಡಿ ವೀರಕೊಂಗಾಳ್ವ ಜಿನಾಲಯಕ್ಕೆ ಮಾಡಿದ ದಾನದ ಪ್ರಸ್ತಾಪವಿದೆ. ದಾನ ಮಾಡಿದ ಕಾವನಹಳ್ಳಿ ಮಂದಗೆರೆಯ ಸಿಮೆಯೊಳಗಣ ಒಂದು ಗ್ರಾಮ. ಮಂದಗೆರೆಯನ್ನು ಅರಸಿಯು ತನ್ನ ಬಪ್ಪಪ್ರಿಥ್ವಿಯಕೊಂಗಾಳ್ವದೇವರಿಂದ ಬಳುವಳಿಯಾಗಿ ಪಡೆದುದಾಗಿ ಹೇಳಿದೆ. ಶಾಸನವನ್ನು ಪಡೆದ ಪ್ರಭಾಚಂದ್ರಸಿದ್ಧಾಂತದೇವರು ಮೇಘಚಂದ್ರ ತ್ರೈವಿದ್ಯದೇವರ ಶಿಷ್ಯನಾಗಿದ್ದು, ಮೂಲಸಂಘ ದೇಸಿಗಣ, ಪುಸ್ತಕಗಚ್ಛಕ್ಕೆ ಸೇರಿದ್ದರೆಂದು ಶಾಸನದಲ್ಲಿ ಹೇಳಿದೆ.25
ನಾಗಮಂಗಲ ತಾಲ್ಲೂಕಿನ ಲಾಲನಕೆರೆಯ ವಿಷ್ಣುವರ್ಧನನ ಕಾಲದ 61ನೆಯ ಶಾಸನದಲ್ಲಿ ದಂಡನಾಯಕ ಏಚಿರಾಜದಂಡಾಧೀಶ, ಅವನ ಮಡದಿ ಕಾಮಿಯಕ್ಕ ಮತ್ತು ಅವರ ಐವರು ಗಂಡು ಮಕ್ಕಳ ಬಗೆಗೆ ಉಲ್ಲೇಖವಿದೆ. ಈ ದಂಡನಾಯಕರು ನಾಲನಕೆರೆಯನ್ನು ಗೌಡಕೆಯ ಉಂಬಳಿಯಾಗಿ ಪಡೆದುದನ್ನು ಈ ಶಾಸನ ತಿಳಿಸಿರುವುದು ಕುತೂಹಲಕಾರಿಯಾಗಿದೆ. ಆದ್ದರಿಂದ ಇದು ದಂಡನಾಯಕತನಕ್ಕಾಗಿ ಆತನು ಪಡೆದ ಸಂಭಾವನೆಯಾಗಿದ್ದಿರಬಹುದು. ಕೇತಜೀಯನ ಮಗ ಜಕ್ಕಜೀಯನಿಗೆ ಈತನು ಆ ಗ್ರಾಮ ಭೂಮಿಯನ್ನು ದತ್ತಿ ಬಿಟ್ಟಿದ್ದಾನೆ. ಈ ಜಕ್ಕಜೀಯನು ಲಾಲನ ಕೆರೆಯ ಮಲ್ಲಿಕಾರ್ಜುನ ದೇವಾಲಯದ ಪೂಜಾರಿಯಾಗಿದ್ದನೆಂಬುದು ಸ್ಪಷ್ಟ. ಈ ಶಾಸನವನ್ನು ರಚಿಸಿದವನು ಸಾಂತಮಹಂತ.26.
ಇದೇ ತಾಲ್ಲೂಕಿನ ಯಲ್ಲಾದಹಳ್ಳಿಯ ಶಾಸನವು ವಿಷ್ಣುವರ್ಧನನ ಮಹಾಪ್ರಧಾನ, ಕೌಶಿಕಗೋತ್ರದ ದೇವರಾಜನನ್ನು ಉಲ್ಲೇಖಿಸುತ್ತದೆ. ದೊರೆಯು ಆತನಿಗೆ ತಂತ್ರವೆರ್ಗಡೆತನವನ್ನು ಕೊಟ್ಟುದಾಗಿ ಶಾಸನ ತಿಳಿಸುತ್ತದೆ. ಈ ಅಧಿಕಾರಿಯು ಸೂರನಹಳ್ಳಿಯಲ್ಲಿ ತ್ರಿಕೂಟ ಬಸದಿಯನ್ನು ಕಟ್ಟಿಸಿ ದೇವರ ಅಷ್ಟವಿಧಾರ್ಚನೆ ಮತ್ತು ಆಹಾರ ದಾನಕ್ಕಾಗಿ ತಾನು ರಾಜನಿಂದ ಪಡೆದ, ಬಹುಶಃ 40 ಹೊನ್ನಿನ ವಾರ್ಷಿಕ ಉತ್ಪನ್ನವಿದ್ದ ಆ ಹಳ್ಳಿಯ ಮೊದಲ ಹತ್ತು ಹೊನ್ನಿನ ಹುಟ್ಟುವಳಿಯ ಭೂಮಿಯನ್ನು ಮುನಿಚಂದ್ರದೇವನಿಗೆ ಧಾರೆಯೆರೆದಿದ್ದಾನೆ. ದತ್ತಿಬಿಟ್ಟ ಗ್ರಾಮದ ಭಾಗಕ್ಕೆ ಪಾಶ್ರ್ವಪುರವೆಂಬ ಹೆಸರು ಕೊಟ್ಟಂತೆ ತೋರುತ್ತದೆ.27 ಹೊಯ್ಸಳ ಪ್ರಭು ಬಿಟ್ಟಿದೇವ (ವಿಷ್ಣುವರ್ಧನ)ನು ಕಿಕ್ಕೇರಿಯ ಬ್ರಹ್ಮೇಶ್ವರ ದೇವರಿಗೆ 15 ಖಂಡುಗ ಗದ್ದೆ ಹಾಗೂ ಬೂವನಹಳ್ಳಿಯನ್ನು ಬ್ರಹ್ಮರಾಶಿ ಪಂಡಿತರಿಗೆ ದತ್ತಿ ನೀಡಿದನೆಂದು ತಿಳಿದುಬರುತ್ತದೆ.28 ಮದ್ದೂರಿನ ಕೊಪ್ಪದ ಜೈನಬಸದಿಗೆ ಹೊಯ್ಸಳದೇವ ದಾನ ನೀಡಿದನು. ಮಳವಳ್ಳಿಯ ಪ್ರಭು ಮತ್ತು ಮಹಾಮಂಡಳೇಶ್ವರ ಕಲಿದೇವ ಎಂಬ ದೇವಸ್ಥಾನವನ್ನು ನಿರ್ಮಿಸಿದನು. ಇನ್ನೂ ಕೆಲವು ವ್ಯಕ್ತಿಗಳು ದೇವತೆ ಭಗವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮಳವಳ್ಳಿಯ ಜನತೆಯು ಆ ದೇವಸ್ಥಾನದ ಪೂಜೆಗೋಸ್ಕರ ಪುರೋಹಿತ ಧರ್ಮೇಶ ಪಂಡಿತನಿಗೆ ಭೂಮಿಯನ್ನು ನೀಡಿದರು.
ವಿಷ್ಣುವರ್ಧನ ಮೊದಲು ಜೈನನಾಗಿದ್ದ; ಬಿಟ್ಟಿಗ ಎಂಬ ಹೆಸರಿದ್ದ ವ್ಯಕ್ತಿ; ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತ ಸ್ವೀಕರಿಸಿ ವಿಷ್ಣುವರ್ಧನನಾಗಿ ಪರಿವರ್ತಿತನಾದ ಎಂಬ ಪ್ರತೀತಿ ಇದೆ. ಆದರೆ ಇದಕ್ಕೆ ಆಧಾರವಿಲ್ಲ.29 ವಿಷ್ಣುವರ್ಧನ ಎಂಬುದು ಅವನ ನಾಮಾಂಕಿತವಲ್ಲ, ಅದು ಬಿಟ್ಟ-ವಿಠಲ ವಿಷ್ಣು ಎಂಬ ರೂಪಾಂತರ ಮಾತ್ರ, ಅಲ್ಲದೆ ಅವನಿಗೆ ಬಾಲ್ಯದಿಂದಲೂ ಬಿಟ್ಟಿದೇವ ಮತ್ತು ವಿಷ್ಣುದೇವ ಎಂಬ ಎರಡು ಅಂಕಿತಗಳು ಇದ್ದವು. ರಾಜನ ಮತಾಂತರ ಕ್ರಿ.ಶ.1110ರ ಸುಮಾರಿನಲ್ಲಿ ನಡೆದಿರಬೇಕೆಂದು ಹೇಳಲಾಗಿದೆ. ಆದರೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ದೊರೆತಿರುವ ಕ್ರಿ.ಶ.1095ರ ಶಾಸನವೊಂದರ ಪ್ರಕಾರ ಅವನು ತನ್ನ ತಾತನ ಆಳ್ವಿಕೆಯ ಕಾಲದಲ್ಲಿ ಬೆಳಗೊಳದ ಸೀತಾರಾಮ ದೇವಾಲಯಕ್ಕೆ ವಿಶೇಷ ದತ್ತಿಗಳನ್ನು ನೀಡಿ ಆ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನು. ಮಿಗಿಲಾಗಿ ಆ ವೇಳೆಗಾಗಲೇ ವಿಷ್ಣುವರ್ಧನ ಎಂಬ ಹೆಸರಿನಿಂದಲೇ ಪ್ರಸಿದ್ಧನಾಗಿದ್ದನು. ಶ್ರೀವೈಷ್ಣವಧರ್ಮಕ್ಕೆ ವಿಷ್ಣುವರ್ಧನನು ನೀಡಿದ ಪೆÇ್ರೀತ್ಸಾಹ ತೋರಿಸಿದ ಅನುಕಂಪನಗಳು ಆತ ಮತಾಂತರಗೊಂಡನೆಂಬ ಪ್ರಚಲಿತ ಕಥೆಗೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಕೆ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.30 ಸಾಲಿಗ್ರಾಮದಿಂದ ಶ್ರೀ ರಾಮಾನುಜಾಚಾರ್ಯರು ಪಾಂಡವಪುರ ತಾಲ್ಲೂಕಿನ ತೊಣ್ಣೂರಿಗೆ ತೆರಳಿದರು. ಇಂದಿನ ತೊಣ್ಣೂರು ಮೂಲತಃ ಯಾದವಪುರ ಎಂಬ ಹೆಸರನ್ನು ಹೊಂದಿದ್ದು, ಕ್ರಿ.ಶ.1127ರಲ್ಲಿ ವಿಷ್ಣುವರ್ಧನ ಉಪ ರಾಜಧಾನಿಯಾಗಿತ್ತೆಂದು ತಿಳಿದುಬಂದಿದೆ.31 ಶ್ರೀ ರಾಮಾನುಜಾರ್ಯರು ತೊಣ್ಣೂರಿಗೆ ಬಂದಾಗ ಇದಕ್ಕೆ ಯಾದವಪುರ ಎಂಬ ಹೆಸರಿದ್ದಿತು. ತಮ್ಮ ಭಕ್ತರೂ, ದಾಸರೂ ಆದ ಅನೇಕ ಶಿಷ್ಯರೊಡನೆ ಅವರು ಇಲ್ಲಿಗೆ ಬಂದು ನೆಲೆಸಿದ ಬಳಿಕ ಇದಕ್ಕೆ ತೊಂಡನೂರು ಎಂಬ ಹೆಸರು ಬಂದಿತು ಎಂದು ಊಹಿಸಬಹುದಾಗಿದೆ. ತೊಣ್ಣೂರಿನಲ್ಲಿ ಯೋಗನರಸಿಂಹ, ಲಕ್ಷ್ಮೀನಾರಾಯಣ ಮತ್ತು ಕೃಷ್ಣ ಎಂಬ ಮೂರು ಶ್ರೀವೈಷ್ಣವ ದೇವಾಲಯಗಳಿವೆ.
ವಿಷ್ಣುವರ್ಧನನ ಅರಸಿಯಲ್ಲಿ ನಾಲ್ವರನ್ನು ಮಂಡ್ಯ ಜಿಲ್ಲೆಯ ಶಾಸನಗಳು ಉಲ್ಲೇಖಿಸುತ್ತವೆ. ಪಿರಿಯರಸಿ ಪಟ್ಟಮಹಾದೇವಿ ಶಾಂತಲದೇವಿ,32 ಪಟ್ಟಮಹಿಷಿ ಲಕ್ಷ್ಮಾದೇವಿ,33 ಪಲ್ಲವರಾಜಪುತ್ರಿ ಬಮ್ಮಲದೇವಿ34 ಹಾಗೂ ಕೊಂಗಾಳ್ವ ರಾಜಪುತ್ರಿ ಚಂದಲದೇವಿ35 ಇದೇ ಅಲ್ಲದೇ ಈತನ ಅನೇಕ ಬಿರುದುಗಳನ್ನು ಶಾಸನಗಳು ಉಲ್ಲೇಖಿಸುತ್ತವೆ.
ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಮಂಡ್ಯ ಪ್ರದೇಶದಲ್ಲಿ ಹಲವಾರು ದೇವಾಲಯಗಳು, ಬಸದಿಗಳು ಹಾಗೂ ಸ್ಮಾರಕಗಳು ನಿರ್ಮಿತಗೊಂಡಿವೆ. ಅವುಗಳಲ್ಲಿ ಮುಖ್ಯವಾದವು ನಾಗಮಂಗಲದ ಸೌಮ್ಯಕೇಶವ ದೇವಾಲಯ ಸುಮಾರು ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿಂತಿದೆ. ಈ ತ್ರಿಕೂಟ ದೇವಾಲಯದ ನಿರ್ಮಾಣ ವಿಷ್ಣುವರ್ಧನನ ಕಾಲದಲ್ಲೇ ನಿರ್ಮಿಸಲ್ಪಟ್ಟಿತ್ತೆಂದು ತಿಳಿದುಬರುತ್ತದೆ.36 ಕೇಶವ ದೇವಾಲಯದ ನಕ್ಷತ್ರಾಕಾರದ ಜಗತಿ ಐದು ಅಂತಸ್ತುಗಳನ್ನು ಹೊಂದಿದೆ. ಮಧ್ಯ ಗರ್ಭಗುಡಿಯಲ್ಲಿ ಸೌಮ್ಯಕೇಶವ ಪಕ್ಕದವುಗಳಲ್ಲಿ ನರಸಿಂಹ ಮತ್ತು ವೇಣುಗೋಪಾಲ ವಿಗ್ರಹಗಳಿವೆ. ಭುವನೇಶ್ವರ ದೇವಾಲಯ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಅದರ ನೈರುತ್ಯದಲ್ಲಿರುವ ಶಾಸನದಿಂದ ವಿಷ್ಣುವರ್ಧನನ ರಾಣಿಯಾದ ಬಮ್ಮಲಾದೇವಿ 1135 ರಲ್ಲಿ ಇಲ್ಲಿನ ಅಗ್ರಹಾರವನ್ನು ಜೀರ್ಣೋದ್ಧಾರ ಮಾಡಿಸಿದಳೆಂದು ತಿಳಿದುಬರುತ್ತೆ.37 ಗರ್ಭಗುಡಿಯಲ್ಲಿ ಲಿಂಗವಿದ್ದು, ಇದನ್ನು ಶಾಸನದಲ್ಲಿ ಶಂಕರನಾರಾಯಣ ಎಂದು ಕರೆಯಲಾಗಿದೆ. ನವರಂಗದಲ್ಲಿ ದುರ್ಗ, ಚಂಡಿಕೇಶ, ಅರ್ಧನಾರೀಶ್ವರ, ಗಣೇಶ, ನಂದಿ ಮುಂತಾದ ಮೂರ್ತಿಗಳಿವೆ.
ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ರಾಜಪರಿವಾರದವರು ಮಾತ್ರವಲ್ಲದೇ ಸೇನಾಧಿಕಾರಿಗಳು ಸಹಾ ಹಲವಾರು ಜೈನ ಸ್ಮಾರಕಗಳನ್ನು ಮಂಡ್ಯ ಪ್ರದೇಶದಲ್ಲಿ ನಿರ್ಮಿಸುವುದರ ಮೂಲಕ ಜೈನ ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಕ್ರಿ.ಶ.1131ರ ಶಾಸನದ ಪ್ರಕಾರ ವಿಷ್ಣುವರ್ಧನ ದಂಡನಾಯಕನಾದ ಗಂಗರಾಜನ ಮಗನಾದ ಬೊಪ್ಪನು ತನ್ನ ತಂದೆಯ ವಿಶಿಷ್ಟ ಬಿರುದುಗಳಲ್ಲೊಂದಾದ ದ್ರೋಹಘರಟ್ಟ ಎಂಬ ಹೆಸರಿನಲ್ಲಿ ‘ದ್ರೋಹಘುರಟ್ಟ ಬಸದಿ’ಯನ್ನು ನಿರ್ಮಿಸಿ ಅದರಲ್ಲಿ ಶಾಂತಿನಾಥನನ್ನು ಪ್ರತಿಪ್ಠಾಪಿಸಿದನೆಂದು ತಿಳಿದುಬರುತ್ತದೆ.38 ಈ ಬಸದಿಯು ನಾಗಮಂಗಲದಿಂದ ಪಶ್ಚಿಮಕ್ಕೆ ಶ್ರವಣಬೆಳಗೊಳ ಮಾರ್ಗದಲ್ಲಿ 16 ಕಿ.ಮೀ. ದೂರದ ಕಂಬದಹಳ್ಳಿಯಲ್ಲಿದೆ. ಇದು ದಿಗಂಬರ ಜೈನ ಕ್ಷೇತ್ರವೆಂದೇ ಹೆಸರು ಪಡೆದಿದೆ. ತಳವಿನ್ಯಾಸದಲ್ಲಿ ಗರ್ಭಗೃಹ. ಸುಕನಾಸಿಗಳಿಂದ ಕೂಡಿದ ಒಂಭತ್ತು ಅಂಕಣಗಳನ್ನುಳ್ಳ ನವರಂಗವಿದೆ. ಗರ್ಭಗೃಹದಲ್ಲಿ ಅಷ್ಟದಿಕ್ಪಾಲಕರನ್ನು ಹೊಂದಿರುವ ಕಮಲಪೀಠದ ಮೇಲೆ ನಿಂತಿರುವ ಶಾಂತಿನಾಥನ ಮೂರ್ತಿ ಇದೆ.
ಹೊಯ್ಸಳರು ದ್ವಾರಸಮುದ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದಾಗ ಮಂಡ್ಯ ಜಿಲ್ಲೆಯು ಹಲವು ಸಂಸ್ಥಾನಗಳಾಗಿ, ಪಂಗಡವಾಗಿ ಹೊಯ್ಸಳ ಆಶ್ರಿತ ಸಾಮಂತರ ಆಡಳಿತಕ್ಕೆ ಒಳಪಟ್ಟಿದ್ದು ಕಂಡುಬರುತ್ತದೆ. ಇಂತಹ ಸಂಸ್ಥಾನಗಳಲ್ಲಿ ಕಲ್ಕುಣಿ ಒಂದು, ಈಗ ಕಲ್ಕುಣಿ ಮಂಡ್ಯ ಜಿಲ್ಲೆಯ ಒಂದು ಚಿಕ್ಕ ಗ್ರಾಮ. ನಾಗಮಂಗಲ ತಾಲ್ಲೂಕಿನ ಕಸಲಗೆರೆಯಲ್ಲಿ ಕಲ್ಕುಣಿ ನಾಡಿನ ಸ್ಥಾನಿಕ ಪ್ರಭುಗಳಿಗೆ ಸಂಬಂಧಿಸಿದ ಮೂರು ಶಾಸನಗಳು ದೊರಕಿವೆ. ಕ್ರಿ.ಶ.1142ರ ನಾಗಮಂಗಲ ತಾಲ್ಲೂಕಿನ 169ನೆಯ ಶಾಸನ ಕಲ್ಕುಣಿ ನಾಡನ್ನಾಳುತ್ತಿದ್ದ ವಿಷ್ಣುವರ್ಧನನ ಸಾಮಂತರಾಗಿದ್ದ ಸೋಮನನ್ನು ಕುರಿತದ್ದಾಗಿದ್ದು ಈ ಶಾಸನದಲ್ಲಿ ಸೋಮನ ವಂಶಾವಳಿಯನ್ನು ನೀಡುತ್ತಾ, ಈ ವಂಶದ ಮೂಲಪುರುಷ ಅಯ್ಕಣನ ಬಗೆಗೆ ಒಂದು ಘಟನೆ ವರ್ಣಿತವಾಗಿದೆ. ವೀರಗಂಗ ಪೆರ್ಮಾಡಿಯು ಚೋಳರ ಮೇಲೆ ದಂಡೆತ್ತಿ ಹೋಗುತ್ತ ಹೃದುವನಕೆರೆಯಲ್ಲಿ ಬೀಡುಬಿಟ್ಟಿದ್ದಾಗ ಕಾಡಾನೆಯೊಂದು ಬೀಡಿನ ಮೇಲೆ ನುಗ್ಗಿತು, ಅದನ್ನು ಕಂಡ ಅಯ್ಯಣನು ಬಾಣದಿಂದ ಆನೆಯನ್ನು ಹೊಡೆದುರುಳಿಸಿದನು. ಅದರಿಂದ ಅವನಿಗೆ ಕರಿಯಯ್ಕಣನೆಂಬ ಹೆಸರೂ ಕಲುಕುಣಿ ನಾಡೊಡೆತನವೂ ಗಂಗ ಅರಸನಿಂದ ದೊರೆತವು. ಕಲ್ಕುಣೆನಾಡಿಗೆ ಸೇರಿದ ಹಬ್ಬದಿರುವಾಡಿಯಲ್ಲಿ ಹೊಸದಾಗಿ ಒಂದು ಬಸದಿಯನ್ನು ನಿರ್ಮಿಸಿ ಅಲ್ಲಿ ಪಾಶ್ರ್ವದೇವನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಆ ಸಂದರ್ಭದಲ್ಲಿ ಸಾಮಂತ ಸೋಮನು ಪಾಶ್ರ್ವದೇವರ ಅಂಗಭೋಗ, ಆಹಾರದಾನ, ಬಸ್ತಿಯ ಜೀರ್ಣೋದ್ಧಾರ ಕಾರ್ಯಗಳಿಗೆಂದು ಅರುಹನಹಳ್ಳಿ ಗ್ರಾಮವನ್ನು ದತ್ತಿ ಬಿಟ್ಟನು. ಮೂಲಸಂಘ ಸೂರಸ್ತಗಣದ ಬ್ರಹ್ಮದೇವನು ದತ್ತಿ ಸ್ವೀಕರಿಸಿದನು.39 ಸುಮಾರು 12ನೆಯ ಶತಮಾನಕ್ಕೆ ಸೇರಿದ ಕಸಲಗೆರೆಯ 171ನೆಯ ಶಾಸನ ಮುಖ್ಯವಾಗಿ ಮಾರದೇವನ ಹೆಂಡತಿ ಮಹಾದೇವಿ ಸತಿಹೋದ ಸಂಗತಿಯನ್ನು ತಿಳಿಸುತ್ತದೆ.
ಕಿಕ್ಕೇರಿ ಪನ್ನೆರಡು ಆಡಳಿತ ವಿಭಾಗವು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದ್ದು, ಇದು ಪ್ರಾಯಶಃ ಕಬ್ಬಾಹು ಸಾಸಿರ ಪ್ರಾಂತದ ಉಪ ಪ್ರಾಂತವಾಗಿರಬಹುದು. ಹೊಯ್ಸಳ ದೊರೆ ವಿಷ್ಣುವರ್ಧನನ ಹಿರೀಕಳಲೆಯ ಕ್ರಿ.ಶ. ಸುಮಾರು 12ನೆಯ ಶತಮಾನದ ಶಾಸನದಲ್ಲಿ ಈ ಪ್ರಾಂತದ ಉಲ್ಲೇಖವಿದೆ. ಈ ಪ್ರಾಂತದಲ್ಲಿ ವಿಷ್ಣುವರ್ಧನನ ಮಹಾಸಾಮಂತ ಚಿಣ್ಣಮನು ಆಳ್ವಿಕೆ ನಡೆಸಿದ್ದಾನೆ. ಇಂದಿನ ಕಿಕ್ಕೇರಿ ಈ ಪ್ರಾಂತದ ಮುಖ್ಯಪಟ್ಟಣ ಮತ್ತು ರಾಜಧಾನಿಯಾಗಿತ್ತು. ಕಿಕ್ಕೇರಿಯನ್ನೊಳಗೊಂಡಂತೆ ಇದರ ಸುತ್ತಮುತ್ತಲಿನ ಹನ್ನೆರಡು ಗ್ರಾಮಗಳು ಈ ಪ್ರಾಂತದಲ್ಲಿ ಸೇರಿಕೊಂಡಿದ್ದವು.40
ನಾಗಮಂಗಲ ತಾಲ್ಲೂಕಿನ ಸುಖದರೆಯ ಕ್ರಿ.ಶ.1120ರ ಶಾಸನದಲ್ಲಿ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಜಕಶೆಟ್ಟಿ ಎಂಬುವನು ಸುಖದರೆಯಲ್ಲಿ ಬಸದಿ ಹಾಗೂ ಕೆರೆಯನ್ನು ನಿರ್ಮಿಸಿ ಭೂದಾನ ನೀಡಿ ತೆಪ್ಪಸುಂಕದೊಂದಿಗೆ ಸಣ್ಣಕೆರೆ ಯನ್ನು ದಾನವಾಗಿ ನೀಡಿದ್ದನ್ನು ದಾಖಲಿಸಿದೆ.41 ಮೆಳ್ಳಹಳ್ಳಿಯ ಈಶ್ವರ ದೇವಾಲಯ ಕ್ರಿ.ಶ.1114ರ ವೀರಗಲ್ಲು ಶಾಸನವು ಹೊಯ್ಸಳ ಮನೆತನದ ವಿಷ್ಣುವರ್ಧನನ ಆಳ್ವಿಕೆಯನ್ನು ಪರಿಚಯಿಸುತ್ತದೆ. ಆಯ ಸಂವತ್ಸರದಂದು ಬಿಟ್ಟಿಯಮಾರಯ್ಯ ಸೆಟ್ಟೆಯಣ್ಣನು ಮಳೆಯೂರ ಕಾಳಗದಲ್ಲಿ ತುರುಗಳನ್ನು ರಕ್ಷಿಸಿ ಹಲವರನ್ನು ಕೊಂದು ಮರಣವನ್ನಪ್ಪಿದನು. ಸೆಟ್ಟಿಗಾವುಂಡ, ಜಕ್ಕಯ ನಾಯಕ, ಕೇತಣ್ಣ ಇವರುಗಳು ಮೈಯುದನಹಳ್ಳಿಯ ಶಿವಾಲಯಕ್ಕೆ ಭೂಮಿಯನ್ನು ದಾನ ಮಾಡಿದರು.42
ಕೆ.ಆರ್. ಪೇಟೆ ತಾಲ್ಲೂಕಿನ ಕುಂದನಹಳ್ಳಿಯಲ್ಲಿ ಹೊಸ ಶಾಸನವನ್ನು ಡಾ. ರಂಗಸ್ವಾಮಿ ಸಂಶೋಧಿಸಿದ್ದು ಅದು ವಿಷ್ಣುವರ್ಧನನ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತದೆ. ಈ ಶಾಸನದಲ್ಲಿ ಹೊಯ್ಸಳ ಮನೆತನದ (ವಿಷ್ಣುವರ್ಧನು) ಬಿಟ್ಟಿಗನು ರಾಜ್ಯವಾಳುತ್ತಿದ್ದ ಪ್ರಸ್ತಾಪವಿದೆ. ಸೆಟ್ಟಿಯ ಮಗ ಧರ್ಮಸೆಟ್ಟಿಯು ಧರ್ಮಪಟ್ಟಣವೆಂದು ಊರಿಗೆ ಹೆಸರಿಟ್ಟು, ಅಲ್ಲಿ ಕೆರೆಯನ್ನು ಕಟ್ಟಿಸಿ ಅದಕ್ಕೆ ಮಲ್ಲಸಮುದ್ರವೆಂದು ಹೆಸರಿಟ್ಟು, ಅದರ ಕೀಳೇರಿಯಲ್ಲಿ ಮಹಾದೇವರನ್ನು ಪ್ರತಿಷ್ಠೆ ಮಾಡಿ ಗುಡಿಯನ್ನು ಕಟ್ಟಿಸಿ, ಅದರ ಪೂರ್ವಕ್ಕಿದ್ದ ಗದ್ದೆ ಮತ್ತು ಬೆದ್ದಲೆ ಭೂಮಿಯನ್ನು ದೇವರಿಗೆ ಕೊಟ್ಟ ವಿವರವಿದೆ. ಈ ಶಾಸನದ ಕಾಲ ಕ್ರಿ.ಶ.1113 ನಂದನ ಸಂವತ್ಸರ-ಅಶ್ವಿಜ ಶುದ್ಧ 5. ಅದೇ ತಾಲ್ಲೂಕಿನ ಹೊಸಹೊಳಲುವಿನಲ್ಲಿ ದೊರೆತಿರುವ ಶಾಸನದಲ್ಲಿ ಕುಕ್ಕಟಾಸನ ಮಲಧಾರಿದೇವನ ಮುನಿಯ ಶಿಷ್ಯ. ಶುಭಚಂದ್ರ ಸಿದ್ಧಾಂತ ಮುನಿಯ ಶಿಷ್ಯ ನೊಳಂಬಸೆಟ್ಟಿ ಶಿಲ್ಪವನ್ನು ಪ್ರತಿಪ್ಠಾಪಿಸಿದ ವಿಚಾರವಿದೆ. ಕಾಲ ಕ್ರಿ.ಶ.ಸುಮಾರು 12ನೆಯ ಶತಮಾನ. ಲಿಪಿ ಕನ್ನಡ, ಜೈನ ಪೀಠ ಶಾಸನ ಗ್ರಾಮದ ಭೈರವೇಶ್ವರ ದೇವಾಲಯದ ಆವರಣದಲ್ಲಿದೆ.
ಹೀಗೆ ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಮಂಡ್ಯ ಪ್ರದೇಶವು ರಾಜಕೀಯ, ಆಡಳಿತ ಹಾಗೂ ಸಾಂಸ್ಕøತಿಕವಾಗಿ ಪ್ರಗತಿಗೊಂಡಿತು. ವಿಷ್ಣುವರ್ಧನನು ಮಂಡ್ಯ ಪ್ರದೇಶದ ಹಲವಾರು ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣ, ಅವುಗಳ ನಿರ್ವಹಣೆಗೆ ದಾನದತ್ತಿಗಳನ್ನು ನೀಡಿದ್ದುದಲ್ಲದೆ, ಆತನ ದಂಡನಾಯಕರು ಸಹಾ ಮಂಡ್ಯ ಪ್ರದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಆಧಾರಸೂಚಿ
1. ಇ.ಅ ಗಿII. ಒಜ.54, 1117 ಂ.ಆ.P. 282.
2. ಇ.ಅ.ಗಿII.ಓg.33, 1118 ಂ.ಆ.P. 20.
3. ಇ.ಅ.Iಗಿ.ಓg. 91.
4. ರಂಗಸ್ವಾಮಯ್ಯ ಜಿ.ಆರ್., ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ, ಇಕ್ಷುಕಾವೇರಿ (48ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ), ಮಂಡ್ಯ, ಪುಟ 81.
5. Ibiಜ, ಓg. 91.
6. ಇ.ಅ.ಗಿII.ಓg.33, 1118-1119 ಂ.ಆ. PP 19-20.
7. ಇ.ಅ.ಗಿI.PP.41. 1118 ಂ.ಆ. P.130.
8. ಇ.ಅ.ಗಿII.PP.11,12ಣh ಅeಟಿಣuಡಿಥಿ PP-110-11.
9. ಇ.ಅ.ಗಿIII.ಒಜ. 68, 1132-ಂ.ಆ.P.293.
10. ಡಾ. ಎನ್.ಎಸ್. ರಂಗರಾಜು, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಹೊಯ್ಸಳ ದೇವಾಲಯಗಳು, ಪುಟ 6.
11. ಇ.ಅ.ಗಿI.ಏಡಿ..66., 1117 ಂ.ಆ.P.48
12. ಇ.ಅ.ಗಿI.ಏಡಿ.3.1118 ಂ.ಆ.P.4
13. ಇ.ಅ.ಗಿIII, ಒಜ. 68, 1132.ಂ.ಆ.P.293
14. ಇ.ಅ.ಗಿI. P.P.236, 12ಣh ಅeಟಿಣuಡಿಥಿ PP 315-316
15. ಇ.ಅ.ಗಿII. ಓg. 118, 1178 ಂ.ಆ.P.117-118
16. ಇ.ಅ.ಗಿI.ಏಡಿ. 60 P.42
17. ಇ.ಅ.ಗಿII.ಓg.7 1134 ಂ.ಆ.P.67
18. ಇ.ಅ.ಗಿI. ಏP 56P.40
19. ಒಂಖ 1912 P.41
20. ಇ.ಅ.ಗಿI ಏಡಿ.107 P.96
21. ಇ.ಅ.ಗಿI, ಏಡಿ.62, 1140 ಂ.ಆ.P.44
22. ಇ.ಅ.ಗಿI, ಏಡಿ. 73, P.59
23. ಇ.ಅ.ಗಿI, ಏಡಿ. 59, 1121 ಂ.ಆ.P. 41
24. ಇ.ಅ.ಗಿI, PP 73, P.148
25. ಇ.ಅ.ಗಿI, ಏಡಿ. 21 P. 15
26. ಇ.ಅ.ಗಿII. ಓg. 61, 1138 ಂ.ಆ.P.33
27. ಇ.ಅ.ಗಿII. ಓg. 64, 1145 ಂ.ಆ.P. 45
28. ಇ.ಅ.ಗಿI. ಏಡಿ.37 1095-96 ಂ.ಆ.P.21
29. ಡಾ. ಎಸ್. ಶ್ರೀಕಂಠಶಾಸ್ತ್ರಿ, ಭಾರತೀಯ ಸಂಸ್ಕøತಿ-ಪುಟ 109 & 141-142.
30. ಆಡಿ.ಃ.Sheiಞ ಂಟi- (ಇಜ) ಖಿhe ಊoಥಿsಚಿಟಚಿ ಆಥಿಟಿಚಿsಣಥಿ-P. 304
31. ಉoಠಿಚಿಟ ಃ.ಖ.(ಇಜ) ಇ.ಅ.ಗಿoಟ.ಗಿ.ಒಥಿ.135
32. ಇ.ಅ.ಗಿI ಏಡಿ.66, 1117 ಂ.ಆ.P. 48
33. ಇ.ಅ.ಗಿII. ಓg. 63 1165 ಂ.ಆ.P. 41-42
34. ಇ.ಅ.ಗಿII ಓg. 7 1134-P.6-7
35. ಇ.ಅ.ಗಿI.ಏಡಿ. 21, 12ಣh ಅeಟಿಣuಡಿಥಿ-P.15
36. ಂSಒಂಖ (1939) P.31
37. ಇ.ಅ.ಗಿII ಓg. 7 P.6-7
38. ಇ.ಅ.ಗಿII ಓg. 29-30, 1131 ಂ.ಆ.
39. ಇ.ಅ.ಗಿII ಓg. 169, 1142 ಂ.ಆ.P.167
40. ಗೋಪಾಲ್ ಆರ್.(ಸಂ.), ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪುಟ 52.
41. ಇ.ಅ.ಗಿII ಓg.1120 ಂ.ಆ.
42. ಗೋಪಾಲ್ ಆರ್. (ಸಂ.), ಪೂರ್ವೋಕ್ತ, ಪುಟ 354.

W  ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ-571107.

No comments:

Post a Comment