Wednesday, May 7, 2014

ಶ್ರೀ ಆದಿಶಂಕರರ ಕಾಲಘಟ್ಟ

ಶ್ರೀ ಆದಿಶಂಕರರ ಕಾಲಘಟ್ಟ : ಒಂದು ಚರ್ಚೆ
ಡಾ. ಎಸ್.ಕೆ. ಜೋಶಿ
ಅತ್ಯಂತ ಪ್ರಾಚೀನ ಭಾರತದ ಚಿಂತಕರಲ್ಲಿ, ಮನು, ವಾಲ್ಮೀಕಿ, ವ್ಯಾಸ ಯಾಜ್ಞವಲ್ಕ್ಯರು ಖ್ಯಾತನಾಮರು. ಪ್ರಥುಲೋರು ಫ್ರೆಂಕದಲಿ ಜಗವು ಎಚ್ಚರಗೊಳ್ಳುತ್ತಿರುವಾಗ, ಅದಾಗಲೇ ಈ ಪ್ರಭುಗಳು ಜ್ಞಾನ ಅರುಣೋದಯವನ್ನು ಪ್ರಕಾಶಿಸಿದವರು.
ವೇದಗಳು ನಮ್ಮೀ ವರ್ತಮಾನ ಕಾಲದ ಹಿಂದೆ ಎಂಟು ಸಾವಿರ ವರುಷಗಳ ಸುತ್ತಿನಲ್ಲಿ ಜ್ಞಾನದ ಹರವನ್ನು ಹರಡಿವೆ. ಡಾ. ಆರ್.ಜಿ. ಭಾಂಡಾರಕರ್, ವಿದ್ ಎಂಬ ಮೂಲ ಧಾತುವಿನಿಂದ ವೇz ಶಬ್ದೋತ್ಪತ್ತಿ. ವೇದ ಅಂದರೆ ಸಂಕ್ಷಿಪ್ತತೆಯಲ್ಲಿ ಜ್ಞಾನ, ಅರಿವು, ತಿಳಿವಳಿಕೆ ಎಂತಾಗಿ ಅರ್ಥೈಸುತ್ತವೆ.
ಈ ವೇದಗಳು ಚತುರ್ವೇದಗಳ ದಾಂಗುಡಿ ಬಿಟ್ಟು, ಋಗ್ವೇದ, ಯಜುರ್ವೇದ, ಅಥರ್ವಣವೇದ ಹಾಗೂ ಸಾಮವೇದ ಅದು. ಸರ್ವ ಜೀವಾತ್ಮಗಳನ್ನು ಪ್ರೀತಿಸುವ ಪ್ರಕ್ರಿಯೆ. ಯಜ್ಞ, ಯಾಗ, ಪಶುಬಲಿಗಳಂಥ ನಿಖರ ಕೆಲವು ಆಚರಣೆಗಳು ದೂರೀಕರಿಸಲ್ಪಡಲು ಹತ್ತಿದವು ಆಗ್ಗೆ ಬಂದ ಬುದ್ಧನಿಂದ.
ಬುದ್ಧ ಪೂರ್ವ ಕಾಲದಲ್ಲಿ ವೇದಕಾಲೀನ ಕಟಿಬದ್ಧ ಧರ್ಮಾಚರಣೆಯು ಕೆಲ ಆಚರಣೆಗಳಲ್ಲಿ ಅಸಹನೀಯ ಅನುಷ್ಠಾನಗಳನ್ನು ತಂದುದರಿಂದ, ಬಹ್ವಂಶ ಜನಮಾನಸಕ್ಕೆ ಧಾರ್ಮಿಕ ಕ್ರಿಯೆಗಳಲ್ಲಿ ಕಾಠಿಣ್ಯತೆ ತೋರಿತು. ಯಜ್ಞ ಯಾಗಾದಿಗಳು ಸಾಕಾದವು. ಅವುಗಳಲ್ಲಿ ಹಿಂಸೆಯಡಗಿತ್ತು. ಸರಳ ಸೌಮ್ಯ ಶಾಂತ ಪ್ರಶಾಂತ ಅಹಿಂಸೆಯ ಧರ್ಮದ ದಾರಿ ಬೇಕಾಗಿತ್ತು. ಅದಾಗಿ, ಬುದ್ಧನು ಧರ್ಮವನ್ನು ‘ಸಂಯೋಗ್ಯ ದಾರಿ (Pಚಿಣh oಜಿ ಡಿighಣesಟಿess) ಎಂದು ವ್ಯಾಖ್ಯಾನಿಸಿದನು.
ಬುದ್ಧನ ‘ಅಹಿಂಸಾ ಸಮಾಜ ನಿರ್ಮಾಣವಾಯಿತು. ಎಲ್ಲೆಡೆಯೂ ಸೌಮ್ಯ ಸರಳ ಶಾಂತ ಸಮಾಜದ ಅಡಿಗಲ್ಲಿನ ಮೇಲೆ ಇಡೀ ಜನಸಮುದಾಯದ ಬೌದ್ಧನಿಲಯ ನಿರ್ಮಾಣವಾಯಿತು.
ಆದರೆ, ಈ ತರಹದ ‘ಅಹಿಂಸಾ ಪರಮೋಧರ್ಮಃ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಎಂಬ ಘೋಷಣಾಚಾರಣೆಗಳು ಸುತ್ತಲೂ ಹರಡಿ, ಸಮಾಜವನ್ನು ಅಬಲವಾಗಿ, ಅಶಕ್ತವಾಗಿ ನಿಷ್ಕ್ರಿಯೆಯಾಗಿ ಮಾಡಿತ್ತು. ಇದೂ ಕೂಡಾ ಕೆಲ ಶತಕದ ನಂತರ (ಕ್ರಿ.ಪೂ. ಶತಕ ೫ರಿಂದ ಕ್ರಿ.ಶ. ೬-೭ ಶತಮಾನದ ವರೆಗೆ) ನಿಶ್ಯಕ್ತ ರಾಷ್ಟ್ರವನ್ನಾಗಿ ಪರಿವರ್ತಿಸಿತು.
ಆಗ ೬-೭ ಶತಕಗಳ ಕಾಲ ಸಂಧಿಯಲ್ಲಿ ಪ್ರವೇಶ ವಾಯಿತು. ಆದಿಶಂಕರರ ‘ಅಹಂ ಬ್ರಹ್ಮಾಸಿ ಎಂಬ ಆತ್ಮದ ಗುಡುಗು. ಶ್ರೀ ಆದಿಶಂಕರರ ವಿಚಾರಗಳು ಆಧ್ಯಾತ್ಮ ಶಕ್ತಿಯಿಂದ ಬೆಳೆದು, ಮುಪ್ಪರಿಗೊಂಡ ದೇಹ-ದೇಶ-ಆತ್ಮಗಳ ಹಿಂದಿನಿಂದ ಬಂದ ನಿಶ್ಯಕ್ತ ಸಮಾಜವನ್ನು ಹುರಿದುಂಬಿಸಿತು. ಅದು ಶ್ರೀ ಶಂಕರಾಚಾರ್ಯರ ಐತಿಹಾಸಿಕ ಕೊಡುಗೆ ಭಾರತವನ್ನು ಪುನರಪಿ ಕಟ್ಟುವಲ್ಲಿ.
ಶ್ರೀ ಶಂಕರರ ಮಾರ್ಗದರ್ಶನ ಇದು “ಸರಿದು ಹೋದ ಸಿದ್ಧಾಂತಗಳನ್ನು ಆಚರಣೆಗಳನ್ನು ಇಂದಿನ ವರ್ತಮಾನದಲ್ಲಿ ನೋಡುವ ಹಾಗೂ ಅದರ ಪರಿಣಾಮವನ್ನು ವಿನಿಯೋಗಿಸುವ  ನವ್ಯ ಚಿಂತನವನ್ನು ಶ್ರೀ ಶಂಕರರು ದೇಶಕ್ಕೆ ನೀಡಿದರು. ‘ನಿನ್ನೆಗಳನ್ನು, ದಂತಕಥೆಗಳನ್ನು, ಪುರಾಣಗಳನ್ನು ಹಾಗೂ ಇತಿಹಾಸವನ್ನು ವರ್ತಮಾನದ ದೃಷ್ಟಿಯಿಂದ ನೋಡಿರಿ ಆಗ ಮಾತ್ರ ಅವುಗಳ ಅರ್ಥವಾಗುತ್ತದೆ, ಮೌಲ್ಯ ತಿಳಿಯುತ್ತದೆ ಹಾಗೂ ಉಪಯೋಗ-ಉಪಕರಣವಾಗುತ್ತದೆ. ಅರ್ಥ ಹಾಗೂ ಅನು‌ಅರ್ಥವಾಗಿ, ಸಮಾಜಕ್ಕೆ ನೈಜ ಮಾರ್ಗದರ್ಶನ ದೊರೆಯುತ್ತದೆ ಎಂದರು ಶ್ರೀ ಶಂಕರರು. ಇದು ಕರ್ಮ ಪ್ರಧಾನ ನೀತಿ, ಬರಿ ಶಬ್ಧ ನೀತಿಯಲ್ಲ. ಸದೃಢ ರಾಷ್ಟ್ರ ಕಟ್ಟುವ ನೀತಿ-ಶಕ್ತಿ ಎಂದು ಹೇಳಬಹುದು.
ಇನ್ನು ‘ಆದಿಶಂಕರರ ಸಮಯವಾವುದು ? ಎಂಬುದು ಇನ್ನೂ ನಿರ್ದಿಷ್ಟಗೊಳ್ಳಬೇಕಾಗಿದೆ. ಇಲ್ಲಿ ಅದರ ಬಗ್ಗೆ ಇನ್ನೂ ಕೆಲವೊಂದು ಚಿಂತನಪರ ಅಂಶಗಳನ್ನು ತೋರಿಸಲಾಗಿದೆ. ನಿಷ್ಕರ್ಶೆ ಇನ್ನು ವಿದ್ವಾಂಸರಿಗೆ ಬಿಟ್ಟುಕೊಟ್ಟದ್ದು. ಈ ಶೋಧನೆ, ಭಗವತ್‌ಪಾದರ ಸಾಹಿತ್ಯ ಹಾಗೂ ಅವರ ಸಮಕಾಲೀನ ವಿದ್ವಾಂಸರ ಪ್ರಸಂಗಗಳನ್ನು ಆಧರಿಸಿದೆ.
ಕೆಲವು ಸಾಂಗತ್ಯಗಳು ಶ್ರೀ ಆದಿಶಂಕರರ ಕಾಲ ಕ್ರಿ.ಶ.೬೩೨ ರಿಂದ ೬೬೪ರ ವರೆಗೆಂದೂ, ಅಥವಾ ಕ್ರಿ.ಶ.೬೮೦ ರಿಂದ ೭೧೨ರ ವರೆಗೆಂದೂ ಹೇಳುತ್ತಿವೆ. ಇನ್ನು ಕೆಲ ಸಿದ್ದಾಂತಗಳು ಕ್ರಿ.ಶ.೬೫೦ರಿಂದ ೬೮೨ ರವರೆಗೂ ಉಸಿರುತ್ತೇನೆ.
ಶ್ರೀ ಶಂಕರರ ಸಮಕಾಲೀನ ಕೆಲವು ವಿದ್ವಾಂಸರ ಹೆಸರುಗಳು ಕೇಳಿಬರುತ್ತಿವೆ. ಆ ಮಹನೀಯರ ಕಾಲ ಕೃತಿಗಳಿಂದ ತಿಳಿದುಬರುತ್ತವೆ. ಮಂಡನಮಿಶ್ರಾ ಪಂಡಿತನು ಮಿಥಿಲಾ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದುದು ಕ್ರಿ.ಶ.೬೫೦ರ ಸುತ್ತಮುತ್ತ. ಶ್ರೀ ಶಂಕರಿಗೂ ಅವನಿಗೂ ಧಾರ್ಮಿಕ ಚರ್ಚೆಗಳಾದುದು ಅದೇ ಕಾಲದಲ್ಲಿ. ಹೀಗಾಗಿ ಇವರಿಬ್ಬರೂ ಸಮಕಾಲೀನರು.
ವಿದ್ಯಾವಾಚಸ್ಪತಿ ಕುಮಾರಿಲಭಟ್ಟರು ಕ್ರಿ.ಶ.೬೫೦ರ ಸುತ್ತಮುತ್ತ ಇದ್ದು, ಇವರು ಶ್ರೀ ಶಂಕರರ ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನ ಬರೆದರು, ಹಾಗೂ ಅದಕ್ಕೆ, ಅರ್ಥಪೂರ್ಣತೆಯಿಂದ, ತನ್ನ ಪತ್ನಿಯ ಹೆಸರನ್ನೇ ಇಟ್ಟದು-‘ಭಾಮಿನೀ ಎಂದು. ಏಕೆಂದರೆ ಇದರಲ್ಲಿ ವಿಶೇಷತೆ ಇದೆ. ಯುವಕನಾದ ಕುಮಾರಿಲ ಭಟ್ಟನು ಭಾಮಾ ಯುವತಿಯನ್ನು ಮದುವೆಯಾಗಿ ಸಾಂಸಾರಿಕನಾದನು. ಆದರೆ ಆತನು ತನ್ನ ಕೃತಿ ರಚನೆಯಲ್ಲಿ ಇಷ್ಟೊಂದು ಮಗ್ನನಾಗಿದ್ದನು. ದಿನಂಪ್ರತಿ ಕ್ಷಣ ಕ್ಷಣಕ್ಕೂ ಸೇವೆ ಮಾಡುತ್ತ ಭಾಮಾ ಮುದುಕಿಯಾದಳು, ಜೊತೆಗೆ ಪತಿ ಕುಮಾರಿಲಭಟ್ಟ ಕೂಡ. ಒಬ್ಬರನ್ನೊಬ್ಬರು ನೋಡಿದುದು ಆ ಕಾವ್ಯರಚನೆ ಮುಗಿದ ಮೇಲೆಯೇ. ಇಬ್ಬರೂ ಹಣ್ಣಾದ ವೃದ್ಧರಾಗಿರುತ್ತಾರೆ. ಗಂಡ ಹೆಂಡತಿಯನ್ನು ಗುರುತಿಸಿ “ಭಾಮಾ ಎಷ್ಟು ಮುದುಕಿಯಾಗಿರುವೆ ? ಎಂದಾಗ, ಆಕೆಯೂ ಕೂಡ ತಾವೂ ಕೂಡ ಈಗ ಮುದುಕರು ಎಂದಳು. ಇಡೀ ಆಯುಷ್ಯವನ್ನೇ ಈ ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನ ಬರೆಯುವಲ್ಲಿ ಕಳೆಯಿತು, ಒಬ್ಬರಿಗೊಬ್ಬರು ಅಪರಿಚಿತರಂತೆ ಬದುಕಿದೆವು. ಈಗ ಈ ಮಹಾನ್ ಕಾವ್ಯ ನಿರ್ಮಾಣವಾಯ್ತು. ನಿನ್ನ ತ್ಯಾಗದ ಸೇವೆಯಿಂದ ಇದಕ್ಕೆ ನಿನ್ನ ಹೆಸರನ್ನೇ ಇಡುವೆ ‘ಭಾಮಿನಿ ಎಂದು. ಹೃದಯಸ್ಪರ್ಶಿ ದೃಶ್ಯ. ಅಂದಿನಿಂದ ಕುಮಾರಿಲಭಟ್ಟರ ಕಾವ್ಯಗ್ರಂಥ ‘ಭಾಮಿನಿ ಆಗಿ, ಅಮರ ವಾಯಿತು. ಹೀಗಾಗಿ, ಕುಮಾರಿಲಭಟ್ಟರು ಶ್ರೀ ಶಂಕರರ ಅನತಿ ದೂರದ ಕಾಲದಲ್ಲಿ ವಾಸಿಸಿದರೆಂದು ಇಲ್ಲಿ ಅರ್ಥೈಸಬಹುದು.
ಶ್ರೀ ಶಂಕರರ ವೈಶೇಷಿತಗಳು (ಮಠಗಳ ಸ್ಥಾಪನೆ) ಶ್ರೀ ಶಂಕರರ ಪೀಠಗಳ ಸ್ಥಾಪನೆಯ ರೀತಿಯು ವಿಶಿಷ್ಟವಾಗಿತ್ತು. ಶಾಸ್ತ್ರ ಬೋಧೆ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕಾಗಿ, ಆಚಾರ್ಯರು ಮಠಗಳನ್ನು ಸ್ಥಾಪಿಸಿದರು. ಶ್ರೀ ಕಾರ್ಯಕ್ಕಾಗಿ ಅವರು ನಿರ್ದಿಷ್ಟ ಸ್ಥಳಗಳನ್ನು ನಿರ್ಧರಿಸಿದರು.
ಅದರಂತೆ ಜಗನಾಥ (ಪುರಿ), ದ್ವಾರಕಾ (ಗುಜರಾಥ) ಹಾಗೂ ಬದ್ರಿ (ಉತ್ತರ ಪ್ರದೇಶ)ಗಳಲ್ಲಿ ಪೀಠಗಳನ್ನು ಸ್ಥಾಪಿಸಿ, ನಾಲ್ಕನೆಯ ಪೀಠವನ್ನು ರಾಮೇಶ್ವರದಲ್ಲಿ ಸ್ಥಾಪಿಸಲು ದಕ್ಷಿಣದ ಕಡೆಗೆ ಹೊರಟರು.
ಆದರೆ, ಶೃಂಗೇರಿಯ ತುಂಗಾ ನದಿಯ ದಡದಲ್ಲಿ ಶ್ರೀ ಸರಸ್ವತಿಯು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದಾಳೆಯೇ  ಎಂಬುದನ್ನು ದೃಢಪಡಿಸಲು ಹಿಂದಿರುಗಿ ನೋಡಲು ಅದರ ನೆಪವಾಗಿ ದೇವಿಯು ಅಲ್ಲಿಯೇ ನಿಂತುಬಿಟ್ಟಳಂತೆ. ದೇವಿಯ ಇಂಗಿತ ತಿಳಿದ ಆಚಾರ್ಯರು ಅಲ್ಲಿಯೇ ಪೀಠವನ್ನು ಸ್ಥಾಪಿಸಿದರು.
ಹೀಗೆ ಜಗನ್ನಾಥ ಪುರಿ, ಶ್ರೀಕೃಷ್ಣನ ದ್ವಾರಕಾ ಹಾಗೂ ಬದರಿ (ನಾರಾಯಣ) ಹೀಗೆ ಮೂರು ತಮ್ಮ ಸಂಕಲ್ಪದಂತೆ ಮಾಡಿದ್ದು. ಆದರೆ ಶೃಂಗೇರಿಯದು ದೇವೀ ಸಂಕಲ್ಪಕ್ಕೆ ಅನುಸಾರವಾಗಿ ಸ್ಥಾಪಿತವಾಯಿತು. ಶಂಕರರು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸುವ ಮೂಲಕ ತಮ್ಮ ಲೋಕಸಂಗ್ರಹ ಕಾರ್ಯವನ್ನು ನೆರವೇರಿಸಿದರು. ಈ ಪೀಠಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತಿವೆ. ಅವುಗಳ ಪೀಠಾಧೀಶರು ಆಯಾ ದಿಕ್ಕುಗಳಿಗೆ ಸೇರಿದವರು. ಶಾಸ್ತ್ರಜ್ಞರು, ಲೋಕಜ್ಞರು ಬ್ರಹ್ಮಜ್ಞರು ಪರಿವ್ರಾಜಕ ಸನ್ಯಾಸಿಗಳಾಗಿದ್ದರು. ೧) ಶ್ರೀ ಶಂಕರಾಚಾರ್ಯರ ಪ್ರಥಮ ಶಿಷ್ಯರಾದ ಪದ್ಮಪಾದರು. ೨) ಶ್ರೀ ಸುರೇಶಾಚಾರ್ಯರು, ೩) ಶ್ರೀ ಹಸ್ತಮಲಕರು ಮತ್ತು ೪) ತೋಟಕಾಚಾರ್ಯರು ಈ ಅಧ್ವರ್ಯುಗಳಿಂದ ವೈದಿಕಧರ್ಮ ಪೋಷಣೆಗೆ ಶಾಶ್ವತ ಏರ್ಪಾಡು ಮಾಡಿದರು.
ಖಗೋಲ ಶಾಸ್ತ್ರಜ್ಞ ಭಾಸ್ಕರಾಚಾರ್ಯರು ಹಾಗೂ ಶ್ರೀ ಶಂಕರರೂ ವೈಚಾರಿಕವಾಗಿ ಸ್ಪಂದಿಸಿದವರು ಸ್ವಲ್ಪ ಸಮಯದ ಪೂರ್ವದಲ್ಲಿ ಖಗೋಲ ಸಂಶೋಧನೆಗೈದ ಭಾಸ್ಕರಾಚಾರ್ಯರನ್ನು ಆದಿಶಂಕರರು ಸ್ಮರಿಸುತ್ತಾರೆ. ಆ ಕೃತಿಗಳು ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಹಾಗೂ ಧರ್ಮಕೀರ್ತಿಗಳಾಗಿವೆ.
ಸೌಂದರ್ಯ ಲಹರಿ ಕೃತಿ ಕೂಡ ಆದಿಶಂಕರರ ಯುವ ಬದುಕಿನ ಸೌಂದರ್ಯದ ಚಿತ್ರಣವಾಗಿದ್ದು, ಅದು ಅವರ ಯುವ ಜೀವನದ ಕಾಲಿಕವಾಗಿರಲು (ಸಾಕು ೬೫೭-೫೮) ಅವರು ಭರ್ಜರಿ ಯುವಕರಾಗಿದ್ದಾಗ ಇಪ್ಪತ್ತೈದರ ಯುವಕರಾಗಿದ್ದಾಗ (೬೩೨+೨೫=೬೫೭) ಮೃತ್ಯು (೬೬೪) ಮುಂದೆ ೭ ವರ್ಷಗಳ ಅಂತ್ಯದಲ್ಲಿ ಅವರು ಅಸ್ತಂಗತರಾದುದು (ಜನನ ೬೩೨-ಯುವ ೨೫+೭=ಅಂತ್ಯ ಕ್ರಿ.ಶ. ೬೬೪) ಜನನ ಅಂತ್ಯ ಮೂವತ್ತೆರಡು ವರ್ಷ.
ನಮ್ಮ ಸಮಕಾಲೀನ ಕಲಾ ಇತಿಹಾಸಕಾರ (ಂಡಿಣ hisಣoಡಿiಚಿಟಿ) ಶ್ರೀ ಎಸ್.ಕೆ. ರಾಮಚಂದ್ರರಾಯರು ತಮ್ಮ ಕೃತಿಯಾದ ಶಂಕರವಾಣಿಯಲ್ಲಿ, ಬಹಳಷ್ಟು ಆಕರಗಳನ್ನು ಹುಡುಕಿ, ಆದಿಶಂಕರರ ಕಾಲ ಕ್ರಿ.ಶ.೬೩೨ರಿಂದ ಕ್ರಿ.ಶ.೬೬೪ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಶ್ರೀ ಶಂಕರರು ಬದುಕಿದುದು ಕೇವಲ ೩೨ ವರುಷಗಳು ಎಂದು ಹೇಳುತ್ತದೆ.
ಸುಬ್ಬರಾಯರು, ಯಳ್ಳೂರ ಬಳ್ಳಿ, ಮೈಸೂರು ಸಂಸ್ಥಾನ, ಇವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ಶ್ರೀ ಸಾತಿಕಾನಂದ ಸ್ವಾಮಿಗಳಾದರು, ಹಾಗೂ ಸುಮಾರು ೨೦೦ ಇಂಗ್ಲಿಷ್, ಕನ್ನಡ ಲೇಖನಗಳನ್ನು ಆಧ್ಯಾತ್ಮಿಕ ಸಂಶೋಧನ ಪಾರ್ಶ್ವದಲ್ಲಿ ಕರೆದರು. ಅವರು ಶ್ರೀ ಆದಿಶಂಕರರನ್ನು ಕ್ರಿ.ಶ.೬೮೦ ರಿಂದ ೭೧೨ರವರೆಗೆ ಮೂವತ್ತೆರಡು ವರುಷ ವ್ಯಾಪಿಸುತ್ತದೆ.
ಇನ್ನೋರ್ವ ನಮ್ಮ ಸಮಕಾಲೀನ ಆಧ್ಯಾತ್ಮ ಚಿಂತಕರು, ವೇದ-ಶಾಸ್ತ್ರ-ಪುರಾಣ, ಭಾಷ್ಯ ಭಾಷೆಗಳ ಪರಿಣಿತರು ಆದ ಪಾವಗಡದ ಡಾ. ಪ್ರಕಾಶ್‌ರಾವ್ ಅವರು ಆದಿಶಂಕರರನ್ನು ಕ್ರಿ.ಶ.೬೩೨ ರಿಂದ ೬೬೪ರ ಕಾಲಘಟ್ಟಕ್ಕೆ ನಿಶ್ಚಿತವಾಗಿ ಜೋಡಿಸುತ್ತಾರೆ (ದೂ.ದ. ವ್ಯಾಖ್ಯಾನದಲ್ಲಿ) ಅವರ ಕಾಲದ ಬಗ್ಗೆ ಅತ್ತಿಂದಿತ್ತ ಇತ್ತಿಂದತ್ತ ತೂರಾಡುವುದು ಬೇಡ.
ತಾತ್ಪರ್ಯ
ಶ್ರೀ ಶಂಕರರು ತತ್ವದರ್ಶಿಗಳು, ಜ್ಞಾನಿಗಳು ಕೇವಲ ಶಾಸ್ತ್ರವಿದರಷ್ಟೇ ಆಗಿರದೆ, ಆತ್ಮವಿದರೂ ಆದ ಗುರುಗಳಾಗಿದ್ದರು. ಜ್ಞಾನಾರ್ಜನೆಯಲ್ಲಿ ಮತ್ತು ಜ್ಞಾನೋಪದೇಶದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗದೆ, ಲೋಕ ಸಂಗ್ರಹ ಕಾರ್ಯದಲ್ಲೂ ತೊಡಗಿಸಿಕೊಂಡ ಲೋಕ ಹಿತೈಷಿಗಳಾಗಿದ್ದಾರೆ. ತಾತ್ವಿಕ ಸಿದ್ಧಾಂತವೊಂದರ ಪ್ರತಿಪಾದನೆಯ ಜೊತೆಗೆ ಸದಾಚಾರದ ಅನುಷ್ಠಾನಕ್ಕೂ ಯೋಗ್ಯ ಮಾರ್ಗದರ್ಶನ ನೀಡಿದರು. (ಪ್ರೊ. ನಂಜನಗೂಡು ಬಾಲಸುಬ್ರಹ್ಮಣ್ಯ).
ವೈಯಕ್ತಿಕ ಸಿದ್ಧಿಯಿಂದ ತೃಪ್ತರಾಗದೆ, ಸಾಮಾಜಿಕ ಸಜ್ಜೀವನದ ಮೇಲ್ವಿಚಾರಣೆಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿದರು. ತಮ್ಮ ಸ್ವಂತ ಆಚಾರ ವಿಚಾರಗಳ ನಡೆ-ನುಡಿಗಳ ಮೂಲಕ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಆದರ್ಶಮೂರ್ತಿಗಳಾಗಿ ಆಚಾರ್ಯ ಪುರುಷರೆನಿಸಿದರು ಶ್ರೀ ಶಂಕರರು.

ಆಧಾರಸೂಚಿ
೧. ಡಾ. ಎಂ.ಎನ್. ಜೋಶಿ, ಕ.ವಿ.ವಿ., ಧಾರವಾಡ, ಅದ್ವೈತಚಿಂತನ, ಆಗಸ್ಟ್ ೨೦೧೨.
೨. ಡಾ. ಆರ್.ಜಿ. ಭಂಡಾರಕರ್, ಧರ್ಮಶಾಸ್ತ್ರ.
೩. ಡಾ. ಎಸ್. ರಾಧಾಕೃಷ್ಣನ್, ಖಿhe hiಟಿಜu ತಿಚಿಥಿ oಜಿ ಟiಜಿe.
೪. ಡಾ. ಶಂ.ಬಾ. ಜೋಶಿ, ಋಗ್ವೇದ ರಹಸ್ಯ.
೫. ವಿದ್ವಾನ್ ಆರ್.ಎಸ್. ಪಂಚಮುಖಿ, ವೇದೋಪನಿಷತ್ತುಗಳ ಅಧ್ಯಯನ, ಕ.ಇ. ಮಂಡಳ, ಧಾರವಾಡ.
೬. ಪ್ರೊ. ನೀಲಕಂಠಶಾಸ್ತ್ರಿ, . ಚಿಜvಚಿಟಿಛಿeಜ ಊisಣoಡಿಥಿ oಜಿ Iಟಿಜiಚಿ ಂಟಿ. ,.
೭. ಕೆ.ಎಂ. ಮುನ್ಸಿ, ಊiಟಿಜuism, ಃhಚಿಡಿಚಿಣiಥಿಚಿ ಗಿiಜಥಿಚಿ ಃhಚಿvಚಿಟಿ, ಃombಚಿಥಿ
೮. ಲೇಖಕನ ಸ್ಥಳ ಸಮೀಕ್ಷೆ, ಶೃಂಗೇರಿ, ಸೋಮನಾಥಪುರಿ (ಕೇದಾರನಾಥ ಇಲ್ಲ).
೯. ಪ್ರೊ. ನಂಜನಗೂಡು ಬಾಲ ಸುಬ್ರಹ್ಮಣ್ಯ, ಲೋಕ ಹಿತೈಷಿ ಶ್ರೀ ಶಂಕರರು, ಕೆ.ಆರ್. ಸಾಗರ, ಮೈಸೂರು.
೧೦. ಬ್ರಹ್ಮಶ್ರೀ ರಾಮಚಂದ್ರ ಶಾಸ್ತ್ರಿ, ಸೂರಿ, ಕರ್ಕಿ, ಅದ್ವೈತ ತತ್ವಪ್ರಕಾಶಿಕಾ, ಧಾರವಾಡ.
೧೧. ಡಾ. ಎ.ಕೆ. ಶಾಸ್ತ್ರಿ, ಶೃಂಗೇರಿ ಕಡತಗಳು-ಅಧ್ಯಯನ.
೧೨.ಸಿಲ್ವರ್ ಆರ್ಚರ್ಡ್, ಧಾರವಾಡ-೫೮೦೦೦೧.








1 comment:

  1. ನಿಮ್ಮ ತಂಡದಲ್ಲಿ ನಮ್ಮನ್ನು ಸಹ ಸೆರಿಸಿ ಕೊಳ್ಳಿ

    ReplyDelete