Tuesday, March 18, 2014

ಗುಜರಾತಿನಲ್ಲೊಂದು ವಿಜಯನಗರದ ಕಾಲದ ನಾಟಕ

ಗುಜರಾತಿನಲ್ಲೊಂದು ವಿಜಯನಗರಕಾಲೀನ ಐತಿಹಾಸಿಕ ನಾಟಕ ಗಂಗಾಧರ ಕವಿಯ ಗಂಗದಾಸ ಪ್ರತಾಪ ವಿಲಾಸಮ್
-  ಡಾ. ಜ್ಯೋತ್ಸ್ನಾ ಕಾಮತ್
ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳಲ್ಲಿ ಕಾವ್ಯ, ಪ್ರಬಂಧ, ಶಾಸ್ತ್ರಾದಿಗಳ ವೇದ ಸಾಹಿತ್ಯ ಪುರಾಣಾದಿಗಳ ಟೀಕು-ಟಿಪ್ಪಣಿಗಳ ಸಾಹಿತ್ಯ ಸಾಕಷ್ಟು ಬೆಳೆದಿದ್ದರೂ ಈಗ ಲಭ್ಯವಾಗಿರುವ ನಾಟಕ ಪ್ರಕಾರವು ಕಡಿಮೆ. ಅದರಲ್ಲೂ ಸಮಕಾಲೀನ ಇತಿಹಾಸವನ್ನು ಕೆಲಮಟ್ಟಿಗೆ ಬಿಂಬಿಸುವ ಕೃತಿಗಳು ವಿರಳ. ಇಂಥಲ್ಲಿ ವಿಜಯನಗರದ ಎರಡನೆಯ ದೇವರಾಯನ ಕಾಲದಲ್ಲಿ (೧೪೨೪-೧೪೪೬) ಆತನ ಆಸ್ಥಾನದಲ್ಲಿ ಒಳ್ಳೆಯ ಹೆಸರು ಮಾಡಿ, ತೀರ್ಥಯಾತ್ರೆಯ ಜೊತೆಗೆ ಸಾಹಿತ್ಯಯಾತ್ರೆಯನ್ನು ಕೈಕೊಂಡು ಗುಜರಾತ್ ತಲುಪಿ ಅಲ್ಲಿಯ ಚಂಪಾನೇರ ಸಂಸ್ಥಾನದ ಅರಸನ ರಾಜಾಶ್ರಯವನ್ನು ಗಂಗಾಧರ ಕವಿ ಪಡೆಯುತ್ತಾನೆ. ಸಂಸ್ಕೃತದಲ್ಲಿ ಮೀರಿದ ಪಾಂಡಿತ್ಯ ಪಡೆದ ಈತನಿಗೆ ಅಲ್ಲಿಯ ಅರಸು ಗಂಗದಾಸನು, ತಾನು ಅಹ್ಮದಾಬಾದ್‌ನ ಸುಲ್ತಾನನನ್ನು ಸೋಲಿಸಿದ ಸಂದರ್ಭವನ್ನು ನಾಟಕರೂಪದಲ್ಲಿ ಬರೆಯುವಂತೆ ಹೇಳುತ್ತಾನೆ. ಆಗ ರೂಪಗೊಂಡಿದ್ದ ನಾಟಕವೇ ಗಂಗಾಧರನ ಗಂಗದಾಸ ಪ್ರತಾಪ ವಿಲಾಸಮ್ (ಕ್ರಿ.ಶ.ಸು. ೧೪೪೯ರಲ್ಲಿ ರಚಿತವಾಯಿತು).
ಕ್ರಿ.ಶ. ೧೪೪೯ರಲ್ಲಿ ರೂಪ ತಾಳಿರಬಹುದಾದ ಈ ನಾಟಕದ ಒಂದೇ ಪ್ರತಿ, ಲಂಡನ್‌ನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಇತ್ತು (ನಂ. ೨೩೮೮) ಬಡೋದಾ ವಿಶ್ವವಿದ್ಯಾಲಯವು, ಬ್ರಿಟಿಷ್ ಕೌನ್ಸಿಲ್ ಮೂಲಕ ಅದನ್ನು ತರಿಸಿ, ಆ ವಿಶ್ವವಿದ್ಯಾಲಯದ ಗುಜರಾತ್ ಭಾಷೆಯ ಪ್ರಾಧ್ಯಾಪಕರೂ, ಓರಿಯಂಟಲ್ ಸಂಸ್ಥೆಯ ನಿರ್ದೇಶಕರೂ ಆಗಿದ್ದ ಃ.ಎ. Sಚಿಟಿಜesಚಿಡಿಚಿ ಅವರು ಸಂಪಾದಿಸುವಂತೆ ಏರ್ಪಾಡು ಮಾಡಿ ೧೯೭೩ರಲ್ಲಿ ಪ್ರಕಟಿಸಿದೆ. ಈ ಅಪರೂಪದ ಸಂಸ್ಕೃತ ನಾಟಕದ ಪ್ರತಿಯನ್ನು ನನ್ನ ವಿನಂತಿಯಂತೆ ಡಾ. ಲೀಲಾ ಅವರು ಮುಂಬೈ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಹುಡುಕಿ, ಜೆರಾಕ್ಸ್‌ ಮಾಡಿಸಿ ನನಗೆ ಕಳಿಸಿದರು. ಆ ಬಗ್ಗೆ ಡಾ. ಲೀಲಾಗೆ ಋಣಿ.
ನಾಟಕದ ಸಂಪಾದಕರ ಪ್ರಕಾರ, ನಾಟಕ ಕರ್ತೃ ಗಂಗಾಧರನು ಉಲ್ಲೇಖಿಸಿದ ಸಮಕಾಲೀನ ಘಟನೆಗಳು, ಅದರಲ್ಲಿ ಬರುವ ವ್ಯಕ್ತಿಗಳೆಲ್ಲ ಐತಿಹಾಸಿಕವಾಗಿ ಸಮರ್ಪಕವಾಗಿವೆ. ಆಗ ಗುಜರಾತಿನಲ್ಲಿ ಮುಸ್ಲಿಂರ ಮೇಲೆ ಆಡಳಿತ (ಆಕ್ರಮಣ) ಆಗಿತ್ತು. ಅಹಮ್ಮದಾಬಾದ್ ರೂಪಗೊಂಡು ಸುಲ್ತಾನ ಮಹಮ್ಮದ್ ಶಹನು ಆಳುತ್ತಿದ್ದ. ಆದರೆ ಆ ಪ್ರದೇಶದ ಚಿಕ್ಕ ದೊಡ್ಡ ಸಂಸ್ಥಾನಗಳು ಅಸ್ತಿತ್ವಕ್ಕಾಗಿ ಹೋರಾಡುತ್ತಾ ಇದ್ದವು. ಕೆಲ ಬಾರಿ ಸುಲ್ತಾನನ ಆಕ್ರಮಣಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯೂ ಆಗಿವೆ. ಸ್ಥಳೀಯ ಇತಿಹಾಸದ ಜೊತೆಗೆ ಭೂಗೋಳ, ಪ್ರಾಕೃತಿಕ ಸ್ವರೂಪ, ಸಾಮಾಜಿಕ, ಆಚರಣೆಗಳ ಮೇಲೂ ‘ಗಂಗದಾಸ ಪ್ರತಾಪ ವಿಲಾಸ ಬೆಳಕು ಚೆಲ್ಲುತ್ತದೆ. ಕರ್ನಾಟಕಕ್ಕೆ ಸಂಬಂಧಪಟ್ಟ ಅಂಶಗಳನ್ನು ಮಾತ್ರ ಇಲ್ಲಿ ಎತ್ತಿಕೊಂಡಿದೆ.
ಒಂಬತ್ತು ಅಂಕಗಳ ಗಂಗದಾಸ ಪ್ರತಾಪ ವಿಲಾಸ ನಾಟಕದಲ್ಲಿ ನಡು ನಡುವೆ ಪುಷ್ಟಗಳು ನಷ್ಟವಾಗಿವೆ. ತಾಡಯೋಲೆಯ ಲಿಪಿ, ೧೬ನೇ ಶತಮಾನದಲ್ಲಿ ಗುಜರಾತ್‌ನಲ್ಲಿ ಪ್ರಚಲಿತವಿದ್ದ ದೇವನಾಗರಿ ಸಂಸ್ಕೃತ ನಾಟಕ ರಚನೆಯ ಯಾವತ್ತೂ ಲಕ್ಷಣಗಳನ್ನು ಹೊಂದಿದ್ದು ಭಾಷೆ ಸರಳವಾಗಿದೆ. ಸೂತ್ರಧಾರನ ಪ್ರವೇಶದ ಬಳಿಕ ನಾಟಕಕರ್ತೃ ಗಂಗಾಧರನು ಟೀಂ ಜೊತೆಗೆ ತನ್ನನ್ನು ಪರಿಚಯಿಸುವುದರ ಜೊತೆಗೆ ರಂಗದ ಮೇಲೂ ಬರುವಂತೆ ನೋಡಿಕೊಳ್ಳುತ್ತಾನೆ. ಅವನ ಹೇಳಿಕೆಯ ಪ್ರಕಾರ ಪ್ರತಾಪದೇವರಾಯನು (ಇಮ್ಮಡಿದೇವರಾಯ) ಗತಿಸಿದ ಬಳಿಕ ಅವನ ಮಗ ಮಲ್ಲಿಕಾರ್ಜುನನು (೧೪೪೬-೬೫) ಪಟ್ಟಕ್ಕೆ ಬರುತ್ತಾನೆ. ಆತನು ಬಿದರದ (ದಕ್ಷಿಣ ಸುರತ್ರಾಣ) ಸುಲ್ತಾನ ಮತ್ತು ಓರಿಸ್ಸಾದ ಗಜಪತಿಯನ್ನು ಸೋಲಿಸುತ್ತಾನೆ. ಒಮ್ಮೆ ಓಲಗದಲ್ಲಿ ಮಲ್ಲಿಕಾರ್ಜುನನು ‘ತನ್ನ ತಂದೆಯ ಕಾಲದಲ್ಲಿ ಪ್ರಸಿದ್ಧನಾಗಿದ್ದ ಕವಿಗಂಗಾಧರನು ಎಲ್ಲಿದ್ದಾನೆ? ಎಂದು ಕೇಳಿದಾಗ, ಇಲ್ಲಿಯ ಓಲಗದಲ್ಲಿ ಬಿರುದು, ಬಾವಲಿ, ಧನಕನಕಾದಿಗಳ ಮನ್ನಣೆ ಪಡೆದು, ಇತರೆ ಕವಿಗಳನ್ನು ಸೋಲಿಸುವ ಉದ್ದೇಶದಿಂದ ದೇವರಾಯನ ಅನುಮತಿ ಪಡೆದೇ ಹೊರಟ ಸಾಹಿತ್ಯ ದಿಗ್ವಿಜಯಕ್ಕೆ.
ದಿವ್ಯರತ್ನರಚಿತ ಕುಂಡಲ ಕಟಕ ಹಾರ ಕನಕದಂಡ ಗಂಡಭೇರುಂಡ ಬಿರುದಾಂಕಿತ ಅರಸನ ಅಂಕಿತವಿದ್ದ ತೊಡರಿನಿಂದ ಭೂಷಿತನಾಗಿದ್ದ. ಅದರಲ್ಲಿ ತೋಡರದಲ್ಲಿ ‘ರಾಜಕವಿ ಪುತ್ತಲಾಂಕಿತ ಬಿರುದು ಬೇರೆ ಇತ್ತಂತೆ! ಇದನ್ನು ಕೊಡಮಾಡಿದ ಸನ್ಮಾನವನ್ನು ಪಡೆದೇ ವಿದ್ಯಾಬಲದ ದಿಗ್ವಿಜಯಕ್ಕಾಗಿ ಹೊರಟನೆಂದು ಕೇಳಿದ್ದೆ. ಈಗ ಆತ ಎಲ್ಲಿದ್ದಾನೆ? ಎಂದು ಅರಸು ಕುತೂಹಲದಿಂದ ವಿಚಾರಿಸಿ ಕೊಂಡಾಗುತ್ತರದ ಕಡೆಯಿಂದ ಬಂದು ಆ ಸಭೆಯಲ್ಲಿದ್ದ ವೈತಾಲಿಕನೋರ್ವನು ಗಂಗಾಧರನ ಆ ಮುಂದಿನ ಸಾಹಸ ನಿವೇದಿಸುತ್ತಾನೆ.
ದ್ವಾರಕಾನಗರಿಗೆ ಹೋಗಿ ಅಹಮ್ಮದಾಬಾದನಗರದಲ್ಲಿ ಗುರ್ಜರ ಸುರತ್ರಾಣನ ಮಹಾದ್ವಾರದಲ್ಲಿ ಬಿರುದು ತೊಡರೂ ಇದ್ದ ಎಡಗಾಲನ್ನು ಮುಂದಿಟ್ಟು ಹೋಗಿ ಸಭಾಕೋವಿದರನ್ನೆಲ್ಲ ತನ್ನ ವಿದ್ವತ್ತೆಯಿಂದ ಮೂಕರನ್ನಾಗಿ ಅಲ್ಲಿ ಆರು ತಿಂಗಳು ಇದ್ದು ಪಾವಾಚಲದ ಚಂಪಕನಗರದ ಗಂಗದಾಸ ಭೂಪತಿಯನ್ನು ಕಾಣಲು ಬಂದೆ ಎಂದು ಹೇಳಿಕೊಳ್ಳುತ್ತಾನೆ. ಆತನ ಪಾಂಡಿತ್ಯದಿಂದ ಪ್ರಭಾವತಿನಾಗಿ ಅರಸನು ಅವನನ್ನು ಬಗೆಬಗೆಯಲ್ಲಿ ಸತ್ಕರಿಸುತ್ತಾನೆ. ಬಳಿಕ ತಾನು (ಸೋಲಿಸಿದ ಸುಲ್ತಾನನ ದುಷ್ಕೃತ್ಯವನ್ನು) ಹಿಮ್ಮೆಟ್ಟಿಸಿದ ಸುಲ್ತಾನನ ಬಗ್ಗೆ ಆ ವಿಜಯೋತ್ಸವದ ಬಗ್ಗೆ ಒಂದು ನಾಟಕ ಬರೆ! ಎಂದು ಕವಿ ಗಂಗಾಧರನಿಗೆ ಹೇಳುತ್ತಾನೆ. ಆ ಪ್ರಕಾರ ಗಂಗಾಧರನು ‘ಗಂಗದಾಸ ಪ್ರತಾಪ ವಿಳಾಸವೆಂಬ ನಾಟಕವನ್ನೂ ಬರೆಯುತ್ತಾನೆ. ಆದರೆ ಆ ನಾಟಕದ ಅಭಿನಯವನ್ನು ಏರ್ಪಡಿಸುವುದು ಹೇಗೆ? ಎಂದು ಅರಸನಿಗೆ ಸಮಸ್ಯೆ! ತಿರುಗಿ ಕವಿ ಗಂಗಾಧರನೇ ಸಹಾಯಕ್ಕೆ ಬರುತ್ತಾನೆ. ತನ್ನ ತಾಯ್ನಾಡು ಕರ್ಣಾಟಕದಿಂದ ತರಿಸಿದ ತಂಡ / ಟೀಮ್ ಜೊತೆಗೆ ಈ ನಾಟಕವನ್ನು ರಂಗದ ಮೇಲೆ ತರುತ್ತಾನೆ. ತನ್ನ ಹೆಚ್ಚಿನ ಸುದೈವದಿಂದ ದಸರಾ ಮಹೋತ್ಸವ (‘ಮಹಾಕಾಲೀ ಮಹಾ ಮಹೋತ್ಸವ) ಸಂದರ್ಭದಲ್ಲಿ ಈ ನಾಟಕದ ಪ್ರದರ್ಶನವಾಗುತ್ತದೆ ಎಂದು ಹೇಳಿ ರಂಗದಿಂದ ನೇಪಥ್ಯಕ್ಕೆ ಹೊರಡುವ ದೃಶ್ಯವನ್ನು ಸಂಯೋಜಿಸಿದ್ದಾನೆ. ತನ್ನ ಯಶಸ್ಸಿನ ಬಗ್ಗೆ ಮಲ್ಲಿಕಾರ್ಜುನ ದೊರೆಗೆ ಅರುಹಿದ ವೈತಾಲಿಕನ ವಿವರಣೆಯಿಂದ ಆ ಅರಸನು ಸಂತುಷ್ಟನಾಗಿ ಯೋಗ್ಯ ರೀತಿಯಿಂದ ಆತನನ್ನು ಸನ್ಮಾನಿಸಿದ ವಿಚಾರವನ್ನು ಉಲ್ಲೇಖಿಸಲು ಗಂಗಾಧರನು ಮರೆತಿಲ್ಲ ‘ಸಾಧು ಕಥಿತಂ ! ಅಸ್ಮತ್ ಚಿಂತಾ ದೂರೀಕೃತಾ ಎಂದು ಮಲ್ಲಿಕಾರ್ಜುನ ಹೇಳಿದನಂತೆ. ಒಳ್ಳೇ ಮಾತು ಹೇಳಿದ್ದೆ. ನಮ್ಮ ಚಿಂತೆ ದೂರ ಆಯಿತು.
ಈ ನಾಟಕಕ್ಕೆ ಗಂಗದಾಸ ಪ್ರತಾಪ ವಿಲಾಸವೆಂದು ಕರೆಯಲು ಕಾರಣ ಕವಿಯ ಆಶ್ರಯದಾತ ಈ ಅರಸನ ಗಂಗದಾಸನ, ರಾಜಮಹಿಷಿಯ ಹೆಸರು ಪ್ರತಾಪದೇವಿ. ನಾಟಕದಲ್ಲಿ ಅರಸ-ಅರಸಿಯರ ಪ್ರಣಯ ಕಲಹ, ವಿದೂಷಕನ ಹಾಸ್ಯ, ಅರಸನ ಶೌರ್ಯ, ಸೋತವರ ಕರುಣ ಇತ್ಯಾದಿ ನವರಸಗಳನ್ನು ತರಲು ಕವಿಯು ಶ್ರಮಿಸಿದ್ದಾನೆ.
ಸುಲ್ತಾನನೊಂದಿಗೆ ಯುದ್ಧ ಸಂಭವಿಸಲು ಕಾರಣ ಗುಜರಾತನ್ನು ಆಳುತ್ತಿರುವ ಈ ಅಹಮ್ಮದನ ಮಗ ಮಹಮ್ಮದನು ಗಂಗದಾಸನಿಗೆ ‘ಮಗಳನ್ನು ಕೊಟ್ಟು ಮದುವೆ ಮಾಡು ಎಂದು ಈಗಾಗಲೇ ಆ ರೀತಿ ಮಗಳಂದಿರನ್ನು ಕೊಟ್ಟು ತಮ್ಮ ತಲೆ ಮತ್ತು ರಾಜ್ಯ ಉಳಿಸಿಕೊಂಡ ನಾನು ಮತ್ತು ವೀರಮ ಎಂಬ ತುಂಡರಸರ ಮುಖಾಂತರ ಸಂದೇಶ ಕಳಿಸುತ್ತಾನೆ. ಇದರಿಂದ ಕೋಪಾವಿಷ್ಟನಾದ ಗಂಗದಾಸನು ಮ್ಲೇಚ್ಛರಿಗೆ ಹೊಟ್ಟೆಯ ಮಕ್ಕಳನ್ನು ಕೊಡಮಾಡಿದವರ ಜೊತೆ ಏನು ಮಾತುಕತೆ? ಎಂಬ ಸಂದೇಶವನ್ನು ಕಳಿಸುತ್ತಾನೆ. ಇದನ್ನು ಅವಮಾನವೆಂದು ಆ ಅರಸರು ಸುಲ್ತಾನನ ಬಳಿ ಹೇಳುತ್ತಾರೆ. ಸರಿ ಸುಲ್ತಾನನು ಗಡ್ಡ ನೀವಿಕೊಳ್ಳುತ್ತಲೆ ಶುದ್ಧ ಸಂಸ್ಕೃತದಲ್ಲಿ ಗಂಗದಾಸನಿಗೆ ಬುದ್ಧಿ ಕಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಚಂಪಾನೇರ ಅರಸನಾದ ಗಂಗದಾಸನ ವಿರುದ್ಧ ಸೈನ್ಯ ಕಳಿಸುತ್ತಾನೆ.
ಯುದ್ಧಕ್ಕೆ ಗಂಗದಾಸನು ಸಿದ್ಧನಾಗಿಯೇ ಇರುತ್ತಾನೆ. ಇದಕ್ಕೆ ಕಾರಣ ಮಾಳವದ ಸುಲ್ತಾನನು ಅಂದೆ ಮುಹಮ್ಮದ ಖಿಲ್‌ಜಿಯು, ಅಹಮ್ಮದಾಬಾದ ಸುಲ್ತಾನನ ಕಡುವೈರಿ! ಹೀಗಾಗಿ ಗಂಗದಾಸನಿಗೆ ಬೇಕಾದ ಎಲ್ಲ ಬೆಂಬಲ, ಸೈನ್ಯಸಹಿತ ಕೊಡಮಾಡಿರುತ್ತಾನೆ. ಕೊನೆಗೆ ಅಹಮ್ಮಬಾದ ಸುಲ್ತಾನನನ್ನು ಹಿಮ್ಮೆಟ್ಟಿಸುವಲ್ಲಿ ಗಂಗದಾಸನು ಯಶಸ್ವಿ ಆಗುತ್ತಾನೆ.
ಮೊದಲಲ್ಲಿ ಹೇಳಿದಂತೆ ಗುಜರಾತ್‌ನಲ್ಲಿ ಮುಸ್ಲಿಂ ಆಕ್ರಮಣವಾಗಿ ಅವರ ರಾಜ್ಯ ನೆಲೆಗೊಂಡ ಕಾಲದ ಈ ಘಟನೆಯನ್ನು ರೂಪಿಸಿದ ನಾಟಕ ವಿಶ್ವಸನೀಯ ಐತಿಹಾಸಿಕ ವಿವರಗಳನ್ನು ಒಳಗೊಂಡಿದೆ. ಕರ್ನಾಟಕದ ಮಟ್ಟಿಗೆ ವಿಜಯನಗರ ಕಾಲದ ನಾಟಕಕಾರ, ತನ್ನ ಹಿನ್ನೆಲೆಯ ಬಗ್ಗೆ ಅಭಿಮಾನದಿಂದ ಹೇಳಿಕೊಂಡದ್ದು. ತನ್ನ ತಾಯ್ನಾಡಿನ ಇಬ್ಬರು ಅರಸರನ್ನು ಸ್ಮರಿಸಿದ್ದೇ ಅಲ್ಲದೆ ಸಂಸ್ಕೃತದಲ್ಲಿ ಚೆನ್ನಾಗಿ ಅಭಿನಯಿಸಬಲ್ಲ ನಟ ನಟಿಯರ ತಂಡವನ್ನೂ ಕರ್ನಾಟಕದಿಂದ ಕರೆದೊಯ್ದು ಅಲ್ಲಿ ಮಹಾನವಮಿ ಹೊತ್ತಿಗೆ ಆ ನಾಟಕ ಮಾಡಿಸಿದ್ದು ವಿಶೇಷ. ಕರ್ನಾಟಕ-ಗುಜರಾತ್‌ನ ಸಾಂಸ್ಕೃತಿಕ ಸಂಬಂಧದ ಮೇಲೆ ಬೆಳಕು ಚೆಲ್ಲುವ ಈ ನಾಟಕ, ರಾಷ್ಟ್ರಕೂಟರ ಕಾಲದ ತ್ರಿವಿಕ್ರಮಭಟ್ಟನ ನಳಚಂಪು ಮತ್ತು ಚಾಲುಕ್ಯ ಮುಮ್ಮಡಿ ಸೋಮೇಶ್ವರನ ‘ಮಾನಸೋಲ್ಲಾಸದಲ್ಲಿ ಬರುವ ಹಲವಾರು ಸಾಮಾಜಿಕ ಜೀವನದ ನೋಟಗಳನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.
ನಾಟಕದ ಕೆಲವು ವೈಶಿಷ್ಟ್ಯಗಳು
೧)                 ಸುಲ್ತಾನ ಮಹಮ್ಮದನು ಅವನ ಬಂಟರೆಲ್ಲ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಪದ್ಯ ಹಾಡುತ್ತಾರೆ.
೨)                 ರಂಗಸಜ್ಜಿಕೆ ಅಪರೂಪದ್ದು. ಅದು ಕರ್ನಾಟಕದಿಂದ ಎರವಲು ಪಡೆದದ್ದೇ ಆದೆ ಗಂಗಾಧರ ಕವಿಯೇ ಅದರ ರಚನೆಯನ್ನು ಸೂಚಿಸಿದ್ದಾದರೆ, ಎರಡು ಸ್ತರಗಳಲ್ಲಿ ಅಭಿನಯ, ಸೀನು ಸಾಗಿದಂತೆ ತೋರುತ್ತದೆ. ಮೆರವಣಿಗೆ, ದೇವಸ್ಥಾನದಲ್ಲಿ ಪೂಜೆ ಒಂದೆಡೆ ಯುದ್ಧ ದೃಶ್ಯ-ಸೇನೆಗಳ ಸಾಗಾಟ ಅರಸರ ಒಡ್ಡೋಲಗ ಇನ್ನೊಂದೆಡೆ. ಎರಡು ಜೊತೆಗೆ ನಡೆದಿರುವಂತೆ ಅಟ್ಟಾಲಕ ಅಟ್ಟಣಿಗೆ ಅಥವಾ ರಂಗದ ಪಾರ್ಶ್ವದಲ್ಲಿ ದೇವಿಯ ಪೂಜೆ ವಿದೂಷಕ ಸರದಾರರ ಸಂಭಾಷಣೆ ಇತ್ಯಾದಿಗಳು ನಾಟಕದಲ್ಲಿ ಬರುತ್ತವೆ.
೩)                 ೧೫ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಂಸ್ಕೃತ ನಾಟಕವಾಡುವ ತಂಡಗಳು ಇದ್ದವು. ಬೇರೆ ರಾಜ್ಯಗಳ ಅರಸರ ಆಮಂತ್ರಣ ಬಂದರೆ ಅಲ್ಲಿ ಹೋಗಿ ಅಭಿನಯಿಸುವ ಪರಿಣತರು ಇದ್ದರು. ಸಂಸ್ಕೃತವು ಅಖಿಲ ಭಾರತ ಸಂಪರ್ಕ ಭಾಷೆಯಾಗಿದ್ದರಿಂದ ದೂರದ ನಾಡುಗಳಲ್ಲೂ ಅವರಿಗೆ ತೊಂದರೆ ಇರಲಿಲ್ಲ. ಎರಡನೆಯ ದೇವರಾಯನ ಕೃತಿಯೆಂದೇ ಖ್ಯಾತವಾದ ಸಂಸ್ಕೃತಗ್ರಂಥ ಮಹಾನಾಟಕ ಸುಧಾನಿಧಿ ರಂಗಸಜ್ಜಿಕೆ ಪರಿಕರಗಳ ಕುರಿತ ಕೃತಿಯಾಗಿದೆ. ನಾಟಕ ಪ್ರಕಾರವು ಸಂಸ್ಕೃತದಲ್ಲಿ ಉತ್ತಮ ಕಲಾ ಮಾಧ್ಯಮವಾಗಿ ಆ ಕಾಲದ ವಿಜಯನಗರದಲ್ಲಿ ಬೆಳೆದರೆ ಸಾಕು.
೪)                 ಕೊನೆಯಲ್ಲಿ ಕೀರ್ತಿ, ಅಪಕೀರ್ತಿಯರೆಂಬ ಇಬ್ಬರು ಬಂದು ಗಂಗದಾ ಮಹಮ್ಮದ ಸುಲ್ತಾನರ ಒಡನಾಡಿಗಳು ತಾವಿದ್ದು ಪರಸ್ಪರ ಪರಿಚಯ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.
೫)                 ಕರ್ನಾಟಕದ ವಿಶಿಷ್ಟ ವೇಷಭೂಷಣದಲ್ಲಿದ್ದ ನಾಟಕಕಾರನನ್ನು ಶೋತೃಗಳಿಗೆ ಪರಿಚಯಿಸಲಾಗಿದೆ. ಮುತ್ತಿನ ಹಾರ, ಬಳೆ, ಕಂಠಾಭರಣಗಳು, ಮಲ್ಲಿಗೆ ದಂಡೆಯಿಂದ ಅಲಂಕೃತ ಕೂಲದು ಕಸ್ತೂರಿ ತಿಲಕ ತಾಂಬೂಲರಂಜಿತ ಕೆಂದುಟಿ ಇವೆಲ್ಲ ಗುಜರಾಥಿಗಳಿಗೆ ಅಪರಿಚಿತವಿದ್ದವು.

ಆಧಾರಸೂಚಿ
೧.                           ಗಂಗದಾಸ - ಪ್ರತಾಪವಿಲಾಸ  ನಾಟಕಮ್, (ಸಂಸ್ಕೃತ ನಾಟಕ).
                              ಂ ಊisoಡಿiಛಿಚಿಟ ಠಿಟಚಿಥಿ bಥಿ ಉಚಿಟಿgಚಿಜhಚಿಡಿಚಿ, (ಇಜ) ಃhogiಟಚಿಟ ಎಚಿಥಿಚಿhಚಿಟಿಜ bhಚಿi sಚಿಟಿಜesಚಿಡಿಚಿ ಃಚಿಡಿoಜಚಿ ಔಡಿieಟಿಣಚಿಟ seಡಿies,೧೯೭೩.
೨.                           ಓತ್ತೇಯ ಭಾರತೀಯ ಭಾಷೆ - ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು : ಡಾ ವಿ. ಶಿವಾನಂದ, ಸಂಶೋಧನ (ಡಾ|| ಎಂ. ಚಿದಾನಂದ ಮೂರ್ತಿ ಗೌರವ ಸಂಪುಟ, (ಸಂ. ಲಕ್ಷ್ಮಣ ತೆಲಗಾವಿ) ಬೆಂಗಳೂರು ೧೯೯೧.
೩.                           ಂ ಅoಟಿಛಿise isoಡಿಥಿ oಜಿ ಏಚಿಡಿಟಿಚಿಣಚಿಞಚಿ, ಆಡಿ. Suಡಿಥಿಚಿಟಿಚಿಣh. ಗಿ. ಏಚಿmಚಿಣh, ಃಚಿಟಿgಚಿಟoಡಿe, ೪ನೇ ಮುದ್ರಣ, ೨೦೦೮.
೪.                           ಕನ್ನಡ ವಿಶ್ವಕೋಶ, ಸಂಪುಟ ೬, ಮೈಸೂರು, ೧೯೭೩.

? ೧೧೦, ‘ಶಶಿಕಿರಣ, ೧೮ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-೫೬೦೦೫೫.




No comments:

Post a Comment