Wednesday, March 12, 2014

ಇತಿಹಾಸ ಪರಂಪರೆ

ಶಾಸನಗಳು ದೇಶದ ಪರಂಪರೆಯ ಆಸ್ತಿ

                 




ಉಡುಪಿ: ಮಾ, 12: ಕರ್ನಾಟಕದ ಅತ್ಯಂತ ಪ್ರಾಚೀನ ಮೃಣ್ಮಯ ಮೂರ್ತಿಗಳ ಮಾತೃದೇವತಾ ಆರಾಧನಾ ಕೇಂದ್ರವಾಗಿರುವ ಉದ್ಯಾವರ, ಶಿಲ್ಪ ಕಲೆಯ ಉಗಮದ ಆರಂಭಿಕ ಕಲಾಕೇಂದ್ರ. ತುಳುನಾಡಿನ ಪ್ರಾಚೀನ ರಾಜಧಾನಿ. ಪ್ರಾಚೀನ ಶಾಸನ, ಶಿಲ್ಪಗಳ ಅಪರೂಪದ ಕೇಂದ್ರ. ಶಾಸನಗಳು, ಪ್ರಾಚೀನ ಚರಿತ್ರೆಯ ಅಮೂಲ್ಯ ಆಕರಗಳು ಮತ್ತು ದೇಶದ ಪರಂಪರೆಯ ಆಸ್ತಿ, ಎಂದು ಕರ್ನಾಟಕ ಇತಿಹಾಸ ಆಕಾದೆಮಿಯ ಕಾರ್ಯಕಾರಿ ಸದಸ್ಯ, ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ವಿದ್ವಾಂಸ ಪ್ರೊ.ಟಿ.ಮರುಗೇಶಿಯವರು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಉದ್ಯಾವರದ ವೀರಭದ್ರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿದ್ದ ಮಂಗಳೂರಿನ ಶ್ರೀಮಂತಿ ಬಾಯಿ ವಸ್ತುಸಂಗ್ರಹಾಲಯದ ಕ್ಯೂರೇಟರ್ ಶ್ರೀ ಶೇಜೇಶ್ವರ್ ನಾಯಕ್ ಮಾತನಾಡಿ, ಯುವಕರು ಕರಾವಳಿಯ ಪ್ರಾಚೀನ ನಿವೇಶನ ಮತ್ತು ಸ್ಮಾರಕಗಳನ್ನು ಗುರುತಿಸಿ, ಇಲಾಖೆಗೆ ಮಾಹಿತಿ ನೀಡಿದರೆ ಸರ್ಕಾರದ ವತಿಯಿಂದ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಮ್.ಎಸ್. ಕಾಲೇಜಿನ ಪ್ರಾಶುಂಪಾಲರಾದ ಪ್ರೊ. ನಾರಾಯಣನ್ ಕೆಯವರು ನಾಲ್ಕು ಗೋಡೆಗಳ ಮದ್ಯೆ ಪಡೆವ ಸಾಂಪ್ರದಾಯಿಕ ಶಿಕ್ಷಣಕ್ಕಿಂತ, ಗೋಡೆಗಳಾಚೆ ಪಡೆವ ಪ್ರಾಯೋಗಿಕ ಶಿಕ್ಷಣ ಅತ್ಯಂತ ಮಹತ್ವದ್ದು, ಇಂತಹ ಅವಕಾಶ ಒದಗಿಸಿದ ಪ್ರಾಚ್ಯವಸ್ತು ಇಲಾಖೆ ಅಭಿನಂದನಾರ್ಹ ಎಂದು ತಿಳಿಸಿದರು. ಚರಿತ್ರೆ ವಿಭಾಗ ಮುಖ್ಯಸ್ಥರಾದ ಪ್ರೊ. ರಾಬರ್ಟ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಬಳಿಕ ಪ್ರೊ. ಟಿ. ಮುರುಗೇಶಿಯವರು ವಿದ್ಯಾರ್ಥಿಗಳಿಗೆ, ಶಾಸನಗಳನ್ನು ಹೇಗೆ ಪ್ರತಿಮಾಡಲಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.

12/03/2014                     ಪ್ರಾಂಶುಪಾಲರು
ಸ್ಥಳ:  ಉದ್ಯಾವರ           ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ

No comments:

Post a Comment