Wednesday, October 8, 2014

ಪ್ರೊ.ರಾಮಭಟ್ಟ ನಿಧನಕ್ಕೆ ಇತಿಹಾಸ ಅಕಾಡೆಮಿ ಸಂತಾಪ



                                                              ಪ್ರೊ.ರಾಮಭಟ್ಟ


ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರರೂ, ನಾಡಿನ ಪ್ರಸಿದ್ಧ ಇತಿಹಾಸ ಸಂಶೋಧಕರಲ್ಲೊಬ್ಬರಾಗಿದ್ದ ಪ್ರೊ.ಬಿ.ಎಸ್.ರಾಮ ಭಟ್ಟ ಅವರ ನಿಧನಕ್ಕೆ ಕರ್ನಾಟಕ ಇತಿಹಾಸ ಅಕಾಡೆಮಿಯ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಡಾ.ಬಾಲಕೃಷ್ಣ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
 ಅಕಾಡೆಮಿಯ ಆಜೀವ ಸದಸ್ಯರಾಗಿದ್ದ ದಿವಂಗತರು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಮಹಾಸಂಸ್ಥಾನವು ನೀಡುವ “ಸಾಹಿತ್ತಯ ನಿಧಿ” ಪುರಸ್ಕಾರಕ್ಕೂ ಭಾಜನರಾಗಿದ್ದರು. ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಲೇಖನಗಳು, ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಅವರು ಶಿವಮೊಗ್ಗ ಇತಿಹಾಸ, ಸಂಸ್ಕøತಿ, ಪರಂಪರೆಗೆ ಸಂಬಂಧಿಸಿದ ‘ಸೀಮೊಗೆ’, ‘ಸೀಮೊಗೆಯ ಸಿರಿ’, ‘ಶಿವಶ್ರೀ’ ಮೊದಲಾದ ಕೃತಿಗಳನ್ನು ರಚಿಸಿ ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಭಟ್ಟರ ಕಾರ್ಯವನ್ನು ಸ್ಮರಿಸಿದ್ದಾರೆ.
ಶಿವಮೊಗ್ಗ ನಗರ, ಬಿದನೂರು, ನಗರ, ತೀರ್ಥಹಳ್ಳಿಯ ಅರಗ, ಹೀಗೆ ಹತ್ತು ಹಲವಾರು ಐತಿಹಾಸಕ ಸ್ಥಳಗಳ ಕುರಿತು ಇವರು ನಡೆಸಿದ ಅಧ್ಯಯನ, ಸಂಶೋಧನೆ ಸ್ಥಳೀಯ ಇತಿಹಾಸ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಕೈಪಿಡಿಯಾಗಿದೆ. ಇವರ ಅಗಲಿಕೆಯಿಂದ ಇತಿಹಾಸ ಕ್ಷೇತ್ರಕ್ಕೆ, ಉದಯೋನ್ಮುಖ ಇತಿಹಾಸ ಸಂಶೋಧಕರಿಗೆ ತುಂಬಲಾರದ ಹಾನಿಯಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಇವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ, ಅಭಿಮಾನಿ ಬಳಗಕ್ಕೆ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಡಾ.ಹೆಗಡೆ ಪ್ರಾರ್ಥಿಸಿದ್ದಾರೆ.

No comments:

Post a Comment