Tuesday, June 16, 2015

ಬೆಂಗಳೂರು ನಗರದ ಇನ್ನೊಂದು ಹೆಸರು `ಕಲ್ಯಾಣನಗರ

ಬೆಂಗಳೂರು ನಗರದ ಇನ್ನೊಂದು ಹೆಸರು `ಕಲ್ಯಾಣನಗರಇದರ ಉಲ್ಲೇಖ ಇರುವ ಬೆಂಗಳೂರು ನಗರೇಶ್ವರ ದೇವಾಲಯದ ಶಿಲಾಶಾಸನ
ಡಾ. ಬಿ. ನಂಜುಂಡಸ್ವಾಮಿ
ಬೆಂಗಳೂರು ನಗರಕ್ಕೆ ಇನ್ನೊಂದು ಹೆಸರು `ಕಲ್ಯಾಣನಗರವೆಂದು ಈ ಹೆಸರನ್ನು ಈ ಹಿಂದೆ ಬೆಂಗಳೂರು ನಗರದಲ್ಲಿ ಮುದ್ರಣವಾದ ಹತ್ತಾರು ಗ್ರಂಥಗಳ ಮುಖಪುಟದಲ್ಲಿ ಮುದ್ರಿಸಿದ್ದಾರೆ. ಈ ಹಿಂದೆ ಬೆಂಗಳೂರು ನಗರದಲ್ಲಿ 64 ವೀರಶೈವ ಮಠಗಳು ಇದ್ದು, ಆ ಎಲ್ಲಾ ಮಠಗಳು ಜ್ಞಾನದಾಸೋಹ-ಅನ್ನದಾಸೋಹವನ್ನು ನಡೆಸುತ್ತಾ ಇದ್ದವು. ಈ ಬಗ್ಗೆ ಡಾ. ಬಿ.ಸಿ. ವೀರಪ್ಪನವರು ಬೆಂಗಳೂರು ನಗರ ವೀರಶೈವ ಮಠಗಳು ಎಂಬ ಮಹಾ ಪ್ರಬಂಧವನ್ನು ರಚಿಸಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿನಿಂದ 2001ರಲ್ಲಿ ಪ್ರಕಟವಾಗಿದೆ.
ಬೆಂಗಳೂರು ನಗರ್ತಪೇಟೆಯಲ್ಲಿ ಶ್ರೀ ಅನ್ನಪೂರ್ಣಾಂಬ ಸಮೇತ ಶ್ರೀನಗರೇಶ್ವರಸ್ವಾಮಿ ದೇವಾಲಯವನ್ನು ಬೆಂಗಳೂರಿನ ಸಹಸ್ರಮತಿ ಗೋತ್ರೋದ್ಭವರಾದ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತಸಮಾಜ ಬಾಂಧವರು ಜನಾನುರಾಗಿಯೂ, ಧನಿಕರೂ ಆಗಿದ್ದ ಶ್ರೀ ಸಂಪನ್ನಯವರ ನಂಜುಂಡಪ್ಪನವರ ಮುಂದಾಳತ್ವದಲ್ಲಿ ಕಟ್ಟಿಸಿ ಅದರಲ್ಲಿ ಶೈವಾಗಮ ಶಾಸ್ತ್ರರೀತ್ಯ ಪಂಚಾನ್ಹಿಕ ಪೂರ್ವಕವಾಗಿ ಶ್ರೀ ನಗರೇಶ್ವಾಮಿ, ಶ್ರೀ ಅನ್ನಪೂರ್ಣಾಂಬ ದೇವಿ, ಶ್ರೀ ಮಹಾಗಣಪತಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಷಣ್ಮುಖಸ್ವಾಮಿ, ಶ್ರೀ ವೆಂಕಟೇಶ್ವರಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಆಂಜನೇಯಸ್ವಾಮಿ ಶ್ರೀ ದುರ್ಗಾದೇವಿ, ಶ್ರೀ ಸೂರ್ಯನಾರಾಯಣಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಆಂಜನೇಯಸ್ವಾಮಿ, ಶ್ರೀ ದುರ್ಗಾದೇವಿ, ಶ್ರೀ ಸೂರ್ಯನಾರಾಯಣಸ್ವಾಮಿ, ಶ್ರೀ ಕಾಲಭೈರವೇಶ್ವರ ಸ್ವಾಮಿ ಮುಂತಾದ ದೇವತಾ ವಿಗ್ರಹಗಳನ್ನು ಶಾಲಿವಾಹನ ಶಕ ಶ್ರೀ ಸ್ವಭಾನುನಾಮ ಸಂವತ್ಸರದ ಫಾಲ್ಗುಣ ಬಹುಳ ದ್ವಿತೀಯ ಹಸ್ತ ನಕ್ಷತ್ರ ಗುರುವಾರ ಮಿಥುನ ಲಗ್ನದಲ್ಲಿ 13-3-1884ರಂದು ಪ್ರತಿಷ್ಠೆ ಮಾಡಿಸಲಾಯಿತು. ಈ ವಿಶೇಷ ದೇವಾಲಯದಲ್ಲಿ ಇರುವ ದೇವಾಲಯ ಪ್ರತಿಷ್ಠಾ ಮುಹೂರ್ತದ ನಿಶ್ಚಿತ ಪ್ರತಿಯಿಂದ ತಿಳಿದುಬಂದದ್ದು. ಈ ವಿಷಯವನ್ನು ಸ್ಪಷ್ಟ ಮಾಡುವಂತಹ ಶಿಲಾಶಾಸನ ದೇವಾಲಯ ಮುಖಮಂಟಪದ ಮಧ್ಯದ ಶಿಲಾ ತೊಲೆಯ ಮೇಲೆ ಕೆತ್ತಿರುವ ಶಿಲಾಶಾಸನ, ಆರು ಸಾಲು ಇದ್ದು, ಸಂಸ್ಕøತ ಭಾಷೆಯ ಶಿಲಾಶಾಸನವನ್ನು ಕನ್ನಡ ಅಕ್ಷರದಲ್ಲಿ ಖಂಡರಿಸಲಾಗಿದೆ. ಆರು ಸಾಲಿನ ಈ ಶಾಸನದಲ್ಲಿ ಸ್ಪಷ್ಟವಾಗಿ ಬೆಂಗಳೂರು ನಗರವನ್ನು `ಕಲ್ಯಾಣನಗರೀಎಂದು ಕರೆಯಲಾಗಿದೆ.
               ಮಹಾಮಾನವತಾವಾದಿ ವಿಶ್ವಜ್ಯೋತಿ ಬಸವೇಶ್ವರರು ಮಹಾಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು `ಕಲ್ಯಾಣನಗರದಲ್ಲಿ. ಅನುಭವ ಮಂಟಪ, ಮಹಾಮನೆ ಎಲ್ಲಾ ಇದ್ದದ್ದು ಅಲ್ಲೇ. ಮುಂದೆ ಕಲ್ಯಾಣ ಕ್ರಾಂತಿಯ ನಂತರ ಶರಣರು ಚದುರಿದರು. ಮಹಾಜನತೆಯ ಮನಸ್ಸಿನಲ್ಲಿ `ಕಲ್ಯಾಣನಗರದ ಕಲ್ಪನೆ ಯಥಾವತ್ತಾಗಿ ಇತ್ತು. ಬೆಂಗಳೂರು ನಗರದಲ್ಲಿ ಯಲಹಂಕ-ಮಾಗಡಿ ಗೌಡ ದೊರೆಗಳ ಆಡಳಿತದ ಸಮಯದಲ್ಲಿ ಬಸವಣ್ಣನವರ ಕಲ್ಪನೆಯ ವೀರಶೈವ ಮಠಗಳು ಅದ್ಭುತವಾಗಿ ತಮ್ಮ ಸೇವಾ ಮಣಿಹವನ್ನು ಸಲ್ಲಿಸಿದರು. ಈ ಎಲ್ಲಾ ವಿಷಯವನ್ನು ಶಾಂತವೀರ ದೇಶೀಕ ವಿರಚಿತ ``ಶಿವಲಿಂಗ ಚಾರಿತ್ರ’’ದಲ್ಲಿ ಸ್ಪಷ್ಟವಾದ ಮಾಹಿತಿ ಇದೆ. ಈ ಲಘು ಕೃತಿ ಆಸ್ಥಾನ ವಿದ್ವಾನ್ ಶ್ರೀ ಎಂ.ಜಿ. ನಂಜುಂಡಾರಾಧ್ಯರು ಸಂಪಾದಿಸಿದರು. ಲಿಂ. ಡಾ. ಜ.ಚ.ನಿ. ಸನ್ನಿಧಿಯವರು ಶ್ರೀಶೈಲ ಜಗದ್ಗುರು ನಿಡುಮಾಮಿಡಿ ಗ್ರಂಥ ಭಂಡಾರದಿಂದ 1966ರಲ್ಲಿ ಪ್ರಕಟವಾಗಿದೆ. ಈ ಪುಸ್ತಕವನ್ನು ಕುರಿತು ಶಾಂತವೀರ ದೇಶಿಕ ವಿರಚಿತ ``ಶಿವಲಿಂಗ ಚಾರಿತ್ರ’’ ಒಂದು ಪರಿಚಯ ಲೇಖನವನ್ನು ನಾನೇ ಬರೆದಿದ್ದು ``ರಾಜಾಪುರಶ್ರೀ’’ ಸಂಸ್ಮರಣ ಸಂಪುಟ 2006ರಲ್ಲಿ ಪ್ರಕಟವಾಗಿದ್ದು ಈ ಸಂಸ್ಮರಣ ಸಂಪುಟದ ಪ್ರಧಾನ ಸಂಪಾದಕರು ಪೆÇ್ರ. ಎಸ್. ಬಸವಾರಾಧ್ಯ. ಈ ಸಂಸ್ಮರಣ ಸಂಪುಟ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲ್ಲೂಕ್ ಶ್ರೀ ಮದ್ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದಿಂದ ಪ್ರಕಟವಾಗಿದೆ. ಅಂದಿನ ದಿನ ವಚನ ಸಾಹಿತ್ಯ ಸಂಗ್ರಹ, ವಾಚನದ ಬಗ್ಗೆ ವಿವರವಾದ ಮಾಹಿತಿ ಇದೆ. ಅರವತ್ನಾಲ್ಕು ಮಠಗಳ ವಿಶಾಲವಾದ ಕಾರ್ಯಕ್ಷೇತ್ರ ಬೆಂಗಳೂರು ಆದ್ದರಿಂದ ಭಕ್ತಜನ ಅಭಿಮಾನದಿಂದ ಬಸವಣ್ಣನವರ ಕಲ್ಯಾಣಪಟ್ಟಣದ ಹೆಸರನ್ನು ಬೆಂಗಳೂರಿಗೆ ಕೊಟ್ಟರು.
ಬೆಂಗಳೂರು ನಗರ್ತಪೇಟೆಯ ನಗರೇಶ್ವರ ದೇವಸ್ಥಾನದ ಮುಖಮಂಟಪದ ಶಿರೋಭಾಗದಲ್ಲಿರುವ ಶಿಲಾಶಾಸನದ ಪಾಠವನ್ನು ಯಥಾವತ್ತಾಗಿ ಕೊಡಲಾಗಿದೆ.
1             0 ಶ್ರೀ ನಗರೇಶ್ವರ ಪ್ರಸಂನ U
2             ಶ್ರೀಮತ್ಕಲಿಯುಗೆ ವೇದ ವಸು ಬ್ರಹ್ಮಾಬ್ಧಿ ಸಂಯಿತೇ ಶುದ್ಧೇ
3             ಸಂಜ್ಞಕೆ ಶಕೆ ಚತುರ್ವಭೋಯುಕ್ತ ವಸು ಚಂದ್ರಾತ್ಮಕೆ ಶುಭೆ ಶ್ರೀಮತ್ಕøಷ್ಣೇಂದ್ರ ಸತ್ಪುತ್ರ ಶ್ರೀ ಚಾಮರಾಟ್ಪ್ರಭು ಪಾಲಿ |
4             ತೈಃ ಸಹಸ್ರರುಷಿ ಸದ್ಗೋತ್ರ ಸಂಭವೈ ಸ್ಸತ್ಯವಾದಿಭಿಃ
5             ಚದ್ರವಿಡ ತಾಂಗತೈಃ ಧರ್ಮವಾರಿಣ ಹೇಮಪಾಲ ಶ್ಶಿರಿಯಾಳೇತಿ ಸಂಜ್ಞೆಯಾ ಪೂತಿಃ ದಶರಥಾದೈಶ್ಚ ರಾಜಭಾದ್ರಹುಮಾನಿತೈಃ
6             ಕಲ್ಯಾಣನಗರೀ ವಾಸ ನಗರಸ್ತೈಃ ಮಹಾಜನೈಃ
               ಶ್ರೀಮತಃ ಕಲುದೇವತಸ್ಯ ನಗರೇಶ್ವರೂ ಶಾಶ್ವತೀ
7             ಪ್ರತಿಷ್ಠಾವಾಸು ಅತಾರಿ ಐಶ್ವರೈಃ ಆ ಚಂದ್ರ ತಾರಕಂ
8             ಃಙ ಖಂಒಓಂಖಿಊ ಂಓಆ ಅಔ.   1884 ಂ.ಆ.
ಮೊದಲನೇ ಸಾಲಿನಲ್ಲಿ ಸೂರ್ಯ ಚಂದ್ರ ಇರುವವರೆಗೆ ಈ ಶಾಸನ ಇರಲಿ ಅನ್ನುವ ಉದ್ದೇಶದಿಂದ ಶಾಸನದ ಶಿರೋಭಾಗದಲ್ಲಿ ಕೆತ್ತಲಾಗಿದೆ. ನಗರ್ತರು ತಮ್ಮ ಇಷ್ಟದೈವವಾಗಿ ಸ್ವೀಕರಿಸಿರುವ ಶ್ರೀ ನಗರೇಶ್ವರನ ಶಾಸನದ ಅದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಲವನ್ನು ತಿಳಿಸಲು ಪ್ರಾಚೀನ ಭಾರತೀಯರು ಬಳಸುತ್ತಾ ಇದ್ದ ಪದ್ಧತಿಯಲ್ಲಿ ಹೇಳಲಾಗಿದೆ ವೇದ=4 ವಸು=8 ಬ್ರಹ್ಮ=9 ಅಬ್ಭಿ=4 4984 ಇದರಲ್ಲಿ 3101 ಕಳೆದರೆ ಕ್ರಿ.ಶ. 1883 ಆ ದಿನ ಅಷ್ಟಮೀ ತಿಥಿ, ಸೋಮವಾರ ಬಂದಿರುತ್ತದೆ. ನಮ್ಮನು ಆಳಿದ ಧರ್ಮಪ್ರಭು ಮುಮ್ಮಡಿ ಕೃಷ್ಣರಾಜ ಒಡೆಯರವರ ದತ್ತುಪುತ್ರ ಶ್ರೀ ಚಾಮರಾಜೇಂದ್ರ ಒಡೆಯರವರ ಆಳ್ವಿಕೆಯಲ್ಲಿ ಸಹಸ್ರ ಋಷಿಗಳ ದ್ಗೋತ್ರದಲ್ಲಿ ಉತ್ಪನ್ನರಾಗಿ ಸತ್ಯವಾದಿಳಾದ ಗರುಡನ ಉಪಾಸನೆಯಿಂದ ಪಡೆದ ಗರುತ್ಮಾನ್ ಎಂಬ ಉಜ್ವಲ ಬಿರುದಿನಿಂದ ಕೂಡಿದ ಅಯೋಧ್ಯಾನಗರದಿಂದ ಬಂದ ಪಂಚದ್ರವಿಡ ವರ್ಗಕ್ಕೆ ಸೇರಿದ ಧರ್ಮವಾರಿಧಿಯಿಂದ ಹೇಮಪಾಲ, ಶೆರಿಯಾ ಮುಂತಾದ ಪೂರ್ವಿಕರಿಂದ ಕೂಡಿದ ದಶರಥನು ಆದಿಯಾಗಿ ಉಳ್ಳ ರಾಜರುಗಳಿಂದ ಸನ್ಮಾನಿತರಾದ, ಕಲ್ಯಾಣನಗರದಲ್ಲಿ ವಾಸ ಮಾಡುತ್ತಿರುವ ನಗರಸ್ತ ಮಹಾಜನಗಳಿಂದ ಶ್ರೀಯುಕ್ತ ಕುಲದೇವನಾದ ನಗರೇಶ್ವರ ಶಾಶ್ವತವಾದ ದೇವಾಲಯವು ನಕ್ಷತ್ರ ಸಹಿತವಾದ ಚಂದ್ರ ಇರುವವರೆಗೆ ಇರಲೆಂದು ಪ್ರತಿಷ್ಠಾಪಿಸಲ್ಪಟ್ಟಿತು. ಕಡೆಯ ಸಾಲಿನಲ್ಲಿ ಶಾಸನವನ್ನು ಖಂಡರಿಸಿದ. ಃಙ ಖಂಒಂಓಂಖಿಊ ಂಓಆ ಅಔ 1884 ಂ.ಆ.
ದೇವಾಲಯದ ಉದ್ಘಾಟನೆ ಮುಂಚೆ ಶಾಸನವನ್ನು ಮುಖಮಂಟಪಕ್ಕೆ ಸೇರಿಸಲು ಮೊದಲೇ ಕೆತ್ತಿಸಿ ಕಟ್ಟಡದ ಜೊತೆ ಸೇರಿಸಿ ಕಟ್ಟಬೇಕಾಗಿರುವುದರಿಂದ ಶಾಸನವನ್ನು ಕೆತ್ತಿದ ಖಂಒಂಓಂಖಿಊ ಂಓಆ ಅಔಒPಂಓಙ ಅವರು ಇಂಗ್ಲೀಷ್ ತೇದಿಯನ್ನು ಸ್ವಲ್ಪ ಹೆಚ್ಚಿಗೆ ಮಾಡಿ ಕೆತ್ತಿದ್ದಾರೆ. 1880-1900ರ ಕಾಲಮಾನದ ಮೂರು ನಾಲ್ಕು ಶಾಸನಗಳನ್ನು ಗಮನಿಸಿದ್ದೇನೆ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಕಲ್ಯಾಣಿಯ ಮುಖಮಂಟಪದಲ್ಲಿ ಹಾಕಿಸಿರುವ ಶಿಲಾಶಾಸನ, ಬೆಂಗಳೂರು ಗುಬ್ಬಿ ತೋಟದಪ್ಪನವರ ಧರ್ಮಛತ್ರದಲ್ಲಿ ಹಾಕಿಸಿರುವ ಶಿಲಾಶಾಸನ ಗುಬ್ಬಿ ತೋಟದಪ್ಪನವರು ಗೌರಿಬಿದನೂರು ತಾಲ್ಲೂಕ್ ಹಲಕೂರು ಸೋಮೇಶ್ವರಸ್ವಾಮಿ ಶಿವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಹಾಕಿಸಿರುವ ಶಾಸನಗಳನ್ನು ಯುವ ವಿದ್ವಾಂಸರು ಅಧ್ಯಯನ ಮಾಡಬೇಕು. ಈ ಶಾಸನಗಳು ಅವುಗಳ ಅಕ್ಷರ ವಿನ್ಯಾಸ ಎಲ್ಲವನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಈ ಶಾಸನಗಳು ಕಳೆದ ಶತಮಾನದ ಕಡೇ ಘಟ್ಟದಲ್ಲಿ ಹಾಕಿಸಿದವು.
ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಸಂಗ್ರಹಿಸಲ್ಪಟ್ಟಿರುವ `ಏಕೋತ್ತರ ಶತಸ್ಥಲದ ಹಸ್ತಪ್ರತಿಯ ಕ್ರಮಸಂಖ್ಯೆ 1156 (196 ಗರಿ-276 ಗರ). ಈ ಹಸ್ತಪ್ರತಿಯ ಅಂತ್ಯದಲ್ಲಿ ಈ ಪುಷ್ಟಿಕೆ ಬರೆಯಲ್ಪಟ್ಟಿದೆ.
ಮಹಾಮಹತ್ತಿಗೂ ಶ್ರೀ ಮಹಾಮೇರುವಿನ ದಕ್ಷಿಣ ದಿಗ್ಭಾಗದಲ್ಲಿ ವೊಪ್ಪುತಿರ್ದ ಕಲ್ಯಾಣ ಪಟ್ಟಣದ [ಹೋ]ಳಿನ ಹಿರಿಯ ಹಂಪಯ್ಯ ಅಯ್ಯನವರು ಚಿಕ್ಕಹಂಪಯ್ಯ ಅಯ್ಯನವರು ಗುಮ್ಮಳಾಪುರದ ಚೆನ್ನಮಲ್ಲಿಕಾರ್ಜುನ ದೇವರ ಶಿಷ್ಯರು ವಿರಕ್ತ ಜೆಡೆ ಸಿದ್ಧಲಿಂಗದೇವರು ಅಯ್ಯನವರಿಗೆ ಬರೆಯಿಸಿ ಭಕ್ತಿ ಮಾಡಿದ ``ಏಕೋತ್ತರ ಶತಸ್ಥಲ’’ ಸಮಾಪ್ತಿ ಮಂಗಳ ಮಹಾ ಸಾಧಾರಣ ಸಂವತ್ಸರದ ಆಷಾಢ ಬಹುಳ 10 ಬೃಹಸ್ಪತಿವಾರ ವಿಷಕಂಠ ಸೆಟ್ಟಿಮಗ ಕೆಂಪನು ಬರದು... ಇಲ್ಲಿ ಗಮನಿಸಬೇಕಾದ್ದು ಶ್ರೀ ಮಹಾಮೇರುವಿನ ದಕ್ಷಿಣ ದಿಗ್ಭಾದಲ್ಲಿ ವೊಪ್ಪುತಿರ್ದ ಕಲ್ಯಾಣ ಪಟ್ಟಣ ಅಂದರೆ ಇಂದಿನ ಬೆಂಗಳೂರು ಅಂದಿನ ದಿನವೆ ಜನಕ್ಕೆ ಉತ್ತರದ ಕಲ್ಯಾಣಪಟ್ಟಣ ಬೇರೆ ದಕ್ಷಿಣದ ಕಲ್ಯಾಣಪಟ್ಟಣ ಬೇರೆ ಎಂಬುದು ತಿಳಿದಿತ್ತು. ಹೋಳಿನ ಹಂಪಣ್ಣನ ಕಾಲವನ್ನು ಲಿಂ. ಎಸ್. ಶಿವಣ್ಣನವರು ಸುಮಾರು 1620ರ ವರಗೆ ಜೀವಿಸಿರಬಹುದು ಎಂದು ಊಹಿಸಿರುವುದರಿಂದ ಈ ಪೂರ್ವೋಕ್ತಿ ಕಾಲ ಸುಮಾರು ಕ್ರಿ.ಶ. 1600ರ ಕಾಲಮಾನದ್ದು ಇರಬಹುದು. ಎಸ್. ಶಿವಣ್ಣನವರ ಸಂಶೋಧನಾ ಲೇಖನಗಳ ಸಂಪುಟ ಕನ್ನಡ ಸಾಹಿತ್ಯ ಪರಿಷತ್ತಿನಿಂದ 2004ರಲ್ಲಿ ಪ್ರಕಟವಾಗಿದ್ದು ಹೆಚ್ಚಿನ ಮಾಹಿತಿಗೆ ಇದೇ ಪುಸ್ತಕದ ``ಹೋಳಿನ ಹಂಪಣ್ಣ-ಒಂದು ಟಿಪ್ಪಣಿ’’ ಲೇಖನವನ್ನು ಗಮನಿಸಬೇಕಾಗಿ ವಿನಂತಿ. ಬೆಂಗಳೂರಿಗೆ ಗುಮ್ಮಳಾಪುರ ಬಹಳ ಹತ್ತಿರ ಇರುವಂತಹದು.
ಬೆಳಗಾಂ ನಗರದ ಲಿಂಗಾಯತ ಸಂಶೋಧನಾ ಸಂಸ್ಥೆಯು ನಾಗನೂರು ರುದ್ರಾಕ್ಷಿ ಮಠದ ಆಶ್ರಯದಲ್ಲಿ ಬೆಳೆಯುತ್ತಾ ಇದೆ. ಈ ಸಂಸ್ಥೆಯ ಸಂಗ್ರಹದಲ್ಲಿ ಇರುವ ಹಸ್ತಪ್ರತಿ ಸಂಖ್ಯೆ 189/3 ಪರಮಾರ್ಥಗೀತೆ ಕಾಗದದ ಹಸ್ತಪ್ರತಿ ಪುಟ 195ರಲ್ಲಿ ಈ ಪುಷ್ತಿಕೆ ಲಿಖಿಸಲ್ಪಟ್ಟಿದೆ.
ಅಂತ್ಯದಲ್ಲಿ : ಗತಿ 11ಕ್ಕಂ 121ಕ್ಕಂ ಚರಣ 1469ಕ್ಕಂ ಮಂಗಳ ಮತ್ತು ಇತಿ ಶ್ರೀಮದ್ಬ್ರಹಾನಂದ ಯೋಗೀಂದ್ರ ಪ್ರಸಾದ ಪರಿಲಬ್ಧ ಬ್ರಹ್ಮ ವಿದ್ಯಾ ವೈಶದ್ಯ ವಿದ್ಯೋತಮಾನ ಶ್ರೀ ಶಂಕರಾನಂದ ಸೇವಾಸುಮದಿಗತ ಶಿವಯೋಗಭೋಗಾ ಶ್ರೀಮತ್ಕಲ್ಯಾಣನಗರ ಸಿದ್ಧಾಂತ ಸುಬ್ರಮಣ್ಯ ಶಿವಯೋಗಿ ಪ್ರಸೀತಮಾದ ಪರಮಾರ್ಥಗೀತಾ ಸಮಾಪ್ತಂ.
ಈ ಹಸ್ತಪ್ರತಿ ಬೆಂಗಳೂರು ನಗರದ್ದು ಈ ಕೃತಿಯ ಪ್ರಾರಂಭದಲ್ಲಿ ಸರ್ಪಭೂಷಣ ಶಿವಯೋಗಿನೇ ನಮಃ ಎಂದಿದೆ. ಅಂದರೆ ಈ ಹಸ್ತಪ್ರತಿ ಸರ್ಪಭೂಷಣ ಶಿವಯೋಗಿಗಳ ನಂತರವಾದರೆ ಸುಮಾರು ಕ್ರಿ.ಶ. 1840 ಅವರು ಇದ್ದಾಗಲೇ ಲಿಖಿತವಾಗಿದ್ದರೆ ಸುಮಾರು 1810-1820ರ ಕಾಲಮಾನದ್ದು. ಲಿಪಿಗಾರ ತನ್ನನ್ನು ಶ್ರೀಮತ್ಕಲ್ಯಾಣನಗರ ಸಿದ್ಧಾಂತ ಸುಬ್ರಮಣ್ಯ ಶಿವಯೋಗಿ ಎಂದು ಕರೆದುಕೊಂಡಿದ್ದಾನೆ.
`ರಘುವಂಶಕಾವ್ಯ ತೆಲುಗು ಅಕ್ಷರದಲ್ಲಿ ಮುದ್ರಣವಾಗಿದ್ದು ವೇದಬ್ರಹ್ಮ ಸಾಗ್ಗೆರೆ ಶ್ರೀಕಂಠಶಾಸ್ತ್ರಿಗಳು ಸಂಪಾದಿಸಿದ ಕೃತಿ ಮುದ್ರಣವಾದದ್ದು ಶ್ರೀಮತ್ಕಲ್ಯಾಣ ನಗರಾಭರಾಣಾ ಮಮಾನಾಯಾಂ ಬೆಂಗಳೂರು ಬುಕ್ ಡಿಪೆÇೀ ಮುದ್ರಾಕ್ಷರ ಶಾಲೆಯಲ್ಲಿ ವಾಜಪೇಯಿ ಕೃಷ್ಣಶಾಸ್ತ್ರಿಗಳಿಂದ ಬೆಂಗಳೂರು ನಗರದ ಪ್ರಸಿದ್ಧ ``ಸರ್ಪಭೂಷಣ ಶಿವಯೋಗಿಗಳ ಮಠ’’ ಇರುವುದು ಮೆಜೆಸ್ಟಿಕ್ ಕೆಂಪೇಗೌಡ ರಸ್ತೆಯಲ್ಲಿ ಅವರು ರಚಿಸಿದ ``ಕೈವಲ್ಯ ಕಲ್ಪವಲ್ಲರೀ’’ ಪುಸ್ತಕಕ್ಕೆ ಕನ್ನಡ ಟೀಕೆ ಬರೆದವರು ಬೆಂಗಳೂರು ದೊಡ್ಡಬೆಲೆ ನಾರಾಯಣಶಾಸ್ತ್ರಿಗಳು ಈ ಪುಸ್ತಕ 1907ರಲ್ಲಿ ಬಳ್ಳಾರಿಯ ಕರ್ಣಾಟಕ ಬುಕ್ ಡಿಪೆÇೀ ಮುದ್ರಾಕ್ಷರ ಶಾಲೆಯಲ್ಲಿ ಶ್ರೀ ಶಿವಲಿಂಗಂಶೆಟ್ರವರಿಂದ ಮುದ್ರಿತ ಪುಸ್ತಕದ ಮುಖಪುಟದ ಪ್ರಾರಂಭದಲ್ಲಿ ಈ ರೀತಿ ಮುದ್ರಿಸಲಾಗಿದೆ. ``ಕಲ್ಯಾಣನಗರ ಪ್ರಾಂತದೊಳು ಪುಟ್ಟಿ ಮಹಾಶಿವಯೋಗಿಯೆನಿಸಿಕೊಂಡು ಅನಿತರ ಸಾಧಾರಣವಾದ ಯಶಸ್ಸನ್ನು ಸಂಪಾದಿಸಿದಿ ಸಪ್ಪಣ್ಣಸ್ವಾಮಿಯೆಂಬ ಸರ್ಪಭೂಷಣನೆಂಬ ಶಿವಯೋಗಿಯಿಂದ ವಿರಚಿತವಾದ ``ಕೈಔಲ್ಯಕಲ್ಪವರೀ’’...ಎಂದು ಕರೆಯಲಾಗಿದೆ ಈ ಎಲ್ಲಾ ಅಧ್ಯಯನದಿಂದ ಸುಮಾರು 1500 ಕಾಲಮಾನದಲ್ಲಿ ಬೆಂಗಳೂರಿಗೆ ಕಲ್ಯಾಣನಗರ ಎಂಬ ಹೆಸರು ಇತ್ತು ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಕಲ್ಯಾಣನಗರ ಹೆಸರನ್ನೇ ನಗರೇಶ್ವರ ದೇವಸ್ಥಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
[ಈ ಲೇಖನ ಬರೆಯುವಾಗ ಸಂಸ್ಕøತ ಶಾಸನದ ಅಧ್ಯಯನಕ್ಕೆ ಸಹಕಾರ ನೀಡಿದ ಶ್ರೀ ಟಿ.ಕೆ. ನಂಜುಂಡಪ್ಪ ಅವರಿಗೆ ವಂದನೆಗಳು.]


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1.            ದೇವರಕೊಂಡಾರೆಡ್ಡಿ (ಸಂ.), 1998, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1 ಬಳ್ಳಾರಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಟ ಸಂ. 436, 437.
2.            ಗಾಯಿ ಜಿ.ಎಸ್. (ಅ), ಬಸವರಾಧ್ಯ. ಎನ್. (ಪ್ರ.ಸಂ.) 2010, ಕನ್ನಡ ಘಂಟು ಸಂಪುಟ-7, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂ. 6641.
3.            ದೇವರಕೊಂಡಾರೆಡ್ಡಿ (ಸಂ.), ಪೂರ್ವೋಕ್ತ, ಪುಟ ಸಂ. 434, 437.
4.            ಶೇಠೆ ಬಿ.ಎಸ್., 1991, ಕರ್ನಾಟಕದಲ್ಲಿ ಸತಿ ಪದ್ದತಿ, ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾವಿ. ಪುಟ 63.
5.            ಪರಮಶಿವಮೂರ್ತಿ ಡಿ.ವಿ. 1999, ಕನ್ನಡ ಶಾಸನ ಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ 138..
  ಪಂಡಿತ್ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ, ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್, ಬಿ.ಹೆಚ್. ರಸ್ತೆ, ತುಮಕೂರು-572102.

Monday, June 15, 2015

ಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆಸವೂರು

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆಸವೂರು
ಶಿವಯೋಗಿ ಕೋರಿಶೆಟ್ಟರ 
ಹಾವೇರಿ ತಾಲೂಕಿನ ಒಂದು ಪ್ರಾಚೀನ ಐತಿಹಾಸಿಕ ಗ್ರಾಮ ದೇವಿಹೊಸೂರು. ಹಾವೇರಿಯಿಂದ ನೈಋತ್ಯಕ್ಕೆ ಸುಮಾರು 8 ಕಿ.ಮಿ. ದೂರದಲ್ಲಿದೆ. ಅತ್ಯಂತ ಪ್ರಾಚೀನವಾಗಿರುವ ಗ್ರಾಮದಲ್ಲಿ ಹಲವಾರು ಶಿಲಾಶಾಸನಗಳು, ವೀರಗಲ್ಲುಗಳು, ಗೋಸಾಸಗಳು, ಕೋಣನ ತಲೆಶಿಲ್ಪ ವಿವಿಧ ದೇವಾಲಯಗಳು ಮೂರ್ತಿಶಿಲ್ಪಗಳು ಮುಂತಾದ ಪ್ರಾಚ್ಯ ಸ್ಮಾರಕಗಳನ್ನು ಕಾಣಬಹುದು. ಈ ಗ್ರಾಮವು ಶಾಸನಗಳಲ್ಲಿ ಪೊಸವೂರು, ದಿವ್ಯಾದ ಪೊಸವೂರು, ದೆಯ್ವದ ಪೊಸವೂರು, ದೇವಿಯ ಹೊಸವೂರು ಎಂಬುದಾಗಿ ಉಲ್ಲೇಖಿತಗೊಂಡಿದೆ. ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನತೆ ಹೊಂದಿರುವ ದಿವ್ಯಾದಪೊಸವೂರು ಪ್ರಾಚೀನ ಕುಂತಳ ದೇಶದ ಬನವಾಸಿ-12000ದ ಒಂದು ಕಂಪಣ ಬಾಸವೂರು-140ರ ಆಧೀನಕ್ಕೆ ಒಳಪಟ್ಟಿತ್ತು. ಮಲ್ಲಾರಿ ಮಾರ್ತಾಂಡನ ದೇವಿ ಮಾಳಚಿ ಇಲ್ಲಿ ನೆಲೆಗೊಂಡಿದ್ದರಿಂದಲೇ ದೇವಿಹೊಸೂರ ಎಂಬ ಹೆಸರು ಈ ಊರಿಗೆ ಬಂದಿತೆನ್ನಬಹುದು.
ದೇವಿಹೊಸೂರು ಪ್ರಾಚೀನ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ರಾಷ್ಟ್ರಕೂಟ 3ನೇ ಕೃಷ್ಣನ ಕ್ರಿ.ಶ. 961ರ ಶಾಸನವು ದೇವಿಹೊಸವೂರು ಅಗ್ರಹಾರದ ಮೊದಲ ಉಲ್ಲೇಖ ಹೊಂದಿದ್ದು, ಇದು ಪೊಸವೂರಿನ ಮಹಾಜನರನ್ನು ಉಲ್ಲೇಖಿಸುತ್ತದೆ. ಈ ಗ್ರಾಮವು ಮಾಳಜದೇವಿ ಲಬ್ದವರ-ಪ್ರಸಾದರಾಗಿದ್ದ ಸಾವಿರ ಮಹಾಜನರನ್ನು ಹೊಂದಿದ್ದ ಅಗ್ರಹಾರವಾಗಿತ್ತು. ದೇವಿಹೊಸವೂರಿನ ಅಗ್ರಹಾರವನ್ನು ಶಾಸನವು ಜನಮೇಜಯದತ್ತಿ ಅಗ್ರಹಾರ ಎಂದು ಉಲ್ಲೇಖಿಸಿರುವುದರಿಂದ ಈ ಅಗ್ರಹಾರವು ಅತ್ಯಂತ ಪ್ರಾಚೀನವಾದುದೆಂದು ತಿಳಿಯುತ್ತದೆ. ಇಲ್ಲಿನ ಮಹಾಜನ ಸಾಸಿರ್ವರು ದೇವಿಹೊಸವೂರು ಆಡಳಿತದ ಒಡೆತನ ಹೊಂದಿದ್ದು, ಇವರ ಸಮ್ಮಖದಲ್ಲಿಯೇ ಮಾಳಚಿ ದೇವಿಗೆ ದಾನದತ್ತಿಗಳನ್ನು ನೀಡಲಾಗಿದೆ. ಸಾಸಿರ್ವರೂ ಕೂಡಾ ದಾನಗಳನ್ನು ನೀಡಿದ ಮತ್ತು ಸ್ವೀಕರಿಸಿದ ಬಗ್ಗೆ ಶಾಸನಗಳು ಉಲ್ಲೇಖಿಸಿವೆ. ರಾಷ್ಟ್ರಕೂಟರ ಕಾಲದಿಂದ ಹಿಡಿದು ಯಾದವರ ಕಾಲದವರೆಗೂ ಈ ಗ್ರಾಮದ ಮೇಲೆ ಹಿಡಿತ ಹೊಂದಿದ್ದ ಮಹಾಜನ ಸಾಸಿರ್ವರು ಅಲ್ಲಿನ ಶಾಸನೋಕ್ತ ಮಾಳಚಿ, ಭೋಗೇಶ್ವರ, ಹಾಗೂ ಗವರೇಶ್ವರ ದೇವಾಲಯಗಳಲ್ಲದೇ, ಗ್ರಾಮದ ಇತರೆ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ದಿವ್ಯಾದಪೊಸವೂರನ ಮಾಳಚಿ ದೇವಾಲಯ ಹಾಗೂ ಮೈಲಾರಲಿಂಗ ದೇವಾಲಯಕ್ಕೂ ಸಾಂಸ್ಕøತಿಕ ಸಂಬಂಧ ಇರುವಂತೆ ತೋರುತ್ತದೆ. ಜನಪದ ಪುರುಷ ದೇವತೆ ಏಳುಕೋಟೆ ಅಥವಾ ಮೈಲಾರಲಿಂಗ ಭಕ್ತರಿಗೆ ಪ್ರತ್ಯಕ್ಷ ಶಿವ ಮಣಿಮಲ್ಲರೆಂಬ ದೈತ್ಯರನ್ನ ಸಂಹರಿಸಲು ಭೂಲೋಕಕ್ಕೆ ಬಂದು ಕಂಬಳಿ ಕಂತೆಯ ವೇಷತೊಟ್ಟನು. ತಲೆಯ ಮೇಲೆ ಮುರುಗಿ-ಮುಂಡಾಸ, ಕೈಯಲ್ಲಿ ತ್ರೀಶೂಲ, ಡಮರು, ಭಂಡಾರ ಚೀಲ, ಗಂಟೆ, ಡೋಣಿ ಧರಿಸಿ ದೇವರಗುಡ್ಡ ಸಮೀಪ ಶಿಡಗಿನಹಾಳ ಗ್ರಾಮದ ಪಶ್ಚಿಮದ ಕರಿಯಾಲದಲ್ಲಿ ಹಲವಾರು ರಾಕ್ಷಸರನ್ನ ಸಂಹರಿಸಿ ಅಂತಿಮವಾಗಿ ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಮಲ್ಲಾಸುರನನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಏಳುಕೋಟಿ, ಮೈಲಾರಲಿಂಗ, ಮಲ್ಲಾರಿ, ಮಾರ್ತಾಂಡಭೈರವ, ಖಂಡೋಬಾ, ಮಾಲತೇಶ ಮುಂತಾದ ಹೆಸರುಗಳಿಂದ ಈತನನ್ನು ಕರೆಯಲಾಗಿದೆ.
ಗಂಗಿಮಾಳವ್ವ ಅಥವಾ ಮಾಳಚಿದೇವಿ ಮೈಲಾರಲಿಂಗನ ಪಟ್ಟದ ಹೆಂಡತಿ, ಕುರುಬತೆವ್ವ ಅಥವಾ ಕುರುಬರ ಮಾಳವ್ವ ಎರಡನೇ ಹೆಂಡತಿ. ಗಂಗಿಮಾಳವ್ವನ ಮೇಲಿನ ಹಠದಿಂದ ಇವಳನ್ನು ತಂದನೆಂಬುದು ನಂಬುಗೆ. ಇವರೀರ್ವರಿಗೂ ಹೆಗ್ಗಡೆಯೇ ಅಣ್ಣ. ಬನಾಯಿ, ಬನಶಂಕರಿ, ಬಾಣಾಯಿ ಮುಂತಾದ ಹೆಸರುಗಳಿಂದಲೂ ಈ ದೇವತೆಯನ್ನು ಕರೆಯಲಾಗಿದೆ. ಮೈಲಾರ ಮತ್ತು ದೇವರಗುಡ್ಡದಲ್ಲಿನ ಮಾಳಚಿ ಹಾಗೂ ಕುರುಬತೆವ್ವನ ಮೂರ್ತಿಗಳಲ್ಲಿ ಹೋಲಿಕೆಯನ್ನು ಕಾಣಬಹುದು. ಇವು ಮೈಲಾರಲಿಂಗನ ತದ್ವತ್ತಾದ ಸ್ತ್ರೀಮೂರ್ತಿಗಳಾಗಿವೆ. ಅಂದರೆ ಬಲದ ಕೈಗಳಲ್ಲಿ ಖಡ್ಗ ತ್ರಿಶೂಲಗಳು, ಎಡದ ಕೈಯಗಳಲ್ಲಿ ಪಾನಪಾತ್ರೆ ಡಮರುಗಳೂ ಇವೆ. ಮೈಲಾರಲಿಂಗನಿಗೆ ಮೈಲಾರ ಹಾಗೂ ದೇವರಗುಡ್ಡ ನೆಲೆಗಳಾಗಿರುವ ಹಾಗೆ ಮಾಳಚಿದೇವಿಗೆ ದೇವಿಹೊಸವೂರು ನೆಲೆಯಾಗಿತ್ತು.
ಪ್ರಸ್ತುತ ಗ್ರ್ರಾಮದ ಹೊರಗೆ ಇರುವ ಬನಶಂಕರಿ ದೇವಸ್ಥಾನವೇ ಮಾಳಚಿ ದೇವಸ್ಥಾನವಾಗಿದೆ. ಈ ಬಗ್ಗೆ ಇಲ್ಲ್ಲಿನ ಶಾಸನಗಳು ಉಲ್ಲೇಖ ಹೊಂದಿವೆ. ಯೋಗಪೀಠಕ್ಕಿಂತ ಮಿಗಿಲಾದ ಮಾಳಜ ಪೀಠ ಇದೆಂದು ಶಾಸನವೊಂದು ಬಣ್ಣಿಸಿದೆ. ಊರಿನ ಉತ್ತರಕ್ಕೆ ಇರುವ ದೊಡ್ಡಕೆರೆಯ ಸಮೀಪದಲ್ಲಿರುವ ಮಾಳಚಿ ದೇವಾಲಯವು ಭೌಗೋಳಿಕವಾಗಿ ಎತ್ತರದ ದಿನ್ನೆಯ ಆಯಕಟ್ಟಿನ ಜಾಗದಲ್ಲಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತನ್ನದೇ ಆದ ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ಸುಮಾರು 10ನೇ ಶತಮಾನದಲ್ಲಿ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ದೇವಾಲಯದ ಗರ್ಭಗೃಹದಲ್ಲಿನ ಮೂರ್ತಿಯು ಕಾಲಾಂತರದಲ್ಲಿ ಸ್ಥಳಾಂತರಗೊಂಡಿದ್ದು, ಈಗ ಗಣಪತಿಯ ಮೂರ್ತಿ ಇದೆ. ಇಲ್ಲಿನ ದೇವಿ ಮೂರ್ತಿಯನ್ನು ಊರಿನಲ್ಲಿರುವ ಬನಶಂಕರಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಕರ ಅಭಿಪ್ರಾಯ. ಸುಕನಾಸಿಯ ದ್ವಾರದ ಮೇಲ್ಭಾಗದ ಪಟ್ಟಿಕೆಯಲ್ಲಿ ಎರಡು ಮಕರಗಳ ನಡುವೆ ಮಾಳಚಿಯ ವಿಗ್ರಹವನ್ನು ಕೆತ್ತಲಾಗಿದೆ. ಚತುರ್ಭುಜೆಯಾಗಿರುವ ಮಾಳಚಿ ಕೈಗಳಲ್ಲಿ ಕ್ರಮವಾಗಿ ಕತ್ತಿ, ಡಮರು, ತ್ರಿಶೂಲ ಮತ್ತು ಕಪಾಲಗಳಿವೆ.  ಇನ್ನುಳಿದಂತೆ ಬಾಗಿಲುವಾಡ ಸರಳವಾದ್ದು, ಪಕ್ಕದಲ್ಲಿ ಸುಂದರ ಜಾಲಂದ್ರಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳು ಕಲಾತ್ಮಕವಾಗಿ ನಿರ್ಮಿಸಲ್ಪಟ್ಟಿವೆ. ಅವುಗಳ ಮಧ್ಯದ ಛತ್ತಿನಲ್ಲಿ ಕಮಲದಳಗಳ ಉಬ್ಬು ಚಿತ್ರದ ವಿತಾನವಿದೆ. ಬದಿಗಳಲ್ಲಿ ನಾಗಗಳಿವೆ. ದೇವಾಲಯದ ಗರ್ಭಗೃಹ ಹಾಗೂ ಅಂತರಾಳದ ಭಿತ್ತಿಗಳು ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿವೆ. ಗೋಡೆಗುಂಟ ಅರ್ಧಕಂಭಗಳಿದ್ದು ಪೀಠ, ಕಾಂಡ, ಕಂಠ ಹಾಗೂ ಬೋದಿಗೆಗಳಿಂದ ಅಲಂಕೃತಗೊಂಡಿವೆ. ಮುಖಮಂಟಪವು ಹನ್ನೆರಡು ಕಂಭಗಳನ್ನು ಹೊಂದಿದ್ದು, ನವೀಕರಣಗೊಂಡಿದೆ. ಗರ್ಭಗೃಹದ ಶಿಖರವು ಶಿಥಿಲಗೊಂಡು ದುರಸ್ತಿಯಾಗಿದೆ.
ಮಾಳಚಿ ದೇವಾಲಯವು ವಿಶಾಲವಾದ ಪ್ರಾಕಾರ ಹೋದಿದ್ದು, ದೇವಾಲಯದ ಸುತ್ತಲೂ ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳಿವೆ. ಇವುಗಳಲ್ಲಿನ ಮೂರ್ತಿಗಳು ಕಾರಣಾಂತರಗಳಿಂದ ಚದುರಿ ಹೋಗಿವೆ. ದೇವಾಲಯದ ಸುತ್ತಲೂ ಇರುವ ಆವಾರದಲ್ಲಿ ಶಿವಲಿಂಗಗಳು ಹಾಗೂ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳÀನ್ನು ಗುರುತಿಸುವುದು ಕಷ್ಟವೆನಿಸಿದರೂ, ಈ ಚಿಕ್ಕ ಮಂದಿರಗಳು ಮೈಲಾರಲಿಂಗ ಹಾಗೂ ಮಾಳಚಿಯರ ಪರಿವಾರ ದೇವತೆಗಳಾದ ರಣದಾಗ್ನಿ, ಕೋಮಾಲೆ, ಚಿಕ್ಕಯ್ಯ, ಜುಂಜಯ್ಯ, ಹೆಗ್ಗಡೆ ಮುಂತಾದವರಿಗಾಗಿ ನಿರ್ಮಿಸಿದವುಗಳಂತೆ ತೋರುತ್ತವೆ. ಮಾಳಚಿ ದೇವಾಲಯದ ಮುಂದೆ ಸಾಲಾಗಿ ಅಲ್ಲಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಪಾದಪೀಠಗಳನ್ನು ಕಾಣಬಹುದು. ದೇವಾಲಯದ ಪ್ರಾಕಾರದಲ್ಲಿ ಇಂತಹ ಮೂರು ಪಾದಪೀಠಗಳಿವೆ. ಪಾದಪೀಠಗಳು ಪ್ರಾಕಾರದ ಹೊರಗೂ ರಸ್ತೆಬದಿಯ ಹೊಲದಲ್ಲಿಯೂ ವಿಸ್ತರಿಸಿವೆ. ಇಂತಹ ಜೋಡುಪಾದ ಮುದ್ರೆಗಳನ್ನು ಹೆಡೆಬಿಚ್ಚಿದ ಹಾವುಗಳು ಸುತ್ತಿದಂತೆ ಕೆತ್ತಲಾಗಿದೆ. ಈ ಪ್ರಾಕಾರದ ಹಿಂಬದಿಯಲ್ಲಿ ಅಯ್ಯನ ಹೊಂಡವಿದ್ದು, ಇದರ ದಂಡೆಯ ಮೇಲೆ ಗಜಲಕ್ಷ್ಮಿ ಹಾಗೂ ಕೋಣನತಲೆ ಶಿಲ್ಪಗಳಿವೆ. ಗಜಲಕ್ಷ್ಮಿ ಶಿಲ್ಪವು ಅತ್ಯಂತ ಆಕರ್ಷಕವಾಗಿದ್ದು, ನಾಲ್ಕು ಆನೆಗಳ ಮಧ್ಯದಲ್ಲಿ ಕುಳಿತ ಗಜಲಕ್ಷ್ಮಿಯ ಮೇಲ್ಭಾಗದ ಎರಡು ಆನೆಗಳು ತಮ್ಮ ಸೊಂಡಿಲುಗಳಲ್ಲಿ ಕುಂಭಗಳನ್ನು ಹೊತ್ತು ದೇವಿಗೆ ಅಭಿಷೇಕ ಮಾಡುತ್ತಿವೆ. ಈ ಗಜಲಕ್ಷ್ಮಿ ಶಿಲ್ಪದ ಬಳಿಯಲ್ಲಿಯೆ ಕೋಣನ ತಲೆಯುಳ್ಳ ಶಿಲ್ಪವಿದೆ. ಹರವಾದ ಕಲ್ಲುಚಪ್ಪಡಿಯ ಮೇಲೆ ನೆಲಕ್ಕೆ ಒರಗಿದಂತೆ ಕಂಡುಬರುವ ಇದರ ನಾಲಿಗೆ ಹೊರಚಾಚಿದೆ. ಕೋಡುಗಳ ಮಧ್ಯದಲ್ಲಿ ಅರಳಿದ ಕಮಲವಿರುವ ಉಬ್ಬುಶಿಲ್ಪ ಇದಾಗಿದೆ. ಕೆರೆ ಕಟ್ಟೆಗಳ ಬಳಿಯಲ್ಲಿ ಜೋಡಾಗಿಯೇ ಕಂಡುಬರುವ ಇಂತಹ ಶಿಲ್ಪಗಳು ವನದುರ್ಗೆಯ  ಸಂಕೇತವನ್ನು ಪ್ರತಿನಿಧಿಸುತ್ತವೆ.
ದೇವಾಲಯ ಪ್ರಾಕಾರದ ಸುತ್ತಲೂ ಶಿಲೆಯ ಸಮುಚ್ಯಯದ ಪ್ರಾಕಾರ ನಿರ್ಮಿಸಿದ್ದು, ಅದು ಅಲ್ಲಲ್ಲಿ ಶಿಥಿಲಗೊಂಡಿದೆ. ದೇವಾಲಯಕ್ಕೆ ಪ್ರಾಕಾರದ ಒಳಗೆ ಪ್ರವೇಶಿಸಲು ಎತ್ತರವಾದ ಸ್ಥಂಭಗಳುಳ್ಳ ಆಕರ್ಷಕ ಮಕರ ತೋರಣವಿದೆ. ಎರಡು ಸ್ಥಂಭಗಳ ಮೇಲೆ ಅಡ್ಡಲಾಗಿ ಕೂಡಿಸಿದ ಪಟ್ಟಿಕೆಯ ಹೊರಮುಖದ ಮಕರತೋರಣದ ಮಧ್ಯದಲ್ಲಿ ಸವ್ಯ ಲಲಿತಾಸನದಲ್ಲಿ ಕುಳಿತಿರುವ ಮೂವರು ದೇವತೆಗಳನ್ನು ಖಂಡರಿಸಲಾಗಿದೆ. ಬದಿಯಲ್ಲಿ ಕುದುರೆ ಸವಾರರು ಒಬ್ಬ ಭಕ್ತೆ ಹಾಗೂ ಮೂವರು ಆನೆ ಸವಾರರಿದ್ದಾರೆ. ಈ ಮಕರ ತೋರಣದ ಒಂದು ಸ್ಥಂಭದಲ್ಲಿ ಕಲ್ಯಾಣ ಚಾಲುಕ್ಯ ದೊರೆ 1ನೇ ಸೋಮೇಶ್ವರನ ಆಳ್ವಿಕೆಯ ಕಾಲದ ಶಾಸನವಿದ್ದು, ಇದು ಮಹಾಸಾಮಂತ   ಜೋಮದೇವರಸನ ರಕ್ಷಕ ಇಂದಪಯ್ಯ ಈ ಮಕರ ತೋರಣವನ್ನು ನಿರ್ಮಿಸಿದನೆಂದು ಉಲ್ಲೇಖಿಸಿದೆ. ಇದರಿಂದಾಗಿ ಮಾಳಚಿ ದೇವಾಲಯವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ, ನಂತರದಲ್ಲಿ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಈ ದೇವಾಲಯದ ಇತರೆ ಅಭಿವೃದ್ದಿಗಳಾಗಿರುವ ಸಂಗತಿಯನ್ನು ಗುರುತಿಸಬಹುದು.
“ಕಾಳಿಗೆ, ಕಾಳರಾಕ್ಷಸಿಗೆ, ರೌದ್ರೆಗೆ,
ಭೈರವಿ ಗುಗ್ರೇಗಾ ಮಹಾಕಾಳಿಗೆ,
ಕಾಳಯೋಗಿನಿಗೆ, ಮಾಲಿಚದೇವತೆಗಿನ್ದರಂ” ಎಂಬುದಾಗಿ ಇಲ್ಲಿನ ಶಾಸನವೊಂದು ಮಾಳಚಿದೇವಿಯ ವಿವಿಧ ರೂಪಗಳನ್ನು ವರ್ಣಿಸಿದೆ. ದೇವಿಹೊಸವೂರಿನ ಮಾಳಚಿದೇವಿ ಆ ಕಾಲದ ಪ್ರಸಿದ್ದ ಶಕ್ತಿದೇವತೆಯಾಗಿದ್ದು, ಸಹಜವಾಗಿಯೆ ಅಪಾರ ಭಕ್ತಸಮೂಹವನ್ನು ಹೊಂದಿದ್ದಳು. ಇವಳ ಆಶೀರ್ವಾದ ಪಡೆದು ಕೃತಾರ್ಥರಾಗಲು ಅರಸರು, ಸಾಮಂತರು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆಹೊತ್ತು ಹಲವಾರು ದಾನದತ್ತಿಗಳನ್ನು ನೀಡುತ್ತಿದ್ದರು. ಕಲ್ಯಾಣದ ಚಾಲುಕ್ಯ ದೊರೆ 2ನೇ ಜಗದೇಕಮಲ್ಲನ ಕಾಲದ ಇಲ್ಲಿನ ಶಾಸನವು ದಂಡನಾಯಕ ರೇಚರಸ ಬನವಾಸಿ-12000ವನ್ನು ಆಳುತ್ತಿದ್ದ ಉಲ್ಲೇಖವನ್ನು ಹೊಂದಿದೆ. ದಂಡನಾಯಕ ರೇಚರಸ ಮತ್ತು ಸುಂಕಾಧಿಕಾರಿ ದೇವಧರದಂಡನಾಯಕರು, ಅಲ್ಲಿನ ಮಹಾಜನ ಸಾಸಿರ್ವರ ಸಮ್ಮುಖದಲ್ಲಿ, ದೇವಿಯ ಪರ್ವದಂದು, ಅಗ್ರಹಾರ ದಿವ್ಯಾದ ಪೊಸವೂರಿನ ಮಾಳಚಿದೇವಿಯ ಉಯ್ಯಲ ಪರ್ವಕ್ಕೆ ಭೂದಾನ ಮಾಡಿ, ತನ್ನ ಹರಕೆ ತೀರಿಸಿದ್ದ ಸಂಗತಿಯನ್ನು ಉಲ್ಲೇಖಿಸಿದೆ. ಸಿಂಧರ ಅರಸನು ಇವಳ ಭಕ್ತನಾಗಿದ್ದ ಬಗ್ಗೆ, ಸುಂಕದಾನ ಮತ್ತು ಇನ್ನಿತರ ದಾನಗಳ ಬಗ್ಗೆ ಬೇರೆ ಶಾಸನಗಳಲ್ಲಿ ಉಲ್ಲೇಖನಗಳನ್ನು ಕಾಣಬಹುದು.
ರಾಷ್ಟ್ರಕೂಟರ ಕಾಲದಿಂದಲೂ ಅರಸರು, ಮಾಂಡಳೀಕರು, ಅಧಿಕಾರಿಗಳ ಪ್ರೋತ್ಸಾಹ ಹಾಗೂ ಮಹಾಜನ ಸಾಸಿರ್ವರ ನೇತೃತ್ವದಲ್ಲಿ ಪ್ರಸಿದ್ದ ಶಕ್ತಿದೇವತೆಯ ಆರಾಧನಾ ಕೇಂದ್ರ ಎನಿಸಿದ್ದ ಇದು ಕಲ್ಯಾಣದ ಚಾಲುಕ್ಯರು, ದೇವಗಿರಿಯ ಯಾದವ ದೊರೆಗಳ ಕಾಲದಲ್ಲಿ ಪ್ರಖ್ಯಾತಿಯ ಪರಾಕಾಷ್ಠೆ ತಲುಪಿತ್ತೆನ್ನಬಹುದು. ಆನಂತರದಲ್ಲಿ ಈ ಮಾಳಜಪೀಠ ಕ್ರಮೇಣವಾಗಿ ತನ್ನ ಪ್ರಖ್ಯಾತಿ ಕಳೆದುಕೊಂಡಿದ್ದಿರಬಹುದಾದರೂ, ಇಂದಿಗೂ ಅಪಾರ ಭಕ್ತ ಸಮೂಹವನ್ನು ಈ ದೇವಿ ಹೊಂದಿರುವುದಕ್ಕೆ ದೇವಾಲಯದಲ್ಲಿ ಈಗಲೂ ನಡೆಯುವ ಪೂಜೆ ಹಾಗೂ ಪರ್ವಗಳೇ ಸಾಕ್ಷಿಯಾಗಿವೆ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಸೌಥ್ ಇಂಡಿಯನ್ ಇನ್‍ಸ್ಕ್ರಿಪ್ಸನ್ಸ್ : ಸಂಪುಟ 18, ನ್ಯೂಡೆಲ್ಲಿ, 1975.
2. ಸೂರ್ಯನಾಥ ಕಾಮತ್. (ಸಂ) ಧಾರವಾಡ ಜಿಲ್ಲಾ ಗೆಸೆಟಿಯರ್, ಬೆಂಗಳೂರು, 1995.
3. ಎಂ.ಬಿ. ನೇಗಿನಹಾಳ, ನೇಗಿನಹಾಳ ಪ್ರಬಂಧಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಮಹದೇವ. ಸಿ. ಹಾಗೂ ಇತರರು, ಕರ್ನಾಟಕ ದೇವಾಲಯ ಕೋಶ, ಹಾವೇರಿ ಜಿಲ್ಲೆ, ಹಂಪಿ, 1999.
5. ಭೋಜರಾಜ ಬ. ಪಾಟೀಲ, ನಾಗರಖಂಡ-70 ಒಂದು ಅಧ್ಯಯನ, ಆನಂದಪುರಂ, 1995.

  ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ-581110.

Thursday, May 7, 2015

ಹೂಲಿ : ಕಾಳಾಮುಖ ಮಹಾಅಗ್ರಹಾರ

ಹೂಲಿ : ಕಾಳಾಮುಖ ಮಹಾಅಗ್ರಹಾರ
ಡಾ. ಕೆ.ಎಸ್. ಪಾಟೀಲ 
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಹೂಲಿ ಗ್ರಾಮವು ಸವದತ್ತಿಯಿಂದ ಪೂರ್ವಕ್ಕೆ 8 ಕಿ.ಮೀ. ಅಂತರದಲ್ಲಿದೆ. ಇದು ಅಂದು ಬೆಳ್ವೊಲ-300 ಆಡಳಿತ ವಿಭಾಗದಲ್ಲಿ ಅಂತರ್ಗತವಾಗಿತ್ತು. ಆ ಆಡಳಿತ ವಿಭಾಗವು ಕ್ರಿ.ಶ. ಸುಮಾರು 10ನೆಯ ಶತಮಾನದಿಂದ 13ನೆಯ ಶತಮಾನದ ಪ್ರಾರಂಭದವರೆಗೂ ಉತ್ತರ ಕರ್ನಾಟಕದಲ್ಲಿ ಮಹತ್ವದ ಆಡಳಿತ ವಿಭಾಗವಾಗಿತ್ತು. ಅದು ಇಂದಿನ ಧಾರವಾಡ, ಬೆಳಗಾವಿ, ಬಾಗಲಕೋಟ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಕೆಲವು ಪ್ರದೇಶಗಳನ್ನೊಳಗೊಂಡು, ಕರ್ನಾಟಕದ ಇತಿಹಾಸದುದ್ದಕ್ಕೂ ರಾಜಕೀಯ, ಆಡಳಿತ, ಸಾಂಸ್ಕøತಿಕ, ಧಾರ್ಮಿಕ ಚಟುವಟಿಕೆಗಳ ಆಗರವಾಗಿತ್ತು1. ಈ ವಿಭಾಗದ ವಾಯವ್ಯ ದಿಕ್ಕಿನಲ್ಲಿರುವ ಹೂಲಿ ಪಟ್ಟಣವು ಶಾಸನಗಳಲ್ಲಿ ‘ಪೂಲಿ’, ‘ಪೂವಲ್ಲಿ’, ‘ಪೂಲಿಗ್ರಾಮ’, ‘ಹೂಲಿ’ ‘ಚಾಳುಕ್ಯ ಚಕ್ರವರ್ತಿ ಮಹಾಅಗ್ರಹಾರ’ ಎಂದು ವರ್ಣಿತವಾಗಿದೆ.2 ಇದು ನೇರವಾಗಿ ಅರಸನ ಪ್ರೋತ್ಸಾಹದಲ್ಲಿತ್ತು. ಇಲ್ಲಿಯ ಮಹಾಜನರೇ ಊರೊಡೆಯರಾಗಿದ್ದು, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಇತ್ಯಾದಿ ಚಟುವಟಿಕೆಗಳಿಗೆ ಅವರ ಮನ್ನಣೆ ಮತ್ತು ಪರವಾನಿಗೆ ಅಗತ್ಯವಾಗಿತ್ತು. ಮೇಲಾಗಿ ಈ ಪಟ್ಟಣವು ಶೈವ ಧರ್ಮದ ಕಾಳಾಮುಖ ಪಂಥದ ಕೇಂದ್ರವೂ ಆಗಿತ್ತು. ಹೂಲಿ ಪರಿಸರದಲ್ಲಿ ಬಾದಾಮಿ ಚಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಕಳಚೂರಿಗಳು, ದೇವಗಿರಿಯ ಸೇವುಣರು, ಆಳ್ವಿಕೆ ಮಾಡಿದ ಕುರಿತಾಗಿ ಶಾಸನಾಧಾರಗಳಿವೆ.
ಕಾಳಾಮುಖ ಮಹಾಅಗ್ರಹಾರ
ಹೂಲಿ ಪರಿಸರದಲ್ಲಿ ದೊರೆತ ಶೈವಧರ್ಮದ ಅವಶೇಷಗಳ ಹಿನ್ನೆಲೆಯಲ್ಲಿ ಇದು ಪ್ರಸಿದ್ಧ ಶೈವಪಂಥದ ಕೇಂದ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಇದುವರೆಗೆ 12 ಶೈವ ಶಾಸನಗಳು ಬೆಳಕಿಗೆ ಬಂದಿವೆ. ಮದನೇಶ್ವರ ಮತ್ತು ಅಂಧಾಸುರ (ಅಂಧಕಾಸುರ) ದೇವಾಲಯದಲ್ಲಿನ ಶಾಸನಗಳು ಕಾಳಾಮುಖ ಶೈವಪಂಥದ ಆರಾಧನಾ ಚಟುವಟಿಕೆಗಳನ್ನು ಬಿಂಬಿಸುತ್ತವೆ. ಕಾಳಾಮುಖ ಯತಿಗಳನ್ನು ಸಾಮಾನ್ಯವಾಗಿ ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನಾನುಷ್ಠಾನ, ಜಪ, ಸಮಾಧಿ, ಶೀಲ, ಗುಣ ಸಂಪನ್ನರೆಂದು ಹೂಲಿ ಶಾಸನಗಳಲ್ಲಿ ವರ್ಣಿಸಿದೆ. ಇವರ ಹೆಸರುಗಳು ಶಕ್ತಿ, ಜೀವ, ರಾಶಿ, ಪಂಡಿತ, ಶಿವಪಂಡಿತ ಇತ್ಯಾದಿಯಾಗಿ ಅಂತ್ಯಗೊಂಡಿವೆ. ಉತ್ತರ ಕರ್ನಾಟಕದಲ್ಲಿ ಕಾಳಮುಖ ಶೈವ ಪರಂಪರೆಗೆ ಸಂಬಂಧಿಸಿದಂತೆ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅನೇಕಾನೇಕ ಸಂಖ್ಯೆಯಲ್ಲಿ ತ್ರೈಪುರುಷ ದೇವಾಲಯಗಳು ನಿರ್ಮಾಣಗೊಂಡಿದ್ದವು. ಹೂಲಿಯ ವೀರಭದ್ರ ದೇವಾಲಯದ ಕ್ರಿ.ಶ.1097ರ ಶಾಸನದ ಪ್ರಕಾರ ನಾಕಿಮಯ್ಯನು ಶ್ರೀಮನ್ಮಹಾಗ್ರಹಾರ ಪೂಲಿಯ ಊರೊಡೆಯ ಪ್ರಮುಖ ಸಾಸಿರ್ವರ ಸನ್ನಿಧಾನದಲ್ಲಿ ಶ್ರೀ ಹರಿಹರದೇವರ ನೈವೇದ್ಯ, ಚೈತ್ರಪವಿತ್ರ, ಖಂಡಸ್ಘುಟಿತಜೀಣ್ರ್ಣೋದ್ಧಾರ ಮತ್ತು ಪೂಜಾರಿಯ ಜೀವಿತಕ್ಕೆ ಮೂರು ಮತ್ತರು ಭೂಮಿ, 1 ಪಣ, 2 ಹಾಗ ದಾನ ಮಾಡಿದನು.3 ಅಂಧಕೇಶ್ವರ ದೇವಾಲಯದ ಕ್ರಿ.ಶ. 1104ರ ಶಾಸನವು ‘ಮಹಾಸಮನ್ತಾಧಿಪತಿ’, ಮಹಾಪ್ರಚಂಡ ದಂಡನಾಯಕ, ಶ್ರೀಮನ್ಮಹಾಪ್ರಧಾನ ಬಾಣಸುವೆಗ್ರ್ಗಡೆ ಅನಂತಪಾಳರಸರ ಅಳಿಯನಾದ ದಂಡನಾಯಕ ಲಕ್ಕರಸನು ಬೆಳ್ವೊಲನಾಡನ್ನು ಆಳುತ್ತಿರುವಾಗ ಪೆಗ್ರ್ಗಡೆ ಸಿಂಗರಸನು ಪೂಲಿಯ (ಹೂಲಿ) ಅಂಧಾಸುರ ದೇವರ ಅಂಗಭೋಗ ಮತ್ತು ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಇನ್ತೆನಿಸಿದ ಸ್ಥಾನಾಚಾರ್ಯರಾದ ತತ್ಪುರುಷಪಂಡಿತರ ಸಮಕ್ಷಮದಲ್ಲಿ ಮತ್ತು ಊರೊಡೆಯ ಪ್ರಮುಖಸಾಸಿವ್ರ್ವಮಹಾಜನಂಗಳ ಸನ್ನಿಧಾನದಲ್ಲಿ ನೆಲವತ್ರ್ತಿಗೆ ಸಾಸಿರಕ್ಕೆ ಹನ್ನೊಂದು ಅಡಕೆ, ನೂರು ಎಲೆಯನ್ನು ದಾನ ಮಾಡಿದ್ದನ್ನು ಉಲ್ಲೇಖಿಸುತ್ತದೆ.4 ಅದೇ ರೀತಿಯಾಗಿ ಕ್ರಿ.ಶ.1107ರ ಕೆರೆಸಿದ್ದೇಶ್ವರ ದೇವಾಲಯದಲ್ಲಿನ ಶಾಸನದಲ್ಲಿ ಶ್ರೀಮದ್ ಅಂಧಾಸುರ ದೇವರ ಸ್ಥಾನಾಚಾರ್ಯರಾದ ಶ್ರೀ ಜ್ಞಾನಶಕ್ತಿದೇವರು ಅಗ್ರಹಾರ ಪೂಲಿಯ ಊರೊಡೆಯ ಪ್ರಮುಖಸಾಸಿವ್ರ್ವರನ್ನು ದ್ರವ್ಯಪೂರ್ವಕ ಆರಾಧಿಸಿ ಅಂಧಾಸುರದೇವರ ಸ್ನಾನ, ನೈವೇದ್ಯಕ್ಕೆಂದು, ಕೊಕ್ಕಳಗೇರಿಯ ಹಾಳ ಹಸುಗೆಯೊಳಗೆ ಕೊಂಡು ಬಿಟ್ಟು ಮತ್ತರು ಏಳು ಮತ್ತು ಒಂದು ಹಣವನ್ನು ದಾನ ಮಾಡಿದ ಪ್ರಸ್ತಾಪವಿದೆ.5
ಪಂಚಲಿಂಗೇಶ್ವರ ದೇವಾಲಯದ ಮೂರನೆಯ ಗರ್ಭಗೃಹದ ದ್ವಾರಬಂಧದಲ್ಲಿರುವ ಕ್ರಿ.ಶ. 12-13ನೇ ಶತಮಾನದ ಶಾಸನದಲ್ಲಿ ಶ್ರೀ ಪ್ರಭಾಚಂದ್ರ ಸಿದ್ಧನ್ತದೇವರ ಶಿಷ್ಯರಾದ ಬೋಸಣ್ಣನ ಮಗ ಸೋಮಯ್ಯ ಹೆಗ್ಗಡೆ ಬಮ್ಮಯ್ಯ, ಧಾರವಾಡದ ಬಸವಿಶೆಟ್ಟಿ, ಕಂಬದ ನೇಮಿಸೆಟ್ಟಿ ಮತ್ತು ಬಲ್ಲಿಸೆಟ್ಟಿ ಮುಖ್ಯವಾಗಿ ಸಮಸ್ತಭವ್ಯಜನರು ಹೂಲಿಯ ಮಾಣಿಕ್ಯ ತೀರ್ಥದ (ಜಿನಾಲಯ) ದ್ವಾರಶಾಖೆಯನ್ನು ಮಾಡಿಸಿದನು. ಹಾಗೂ ಈ ದ್ವಾರಶಾಖೆಯನ್ನು ಕುರುವನೂರ ರಾಚೋಜನು ಖಂಡರಿಸಿದನು ಎಂದು ಪ್ರಸ್ತಾಪಿಸಲಾಗಿದೆ.6 ಹಾಗೆಯೇ ಇದೇ ದೇವಾಲಯದಲ್ಲಿರುವ ಕ್ರಿ.ಶ. 12-13ನೆಯ ಶತಮಾನದ ಶಾಸನವು ಉಲ್ಲೇಖಿಸುವ ಹಾಗೆ ಭಾಗಲೆ ಮತ್ತು ಬಾಚಿಸಚ್ಚಿಯರ ಮಗನಾದ ಮತ್ತು ನಾಗರಾಶಿಮುನಿಯ ಶಿಷ್ಯನೂ ಆದ ಕವದಿಯಮಾದಿಗೌಡನು ಪಂಚಲಿಂಗೇಶ್ವರ ದೇವಾಲಯದ ಸಭಾಮಂಟಪದ ಮಧ್ಯದ ನಾಲ್ಕು ಕಂಬಗಳಲ್ಲಿ ನಾಗರಾಶಿಯ ಕಂಬದ ದಕ್ಷಿಣಕ್ಕಿರುವ ಕಂಬವನ್ನು ಮಾಡಿಸಿದನು.7 ಹೀಗೆ ಅನೇಕ ಕಾಳಾಮುಖ ಪಂಡಿತರು ದೇವಾಲಯಗಳಿಗೆ ದಾನ, ದತ್ತಿಗಳನ್ನು ನೀಡಿದ್ದನ್ನು ಗಮನಿಸಬಹುದು.
ಶೈವ ಆಚಾರ್ಯರು (ಪಂಡಿತರು)
ಶೈವ ಆಚಾರ್ಯ ಅಥವಾ ಪಂಡಿತರು ಪ್ರಾಚೀನ ಕಾಲದಿಂದಲೂ ತಮ್ಮನ್ನು ವಿವಿಧ ನಾಮಾಂಕಿತಗಳಿಂದ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಇಂತಹ ನಾಮಾಂಕಿತ ಶೈವಪಂಡಿತರು ಹೂಲಿ ಪರಿಸರದಲ್ಲಿಯೂ ಗೋಚರಿಸುತ್ತಾರೆ. ಇಲ್ಲಿಯ ಶೈವಶಾಸನಗಳಲ್ಲಿ ಶಕ್ತಿ, ಪಂಡಿತ, ಆಚಾರ್ಯ ಇವುಗಳ ಉಲ್ಲೇಖಗಳಿವೆ.
ಶ್ರೀ ಜ್ಞಾನಶಕ್ತಿ : ಕ್ರಿ.ಶ. 12ನೆಯ ಶÀತಮಾನದ ಶಾಸನದಲ್ಲಿ ಉಲ್ಲೇಖಿತಗೊಳ್ಳುತ್ತಾರೆ. ಪಂಚಲಿಂಗೇಶ್ವರ ದೇವಾಲಯದ ಅಗ್ರಮಂಟಪದಲ್ಲಿರುವ ಮೊದಲನೆಯ ಸ್ತಂಭವನ್ನು ಇವರ ಶಿಷ್ಯನಾದ ನಾಗರಾಶಿಯು ಮಾಡಿಸಿದನು.
ತತ್ಪುರುಷ ಪಂಡಿತ : ಕ್ರಿ.ಶ. 1104ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಅಂಧಕೇಶ್ವರ ದೇವಾಲಯದ ಸ್ಥಾನಾಚಾರ್ಯರಾಗಿದ್ದರು. ಇವರ ಸಮಕ್ಷಮದಲ್ಲಿ ಶ್ರೀಮದ್ ಅಂಧಾಸುರದೇವರಿಗೆ ಪೆಗ್ರ್ಗಡೆಸಿಂಗರಸನು ಹನ್ನೊಂದು ಅಡಕೆ, ನಾಲ್ಕುನೂರು ಎಲೆಯನ್ನು ದಾನ ಮಾಡಿದನು.
ಸಿದ್ದೇಶ್ವರ ಪಂಡಿತ : ಕ್ರಿ.ಶ. 1107ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಕಳಶೇಶ್ವರ ದೇವರ ಆಚಾರ್ಯರಾಗಿದ್ದರು. ಕಳಸವಳ್ಳಿಗೇರಿಯ ಮಹಾಜನಗಳು ಕಳಸೇಶ್ವರ ದೇವರ ಖಂಡಸ್ಫುಟಿತಜೀರ್ಣೋದ್ಧಾರಕ್ಕೆ, ನೈವೇದ್ಯ ಮತ್ತು ತಪೆÇೀಧನರ ಆಹಾರ ದಾನಕ್ಕೆ ಇವರ ಸಮ್ಮುಖದಲ್ಲಿ ನಾಲ್ಕು ಕಮ್ಮ (ಭೂಮಿ) ದಾನ ಮಾಡಿದನು.
ವಾಮಶಕ್ತಿ ದೇವರು : ಕ್ರಿ.ಶ. 1224ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತದೇವರು ಅಂಧಾಸುರ ದೇವರ ಸ್ಥಾನಾಚಾರ್ಯರಾಗಿದ್ದರು.
ನಾಗರಾಶಿ ಪಂಡಿತ : ಕ್ರಿ.ಶ. 11-12ನೆಯ ಶತಮಾನದ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಶ್ರೀ ಜ್ಞಾನಶಕ್ತಿ ಗುರುಗಳ ಶಿಷ್ಯರಾಗಿದ್ದಾರೆ. ಇವರು ಪಂಚಲಿಂಗೇಶ್ವರ ದೇವಾಲಯದ ಅಗ್ರಮಂಟಪದ ಆಶ್ರಮದಲ್ಲಿರುವ ನೈಋತ್ಯ ಕಂಬವನ್ನು ಮಾಡಿಸಿದರು.
ಶೈವ ದೇವಾಲಯಗಳು : ಹೂಲಿಯಲ್ಲಿ ಒಟ್ಟು ಎಂಟು ದೇವಾಲಯಗಳಿವೆ. ಅದರಲ್ಲಿ ಅಂಧಾಸುರ ದೇವಾಲಯ ಮತ್ತು ಮಧುಕೇಶ್ವರ ದೇವಾಲಯ ಕಾಳಾಮುಖಶೈವ ಪಂಥದ ಆರಾಧನಾ ಚಟುವಟಿಕೆಯ ಕೇಂದ್ರಗಳಾಗಿವೆ. ಅಂಧಕೇಶ್ವರ ದೇವಾಲಯವು ದ್ವಿಕೂಟ ಮಾದರಿಯಲ್ಲಿದ್ದು, ಎರಡೂ ಗರ್ಭಗೃಹಗಳು ಎದುರು ಬದುರಾಗಿವೆ. ಎರಡು ಅಂತರಾಳಗಳು ಮತ್ತು ಒಂದೇ ಗೂಢಮಂಟಪವಿದೆ. ದಕ್ಷಿಣಕ್ಕೆ ಪ್ರವೇಶದ್ವಾರವಿದೆ. ಗರ್ಭಗೃಹದ ಪ್ರವೇಶದ್ವಾರದ ಮೇಲ್ಭಾಗದಲ್ಲಿರುವ ಉತ್ತರಾಂಗದಲ್ಲಿ ಕಾಳಾಮುಖ ಯತಿಗಳನ್ನು ಚಿತ್ರಿಸಲಾಗಿದೆ. ಅಂತರಾಳದಲ್ಲಿರುವ ಮಕರತೋರಣವನ್ನು ಅಂಧಕಾಸುರ ದೇವಾಲಯದ ಆಚಾರ್ಯರಾದ ಶ್ರೀ ಜ್ಞಾನಶಕ್ತಿಯು ಮಾಡಿಸಿದರು. ಇದನ್ನು ಕಂಡರಿಸಿದವನು ಮಾರ್ತಾಂಡ. ಮಕರತೋರಣದಲ್ಲಿ ಶಿವನತಾಂಡವ ನೃತ್ಯವಿದೆ. ಶಿವನು ಅಷ್ಟಭುಜಗಳನ್ನು ಹೊಂದಿದ್ದು, ಅಪಸ್ಮಾರನ ಮೇಲೆ ನಿಂತುಕೊಂಡು ನೃತ್ಯ ಮಾಡುತ್ತಿದ್ದಾನೆ. ಕೈಗಳಲ್ಲಿ ಖಡ್ಗ, ತ್ರಿಶೂಲ, ಖಟ್ವಾಂಗ, ಪಾನಪಾತ್ರ, ಅಗ್ನಿ, ಲೋಲ, ಜಪಮಾಲೆಯನ್ನು ಹಿಡಿದುಕೊಂಡಿದ್ದಾನೆÉ. ಶಿವನ ಬಲಭಾಗದಲ್ಲಿ ಚತುರ್ಮುಖ ಬ್ರಹ್ಮನು ಹಂಸದ ಮೇಲೆ ಲಲಿತಾಸನದಲ್ಲಿ ಆಸೀನನಾಗಿದ್ದಾನೆ. ಈತನು ಪಕ್ಕದಲ್ಲಿರುವ ವೈಕುಂಠ ವಿಷ್ಣುವಿಗೆ ಮೂರು ತಲೆಗಳಿರುವುದು ವಿಶೇಷವಾಗಿದೆ. ಈತನು ಪದ್ಮಪೀಠದ ಮೇಲೆ ಮಹಾರಾಜಾ ಲೀಲಾಸನದಲ್ಲಿ ಕುಳಿತಿದ್ದು, ಕೈಗಳಲ್ಲಿ ತಾಳ, ಪ್ರಯೋಗಚಕ್ರ, ಪದ್ಮವನ್ನು ಹಿಡಿದುಕೊಂಡಿದ್ದಾನೆ. ವಿಷ್ಣುವಿನ ಮೂರು ಮುಖಗಳಲ್ಲಿ 1. ಪೂರ್ವಕ್ಕೆ ಮುಖವಾಗಿ (ಮಧ್ಯದಲ್ಲಿ ಸೌಮ್ಯ), 2. ದಕ್ಷಿಣಕ್ಕೆ ಮುಖವಾಗಿ ನರಸಿಂಹ, 3. ಉತ್ತರಕ್ಕೆ ಮುಖವಾಗಿ ವರಾಹ ಮುಖಗಳಿರುವುದು ವಿಶೇಷವಾಗಿದೆ. ಈ ಮಕರತೋರಣದ ಕೆಳಪಟ್ಟಿಯಲ್ಲಿ ಎರಡು ಸಾಲಿನ ಶಾಸನವಿದೆ.
ಶಿಲ್ಪಗಳು : ಹೂಲಿಯಲ್ಲಿ ದೊರೆತ ಶಿಲ್ಪಗಳಲ್ಲಿ ಕಾರ್ತಿಕೆಯ ಗಣೇಶ, ನಟರಾಜ ಮತ್ತು ಭೈರವನ ಶಿಲ್ಪಗಳು ಪ್ರಮುಖವಾಗಿವೆ. ಇವೆಲ್ಲವೂ ಕ್ರಿ.ಶ. 11-12ನೆಯ ಶತಮಾನದ್ದಾಗಿವೆ.
ಹೂಲಿಯು ವಾಸ್ತುಕಲೆಯ ದೃಷ್ಟಿಯಿಂದ ವಿಭಿನ್ನ ಪರಂಪರೆಯ ಪ್ರತೀಕವಾಗಿದೆ. ಆದ್ದರಿಂದ ಆ್ಯಡಮ್ ಹಾರ್ಡಿ ಎಂಬ ವಿದ್ವಾಂಸರು ‘ಹೂಲಿ ಶೈಲಿ’ (ಊuಟi Sಛಿhooಟ) ಎಂಬ ವೈಶಿಷ್ಟ್ಯ ಸೂಚಕ ವರ್ಣನೆಯನ್ನು ಗುರುತಿಸಿದ್ದಾರೆ. ಈ ಗ್ರಾಮವು ಬೆಳ್ವೊಲ-300 ಆಡಳಿತ ವಿಭಾಗದಲ್ಲಿದ್ದರೂ ವಾಸ್ತು ವಿವರಗಳಲ್ಲಿ ಸಾಕಷ್ಟು ವೈಷಮ್ಯ ಕಾಣುತ್ತಿರುವುದು ವಿಶೇಷ. ಶೈವ ಶಾಸನಗಳಲ್ಲಿ ಆಚಾರ್ಯರ ಮತ್ತು ಪಂಡಿತರ ಉಲ್ಲೇಖಗಳಿದ್ದು, ಅವರೆಲ್ಲರುಗಳು ಸ್ಥಾನಾಚಾರ್ಯರಾಗಿದ್ದುಕೊಂಡು ಧರ್ಮವನ್ನು ಪುನರುಜ್ಜೀವನಗೊಳಿಸಿದ್ದಾರೆ. ಹೀಗಾಗಿ ಹೂಲಿ: ಒಂದು ಕಾಳಮುಖ ಮಹಾಅಗ್ರಹಾರವಾಗಿತ್ತೆಂದು ಹೇಳಬಹುದು.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ರಿತ್ತಿ ಶ್ರೀನಿವಾಸ, “ಬೆಳ್ವೊಲ ಮುನ್ನೂರು,” (1969) ಕರ್ನಾಟಕ ಭಾರತಿ, ಸಂಪುಟ-6, ಸಂಚಿಕೆ-1, ಪುಟ 80.
2. ಇ.I. ಸಂಪುಟ ಘಿಗಿIII, ಶಾ.ಸಂ. 22/ಂ, ಪುಟ 172-172.
3. ಇ.I. ಸಂಪುಟ ಘಿಗಿIII, ಶಾ.ಸಂ. 22/ಆ, ಪುಟ 183-186.
4. ಇ.I. ಸಂಪುಟ ಘಿಗಿIII, ಶಾ.ಸಂ. 22/ಇ, ಪುಟ 189-193.
5. ಇ.I. ಸಂಪುಟ ಘಿಗಿIII, ಶಾ.ಸಂ. 22/ಇ, ಪುಟ 197-198.
6. ಂ.ಖ.S.I.ಇ., 1940-41, ಂಠಿಠಿeಟಿಜix-ಇ, ಓo-25, P. 242.
7. S.I.I. ಸಂಪುಟ ಗಿ, ಶಾ.ಸಂ. 843, ಪುಟ 343.

  ಇತಿಹಾಸ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಗೋಳ, ಜಿಲ್ಲೆ ಧಾರವಾಡ-581113.

Monday, April 27, 2015

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆÇಸವೂರು

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆಸವೂರು
ಶಿವಯೋಗಿ ಕೋರಿಶೆಟ್ಟರ 
ಹಾವೇರಿ ತಾಲೂಕಿನ ಒಂದು ಪ್ರಾಚೀನ ಐತಿಹಾಸಿಕ ಗ್ರಾಮ ದೇವಿಹೊಸೂರು. ಹಾವೇರಿಯಿಂದ ನೈಋತ್ಯಕ್ಕೆ ಸುಮಾರು 8 ಕಿ.ಮಿ. ದೂರದಲ್ಲಿದೆ. ಅತ್ಯಂತ ಪ್ರಾಚೀನವಾಗಿರುವ ಗ್ರಾಮದಲ್ಲಿ ಹಲವಾರು ಶಿಲಾಶಾಸನಗಳು, ವೀರಗಲ್ಲುಗಳು, ಗೋಸಾಸಗಳು, ಕೋಣನ ತಲೆಶಿಲ್ಪ ವಿವಿಧ ದೇವಾಲಯಗಳು ಮೂರ್ತಿಶಿಲ್ಪಗಳು ಮುಂತಾದ ಪ್ರಾಚ್ಯ ಸ್ಮಾರಕಗಳನ್ನು ಕಾಣಬಹುದು. ಈ ಗ್ರಾಮವು ಶಾಸನಗಳಲ್ಲಿ ಪೊಸವೂರು, ದಿವ್ಯಾದ ಪೊಸವೂರು, ದೆಯ್ವದ ಪೊಸವೂರು, ದೇವಿಯ ಹೊಸವೂರು ಎಂಬುದಾಗಿ ಉಲ್ಲೇಖಿತಗೊಂಡಿದೆ. ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನತೆ ಹೊಂದಿರುವ ದಿವ್ಯಾದಪೊಸವೂರು ಪ್ರಾಚೀನ ಕುಂತಳ ದೇಶದ ಬನವಾಸಿ-12000ದ ಒಂದು ಕಂಪಣ ಬಾಸವೂರು-140ರ ಆಧೀನಕ್ಕೆ ಒಳಪಟ್ಟಿತ್ತು. ಮಲ್ಲಾರಿ ಮಾರ್ತಾಂಡನ ದೇವಿ ಮಾಳಚಿ ಇಲ್ಲಿ ನೆಲೆಗೊಂಡಿದ್ದರಿಂದಲೇ ದೇವಿಹೊಸೂರ ಎಂಬ ಹೆಸರು ಈ ಊರಿಗೆ ಬಂದಿತೆನ್ನಬಹುದು.
ದೇವಿಹೊಸೂರು ಪ್ರಾಚೀನ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ರಾಷ್ಟ್ರಕೂಟ 3ನೇ ಕೃಷ್ಣನ ಕ್ರಿ.ಶ. 961ರ ಶಾಸನವು ದೇವಿಹೊಸವೂರು ಅಗ್ರಹಾರದ ಮೊದಲ ಉಲ್ಲೇಖ ಹೊಂದಿದ್ದು, ಇದು ಪೊಸವೂರಿನ ಮಹಾಜನರನ್ನು ಉಲ್ಲೇಖಿಸುತ್ತದೆ. ಈ ಗ್ರಾಮವು ಮಾಳಜದೇವಿ ಲಬ್ದವರ-ಪ್ರಸಾದರಾಗಿದ್ದ ಸಾವಿರ ಮಹಾಜನರನ್ನು ಹೊಂದಿದ್ದ ಅಗ್ರಹಾರವಾಗಿತ್ತು. ದೇವಿಹೊಸವೂರಿನ ಅಗ್ರಹಾರವನ್ನು ಶಾಸನವು ಜನಮೇಜಯದತ್ತಿ ಅಗ್ರಹಾರ ಎಂದು ಉಲ್ಲೇಖಿಸಿರುವುದರಿಂದ ಈ ಅಗ್ರಹಾರವು ಅತ್ಯಂತ ಪ್ರಾಚೀನವಾದುದೆಂದು ತಿಳಿಯುತ್ತದೆ. ಇಲ್ಲಿನ ಮಹಾಜನ ಸಾಸಿರ್ವರು ದೇವಿಹೊಸವೂರು ಆಡಳಿತದ ಒಡೆತನ ಹೊಂದಿದ್ದು, ಇವರ ಸಮ್ಮಖದಲ್ಲಿಯೇ ಮಾಳಚಿ ದೇವಿಗೆ ದಾನದತ್ತಿಗಳನ್ನು ನೀಡಲಾಗಿದೆ. ಸಾಸಿರ್ವರೂ ಕೂಡಾ ದಾನಗಳನ್ನು ನೀಡಿದ ಮತ್ತು ಸ್ವೀಕರಿಸಿದ ಬಗ್ಗೆ ಶಾಸನಗಳು ಉಲ್ಲೇಖಿಸಿವೆ. ರಾಷ್ಟ್ರಕೂಟರ ಕಾಲದಿಂದ ಹಿಡಿದು ಯಾದವರ ಕಾಲದವರೆಗೂ ಈ ಗ್ರಾಮದ ಮೇಲೆ ಹಿಡಿತ ಹೊಂದಿದ್ದ ಮಹಾಜನ ಸಾಸಿರ್ವರು ಅಲ್ಲಿನ ಶಾಸನೋಕ್ತ ಮಾಳಚಿ, ಭೋಗೇಶ್ವರ, ಹಾಗೂ ಗವರೇಶ್ವರ ದೇವಾಲಯಗಳಲ್ಲದೇ, ಗ್ರಾಮದ ಇತರೆ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ದಿವ್ಯಾದಪೊಸವೂರನ ಮಾಳಚಿ ದೇವಾಲಯ ಹಾಗೂ ಮೈಲಾರಲಿಂಗ ದೇವಾಲಯಕ್ಕೂ ಸಾಂಸ್ಕøತಿಕ ಸಂಬಂಧ ಇರುವಂತೆ ತೋರುತ್ತದೆ. ಜನಪದ ಪುರುಷ ದೇವತೆ ಏಳುಕೋಟೆ ಅಥವಾ ಮೈಲಾರಲಿಂಗ ಭಕ್ತರಿಗೆ ಪ್ರತ್ಯಕ್ಷ ಶಿವ ಮಣಿಮಲ್ಲರೆಂಬ ದೈತ್ಯರನ್ನ ಸಂಹರಿಸಲು ಭೂಲೋಕಕ್ಕೆ ಬಂದು ಕಂಬಳಿ ಕಂತೆಯ ವೇಷತೊಟ್ಟನು. ತಲೆಯ ಮೇಲೆ ಮುರುಗಿ-ಮುಂಡಾಸ, ಕೈಯಲ್ಲಿ ತ್ರೀಶೂಲ, ಡಮರು, ಭಂಡಾರ ಚೀಲ, ಗಂಟೆ, ಡೋಣಿ ಧರಿಸಿ ದೇವರಗುಡ್ಡ ಸಮೀಪ ಶಿಡಗಿನಹಾಳ ಗ್ರಾಮದ ಪಶ್ಚಿಮದ ಕರಿಯಾಲದಲ್ಲಿ ಹಲವಾರು ರಾಕ್ಷಸರನ್ನ ಸಂಹರಿಸಿ ಅಂತಿಮವಾಗಿ ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಮಲ್ಲಾಸುರನನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಏಳುಕೋಟಿ, ಮೈಲಾರಲಿಂಗ, ಮಲ್ಲಾರಿ, ಮಾರ್ತಾಂಡಭೈರವ, ಖಂಡೋಬಾ, ಮಾಲತೇಶ ಮುಂತಾದ ಹೆಸರುಗಳಿಂದ ಈತನನ್ನು ಕರೆಯಲಾಗಿದೆ.
ಗಂಗಿಮಾಳವ್ವ ಅಥವಾ ಮಾಳಚಿದೇವಿ ಮೈಲಾರಲಿಂಗನ ಪಟ್ಟದ ಹೆಂಡತಿ, ಕುರುಬತೆವ್ವ ಅಥವಾ ಕುರುಬರ ಮಾಳವ್ವ ಎರಡನೇ ಹೆಂಡತಿ. ಗಂಗಿಮಾಳವ್ವನ ಮೇಲಿನ ಹಠದಿಂದ ಇವಳನ್ನು ತಂದನೆಂಬುದು ನಂಬುಗೆ. ಇವರೀರ್ವರಿಗೂ ಹೆಗ್ಗಡೆಯೇ ಅಣ್ಣ. ಬನಾಯಿ, ಬನಶಂಕರಿ, ಬಾಣಾಯಿ ಮುಂತಾದ ಹೆಸರುಗಳಿಂದಲೂ ಈ ದೇವತೆಯನ್ನು ಕರೆಯಲಾಗಿದೆ. ಮೈಲಾರ ಮತ್ತು ದೇವರಗುಡ್ಡದಲ್ಲಿನ ಮಾಳಚಿ ಹಾಗೂ ಕುರುಬತೆವ್ವನ ಮೂರ್ತಿಗಳಲ್ಲಿ ಹೋಲಿಕೆಯನ್ನು ಕಾಣಬಹುದು. ಇವು ಮೈಲಾರಲಿಂಗನ ತದ್ವತ್ತಾದ ಸ್ತ್ರೀಮೂರ್ತಿಗಳಾಗಿವೆ. ಅಂದರೆ ಬಲದ ಕೈಗಳಲ್ಲಿ ಖಡ್ಗ ತ್ರಿಶೂಲಗಳು, ಎಡದ ಕೈಯಗಳಲ್ಲಿ ಪಾನಪಾತ್ರೆ ಡಮರುಗಳೂ ಇವೆ. ಮೈಲಾರಲಿಂಗನಿಗೆ ಮೈಲಾರ ಹಾಗೂ ದೇವರಗುಡ್ಡ ನೆಲೆಗಳಾಗಿರುವ ಹಾಗೆ ಮಾಳಚಿದೇವಿಗೆ ದೇವಿಹೊಸವೂರು ನೆಲೆಯಾಗಿತ್ತು.
ಪ್ರಸ್ತುತ ಗ್ರ್ರಾಮದ ಹೊರಗೆ ಇರುವ ಬನಶಂಕರಿ ದೇವಸ್ಥಾನವೇ ಮಾಳಚಿ ದೇವಸ್ಥಾನವಾಗಿದೆ. ಈ ಬಗ್ಗೆ ಇಲ್ಲ್ಲಿನ ಶಾಸನಗಳು ಉಲ್ಲೇಖ ಹೊಂದಿವೆ. ಯೋಗಪೀಠಕ್ಕಿಂತ ಮಿಗಿಲಾದ ಮಾಳಜ ಪೀಠ ಇದೆಂದು ಶಾಸನವೊಂದು ಬಣ್ಣಿಸಿದೆ. ಊರಿನ ಉತ್ತರಕ್ಕೆ ಇರುವ ದೊಡ್ಡಕೆರೆಯ ಸಮೀಪದಲ್ಲಿರುವ ಮಾಳಚಿ ದೇವಾಲಯವು ಭೌಗೋಳಿಕವಾಗಿ ಎತ್ತರದ ದಿನ್ನೆಯ ಆಯಕಟ್ಟಿನ ಜಾಗದಲ್ಲಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತನ್ನದೇ ಆದ ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ಸುಮಾರು 10ನೇ ಶತಮಾನದಲ್ಲಿ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ದೇವಾಲಯದ ಗರ್ಭಗೃಹದಲ್ಲಿನ ಮೂರ್ತಿಯು ಕಾಲಾಂತರದಲ್ಲಿ ಸ್ಥಳಾಂತರಗೊಂಡಿದ್ದು, ಈಗ ಗಣಪತಿಯ ಮೂರ್ತಿ ಇದೆ. ಇಲ್ಲಿನ ದೇವಿ ಮೂರ್ತಿಯನ್ನು ಊರಿನಲ್ಲಿರುವ ಬನಶಂಕರಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಕರ ಅಭಿಪ್ರಾಯ. ಸುಕನಾಸಿಯ ದ್ವಾರದ ಮೇಲ್ಭಾಗದ ಪಟ್ಟಿಕೆಯಲ್ಲಿ ಎರಡು ಮಕರಗಳ ನಡುವೆ ಮಾಳಚಿಯ ವಿಗ್ರಹವನ್ನು ಕೆತ್ತಲಾಗಿದೆ. ಚತುರ್ಭುಜೆಯಾಗಿರುವ ಮಾಳಚಿ ಕೈಗಳಲ್ಲಿ ಕ್ರಮವಾಗಿ ಕತ್ತಿ, ಡಮರು, ತ್ರಿಶೂಲ ಮತ್ತು ಕಪಾಲಗಳಿವೆ.  ಇನ್ನುಳಿದಂತೆ ಬಾಗಿಲುವಾಡ ಸರಳವಾದ್ದು, ಪಕ್ಕದಲ್ಲಿ ಸುಂದರ ಜಾಲಂದ್ರಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳು ಕಲಾತ್ಮಕವಾಗಿ ನಿರ್ಮಿಸಲ್ಪಟ್ಟಿವೆ. ಅವುಗಳ ಮಧ್ಯದ ಛತ್ತಿನಲ್ಲಿ ಕಮಲದಳಗಳ ಉಬ್ಬು ಚಿತ್ರದ ವಿತಾನವಿದೆ. ಬದಿಗಳಲ್ಲಿ ನಾಗಗಳಿವೆ. ದೇವಾಲಯದ ಗರ್ಭಗೃಹ ಹಾಗೂ ಅಂತರಾಳದ ಭಿತ್ತಿಗಳು ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿವೆ. ಗೋಡೆಗುಂಟ ಅರ್ಧಕಂಭಗಳಿದ್ದು ಪೀಠ, ಕಾಂಡ, ಕಂಠ ಹಾಗೂ ಬೋದಿಗೆಗಳಿಂದ ಅಲಂಕೃತಗೊಂಡಿವೆ. ಮುಖಮಂಟಪವು ಹನ್ನೆರಡು ಕಂಭಗಳನ್ನು ಹೊಂದಿದ್ದು, ನವೀಕರಣಗೊಂಡಿದೆ. ಗರ್ಭಗೃಹದ ಶಿಖರವು ಶಿಥಿಲಗೊಂಡು ದುರಸ್ತಿಯಾಗಿದೆ.
ಮಾಳಚಿ ದೇವಾಲಯವು ವಿಶಾಲವಾದ ಪ್ರಾಕಾರ ಹೋದಿದ್ದು, ದೇವಾಲಯದ ಸುತ್ತಲೂ ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳಿವೆ. ಇವುಗಳಲ್ಲಿನ ಮೂರ್ತಿಗಳು ಕಾರಣಾಂತರಗಳಿಂದ ಚದುರಿ ಹೋಗಿವೆ. ದೇವಾಲಯದ ಸುತ್ತಲೂ ಇರುವ ಆವಾರದಲ್ಲಿ ಶಿವಲಿಂಗಗಳು ಹಾಗೂ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳÀನ್ನು ಗುರುತಿಸುವುದು ಕಷ್ಟವೆನಿಸಿದರೂ, ಈ ಚಿಕ್ಕ ಮಂದಿರಗಳು ಮೈಲಾರಲಿಂಗ ಹಾಗೂ ಮಾಳಚಿಯರ ಪರಿವಾರ ದೇವತೆಗಳಾದ ರಣದಾಗ್ನಿ, ಕೋಮಾಲೆ, ಚಿಕ್ಕಯ್ಯ, ಜುಂಜಯ್ಯ, ಹೆಗ್ಗಡೆ ಮುಂತಾದವರಿಗಾಗಿ ನಿರ್ಮಿಸಿದವುಗಳಂತೆ ತೋರುತ್ತವೆ. ಮಾಳಚಿ ದೇವಾಲಯದ ಮುಂದೆ ಸಾಲಾಗಿ ಅಲ್ಲಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಪಾದಪೀಠಗಳನ್ನು ಕಾಣಬಹುದು. ದೇವಾಲಯದ ಪ್ರಾಕಾರದಲ್ಲಿ ಇಂತಹ ಮೂರು ಪಾದಪೀಠಗಳಿವೆ. ಪಾದಪೀಠಗಳು ಪ್ರಾಕಾರದ ಹೊರಗೂ ರಸ್ತೆಬದಿಯ ಹೊಲದಲ್ಲಿಯೂ ವಿಸ್ತರಿಸಿವೆ. ಇಂತಹ ಜೋಡುಪಾದ ಮುದ್ರೆಗಳನ್ನು ಹೆಡೆಬಿಚ್ಚಿದ ಹಾವುಗಳು ಸುತ್ತಿದಂತೆ ಕೆತ್ತಲಾಗಿದೆ. ಈ ಪ್ರಾಕಾರದ ಹಿಂಬದಿಯಲ್ಲಿ ಅಯ್ಯನ ಹೊಂಡವಿದ್ದು, ಇದರ ದಂಡೆಯ ಮೇಲೆ ಗಜಲಕ್ಷ್ಮಿ ಹಾಗೂ ಕೋಣನತಲೆ ಶಿಲ್ಪಗಳಿವೆ. ಗಜಲಕ್ಷ್ಮಿ ಶಿಲ್ಪವು ಅತ್ಯಂತ ಆಕರ್ಷಕವಾಗಿದ್ದು, ನಾಲ್ಕು ಆನೆಗಳ ಮಧ್ಯದಲ್ಲಿ ಕುಳಿತ ಗಜಲಕ್ಷ್ಮಿಯ ಮೇಲ್ಭಾಗದ ಎರಡು ಆನೆಗಳು ತಮ್ಮ ಸೊಂಡಿಲುಗಳಲ್ಲಿ ಕುಂಭಗಳನ್ನು ಹೊತ್ತು ದೇವಿಗೆ ಅಭಿಷೇಕ ಮಾಡುತ್ತಿವೆ. ಈ ಗಜಲಕ್ಷ್ಮಿ ಶಿಲ್ಪದ ಬಳಿಯಲ್ಲಿಯೆ ಕೋಣನ ತಲೆಯುಳ್ಳ ಶಿಲ್ಪವಿದೆ. ಹರವಾದ ಕಲ್ಲುಚಪ್ಪಡಿಯ ಮೇಲೆ ನೆಲಕ್ಕೆ ಒರಗಿದಂತೆ ಕಂಡುಬರುವ ಇದರ ನಾಲಿಗೆ ಹೊರಚಾಚಿದೆ. ಕೋಡುಗಳ ಮಧ್ಯದಲ್ಲಿ ಅರಳಿದ ಕಮಲವಿರುವ ಉಬ್ಬುಶಿಲ್ಪ ಇದಾಗಿದೆ. ಕೆರೆ ಕಟ್ಟೆಗಳ ಬಳಿಯಲ್ಲಿ ಜೋಡಾಗಿಯೇ ಕಂಡುಬರುವ ಇಂತಹ ಶಿಲ್ಪಗಳು ವನದುರ್ಗೆಯ  ಸಂಕೇತವನ್ನು ಪ್ರತಿನಿಧಿಸುತ್ತವೆ.
ದೇವಾಲಯ ಪ್ರಾಕಾರದ ಸುತ್ತಲೂ ಶಿಲೆಯ ಸಮುಚ್ಯಯದ ಪ್ರಾಕಾರ ನಿರ್ಮಿಸಿದ್ದು, ಅದು ಅಲ್ಲಲ್ಲಿ ಶಿಥಿಲಗೊಂಡಿದೆ. ದೇವಾಲಯಕ್ಕೆ ಪ್ರಾಕಾರದ ಒಳಗೆ ಪ್ರವೇಶಿಸಲು ಎತ್ತರವಾದ ಸ್ಥಂಭಗಳುಳ್ಳ ಆಕರ್ಷಕ ಮಕರ ತೋರಣವಿದೆ. ಎರಡು ಸ್ಥಂಭಗಳ ಮೇಲೆ ಅಡ್ಡಲಾಗಿ ಕೂಡಿಸಿದ ಪಟ್ಟಿಕೆಯ ಹೊರಮುಖದ ಮಕರತೋರಣದ ಮಧ್ಯದಲ್ಲಿ ಸವ್ಯ ಲಲಿತಾಸನದಲ್ಲಿ ಕುಳಿತಿರುವ ಮೂವರು ದೇವತೆಗಳನ್ನು ಖಂಡರಿಸಲಾಗಿದೆ. ಬದಿಯಲ್ಲಿ ಕುದುರೆ ಸವಾರರು ಒಬ್ಬ ಭಕ್ತೆ ಹಾಗೂ ಮೂವರು ಆನೆ ಸವಾರರಿದ್ದಾರೆ. ಈ ಮಕರ ತೋರಣದ ಒಂದು ಸ್ಥಂಭದಲ್ಲಿ ಕಲ್ಯಾಣ ಚಾಲುಕ್ಯ ದೊರೆ 1ನೇ ಸೋಮೇಶ್ವರನ ಆಳ್ವಿಕೆಯ ಕಾಲದ ಶಾಸನವಿದ್ದು, ಇದು ಮಹಾಸಾಮಂತ   ಜೋಮದೇವರಸನ ರಕ್ಷಕ ಇಂದಪಯ್ಯ ಈ ಮಕರ ತೋರಣವನ್ನು ನಿರ್ಮಿಸಿದನೆಂದು ಉಲ್ಲೇಖಿಸಿದೆ. ಇದರಿಂದಾಗಿ ಮಾಳಚಿ ದೇವಾಲಯವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ, ನಂತರದಲ್ಲಿ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಈ ದೇವಾಲಯದ ಇತರೆ ಅಭಿವೃದ್ದಿಗಳಾಗಿರುವ ಸಂಗತಿಯನ್ನು ಗುರುತಿಸಬಹುದು.
“ಕಾಳಿಗೆ, ಕಾಳರಾಕ್ಷಸಿಗೆ, ರೌದ್ರೆಗೆ,
ಭೈರವಿ ಗುಗ್ರೇಗಾ ಮಹಾಕಾಳಿಗೆ,
ಕಾಳಯೋಗಿನಿಗೆ, ಮಾಲಿಚದೇವತೆಗಿನ್ದರಂ” ಎಂಬುದಾಗಿ ಇಲ್ಲಿನ ಶಾಸನವೊಂದು ಮಾಳಚಿದೇವಿಯ ವಿವಿಧ ರೂಪಗಳನ್ನು ವರ್ಣಿಸಿದೆ. ದೇವಿಹೊಸವೂರಿನ ಮಾಳಚಿದೇವಿ ಆ ಕಾಲದ ಪ್ರಸಿದ್ದ ಶಕ್ತಿದೇವತೆಯಾಗಿದ್ದು, ಸಹಜವಾಗಿಯೆ ಅಪಾರ ಭಕ್ತಸಮೂಹವನ್ನು ಹೊಂದಿದ್ದಳು. ಇವಳ ಆಶೀರ್ವಾದ ಪಡೆದು ಕೃತಾರ್ಥರಾಗಲು ಅರಸರು, ಸಾಮಂತರು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆಹೊತ್ತು ಹಲವಾರು ದಾನದತ್ತಿಗಳನ್ನು ನೀಡುತ್ತಿದ್ದರು. ಕಲ್ಯಾಣದ ಚಾಲುಕ್ಯ ದೊರೆ 2ನೇ ಜಗದೇಕಮಲ್ಲನ ಕಾಲದ ಇಲ್ಲಿನ ಶಾಸನವು ದಂಡನಾಯಕ ರೇಚರಸ ಬನವಾಸಿ-12000ವನ್ನು ಆಳುತ್ತಿದ್ದ ಉಲ್ಲೇಖವನ್ನು ಹೊಂದಿದೆ. ದಂಡನಾಯಕ ರೇಚರಸ ಮತ್ತು ಸುಂಕಾಧಿಕಾರಿ ದೇವಧರದಂಡನಾಯಕರು, ಅಲ್ಲಿನ ಮಹಾಜನ ಸಾಸಿರ್ವರ ಸಮ್ಮುಖದಲ್ಲಿ, ದೇವಿಯ ಪರ್ವದಂದು, ಅಗ್ರಹಾರ ದಿವ್ಯಾದ ಪೊಸವೂರಿನ ಮಾಳಚಿದೇವಿಯ ಉಯ್ಯಲ ಪರ್ವಕ್ಕೆ ಭೂದಾನ ಮಾಡಿ, ತನ್ನ ಹರಕೆ ತೀರಿಸಿದ್ದ ಸಂಗತಿಯನ್ನು ಉಲ್ಲೇಖಿಸಿದೆ. ಸಿಂಧರ ಅರಸನು ಇವಳ ಭಕ್ತನಾಗಿದ್ದ ಬಗ್ಗೆ, ಸುಂಕದಾನ ಮತ್ತು ಇನ್ನಿತರ ದಾನಗಳ ಬಗ್ಗೆ ಬೇರೆ ಶಾಸನಗಳಲ್ಲಿ ಉಲ್ಲೇಖನಗಳನ್ನು ಕಾಣಬಹುದು.
ರಾಷ್ಟ್ರಕೂಟರ ಕಾಲದಿಂದಲೂ ಅರಸರು, ಮಾಂಡಳೀಕರು, ಅಧಿಕಾರಿಗಳ ಪ್ರೋತ್ಸಾಹ ಹಾಗೂ ಮಹಾಜನ ಸಾಸಿರ್ವರ ನೇತೃತ್ವದಲ್ಲಿ ಪ್ರಸಿದ್ದ ಶಕ್ತಿದೇವತೆಯ ಆರಾಧನಾ ಕೇಂದ್ರ ಎನಿಸಿದ್ದ ಇದು ಕಲ್ಯಾಣದ ಚಾಲುಕ್ಯರು, ದೇವಗಿರಿಯ ಯಾದವ ದೊರೆಗಳ ಕಾಲದಲ್ಲಿ ಪ್ರಖ್ಯಾತಿಯ ಪರಾಕಾಷ್ಠೆ ತಲುಪಿತ್ತೆನ್ನಬಹುದು. ಆನಂತರದಲ್ಲಿ ಈ ಮಾಳಜಪೀಠ ಕ್ರಮೇಣವಾಗಿ ತನ್ನ ಪ್ರಖ್ಯಾತಿ ಕಳೆದುಕೊಂಡಿದ್ದಿರಬಹುದಾದರೂ, ಇಂದಿಗೂ ಅಪಾರ ಭಕ್ತ ಸಮೂಹವನ್ನು ಈ ದೇವಿ ಹೊಂದಿರುವುದಕ್ಕೆ ದೇವಾಲಯದಲ್ಲಿ ಈಗಲೂ ನಡೆಯುವ ಪೂಜೆ ಹಾಗೂ ಪರ್ವಗಳೇ ಸಾಕ್ಷಿಯಾಗಿವೆ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಸೌಥ್ ಇಂಡಿಯನ್ ಇನ್‍ಸ್ಕ್ರಿಪ್ಸನ್ಸ್ : ಸಂಪುಟ 18, ನ್ಯೂಡೆಲ್ಲಿ, 1975.
2. ಸೂರ್ಯನಾಥ ಕಾಮತ್. (ಸಂ) ಧಾರವಾಡ ಜಿಲ್ಲಾ ಗೆಸೆಟಿಯರ್, ಬೆಂಗಳೂರು, 1995.
3. ಎಂ.ಬಿ. ನೇಗಿನಹಾಳ, ನೇಗಿನಹಾಳ ಪ್ರಬಂಧಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಮಹದೇವ. ಸಿ. ಹಾಗೂ ಇತರರು, ಕರ್ನಾಟಕ ದೇವಾಲಯ ಕೋಶ, ಹಾವೇರಿ ಜಿಲ್ಲೆ, ಹಂಪಿ, 1999.
5. ಭೋಜರಾಜ ಬ. ಪಾಟೀಲ, ನಾಗರಖಂಡ-70 ಒಂದು ಅಧ್ಯಯನ, ಆನಂದಪುರಂ, 1995.

  ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ-581110.

Thursday, April 9, 2015

ಬ್ರಾಹ್ಮಿ ಲಿಪಿ

Tuesday, February 24, 2015


ಬ್ರಾಹ್ಮಿ ಲಿಪಿ

ಭಾರತೀಯ ಲಿಪಿಗಳ ಮಾತೆ ಬ್ರಾಹ್ಮಿ

                  ಭಾರತದಲ್ಲಿ ಈವರೆಗೆ ಅರ್ಥೈಸಿರುವ  ಅತಿಪುರಾತನ ಲಿಪಿಗಳಲ್ಲಿ ಬ್ರಾಹ್ಮಿ ಪ್ರಮುಖವಾದುದು. ಅದಕ್ಕೆ ಮುಂಚೆ  ಚಿತ್ರಲಿಪಿಗಳು ಮತ್ತು ಆದಿಮಾನವನ ಬರಹಗಳು ಕಂಡುಬಂದಿವೆ. ಆದರೆ ಪೂರ್ಣವಾಗಿ ಅರ್ಥೈಸಲು ಆಗಿಲ್ಲ ಹರಪ್ಪ  ನಾಗರೀಕತೆ ಪ್ರದೇಶದಲ್ಲಿ ದೊರೆತಿರುವ ಅನೇಕ ಲಿಪಿಗಳು ವಿಶೇಷವಾಗಿ ಮಡಕೆ ಚೂರು ಮತ್ತು ಮುದ್ರೆಗಳೂ. ಅವುಗಳ  ಮೇಲಿನ ಬರಹಗಳನ್ನು ಪೂರ್ಣವಾಗಿ ತಿಳಿಯಲಾಗಿಲ್ಲ.  ಬಹುಶಃ ಅವೇ ಈ  ಬ್ರಾಹ್ಮಿಲಿಪಿಯ ಉಗಮಕ್ಕೆ ಕಾರಣ ವಾಗಿರಬಹುದು. ಈಗ ಹರಪ್ಪ ಲಿಪಿಗಳಿಗೂ ಬ್ರಾಹ್ಮಿ ಲಿಪಿಗೂ ಇರುವ  ಸಂಬಂಧ ಕುರಿತಾದ ಸಂಶೋಧನೆ ಜಾರಿಯಲ್ಲಿದೆ. ಆದರೂ ಎರಡೂ ಲಿಪಿಗಳಲ್ಲಿ ಬಹಳ ವ್ಯತ್ಯಾಸವಿದೆ.  ಹರಪ್ಪ  ಲಿಪಿಗಳು ಭಾವಸೂಚಕಗಳು ಅವು ತಮ್ಮದೆ ಆದ ಧ್ವನಿ ಪ್ರತಿನಿಧಿಸುತ್ತವೆ. ಭಾವವನ್ನು ಸೂಚಿಸುವ ಚಿತ್ರಲಿಪಿಗಳು.ಪ್ರತಿ ಅಕ್ಷರವೂ ಬಹು ಅರ್ಥ ಕೊಡಬಹುದು. ಆದರೆ ಬ್ರಾಹ್ಮಿ ಲಿಪಿಗಳಲ್ಲಿ ಪ್ರತಿ ಅಕ್ಷರವೂ  ಅರ್ಥ ಹೊಂದಿವೆ.ಮೂಲವನ್ನು ಅರಿಯುವ ಇನ್ನೊಂದು ವಿಧಾನವೆಂದರೆ ಬ್ರಾಹ್ಮಿ ಮತ್ತು ಜಗತ್ತಿನ ಇತರೆ ಲಿಪಿಗಳಿಗೆ ಇರುವ ಸಂಬಂಧ ತಿಳಿಯುವುದು..
ಬ್ರಾಹ್ಮಿ ಲಿಪಿಯು ಭಾರತದ ವಿವಿಧ ಪ್ರದೇಶಗಳ ಪ್ರಾದೇಶಿಕ ಭಾಷೆಗಳ ಲಿಪಿಗಳ ಮಾತೆ.  ಅದರಲ್ಲಿ ಎರಡು ವಿಧ. ಉತ್ತರ ಮತ್ತು ದಕ್ಷಿಣದ ಬ್ರಾಹ್ಮಿ.ಅಶೋಕನ ಬ್ರಾಹ್ಮಿಲಿಪಿಯನ್ನು  ಸಂಸ್ಕೃತಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ಬರೆಯಲು ಬಳಸಿದ್ದರು.. ಇನ್ನೊಂದು ದಕ್ಷಿಣದ  ತಮಿಳುಬ್ರಾಹ್ಮಿಅದರಿಂದಲೇ ದಕ್ಷಿಣಭಾರತದ ಭಾಷೆಗಳ ಲಿಪಿಗಳು ರೂಪಗೊಂಡವು. ಅವೆರಡೂ ಅಲ್ಲದೆ ಇನ್ನೊಂದು  ಕ್ರಿ.ಪೂರ್ವ ಅವಧಿಯಲ್ಲಿ ಅದೇ ಕಾಲದಲ್ಲಿ ಪ್ರಚಲಿತವಾಗಿದ್ದ ಲಿಪಿ ಇತ್ತು ಅದೇ ಖರೋಷ್ಠಿ. ಅದು ವಾಯವ್ಯಭಾರತ ಆಫ್ಘನಿಸ್ತಾನ ಮತ್ತು ಈಗಿನ ಪಾಕಿಸ್ತಾನ ಪ್ರದೇಶದಲ್ಲಿ ವ್ಯಾಪಕವಾಗಿತ್ತು .    
ಸಾಂಪ್ರದಾಯಿಕ ನಂಬುಗೆಯಂತೆ ಬ್ರಹ್ಮನೇ ಬ್ರಾಹ್ಮೀಲಿಪಿಯ ಜನಕ.ಬೌದ್ದರ ಲಲಿತ ವಿಸ್ತಾರ ಗ್ರಂಥದ ಪ್ರಕಾರ ಬುದ್ದನಿಗೆ ೬೪ ಲಿಪಿಗಳು ತಿಳಿದಿದ್ದವು.ಅದರಲ್ಲಿ ಬ್ರಾಹ್ಮೀ ಮತ್ತು ಖರೋಷ್ಠಿ ಸಹಾ ಸೇರಿವೆ. ಜೈನ ಗ್ರಂಥಗಳ ಪ್ರಕಾರ ಆದಿ ದೇವನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳಾದ ಬ್ರಾಹ್ಮಿಗೆ  ಲಿಪಿ ಮತ್ತು ಎರಡನೆಯವಳಿಗೆ ಗಣಿತ ಕಲಿಸಿದನು.ಅದರಿಂದಲೇ ಬ್ರಾಹ್ಮಿ ಎಂಬ ಹೆಸರು ಬಂದಿರಬಹುದು. ಅದರ ಕಾಲಮಾನ ಕ್ರಿ. ಪೂ. ೯ನೆಯ ಶತಮಾನ.
  
. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದವರೆಗೆ ಬ್ರಾಹ್ಮಿ ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳಿಗೆ ವಿದ್ವಾಂಸರು ವಿವಿಧ ಹೆಸರಿನಿಂದ ಕರೆಯುತಿದ್ದರು.ಲಾತ್‌ ,ಲಾಟ್‌( ಸಂಸ್ಕೃತದಲ್ಲಿ ಯಾಸ್ತ ಅಂದರೆ ಅವು ಹೆಚ್ಚಾಗಿ ಸ್ಥಂಭದಮೇಲೆ ಕಂಡುಬರುತಿದ್ದವು.) ದಕ್ಷಿಣ ಅಶೋಕನ್‌ ಇಂಡಿಯನ್‌ಪಾಲಿ, ಮೌರ್ಯನ್‌ ಇತ್ಯಾದಿ.  ಅದಕ್ಕೆ ಬ್ರಾಹ್ಮಿ ಎಂಬ ಹೆಸರಿನ ಸೂಚನೆ ಮೊದಲು ಬೌದ್ಧರ ಮತ್ತು ಜೈನರ ಗ್ರಂಥಗಳ ಮೂಲಕ ಬಂದಿತು.ಲಿಲಾವತಿಸಾರ ಎಂಬ ಗ್ರಂಥದ ಚೀನೀ ಅನುವಾದವಾದ ವಿಶ್ವ ಕೋಶ  ಫಾಯಾನ್‌ಚು ಲಿನ್‌” ’ನಲ್ಲಿ . ಉಲ್ಲೇಖವಾದುದನ್ನು ಟೆರೀನ್ ಡಿ ಲಕೌಪರೀ ಯು ಗಮನಿಸಿದ ಎಡದಿಂದ ಬಲಕ್ಕೆ ಬರೆಯುವ ( ಇಂಡೊ ಪಾಲಿ ಲಿಪಿ ಬ್ರಾಹ್ಮಿ) ಮತ್ತು ಬಲದಿಂದ ಎಡಕ್ಕ ಬರೆಯುವ ಲಿಪಿ ( ಬ್ಯಾಕ್ಟ್ರೊ ಪಾಲಿ, ಅದರಿಂದ ಖರೋಷ್ಟಿ )ಗುರುತಿಸಿಲಾಗಿದೆ.
                  ಬ್ರಾಹ್ಮಿ ಎಂಬ ಹೆಸರನ್ನು ಸ್ಥೂಲವಾಗಿ ಮತ್ತು ಅನುಕೂಲಕ್ಕಾಗಿ ಅಶೋಕನ ಲಿಪಿಗಳನ್ನು ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳನ್ನು 6ನೆಯ ಶತಮಾನದ ಗುಪ್ತರ ಅವಧಿಯವರೆಗೆ ಬಳಕೆ ಮಾಡಿದರು.ನಂತರ ವಿಭಿನ್ನವಾದ  ಪ್ರಾದೇಶಿಕ ಮತ್ತು ಸ್ಥಾನೀಯ ಲಿಪಿಗಳು ಅಭಿವೃದ್ಧಿ ಪಡೆದವು ಅವನ್ನು ಪ್ರತ್ಯೇಕ ಲಿಪಿಗಳೆಂದು ಪರಿಗಣಿಸಲಾಯಿತು. ಅವುಗಳು ಭೌಗೋಲಿಕ ವಿಭಿನ್ನತೆ ಹೊಂದಿದ್ದವು
  ಬ್ರಾಹ್ಮಿ ಲಿಪಿಯ ಮೂಲವು ಭಾರತೀಯ ಲಿಪಿಶಾಸ್ತ್ರದಲ್ಲಿ ಬಹು ಚರ್ಚಿತ ವಿಷಯವಾಗಿದೆ.  ಈ ಲಿಪಿಯ  ಮೂಲ  ಕುರಿತು    ಸ್ಥೂಲವಾಗಿ ಎರಡು ಅಭಿಪ್ರಾಯಗಳಿವೆ.
1.     ದೇಶೀಯ ಮೂಲ                2.     ವಿದೇಶಿ ಮೂಲ
    ವಿದ್ವಾಂಸರಾದ ಅಲೆಕ್ಜಾಂಡರ್‌ ಕನ್ನಿಂಗ್‌ಹ್ಯಾಮ್‌ಜಿ.ಎಚ್‌. ಓಜಾಆರ್‌.ಬಿ ಪಾಂಡೆ ಮೊದಲಾದವರ ಪ್ರಕಾರ ಬ್ರಾಹ್ಮಿಯು ದೇಶಿಯ ಜನ್ಯ ಲಿಪಿ.ಆದರೆ ಅದರ ಬೆಳವಣಿಗೆಯ ಕುರಿತು ನಿರ್ಧಿಷ್ಟ ವಿವರಣೆ ಇಲ್ಲ ಆಂಗ್ಡನ್‌.ಎಸ್‌. ಹಂಟರ್‌ಜಿ.ಆರ್ಕನ್ನಿಂಗ್‌ಹ್ಯಾಮ್ 1931,ರಲ್ಲಿ ಇಂಡಸ್‌ಲಿಪಿಯ ಮೂಲವನ್ನು ತಮಗೆ ದೊರಕಿದ ಒಂದು ಮುದ್ರೆಯ ಆಧರಿಸಿಅದರ   ಮೂಲಕ  ವಿವರಣೆ ನೀಡಲು ಯತ್ನಿಸಿದರು.ಇದು ಚಿತ್ರಲಿಪಿಯಾಧಾರಿತವಾಗಿದ್ದುಹ-ಹಸ್ತ ರ-ರಜ್ಜು ವ- ವೀಣೆಮ-ಮುಖ ಮೊದಲಾದ ಪದಗಳ ಮೊದಲ ಅಕ್ಷರಗಳು  ಸಂಕೇತವಾದವು.. ಈ ಲಿಪಿಯು ಅಶೋಕನ ಆಸ್ಥಾನದಲ್ಲಿ ಇದ್ದ  ವೈಯಾಕರಣಿಗಳ ಕೊಡುಗೆ ಎಂಬ ಸಿದ್ಧಾಂತ ಮಂಡಿಸಿದರು.ಎನ್‌.ಪಿ.  ರಷ್ಟೋಗಿಯವರು ವೇದ ಕಾಲದ ಜ್ಯಾಮಿತಿ ಚಿಹ್ನೆಗಳೇ ಬ್ರಾಹ್ಮಿ ಲಿಪಿಯ ಉಗಮಕ್ಕೆ ಕಾರಣ ಎಂಬ ವಾದ ಮಂಡಿಸಿದರು.ಡಾ. ಭಂಡಾರ್‌ಕರ್‌ ಅವರು ನವಶಿಲಾಯುಗದ ಕುಂಭಗಳ ಮೇಲೆ ಕಂಡು ಬರುವ ಚಿಹ್ನೆಗಳಿಂದ ಬ್ರಾಹ್ಮೀ ಜನಿಸಿರಬಹುದು ಎಂದಿರುವರು.
ಜೇಮ್ಸ್‌ ಪ್ರಿನ್ಸೆಪ್‌ನು ಮೊದಲ ಬಾರಿಗೆ ಬ್ರಾಹ್ಮಿಯ ಮೂಲ ಗ್ರೀಕ್‌ಲಿಪಿ ಎಂಬ ವಾದವನ್ನು ಮಂಡಿಸಿದ. ನಂತರ ಕೆ. ಒಟ್ಟೊಫ್ರೈಡ್‌ ಮುಲ್ಲರ್‌ಮತ್ತು ಜೆ ಹ್ಯಾವಲ್‌ರ ಅದನ್ನು ಪ್ರತಿಪಾದಿಸಿದರು. ಅವನು ಬ್ರಾಹ್ಮಿಯಆರು ಅಕ್ಷರಗಳು( ,,,ಥ )ಮತ್ತು ನ ಗ್ರೀಕ್‌ನಿಂದ ನಿಷ್ಪನ್ನವಾಗಿವೆ ಎಂಬುದನ್ನು  ಸಾಧಿಸಲು ಯತ್ನಿಸಿದನು. ಅವುಗಳ ಸಂವಾದಿ ಅಕ್ಷರಗಳನ್ನು ಗ್ರೀಕ್‌ನಲ್ಲಿ ಗುರುತಿಸಿದ. ಅದರಂತೆ ಇತರೆ ಅಕ್ಷರಗಳು ಖರೋಷ್ಟಿ ಮತ್ತು ಅರಾಮಿಕ್‌ ಲಿಪಿಗಳ ಮೂಲದವೆಂದು ಮಂಡಿಸಿದ. ಫಾಕ್‌ನ ಪ್ರಕಾರ ಅಶೋಕನ ಕಾಲದಲ್ಲಿ ಉದ್ದೇಶ ಪೂರ್ವಕವಾಗಿ ಖರೋಷ್ಟಿ ಮತ್ತು ಗ್ರೀಕ್‌ ಲಿಪಿ ಮಾದರಿಯಲ್ಲಿ ಬ್ರಾಹ್ಮಿ ಲಿಪಿ ರೂಪಿಸಲಾಯಿತು ಎಂದು ವಾದಿಸಿದ. ವಿಶೇಷವಾಗಿ ಬರಹದ ದಿಕ್ಕು,ಹ್ರಸ್ವ ಮತ್ತು ದೀರ್ಘ ಸ್ವರಗಳ ವ್ಯತ್ಯಾಸ, ಮತ್ತು ಕೆಲ ಅಕ್ಷರಗಳ ನಿರ್ಧಿಷ್ಟ ಸ್ವರೂಪ ವಿಶೇಷವಾಗಿ ಬ್ರಾಹ್ಮಿಯ ಮತ್ತು ಗ್ರೀಕ್‌ನ ತೀಟ ,ಬ್ರಾಹ್ಮಿಯ     ಮತ್ತು ಗ್ರೀಕ್‌   ಗಮ್ಮಾ ಗಳ ಸಾಮ್ಯತೆ ಯನ್ನು ಎತ್ತಿತೋರಿಸಿದ.
ಆದಾಗ್ಯೂ ಇವು ಅಪವಾದವಾಗಿರಬಹುದು ಮತ್ತು ಹ್ರಸ್ವ ಮತ್ತು ಧೀರ್ಘ ಸ್ವರಗಳ ಸಾಮ್ಯತೆಯು ಗ್ರೀಕ್‌ ಪ್ರಭಾವಕ್ಕೆ ಒಳಗಾಗುವ  ಸಾಧ್ಯತೆ ಕಡಿಮೆ. ಸ್ವರಗಳ ವ್ಯತ್ಯಾಸವು ದೇಶೀಯವಾಗಿಯೇ ಇರಬಹುದು ಕಾರಣ.
ಸ್ವರಗಳು

ಹ್ರಸ್ವ ಮತ್ತು ಧೀರ್ಘ ಸ್ವರಗಳು ವ್ಯತ್ಯಾಸವು  ಪೂರ್ಣವಾಗಿ ಮೂಲದ ತುಸು ಬದಲಾವಣೆಯಿಂದ ನಂಥೃ ರೂಪಿತವಾಗಿವೆ  ( ಆದರೆ ಗ್ರೀಕ್‌ ಸ್ವರಗಳುಅವುಗಳನ್ನು ಪೂರ್ಣವಾಗಿ ವಿಭಿನ್ನ ಸಂಬಂಧವಿಲ್ಲದ ಸಂಕೇತಗಳೇ ಪ್ರತಿನಿಧಿಸುತ್ತವೆ. (  (e)/ ()).ಸ್ವರಗಳ ಸಂಕೇತಗಳ ಸ್ವರೂಪವನ್ನು ವಿವೇಚಿಸಿದರೆ ಬ್ರಾಹ್ಮಿಯು ಗ್ರೀಕ್‌ಮೂಲದ್ದು ಎನ್ನುವ ವಾದ ಬಿದ್ದು ಹೋಗುತ್ತದೆ..

:  ಲೆನೊ ರ್ಮಾಂಟ್ 1875 ರಲ್ಲಿ  ಮತ್ತು ಡೀಕೆ  1877ರಲ್ಲಿ ಕೆಲವು ಬ್ರಾಹ್ಮಿ ಅಕ್ಷರಗಳು ಮತ್ತು  ಅವಕ್ಕೆ ಸಂವಾದಿಯಾದ ದಕ್ಷಿಣ ಅರೆಬಿಯಾದ ಹಿಮಾಯರಿಟಿಕ್‌ ಅಕ್ಷರಗಳ ನಡುವಿನ ಹೋಲಿಕೆಯನ್ನು ಗಮನಿಸಿದರು. ಐಸಾಕ್‌ಟೇಲರ್‌ನು ಅವುಗಳ ತುಲನಾತ್ಮಕ  ಕೋಷ್ಠಕವನ್ನೇ ತಯಾರಿಸಿದನು. ಅವನ ವಾದದ ಪ್ರಮುಖ ಅಂಶ ಲಿಪಿಗಳನ್ನು ಬರೆಯುವ ದಿಕ್ಕು.ಮತ್ತು ಕೆಲವು ಅಕ್ಷರಗಳ ಹೋಲಿಕೆ. ಬ್ರಹ್ಮಿಯ  ba   ಮತ್ತು ಸಬಿಯನ್‌ betda , daletma ಮತ್ತು memಇತ್ಯಾದಿ.  ಟೇಲರ್‌ ಐತಿಹಾಸಿಕ ಮತ್ತು ಭೌಗೋಳಿಕ ಆಧಾರದ ಮೇಲೆ ತನ್ನ ವಾದನ್ನು ಮಂಡಿಸಿದ.. “ಕ್ರಿ. ಪೂ. 10ನೆಯ ಮತ್ತು ಶತಮಾನದಿಂದ 3ನೆಯ ಶತಮಾನದ ವರೆಗೆ ಯೆಮೆನ್‌ ಭಾರತೀಯ ವಸ್ತುಗಳನ್ನು ಯುರೋಪಿನೊಡನೆ ವಿನಿಮಯ ಮಾಡಿಕೊಳ್ಳುವ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿತ್ತು”. ಆದ್ದರಿಂದ ಅಲ್ಲಿ ಭಾರತೀಯ ಮತ್ತು ಸಬಿಯನ ಅಕ್ಷರಗಳ ಚಲಾವಣೆಗೆ ಅವಕಾಶ ಹೆಚ್ಚಾಗಿದ್ದಿತು.ಈ ಎಲ್ಲ ಅನುಕೂಲಗಳ ಜೊತೆ ಈ ವಾದದಲ್ಲಿ ಕೆಲವು ದೋಷಗಳೂ ಇವೆ.ಬರಹದ ದಿಕ್ಕು ಕುರಿತಾದ ವಾದ ನಿಲ್ಲುವುದಿಲ್ಲ. ಅಲ್ಲದೆ ಎರಡರಲ್ಲೂ ಹೋಲಿಕೆ ಇರುವ ಕೆಲವು ಅಕ್ಷರಗಳು ಇರುವುದು ಬ್ರಾಹ್ಮಿಯು ಸೆಮಿಟಿಕ್‌ನಿಂದ ಜನಿಸಿತು ಎಂದು ಹೇಳಲು ಆಗುವುದಿಲ್ಲ ಅಲ್ಲದೇ ಅವೆರಡೂ ಒಂದು ಸಾಮಾನ್ಯವಾದ ಇನ್ನೊಂದು ಪುರಾರತನ ಲಿಪಿಯಿಂದ ಜನಿಸಿರಬಹುದು.ಅವುಗಳ ಚಾರಿತ್ರಿಕ ಮತ್ತು ಭೌಗೋಲಿಕ ಸಂಬಂಧದ ವಾದವೂ ಗಟ್ಟಿಯಾಗಿ ನಿಲ್ಲದು ಕಾರಣ ಅವುಗಳ ಪ್ರಾಚೀನತೆಯ ಬಗೆಗೆ ಇನ್ನೂ ಖಚಿತತೆ ಇಲ್ಲ.
ಫೊನಿಷಿಯನ್‌: ಉಲ್ರಿಚ್‌ ಫೆಡ್ರಿಕ್‌ಕೊಪ್‌  1821 ರಲ್ಲಿಐ ಇಂಡಿಕ್‌ ಲಿಪಿಗಳಿಗೂ ಮತ್ತು ಉತ್ತರ ಸೆಮಿಟಿಕ್‌ಲಿಪಿಗಳಿಗೂ ಇರುವ ಹೋಲಿಕೆ,,ಗಮನಿಸಿದ್ದನು.ಅದರ ಮೇಲೆ ಅಧಿಕೃತವಾಗಿ ಕೆಲಸ ಮಾಡಿದ್ದು ಅಲ್ಬರ್ಟ ವೇಬರ್‌. ಅವನು ಫೊನಿಷಿಯನ್‌ ಲಿಪಿ ಮತ್ತು ಬ್ರಾಹ್ಮಿಲಿಪಿಗಳ  ನಡುವಿನ ಹೋಲಿಕೆಯ ವಿವರ ಅಧ್ಯಯನ ಮಾಡಿದ. ಬುಹ್ಲರ್‌ ಉತ್ತರ ಸೆಮಿಟಿಕ್‌ ಲಿಪಿಗಳ ಗುಂಪಿನಿಂದ  ತುಸು ಬದಲಾಯಿಸಿ ಬ್ರಾಹ್ಮಿಲಿಪಿಗಳನ್ನು ರೂಪಿಸುವ ಯತ್ನದ ಅವನ ವಿಧಾನವನ್ನು ವಿದ್ವಾಂಸರು ತೀಷ್ಣವಾಗಿ ಟೀಕಿಸಿದರು.  ಒಝಾರ ಪ್ರಕಾರ ಈ ವಿಧಾನದಿಂದ ಯಾವುದೇ ಲಿಪಿಯಿಂದ ಮತ್ಯಾವುದೇ ಲಿಪಿಯನ್ನು ಪಡೆಯಲು ಸಾಧ್ಯ ಎಂದು ತೋರಿಸಿದರು .ಇನ್ನೊಂದು ಅಂಶವೆಂದರೆ ಸೆಮಿಟಿಕ್‌ಲಿಪಿಗಳನ್ನು  ಬಲದಿಂದ ಎಡಕ್ಕೆ ಬರೆಯುವರು. ಅದೇ ಬ್ರಾಹ್ಮಿ  ಲಿಪಿಯು ಎಡದಿಂದ ಬಲಕ್ಕೆ ಬರೆಯಲಾಗುವುದು.ಬುಹ್ಲರ್‌ತನ್ನ ವಾದದ ಆಧಾರವಾಗಿ ಮಧ್ಯಪ್ರದೇಶದ  ಎರಾನ್‌ನಲ್ಲಿ ದೊರೆತ ನಾಣ್ಯದ ಮೇಲಿನ ಬರಹದ ಉಲ್ಲೇಖ ನೀಡಿದ.ಅದರಲ್ಲಿಬರಹವು ಎಡದಿಂದ ಬಲಕ್ಕೆ ಇದೆ.ಆದರೆ ಇದು ಅತಿ ವಿರಳವಾದ ಸಂದರ್ಭ ಆದ್ದರಿಂದ ಸಾಮಾನ್ಯವಾದುದಲ್ಲ.ಆದರೆ ಇತ್ತೀಚೆಗೆ ದೊರೆತಿರುವ ಎರ್ರಾಗುಡಿ ಅಶೋಕನ ಶಾಸನ, ( ಆಂಧ್ರ ಪ್ರದೇಶ) ಮತ್ತು ಶ್ರೀಲಂಕಾದ ಗುಹೆಗಳಲ್ಲಿನ  ಬರಹಗಳು  ಬಲದಿಂದ ಎಡಕ್ಕೆ ಇವೆ.ಮತ್ತು ಇದರಿಂದ ಪುರಾತನ ಸೆಮಿಟಿಕ್‌ಲಿಪಿಗಳ ಬರಹದ ವಿಧಾನದ ಪ್ರಭಾವ ಇರುವುದು ಕಂಡು ಬರುವುದು. ಆದರೆ ಶ್ರೀಲಂಕಾದ ಬರಹಗಳ ಅಶೋಕನ ಕಾಲಕ್ಕಿಂತ ಈಚಿನವು ಆದ್ದರಿಂದದ ಅವು ಸ್ಥಳೀಯ ಬದಲಾವಣೆಗಳು ಎಂದು ಳ್ಳಬಹುದು. ಅಲ್ಲದೆ ಬರಹದ ದಿಕ್ಕು ಒಂದನ್ನೇ ಏಕಮಾತ್ರ ಅಂಶವಾಗಿ ಪರಿಗಣಿಸಬಾರದು . ಕಾರಣ ಅನೇಕ ಸೆಮಿಟಿಕ್‌ನಿಂದ ಹುಟ್ಟಿದ ಲಿಪಿಗಳನ್ನು ಕೂಡಾ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಬರೆಯಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಸೆಮೆಟಿಕ್‌ ಲಿಪಿಗಳಲ್ಲಿ  ಸ್ವರಗಳು ಇಲ್ಲ.  ಬ್ರಾಹ್ಮಿಯಲ್ಲಿ ಸ್ವತಂತ್ರ ಸ್ವರ ಸಂಕೇತಗಳಿವೆ.
 ಎ.ಸಿ. ಬರ್ನೆಲ್‌  1874ರಲ್ಲಿ ಈ ಸಿದ್ಧಾಂತವನ್ನು ಮುಂದಿಟ್ಟನು ಬ್ರಾಹ್ಮಿಯು ಅರಮೇಯಿಕ್‌ ಲಿಪಿ ಪ್ರಭಾವ ಹೊಂದಿದೆಯೇ ವಿನಃ  ಅದರಿಂದ ಜನಿಸಿದ್ದಲ್ಲ.ಅನೇಕ ಬ್ರಾಹ್ಮಿ ಅಕ್ಷರಗಳನ್ನು ಅರೆಮಿಕ್‌ನಿಂದ  ಫೊನಿಷಿಯನ್‌ಗಿಂತ ಹೆಚ್ಚಾಗಿ ರೂಪಿಸಬಹುದು.ಐತಿಹಾಸಿಕವಾಗಿ ಮತ್ತು ಕಾಲಾನುಗತವಾಗಿಯೂ ಈ ವಾದವು ಸಬಲವಾಗಿದೆ. ಅರಮೇಯಿಕ್ ಬಾಷೆ ಮತ್ತು ಲಿಪಿಯನ್ನು ವ್ಯಾಪಕವಾಗಿ  ಪೂರ್ವದ ಮತ್ತು ಇರಾನಿನ ಪ್ರದೇಶಗಳಲ್ಲಿ ಬಳಸಲಾಗುತಿತ್ತು.ಅಕಾಮೆನಿಯನ್ ಸಾಮ್ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಲಾಗುತಿತ್ತು. ಅದೂ ಅಲ್ಲದೆ ಆರು ಅರಾಮಿಕ್‌ಲಿಪಿಯಲ್ಲಿನ ಮೌರ್ಯರ ಶಾಸನಗಳು  ಈ  ವಾದಕ್ಕೆ ಬೆಂಬಲ ನೀಡುತ್ತವೆ.ಆದರೆ ಮೊದಲು ಖರೋಷ್ಠಿಯು ಹುಟ್ಟಿದನಂತರ ಅದರಿಂದ ಬ್ರಾಹ್ಮಿ ಜನಿಸಿತು ಎನ್ನುವುದು ಸರಿ ಎನಿಸುವುದಿಲ್ಲ ಕಾರಣ ಪೂರ್ಣ ಭಿನ್ನವಾದ ಲಿಪಿಯೊಂದು ರೂಪಗೊಳ್ಳುವುದು ಸಾಧ್ಯವಿಲ್ಲಆದ್ದರಿಂದ ಆ ವಾದ ನಿಲ್ಲುವುದಿಲ್ಲ.
ಮೇಲಿನ ಎಲ್ಲ ಚರ್ಚೆಯಿಂದ ವ್ಯಕ್ತವಾಗುವುದು ಏನೆಂದರೆ ಅದರ ಮೂಲವನ್ನು ಖಚಿತವಾಗಿ ಹೇಳಲಾಗುದು. ಅದಕ್ಕೆ ಇನ್ನೂ ಬಲವಾದ ಆಧಾರಗಳು ಅಗತ್ಯ.ಮೇಲ್ನೋಟದ ಹೋಲಿಕೆಯಿಂದ ಏನನ್ನು ನಿರ್ಧರಿಸಲಾಗುವುದು.. ಅನೇಕ ಸಾಧ್ಯತೆಗಳಿವೆ.ಅವೆರಡೂ ಒಂದೇ ಮೂಲದಿಂದ ಬಂದವಾಗಿರಬಹುದು ಅಥವ ಪರಸ್ಪರ ಪ್ರಬಾವ ಬೀರಿಬಹುದು. ಅವುಗಳ ಪ್ರಾದೇಶಿಕ  ಪ್ರಭಾವವು ವಿಕಾಸಕ್ಕೆ ಕಾರಣವಿರಬಹುದು . ಇವೆಲ್ಲದರಲ್ಲಿ ಅರಾಮಿಕ್‌ಮೂಲವೇ  ಹೆಚ್ಚು ಸಂಭವನೀಯ ಎನಿಸಿದೆ. ಆದರೂ ಪ್ರತಿ ಅಕ್ಷರದ ಉಗಮವನ್ನು ನಿರ್ಧರಿಸುವುದ ಸಾಧ್ಯವೆನಿಸುವುದಿಲ್ಲ.
ಬ್ರಾಹ್ಮಿಯ ಮೂಲದ ಬಗ್ಗೆ ಏನೆ ಚರ್ಚೆಇದ್ದರೂ ಆಧುನಿಕ ಭಾರತೀಯ ಭಾಷೆಗಳ ತಾಯಿ ಬ್ರಾಹ್ಮಿ ಎಂಬುದು ಸುಸ್ಪಷ್ಟ. ಅದನ್ನು ವರ್ಣಮಾಲೆಯೇ ದೃಢಪಡಿಸುವುದು
ಸ್ವರಗಳು
ಅಶೋಕನ ಕಾಲ  (  ಕ್ರಿ.ಪೂ.304–232 ) ದಿಂದಲೇ ನಮಗೆ ಖಚಿತವಾದ ಬ್ರಾಹ್ಮಿ ಲಿಪಿಗಳು ದೊರಕಿವೆ.

ಸ್ವರಗಳು 

ಕಾಲಾನುಕ್ರಮದಲ್ಲಿ  ದೀರ್ಘಾಕ್ಷರಗಳೂ ಸೇರಿದವು.

ಪ್ರಾಚೀನ ಅಶೋಕನ ಲಿಪಿಗಳಲ್ಲಿ ಆರು ಸ್ವರಗಳು ಮಾತ್ರ ಇವೆ. ಈ, ಊ ,ಋ ಏ, ಐ,  ಕಾಲುಕ್ರಮದಲ್ಲಿ ಬಂದು ಸೇರಿವೆ.ಅನುನಾಸಿಕ ಇದ್ದಿತು ಇ, ಉ, ಎ ಓ ಗಳನ್ನು ಸಂದರ್ಭಾನುಸಾರ ಹ್ರಸ್ವ ಅಥವ ಧೀರ್ಘ ಸ್ವರವಾಗಿ ಓದಿಕೊಳ್ಳ ಬೇಕಾಗುತಿತ್ತು.
ವರ್ಗೀಯ ವ್ಯಂಜನಗಳು ೨೫



ಅವರ್ಗೀಯ ವ್ಯಂಜನಗಳು  ೮

   ಅವರ್ಗೀಯ ವ್ಯಂಜನಗಳು  ೮
 ಬ್ರಾಹ್ಮೀ ಲಿಪಿಯನ್ನು ಮೂಲತಃ ಪ್ರಾಕೃತ ಭಾಷೆಯನ್ನು ಬರೆಯಲು ಬಳಸಿದರು. ಆದ್ದರಿಂದಮೊದಮೊದಲ ಲಿಪಿಯಲ್ಲಿ  ಋ. ಔ ಮತ್ತು ಳ ಅಕ್ಷರಗಳು ಕಂಡು ಬರುವುದಿಲ್ಲ
 ಈಗಿನ ರೂಪಾಂತರಿತ ಲಿಪಿಗಳ ಗ ಮತ್ತು ಸ ಗಳು ಮಾತ್ರ ತುಸು ಮಟ್ಟಿಗೆ ಮೂಲ ಅಕ್ಷರಗಳನ್ನು ಹೋಲುತ್ತವೆ.
ಕಾಗುಣಿತ  ಬಹು ಸರಳವಾಗಿ ರೂಪಿಸುತಿದ್ದರು ವ್ಯಂಜನಗಳಿಗೆ ಮೇಲೆ ಅಥವ ಕೆಳಗೆ ಎಡ,  ಅಥವಾ ಬಲ ಭಾಗದಲ್ಲಿ ಸಣ್ಣ ಗೆರೆಗಳನ್ನು ಸೇರಿಸಲಾಗುತಿತ್ತು.
  ಬ್ರಾಹ್ಮೀ ಲಿಪಿಯ ಆಯ್ದ ಅಕ್ಷರಗಳ ಬಳ್ಳಿ ( ಕಾಗುಣಿತ)

ಇದೇ ರೀತಿಯಲ್ಲಿ ಎಲ್ಲ ವ್ಯಂಜನಗಳಿಗೂ ಕಾಗುಣಿತವನ್ನು ಬರೆಯಬಹುದು
  ಒತ್ತಕ್ಷರಗಳಿಗೆ ಪ್ರತ್ಯೇಕ ಚಿಹ್ನೆಗಳಿರಲಿಲ್ಲ.
,ಯಾವುದೇ ಒತ್ತಕ್ಷರದ ಕೆಳಗೆ ಮೇಲಿನ ಅಕ್ಷರಕ್ಕ ಅಂಟಿಕೊಂಡಂತೆ ಚಿಕ್ಕದಾಗಿ ಬರೆಯುವುದರಿಂದ ಸಂಯುಕ್ತಾಕ್ಷರಗಳ ರಚನೆ ಯಾಗುವುದು
   
             
ಗುಹಾಶಾಸನದಲ್ಲಿನ ಒಂದು ಸಾಲು


ಭಾರತದಲ್ಲಿ ಕ್ರಿ. ಪೂ. ಸಹಸ್ರಾರುವರ್ಷಗಳಿಂದ ಸಮೃದ್ಧ ಸಾಹಿತ್ಯವಿದರೂ ಅವೆಲ್ಲ ಮೌಖಿಕವಾಗಿದ್ದವು. ವೇದಗಳ ಕಾಲ ಕ್ರಿ. ಪೂರ್ವ ೧೭೦೦ರಿಂದ ೧೧೦೦. ಆದರೆ ಅವು ಲಿಪಿಯಾಗಿ ಇಳಿಯಲಿಲ್ಲ. ರಾಮಾಯಣದ   ಕಾಲ ಕ್ರಿ. ಪೂ ೫ – ೪ ನೆಯ ಶತಮಾನ.  ಗ್ರೀಕ್‌    ಮಹಾಕಾವ್ಯಗಳೆರಡರನ್ನೂ ಒಟ್ಟುಗೂಡಿಸಿದರೂ  ಅದರ ಅರ್ಧದಷ್ಟೂ ಇಲ್ಲ. ಹಾಗಿದ್ದರೂ ಲಿಪಿ ಇರಲಿಲ್ಲ., ಅದೇ ಅವಧಿಯ ಕಾಳಿದಾಸ, ಪಾಣಿನಿ,  ಪತಂಜಲಿ ಮತ್ತು ಕೌಟಿಲ್ಯ ಕ್ರಿ. ಪೂ. ಶತಶತಮಮಾನಗಳ ಹಿಂದೆಯೆ  ಗ್ರಂಥ ರಚನೆ ಮಾಡಿದ್ದರೂ ನಮಗೆ ಲಿಪಿ ದೊರಕುವುದ ಮಾತ್ರ  ಅಶೋಕನ ಕಾಲದಿಂದ ಈಚೆಗೆ.ಕಾರಣ ಬರವಣಿಗೆ ನಿಷಿದ್ಧವೆನ್ನುವ ಅಂದಿನ ನಂಬಿಕೆ.  ಅಶೋಕನು ಬೌಧ್ಧ ಧರ್ಮವಾವಲಂಬಿಯಾದ ಮೇಲೆ ಆ ನಿಷೇಧದಿಂದ ಹೊರ ಬಂದು ಮೊದಲ ಬಾರಿಗೆ ಶಾಸನ ಗಳನ್ನು ಸ್ತಂಭ, ಗುಹೆ ಮತ್ತು ಬಂಡೆಗಳ ಮೇಲೆ ಬರೆಸ ತೊಡಗಿದ. ಆದ್ದರಿಂದ  ಅವೇ ನಮಗೆ ದೊರೆತಿರುವ ಲಿಪಿಯ ಅತಿಪ್ರಾಚೀನ ಮಾದರಿಗಳು. ಅವುಗಳ ಭಾಷೆ ಬೇರೆ ಬೇರೆ ಯಾದರೂ ಲಿಪಿ ಮಾತ್ರ ಒಂದೇ ಅದೇ ಬ್ರಾಹ್ಮೀಲಿಪಿ.  ಆ ಲಿಪಿಗಳು ಮುಂದೆ ಮಾರ್ಪಾಟು ಹೊಂದುತ್ತಾ  ಭಾರತ ಮತ್ತು ದಕ್ಷಿಣ ಏಷಿಯಾದಲ್ಲಿ ಅನೇಕ ಲಿಪಿಗಳಾಗಿ ರೂಪಗೊಂಡವು. ಬ್ರಾಹ್ಮೀ ಲಿಪಿಯ ಹಲವುಶಾಸನಗಳನ್ನು ಗಮನಿಸ ನಂತರ ಕ್ರಮೇಣ ಕನ್ನಡ ಲಿಪಿ  ಹಲವು ಹಂತದಲ್ಲಿ ಲಿಪಿ ವಿಕಾಸವಾದುದನ್ನು ಅರಿಯೋಣ.

Saturday, March 28, 2015

ಯಲವಟ್ಟಿಯಲ್ಲಿ ನವಶೋಧಿತ ಜೈನ ಶಿಲ್ಪ

ಯಲವಟ್ಟಿಯಲ್ಲಿ ನವಶೋಧಿತ ಜೈನ ಶಿಲ್ಪ
ಡಾ. ಬಾಲಕೃಷ್ಣ ಹೆಗಡೆ 
ಭಾರತದ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮ ದೇಶದ ಧರ್ಮ, ಸಂಸ್ಕøತಿ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದನ್ನು ನಾವು ಕಾಣುತ್ತೇವೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಆಳಿದ ಹಲವು ಜಿನ ಸಾಮಂತರು ಜೈನರಾಗಿದ್ದಾರೆ. ಸಾಂಸ್ಕøತಿಕವಾಗಿ ಕರ್ನಾಟಕದ ವಾಸ್ತು ಶಿಲ್ಪವನ್ನು ಶ್ರೀಮಂತಗೊಳಿಸಿದ ಶ್ರವಣಬೆಳಗೊಳ, ಹುಂಚ, ಗೇರುಸೊಪ್ಪೆ, ಬೀಳಗಿ, ಹಾಡುವಳ್ಳಿ, ಮೂಡಬಿದಿರೆ, ಕಾರ್ಕಳ, ವೇಣೂರು ಇವು ಇಂದಿಗೂ ಜೈನ ಕ್ಷೇತ್ರಗಳಾಗಿವೆ.
ಯಲವಟ್ಟಿ ಇದು ಒಂದು ಪುಟ್ಟ ಹಳ್ಳಿ. ಶಿವಮೊಗ್ಗ ತಾಲೂಕಿನ ನಿದಿಗೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮ. ಇಲ್ಲಿಯ ಕೆರೆ ಹೂಳೆತ್ತುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಈ ವಿಗ್ರಹ ಬೆಳಕಿಗೆ ಬಂದಿದೆ.
ನೀಲಿ ಮಿಶ್ರಿತ ಬಳಪದ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾದ ಈ ಮೂರ್ತಿಯ ಒಟ್ಟು ಎತ್ತರ 32 ಸೆ.ಮೀ. ಇದ್ದು, ಅಗಲ 21 ಸೆ.ಮೀ. ಇದೆ. ಮೂರ್ತಿಯ ದಪ್ಪ 10 ಸೆ.ಮೀ. ಇದೆ. ಇದರಲ್ಲಿ ಒಟ್ಟು ಐದು ಜೈನ ಮೂರ್ತಿಗಳನ್ನು ಖಂಡರಿಸಲಾಗಿದ್ದು ಐದು ಮೂರ್ತಿಗಳ ಗುಂಪಿನ ಒಂದು ವಿಗ್ರಹ ಇದಾಗಿದೆ. ಮಧ್ಯದಲ್ಲಿ ಒಂದು ಸ್ವಲ್ಪ ದೊಡ್ಡ ಮೂರ್ತಿ, ಅದರ ಸುತ್ತಲೂ ಎಡ-ಬಲಗಳಲ್ಲಿ ಮೇಲೊಂದು, ಕೆಳಗೊಂದು ಹೀಗೆ ನಾಲ್ಕು ಚಿಕ್ಕ ಜೈನ ಮೂರ್ತಿಗಳನ್ನು ಕೆತ್ತಲಾಗಿದೆ.
ಮಧ್ಯದಲ್ಲಿರುವ ಮೂರ್ತಿ 14 ಸೆ.ಮೀ. ಎತ್ತರವಿದ್ದು 12.5 ಸೆ.ಮೀ. ಅಗಲವಿದೆ. ಪ್ರಭಾವಳಿ ಸುಂದರವಾದ ಲತಾ ಬಳ್ಳಿಗಳ ಕೆತ್ತನೆಯಿಂದ ಕೂಡಿದ್ದು 15 ಸೆ.ಮೀ. ಎತ್ತರವಿದೆ. ಮೂರ್ತಿಯ ತಲೆಯ ಮೇಲ್ಗಡೆ ಜೈನ ಮುಕ್ಕೊಡೆ ಇದ್ದು ಅದು 8.5 ಸೆ.ಮೀ. ಎತ್ತರವಿದೆ.
ಸಿಂಹಪೀಠದ ಮೇಲೆ ಈ ಮೂರ್ತಿಗಳನ್ನು ಕೆತ್ತಲಾಗಿದ್ದು, ಪೀಠದ ಇಕ್ಕೆಲೆಗಳಲ್ಲಿ ಸಿಂಹಯ್ಯಾಳಿ ಚಿತ್ರಗಳನ್ನು ಕೊರೆಯಲಾಗಿದೆ. ಕೆಳಭಾಗದಲ್ಲಿರುವ ಮುಖ್ಯ ಮೂರ್ತಿಯೂ ಸೇರಿದಂತೆ ಇನ್ನಿತರ ಎರಡು ಚಿಕ್ಕ ಮೂರ್ತಿಗಳು ಕಮಲದ ದಳಗಳ ಮೇಲೆ ಕುಳಿತಂತೆ ಚಿತ್ರಿಸಲಾಗಿದೆ. ಬಲಭಾಗದ ಮೂತಿಯ ಶಿರ ಜೆ.ಸಿ.ಬಿ. ತಾಗಿ ಭಗ್ನವಾಗಿದೆ. ಎಲ್ಲಾ ಐದು ಮೂರ್ತಿಗಳು ಎಡಗಾಲ ಮೇಲೆ ಬಲಗಾಲನ್ನಿಟ್ಟು, ಪಾದದ ಮೇಲೆ ಎಡಗೈ ಮೇಲೆ ಬಲಗೈಯನ್ನಿಟ್ಟು ಧ್ಯಾನ ಭಂಗಿಯಲ್ಲಿ ಪರ್ಯಂಕಾಸನದಲ್ಲಿ ಕುಳಿತಿರುವಂತೆ ಕೊರೆಯಲಾಗಿದೆ. ಮುಖ್ಯ ಮೂರ್ತಿಯ ಹಿಂಭಾಗದಲ್ಲಿ ಎಡ-ಬಲಗಳಲ್ಲಿ ಭುಜದಿಂದ ಮೇಲಕ್ಕೆ ಎರಡು ಮರದ ರೆಂಬೆಗಳನ್ನು ಕೆತ್ತಲಾಗಿದ್ದು, ಅವುಗಳ ತುದಿಯಲ್ಲಿ ಪರ್ಯಂಕಾಸನದಲ್ಲಿ ಕುಳಿತ ಎರಡು ಮೂರ್ತಿಗಳನ್ನು ಕೆತ್ತಲಾಗಿದೆ.
ಪೀಠದಲ್ಲಿ ಸಿಂಹಲಾಂಛನವಿರುವುದರಿಂದ ಇದೊಂದು ಮಹಾವೀರ ತೀರ್ಥಂಕರ? ಮೂರ್ತಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಾಮಾನ್ಯವಾಗಿ ನಾಲ್ಕು ಮೂರ್ತಿಗಳಿರುವ ವಿಗ್ರಹಗಳು ದೊರೆಯುತ್ತವೆ. ಆದರೆ ಈ ರೀತಿಯ ಐದು ವಿಗ್ರಹಗಳಿರುವ ಮೂರ್ತಿ ದೊರೆಯುವುದು ಬಹಳ ವಿರಳ. ಈ ಮೂರ್ತಿ ಅತ್ಯಂತ ವಿಶಿಷ್ಟವಾಗಿದ್ದು, ಇದೊಂದು ‘ಪಂಚತೀರ್ಥಿ’ ಜೈನ ವಿಗ್ರಹ ಎಂದು ಇತಿಹಾಸಕಾರರಾದ ಡಾ. ಶ್ರೀನಿವಾಸ ಪಾಡಿಗಾರ ಅಭಿಪ್ರಾಯಪಟ್ಟಿದ್ದಾರೆ.
ತೀರ್ಥಂಕರ ಪರ್ಯಂಕಾಸನದಲ್ಲಿ ಧ್ಯಾನಮುದ್ರೆಯಲ್ಲಿದ್ದು, ಏಕಚಿತ್ತವಾಗಿ ನಾಸಿಕದ ತುದಿ, ನೀಳವಾದ ಜೋತು ಬಿದ್ದ ಕಿವಿಗಳು, ಗಂಭೀರವಾದ ಏಕಚಿತ್ತ ಮುಖ ಭಾವ, ಗುಂಗುರು ಕೂದಲು, ಕಮಲದ ದಳಗಳ ಮೇಲೆ ಪದ್ಮಾಸನದಲ್ಲಿ ಕುಳಿತ ತೀರ್ಥಕರನ ಕಾಲುಗಳು ಒಂದರ ಮೇಲೊಂದು. ತಲೆಯ ಮೇಲೆ ಮುಕ್ಕೊಡೆ ಈ ಮೂರ್ತಿ ಶಿಲ್ಪದ ವೈಶಿಷ್ಟ್ಯವಾಗಿದೆ. ಈ ಶಿಲ್ಪ ಕಲಾಸೌಂದರ್ಯ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಕೆತ್ತನೆ ಶೈಲಿಯಿಂದ ಈ ವಿಗ್ರಹ ಸುಮಾರು ಕ್ರಿ.ಶ.12-13ನೇ ಶತಮಾನದ ಹೊಯ್ಸಳ ಕಾಲದ್ದಿರಬಹುದೆಂದು ಊಹಿಸಬಹುದು.
ಮೂರ್ತಿಯ ಹಿಂಭಾಗ ಸಂಪೂರ್ಣ ನುಣುಪಾಗಿದ್ದು ಯಾವುದೇ ಶಾಸನವಾಗಲೀ ಕೆತ್ತನೆಯಾಗಲೀ ಇಲ್ಲ. ಈ ಮೂರ್ತಿಯ ಮಾಟವನ್ನು ಗಮನಿಸಿದರೆ ಇದೊಂದು ಭಕ್ತರು ಹರಕೆ ಹೊತ್ತು ಕೆತ್ತಿಸಿ ನೀಡಿದ ಮೂರ್ತಿಯಂತೆ ಕಾಣುತ್ತದೆ.
ನಿದಿಗೆ ಗ್ರಾಮದ ದೊಡ್ಡಕೆರೆ ಏರಿ ಮೀಲಿನ ಕಲ್ಲಿನಲ್ಲಿನ ಆರು ಸಾಲಿನ ಶಾಸನ ಯಲವಟ್ಟಿ ಕುರಿತು ಉಲ್ಲೇಖವನ್ನು ನೀಡುತ್ತಿದೆ. ಆ ಶಾಸನದ ಪಾಠ ಇಂತಿದೆ:
1 ಸ್ವಸ್ತಿ ಸಮಸ್ತ ಸಕಳಗುಣ ಸಂಪಂನರಪ್ಪ ಶ್ರೀಮೂಲ
2 ಸಂಘ ದೇಸಿಯಗಣ ಕೊಂಡಕುಂದಾನ್ವಯ ವೋಸ್ತಕಗಛ್ಛದ
3 . . . . .
4
5 ಗೌಡನ ಮಗ ಎಲವಟ್ಟಿಯ ದಾಸೆಯನಾಯಕನ ಸಿದ್ದಯಪ್ಪ ಭೂಮಿ
6 ಯಿದು ಮಂಗಳಮಹಾ ಶ್ರೀಶ್ರೀಶ್ರೀ
ಜೈನ ಧರ್ಮದ ಸಂಪ್ರದಾಯದಂತೆ ಸಲ್ಲೇಖನ ವ್ರತ ಆಚರಿಸಿ ನಿರ್ವಾಣ ಹೊಂದಲು ಜೈನರು ಶ್ರವಣಬೆಳಗೊಳ, ಕೊಪ್ಪಳ ಮೊದಲಾದ ಪ್ರಸಿದ್ಧ ಜೈನ ಕ್ಷೇತ್ರಗಳಿಗೆ ಹೋಗುತ್ತಿದ್ದಂತೆ ನಿದಿಗೆ, ಯಲವಟ್ಟಿ ಗ್ರಾಮಗಳಿಗೂ ಬರುತ್ತಿದ್ದರೆಂಬುದು ಈ ವಿಗ್ರಹದಿಂದ ತಿಳಿಯಬಹುದು.
ಯಲವಟ್ಟಿ, ಇಲ್ಲಿಗೆ ಸಮೀಪದ ಹೊಸೂಡಿ, ಪುರಲೆ, ಗುರುಪುರ, ನಿದಿಗೆ ಮೊದಲಾದ ಗ್ರಾಮಗಳು ಜೈನ ಧರ್ಮದ ಪ್ರಭಾವವಿದ್ದ ಗ್ರಾಮಗಳಾಗಿದ್ದವೆಂಬುದು ಇದರಿಂದ ವೇದ್ಯವಾಗುತ್ತದೆ. ಅಲ್ಲದೆ ಈ ಗ್ರಾಮಗಳಲ್ಲಿ ದೊರಕಿದ, ದೊರಕುತ್ತಿರುವ ಜೈನ ಶಿಲ್ಪಗಳು, ಶಾಸನಗಳು, ನಿಷಿಧಿ ಕಲ್ಲುಗಳು ಈ ಭಾಗದಲ್ಲಿ ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದನ್ನು ಪುಷ್ಟೀಕರಿಸುತ್ತವೆ.
ಈ ಮೂರ್ತಿಯನ್ನು ಅರ್ಥೈಸುವಿಕೆಯಲ್ಲಿ ಸಹಕರಿಸಿದ ನನ್ನ ಗುರುಗಳಾದ ಡಾ. ಶ್ರೀನಿವಾಸ ಪಾಡಿಗಾರ ಅವರಿಗೂ ಮಿತ್ರರಾದ ಡಾ. ಜಗದೀಶ ಅಗಸಿಬಾಗಿಲ ಅವರಿಗೂ, ಅಲ್ಲದೆ ಈ ವಿಗ್ರಹದ ಮಾಹಿತಿ ನೀಡಿದ ನನ್ನ ವಿದ್ಯಾರ್ಥಿನಿ ನಯನಾಳಿಗೂ ಮೂರ್ತಿಯನ್ನು ಜೋಪಾನವಾಗಿರಿಸಿಕೊಂಡ ಚಂದ್ರಪ್ಪ ಶಿವಣ್ಣ ಯಲವಟ್ಟಿ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಇ.ಸಿ. ಸಂಪುಟ ಗಿII P-I, ನಂ. 58, ಪುಟ ಸಂಖ್ಯೆ 61.
2. ಡಾ.ವಾಸುದೇವನ್ ಸಿ.ಎಸ್. (ಸಂ) `ಮುಕ್ಕೊಡೆ’ ಜೈನ ಸಂಸ್ಕøತಿಯ ಕುರಿತ ಲೇಖನಗಳು, ಹಂಪಿ.
3. ಭಟ್ ಸೂರಿ ಕೆ.ಜಿ., ‘ಹಾಡುವಳ್ಳಿ’ ಜೈನ ಶಾಸನ ವಾಸ್ತು-ಮೂರ್ತಿ ಶಿಲ್ಪ, ಹಂಪಿ.
4. ಡಾ. ಕಲಘಟಗಿ ಟಿ.ಜಿ., ‘ಜೈಟಿiಸಮ್ ಚಿಂಡ್ ಕರ್ನಾಟಕ ಕಲ್ಚರ್’ (ಸಂ). ಕ.ವಿ.ವಿ., ಧಾರವಾಡ.
ಇತಿಹಾಸ ವಿಭಾಗ, ಕಮಲಾ ನೆಹರು ಮಹಿಳಾ ಕಾಲೇಜು, ಶಿವಮೊಗ್ಗ.

   





Friday, March 20, 2015

ಶುಭಾಶಯಗಳು

ಇತಿಹಾಸ ಆಸಕ್ತರಿಗೆ  ಮನ್ಮಥನಾಮ  ಸಂವತ್ಸರವು  ಶುಭ, ಸಂತೋಷ, ಮತ್ತು ನೆಮ್ಮದಿ ತರಲಿ            


                                                   

                                                        (ಎಚ್‌.ಶೇಷಗಿರಿರಾವ್)
ಕನ್ನಡ ಭಾಷೆಯ ಆದಿಯಿಂದ ಹಿಡಿದು ಇಂದಿನವರೆಗಿನ ಬಳಸಿದ ಲಿಪಿಯಲ್ಲಿ ನಿಮಗೆ ಶುಭಾಶಯ ಕೋರಿದೆ
ಲಿಪಿವಿಕಾಸ,ಹಸ್ತ ಪ್ರತಿ, ಸಂರಕ್ಷಣೆ,ಡಿಜಟಲೀಕರಣ ಮತ್ತು ಆನ್‌ಲೈನ್‌ಅಧ್ಯಯನದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿ

ಹೊಸ ವರ್ಷದಲ್ಲಿ ಕನ್ನಡ ಲಿಪಿವಿಕಾಸ ಅಂದರೆ ಕ್ರಿಸ್ತಪೂರ್ವ ಮೂರನೆಯ ಶತಮಾನದಿಂದ ಇಂದಿನ ವರೆಗಿನ ಕನ್ನಡ ಲಿಪಿಯ ಪರಿಚಯವನ್ನು ಶಾಸನ ಮತ್ತು  ಹಸ್ತಪ್ರತಿಗಳ ಮೂಲಕ ಮಾಡಿಕೊಡುವ ಯೋಜನೆ ಇದೆ. ಹಸ್ತ ಪ್ರತಿಗಳ ಆನ್‌ಲೈನ್‌ಅಧ್ಯಯನ ಪ್ರಾರಂಭಿಸುವ ಯೋಜನೆ ಇದೆ.ಆಸಕ್ತರು ಕೈಜೋಡಿಸಲು ಕರೆ ನೀಡಿದೆ.
 ಸಂಪರ್ಕ ವಿಳಾಸ
ಎಚ್‌.ಶೇಷಗಿರಿರಾವ್
ನಿರ್ದೇಶಕರು
ಹಸ್ತಪ್ರತಿವಿಭಾಗ
ಬಿ.ಎಂ ಶ್ರೀ ಸ್ಮಾರಕಪ್ರತಿಷ್ಠಾನ
ಬೆಂಗಳೂರು-೧೯
ಚರ ದೂರವಾಣಿ-9448442323
ಸ್ಥಿರದೂರವಾಣಿ-080-26613929
ಮಿಂಚಂಚೆ- appaaji@gmail.com

Tuesday, March 3, 2015

ಬಳ್ಳಾರಿ ಜಿಲ್ಲೆಯ ಕಾಳಾಮುಖ ಸ್ಥಾನಾಚಾರ್ಯರು
(ಶಾಸನಗಳನ್ನಾಧರಿಸಿ)
ಮಂಜುಳ ಆಚಾರಿ 
ಭಾರತೀಯ ಶೈವ ಪ್ರಪಂಚ ತುಂಬಾ ವಿಸ್ತಾರವಾದುದು. ಅದರ ಶಾಖೋಪಶಾಖೆಗಳಾದ ಪಾಶುಪತ, ಲಾಕುಳ, ಕಾಳಾಮುಖ, ಕಾಶ್ಮೀರ ಶೈವ, ತಮಿಳು ಶೈವ, ವೀರಶೈವ, ಶುದ್ಧ ಶೈವ ಮೊದಲಾದವುಗಳಲ್ಲಿ ದೇಶವ್ಯಾಪಿಯಾಗಿದ್ದ ಪಾಶುಪತ, ಲಾಕುಳಗಳು, ಕಾಳಾಮುಖ ಮತ್ತು ನಮ್ಮ ನಾಡಿನ ವೀರಶೈವಗಳು ಪ್ರಮುಖವಾಗಿವೆ. ಇವುಗಳಲ್ಲಿ ಸಿಂಧೂ ನಾಗರೀಕತೆಯಷ್ಟು ಪ್ರಾಚೀನವಾದುದು ಪಾಶುಪತ, ಮಧ್ಯಯುಗದ ಇದರ ಪರಿಷ್ಕøತ ರೂಪ ಲಾಕುಳ, ನ್ಯಾಯ ವೈಶೇಷಿಕ ದರ್ಶನಗಳ ದಕ್ಷಿಣದ ಶೈವೀಯ ಶಾಖೆ ಕಾಳಾಮುಖ.
ಮಧ್ಯಯುಗದಲ್ಲಿ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಏಕೈಕ ಶೈವ ಪಂಥ ಕಾಳಾಮುಖ. ಕರ್ನಾಟಕದಲ್ಲಿ ಸು. 9ನೇ ಶತಮಾನದಿಂದ 13ನೇ ಶತಮಾನದವರೆಗೆ ಕಾಳಾಮುಖ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಈವರೆಗೆ ಸು.150ಕ್ಕೂ ಹೆಚ್ಚು ಕಾಳಾಮುಖರ ನೇರ ಉಲ್ಲೇಖಿತ ಶಾಸನಗಳು ದೊರೆತಿವೆ. ಕರ್ನಾಟಕದಲ್ಲಿ ಕ್ರಿ.ಶ.810ರ ನಂದಿಬೆಟ್ಟದ ಶಾಸನವು ಮೊಟ್ಟ ಮೊದಲು ಕಾಳಾಮುಖ ಉಲ್ಲೇಖ ನೀಡುತ್ತದೆ. ಇದು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಕಾಲಕ್ಕೆ ಸೇರಿದೆ.1
ಮಧ್ಯಯುಗದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆ ಶೈವರ ಅಧ್ಯಯನದ ದೃಷ್ಠಿಯಿಂದ ತುಂಬ ವಿಶೇಷವಾದ ಮತ್ತು ಮಹತ್ವದ ಆಕರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿನ ಧಾರ್ಮಿಕ ಜೀವನವನ್ನು ಗಮನಿಸಿದರೆ ಹಲವಾರು ಧರ್ಮಗಳು ಬೆಳೆದು ಬಂದಿರುವುದು ತಿಳಿಯುತ್ತದೆ. ಅವುಗಳಲ್ಲಿ ಶೈವ ಧರ್ಮದ ಕಾಳಾಮುಖ ಪರಂಪರೆಯು ವ್ಯಾಪಕವಾಗಿ ಹರಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಾಳಾಮುಖ ನೇರ ಉಲ್ಲೇಖವುಳ್ಳ ಶಾಸನಗಳ ಸಂಖ್ಯೆ 7, ಅವು ಬಳ್ಳಾರಿ ತಾಲೂಕಿನಲ್ಲಿ 03, ಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ತಲಾ ಒಂದೊಂದು ಶಾಸನಗಳಿವೆ. ಇವುಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ 06, ಕಳಚೂರಿಗಳು ಮತ್ತು ಕುರುಗೋಡ ಸಿಂಧರ ಅವದಿsಯ 01 ಶಾಸನ ಲಭ್ಯವಾಗಿದೆ. ರಾಜಮನೆತನದ ಉಲ್ಲೇಖವಿಲ್ಲದಿರುವುದು 01 ಶಾಸನವಿದೆ.
ಕುರುವತ್ತಿ ಶಾಸನದಲ್ಲಿ ಬ್ರಾಹ್ಮಣರು ತಮ್ಮ ಮಕ್ಕಳಿಗೆ ಪುಣ್ಯವಾಗಲಿ ಎಂದು (ಕ್ರಿ.ಶ.1067) ದಾನ ಮಾಡಿದ್ದಾರೆ. ಇದು ವರ್ಗ/ವರ್ಣ ಸಾಮರಸ್ಯವನ್ನು ತೋರಿಸುತ್ತದೆ. ಮಹಾಮಂಡಳೇಶ್ವರ ಘಟ್ಟಿಯರಸನು ಅಮೃತರಾಶಿಪಂಡಿತರಿಗೆ ಎರೆಯ ಕೆರೆಯ ಮತ್ತರು ಭೂಮಿ, 450 ಸಾವಿರ ಒಳ್ಳೆಯ ತೋಟ, ಗಾಣ, ಕೋಟೆಯೊಳಗಿನ ಮನೆ ಇತ್ಯಾದಿ ದಾನ ನೀಡಿದ್ದಾನೆ. ಸಾಮಂತರಾದ ತ್ರಿಭುವನ ಮಲ್ಲಪಾಂಡ್ಯ ಸೋಮಕತ್ರ್ತಾರರಿಗೆ ಗ್ರಾಮ, ಗದ್ದೆ, 1 ಗಾಣ ಒಕ್ಕಲು ದಾನ ನೀಡಿದ್ದಾರೆ. ಸಾಮಂತ ಕುರುಗೋಡಸಿಂದರ ರಾಚಮಲ್ಲನು ಬಾಲಶಿವಾಚಾರ್ಯರಿಗೆ ಮತ್ತು ಅಮೃತರಾಶಿ ಪಂಡಿತರಿಗೆ ತೆಕ್ಕಲ ಮತ್ತರು 2, ಕಂಬ 225ನ್ನು ದಾನ ಮಾಡಿದ್ದಾರೆ.
ಕಾಳಾಮುಖ ಸ್ಥಾನಾಚಾರ್ಯರು
1. e್ಞÁನೇಶ್ವರ ಪಂಡಿತ
ಕ್ರಿ.ಶ.1067ರ ಕುರುವತ್ತಿ ಶಾಸನದಲ್ಲಿ “ಕಾಳಾಮುಖ ಸರಸ್ವತಿ ಕಣ್ರ್ನಾವತಂಸ” ಎಂದು e್ಞÁನೇಶ್ವರ ಪಂಡಿತರನ್ನು ಹೊಗಳಿದೆ.2 ಚಾಲುಕ್ಯ ಆಹವಮಲ್ಲ ತುಂಗಭದ್ರೆಯಲ್ಲಿ ಮುಳುಗಿ ಸತ್ತಾಗ, ಅವನ ಹೆಸರಿನಲ್ಲಿ ಚಾಳುಕ್ಯ ಮಲ್ಲೇಶ್ವರ ಎಂಬ ದೇವಾಲಯ ನಿರ್ಮಿಸಿ, ಅದಕ್ಕೆ ಅಬಿsನವವಾದಿ ದೇವರು ಎಂದು ಪರ್ಯಾಯವಾಗಿ ಇಲ್ಲಿ ಕರೆಯಲಾಗಿದೆ. ಇಲ್ಲಿಯ ಸ್ಥಾನಾಚಾರ್ಯ e್ಞÁನೇಶ್ವರ ಪಂಡಿತ ಶಾಸನದಲ್ಲಿ ‘e್ಞÁನೇಶ್ವರ ಪಂಡಿತ ವಿಜಯೀಭವತು’ ಎಂದಿರುವುದು ಮತ್ತು ಬ್ರಾಹ್ಮಣರಿಂದ ದಾನ ಪಡೆದಿರುವುದು ಈ ಪಂಡಿತನ ವ್ಯಕ್ತಿತ್ವವನ್ನು ತೋರಿಸುತ್ತದೆ.
2. ಸೋಮಕತ್ರ್ಥಾರ ಪಂಡಿತ
ಹಗರಿಬೊಮ್ಮನಹಳ್ಳಿಯ ಕ್ರಿ.ಶ.1111ರ ಶಾಸನದಲ್ಲಿ ಈ ಯತಿಯ ವಿವರವಿದ್ದು, ಕಾಳಾಮುಖಸ್ಥಾನ ಕತ್ರ್ಥಾರ ಮಠ 3 ಎಂದು ಹೇಳಿದೆ. ಇಲ್ಲಿ ಸೋಮಕತ್ರ್ಥಾರ ಮತ್ತು ಕಾಳಾಮುಖ ಕತ್ರ್ಥಾರ ಮಠಕ್ಕೆ ಏನೋ ಸಂಬಂಧವಿರುವಂತೆ ತೋರುತ್ತದೆ. ಪರಶುರಾಮೇಶ್ವರ ದೇವರ ಸೇವೆಗೆ ದಾನ ಕೊಡುವಾಗ ಕತ್ರ್ಥಾರ ಮಠದ ಯತಿಗೂ ದಾನ ನೀಡಿದ್ದಾರೆ. ಅಂದರೆ ಇಲ್ಲಿ ಪರಶುರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಕಾಳಾಮುಖ ಕತ್ರ್ಥಾರ ಮಠವೂ ಇದ್ದಿರಬೇಕು. ಸೋಮಕತ್ರ್ಥಾರರ ಹೆಸರಿನಲ್ಲಿ ಬಹುಶಃ ಮಠ ಸ್ಥಾಪನೆಯಾಗಿರಬೇಕೆನ್ನಿಸುತ್ತದೆ. ಯಮ ನಿಯಮಸ್ವಾಧ್ಯಾಯಧ್ಯಾನ ಧಾರಣಾಷಾವಿಣ ಜಪಸಮಾದಿs ಶೀಳ ಗುಣಸಂಪನ್ನರಪ್ಪ ಎಂದು ಯತಿಯನ್ನು ವರ್ಣಿಸಲಾಗಿದೆ.
3. ನಿರ್ವಾಣಿ ದೇವರು
ಕ್ರಿ.ಶ.1141ರ ಸಿಂದಿಗೆರೆ ಶಾಸನದಲ್ಲಿ ಎಕ್ಕೋಟಿ ಚಕ್ರವರ್ತಿಯ ಮಠದ ಉಲ್ಲೇಖವಿದೆ. ಇದರಲ್ಲಿ ಕಾಳಾಮುಖ ಸಮಯ ಸಮುದ್ಧರಣ ಮುಳುಗುಂದದ ಸ್ವಯಂಭುದೇವರ ಆಚಾರ್ಯನಾದ ಎಕ್ಕೋಟಿ ಚಕ್ರವರ್ತಿ ವಾಮದೇವರ ಶಿಷ್ಯ ಶ್ರೀಮತ್ ತ್ರಿಲೋಚನದೇವರ ಶಿಷ್ಯ ಕುಮಾರದೇವ, ಇವರ ಶಿಷ್ಯ ನಿರ್ವಾಣಿದೇವರು ಎಂದು ಹೇಳಿದೆ. ನಿರ್ವಾಣಿ ದೇವರು ಸಿಂದಿಗೆರೆಯ ಮಲ್ಲಿಕಾರ್ಜುನ ದೇವರನ್ನು “ಎಕ್ಕೋಟಿ ಚಕ್ರವರ್ತಿ ಮಠ” ಎಂದು ಹೇಳಿದೆ. ದತ್ತಿ ಭೂಮಿಯನ್ನು ಕಾಶ್ಮೀರ ಭೂಮಿ ಎಂದು ಉಲ್ಲೇಖಿಸಿದೆ.
ಇದೇ ಶಾಸನದಲ್ಲಿ ವಾಮದೇವನನ್ನು ವ್ಯಾಕರಣ ತರ್ಕ, ಸಿದ್ಧಾಂತ, ಕಾವ್ಯ, ನಾಟಕ, ನೃತ್ಯ, ಪುರಾಣ, ಇತಿಹಾಸ, ಮೀಮಾಂಸೆ, ನೀತಿಶಾಸ್ತ್ರ ಮುಂತಾದವುಗಳಲ್ಲಿ ಪ್ರವೀಣನಾಗಿದ್ದನೆಂದು ಉಲ್ಲೇಖಿಸಿದೆ. ಇಲ್ಲಿ ಮುಳುಗುಂದದ ಶ್ರೀ ಸ್ವಯಂಭುದೇವರಾಚಾರ್ಯರುಂ ನಿರ್ವಾಣಿದೇವರ ಕಾಲಂಕರ್ಚಿ ದಿsರಾಪ್ರದಾನಂ ಮಾಡಿ ಕೇಮನಕೇಸಿ(ಯ)ಣ ನಾಯಕ ಕೊಟ್ಟ ಧರ್ಮ
“ಮುಳುಂಗದ ಶ್ರೀ ಸ್ವಯಂಭು ದೇವರಾಚಾರ್ಯರು ನಿರ್ವಾಣಿದೇವರು
ಸಿಂದಗೆ¾Éಯ ಶ್ರೀಮಲ್ಲಿಕಾರ್ಜುನ ....
...... ಇದು ಎಕ್ಕೋಟಿ ಚಕ್ರವರ್ತಿಮಠ ಅಲ್ಲೆಂದನ ಬಾಯ ಕೋಷ್ಟ ಮೂಡುಗು....
ಅವಾರಿಛದ್ರ ಈಡಿಲ್ಲೆಂದನ ಬಾಯ ಕೋಷ್ಠಿ ಮೂಡುಗು|”....4
ಅಂದರೆ ಮುಳುಗುಂದದ ಸ್ವಯಂಭು ದೇವರು ಹಾಗೂ ಸಿಂದಗೆರೆಯ ಮಲ್ಲಿಕಾರ್ಜುನ ದೇವರು ಎರಡು ಸಹ ಎಕ್ಕೋಟಿ ಚಕ್ರವರ್ತಿ ಮಠಗಳೆಂದು ತಿಳಿಯುತ್ತದೆ. ಅಲ್ಲದೆ ನಿರ್ವಾಣಿ ದೇವರು ಮುಳುಗುನ್ದದ ಸ್ವಯಂಭು ದೇವರ ಆಚಾರ್ಯ ಸ್ಥಾನವನ್ನು ಸಹ ವಹಿಸಿಕೊಂಡಿದ್ದಿರಬೇಕು ಎಂಬುದು ತಿಳಿದು ಬರುತ್ತದೆ.
ಕ್ರಿ.ಶ.1113ರ ಕೊಟ್ಟೂರು ಶಾಸನದಲ್ಲಿ ದಶಬ್ರಹ್ಮರಾಯ ಮತ್ತು ನಾಗಲಾದೇವಿಯರ ಮಗನಾದ ಪೃಥ್ವಿದೇವನು ಕೇದಾರ ಪಂಡಿತರ ಶಿಷ್ಯನಾಗಿ ನಿಬ್ರ್ಬಾಣಿ ಎಂಬ ಹೆಸರನ್ನು ಪಡೆದು ಡಕ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ದೇವಾಲಯಗಳ ಒಡೆಯನಾಗುತ್ತಾನೆ ಎಂಬ ವಿವರ ಇದೆ. ಇದರಿಂದ ನಿರ್ವಾಣಿ ದೇವ ಮೊದಲು ಪೃಥ್ವಿದೇವನೆಂಬ ಹೆಸರಿನ ರಾಜಕುಮಾರನಾಗಿದ್ದು ಅನಂತರ ಈ ಗುರು ಪರಂಪರೆಗೆ ಸೇರಿರುವ ವಿಷಯ ತಿಳಿದುಬರುತ್ತದೆ. ಬಹುಶಃ ಎಕ್ಕೋಟಿ ಮಠಗಳಿಗೆ ದೀಕ್ಷೆ ಪಡೆದು ಯಾರೂ ಬೇಕಾದರೂ ಗುರುಗಳಾಗಬಹುದಿತ್ತು ಎಂದು ತಿಳಿಯುತ್ತದೆ.5
ನಿರ್ವಾಣಿ ದೇವನು ಗುರುದೀಕ್ಷೆ ಪಡೆದ ಕೇದಾರ ಪಂಡಿತರು ಸಿರಿಯಮೇಶ್ವರ ಮತ್ತು ರಾಮೇಶ್ವರ ದೇವರುಗಳ ಸ್ಥಾನಾಚಾರ್ಯರಾಗಿದ್ದರೆಂದು ಕ್ರಿ.ಶ.1113ರ ಕೊಟ್ಟೂರು ಶಾಸನ ತಿಳಿಸುತ್ತದೆ.
4. ಅಮೃತರಾಸಿ ಮುನಿ
ಕ್ರಿ.ಶ.1176ರ ಕುರುಗೋಡು ಶಾಸನದಲ್ಲಿ “ಶಿವಶಕ್ತಿ ಸುತನು ಕಲಿದೇವರ ಪೂಜಕನೂ ಕಾಳಾಮುಖ ತಿಲಕನೂ ಆದ ಅಮೃತರಾಸಿಮುನಿ” ಎಂಬ ಉಲ್ಲೇಖವಿದೆ. ಕಲಿದೇವರ ಸ್ಥಾನಾಚಾರ್ಯನಾದ ಈತನ ಕಾಲ್ತೊಳೆದು ಕಲ್ಲಿಸೆಟ್ಟಿ ಭೂಮಿದಾನ ಮಾಡಿದ್ದಾನೆ.6
ಕ್ರಿ.ಶ.1112ರ ಕೊಟ್ಟೂರಿನ ಶಾಸನವು “ಕೊಟ್ಟೂರಿನ ರಾಮೇಶ್ವರ ದೇವರ ಆಚಾರ್ಯ” ಎಂದು ಹೇಳಿದೆ. ಅಂದರೆ ಕುರುಗೋಡಿನ ಕಲಿದೇವರ ಹಾಗೂ ಕೊಟ್ಟೂರಿನ ರಾಮೇಶ್ವರ ದೇವಾಲಯಗಳಿಗೆ ಈತ ಆಚಾರ್ಯನಾಗಿರಬೇಕು.
5. ಬಾಲಶಿವಾಚಾರ್ಯ
ಕ್ರಿ.ಶ.1181ರ ಕುರುಗೋಡು ಶಾಸನದಲ್ಲಿ ಸ್ವಯಂಭೂ ದೇವರ ಸ್ಥಾನಾಚಾರ್ಯ ಬಾಲಶಿವಾಚಾರ್ಯರ ಬಗ್ಗೆ ಹೇಳಲಾಗಿದೆ.7 ಯಮ ನಿಯಮ ಸ್ವಾಧ್ಯಾಯಧ್ಯಾಯ ಧಾರಣ ಮೋಮೌನಾನುಷಾವಿನ ಶಿವಪೂಜಾ ತತ್ಪರಪ್ಪವರ ಮಹಿಮೆಂತೆದಡೆ ಆ ಲಕುಳೀಶ್ವರಾಗಮ ಕಾಳಾ(ಲಾ)ಮುಖ ದರ್ಶನಂಗಳನ್ತಾಳ್ದಿತಪೋಲೀಕಿಗೆ ಮೈವಾಂತಿಪ್ರ್ಪಂ ಬಾಲಶಿವಾಚಾರ್ಯ ವಯ್ರ್ಯನಗಣಿತ ಧೈಯ್ರ್ಯನ್|| ಅಂತೆನಿಸಿದ ಬಾಲಶಿವಾಚಾಯ್ರ್ಯರ್|| ಎಂದಿದೆ. ಇಲ್ಲಿ ಲಾಕುಳಕ್ಕೆ ಆಗಮ ಸಂಬಂಧ, ಕಾಳಾಮುಖಕ್ಕೆ ದರ್ಶನ ಸಂಬಂಧ ಕಲ್ಪಿಸಿರುವುದು, ವೈಶೇಷಿಕ ವ್ಯಾಖ್ಯಾನದ ಬಗ್ಗೆ ಹೇಳಿರುವುದು ಈ ಯತಿಯ ಉದಾರ ಸ್ವಭಾವಕ್ಕೆ ಸಾಕ್ಷಿ ಈ ಹಿನ್ನೆಲೆಯಲ್ಲಿ ಬಾಲಶಿವಾಚಾರ್ಯರು ಎರಡು ಸಮಯಗಳ ಸಮನ್ವಯಕಾರರಂತೆ ಇಲ್ಲಿ ಚಿತ್ರಿಸಲಾಗಿದೆ.
ಇವರುಗಳಲ್ಲದೇ “ಕಾಳಾಮುಖ” ಎಂಬ ಸ್ಪಷ್ಟ ಉಲ್ಲೇಖವಿಲ್ಲದಿರುವ ಹಲವು ಶಾಸನಗಳಲ್ಲಿ ಸುರೇಶ್ವರ ಪಂಡಿತ, ಲೋಕಾಭರಣ ಪಂಡಿತ, ಚಿಲ್ಲುಕಾಚಾರ್ಯ, ರುದ್ರರಾಸಿಭಟಾರ, ದೇವರಾಸಿ ಪಂಡಿತ, ತ್ರಿಲೋಚನದೇವ, ಬಿsೀಮರಾಶಿ ಪಂಡಿತ ಮುಂತಾದ ಹಲವು ಆಚಾರ್ಯಗಳ ಉಲ್ಲೇಖಗಳು ಸಿಗುತ್ತವೆ.
ಬಳ್ಳಾರಿ ಜಿಲ್ಲೆಯ ಮೋರಗೇರಿಯ ನೊಳಂಬೇಶ್ವರ ದೇವಾಲಯ, ಹೂವಿನ ಹಡಗಲಿಯ ಕಲಿದೇವ ದೇವಾಲಯ, ಹೊಳಗೊಂದಿಯ ಬಾಳೇಶ್ವರ ದೇವಾಲಯ, ಬೆಣ್ಣೆಕಲ್ಲು ಮುಂತಾದ ಸ್ಥಳಗಳು ಪಾಶುಪತರ ಕೇಂದ್ರಗಳೆಂದು ಗುರುತಿಸಬಹುದು.
ಕುರುವತ್ತಿಯ ಮಲ್ಲೇಶ್ವರ ದೇವಾಲಯ, ಹನಶಿಯ ಪರಶುರಾಮೇಶ್ವರ ದೇವಾಲಯ, ಕುರುಗೋಡಿನ ಸ್ವಯಂಭು ದೇವಾಲಯ, ಕೊಟ್ಟೂರಿನ ರಾಮೇಶ್ವರ ದೇವಾಲಯ, ಸಿಂದಗೆರೆ ಮೊದಲಾದವು ಕಾಳಾಮುಖರ ಸ್ಥಳಗಳಾಗಿದ್ದವೆಂದು ತಿಳಿದುಬರುತ್ತದೆ.
ಈ ಶೈವ ಯತಿಗಳ ಕೊಡುಗೆಗಳನ್ನು ಈ ರೀತಿ ಗುರುತಿಸಬಹುದು. ಬೇರೆ ಬೇರೆ ಮೂಲಗಳಿಂದ ದಾನದತ್ತಿಗಳನ್ನು ಪಡೆದು, ದೇವಾಲಯಗಳನ್ನು ಸಂಪತ್ತಿನ ಕೇಂದ್ರಗಳನ್ನಾಗಿ ಮಾಡಿದರು.
ಅಧಿಕಾರಿವರ್ಗಕ್ಕೂ, ಜನಸಾಮಾನ್ಯರಿಗೂ ಧಾರ್ಮಿಕ ಸೇತುವೆಯಾಗಿ ಕಾರ್ಯನಿರ್ವಹಿಸಿದರು.
 ಶಿವ ಪಾರಮ್ಯದ ಏಳಿಗೆಗಾಗಿ ಬೇರೆ ಮತದೊಂದಿಗೆ ಸಂಘರ್ಷ ಅಥವಾ ರಾಜೀಯ ತಂತ್ರದಿಂದ ಶೈವ ಸಂಸ್ಕøತಿಗೆ ಹೊಸ ಆಯಾಮ ನೀಡಿದರು.
ಶೈವ ಧರ್ಮವನ್ನು ಪರಿವರ್ತಿಸಿ ಜನಮುಖಿಯಾಗುವಂತೆ ನೋಡಿಕೊಂಡರು.
ಶೈವ ಸ್ಥಾನಾಚಾರ್ಯರು ಪ್ರಚಂಡ ಪಂಡಿತರು ವೇದ, ಆಗಮ, ವ್ಯಾಕರಣ, ಶಾಸ್ತ್ರ, bsÀಂದಸ್ಸು ಹಾಗೂ ಕಲೆಗಳಲ್ಲಿ ಪಾರಂಗತರಾಗಿದ್ದು, ಅವುಗಳನ್ನು ಇವರ ಆಶ್ರಯದಲ್ಲಿದ ಹಲವಾರು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಹೊಸ ಚೈತನ್ಯ ತುಂಬುತ್ತಿದ್ದರು. ತರ್ಕಶಾಸ್ತ್ರದಲ್ಲಿ ಚಕ್ರವರ್ತಿ ಎಂಬ ಉಲ್ಲೇಖ ಇವರ ಬಹುತರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದ ಇವರು ಕೇವಲ ಸ್ಥಾನಾಚಾರ್ಯರಾಗಿದ್ದುದ್ದಲ್ಲದೇ ಸಮಾಜೋಪಕಾರಿ ಕೆಲಸಗಳಲ್ಲೂ ತೊಡಗಿರುತ್ತಿದ್ದರೆಂದು ತಿಳಿದುಬರುತ್ತದೆ. ಕೆಲವೊಮ್ಮೆ ರಾಜಗುರುಗಳಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದರು. 13ನೆಯ ಶತಮಾನದ ನಂತರ ರಾಜಾಶ್ರಯದ ಕೊರತೆಯಿಂದಾಗಿ ಈ ಯತಿ ಪರಂಪರೆ ಸಮಾಜದಿಂದ ಹಿಂದಕ್ಕೆ ಸರಿಯಿತು. ಇದಕ್ಕೆ ಶರಣ ಚಳುವಳಿಯ ಪ್ರಭಾವವೂ ಆಗದೇ ಇಲ್ಲ.
ಒಟ್ಟಾರೆ ಧಾರ್ಮಿಕ, ಸಾಮಾಜಿಕ, ಸಂಸ್ಕøತಿಗೆ ಬಳ್ಳಾರಿ ಜಿಲ್ಲೆಯ ಕಾಳಾಮುಖ ಯತಿಗಳ ಕೊಡುಗೆ ಶ್ಲಾಘನೀಯ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ನಂ. 66, ಇ.ಸಿ. x, ಚಿಕ್ಕಬಳ್ಳಾಪುರ.
2. ನಂ. 7, ಹಡಗಲಿ, ಕ.ವಿ.ಶಾ.ಸಂ-1.
3. ನಂ. 1, ಹನಶಿ, ಹಗರಿಬೊಮ್ಮನಹಳ್ಳಿ, ಕ.ವಿ.ಶಾ.ಸಂ-1.
4. ನಂ. 61, ಸಿಂದಗೆರೆ, ಕ.ವಿ.ಶಾ.ಸಂ-1.
5. ನಂ. 26, ಕೊಟ್ಟೂರು, ಕ.ವಿ.ಶಾ.ಸಂ-1, ಪುಟ-674.
6. ನಂ. 7, ಕುರುಗೋಡು, ಕ.ವಿ.ಶಾ.ಸಂ-1.
7. ನಂ. 18, ಕುರುಗೋಡು, ಕ.ವಿ.ಶಾ.ಸಂ-1.

ಸಂಶೋಧನಾ ವಿದ್ಯಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.