Monday, May 27, 2013

ಪ್ರಾಚೀನ ವೀರ ಪಡೆ ಡಾ. ಎನ್‌ಆರ್‌ಲಲಿತಾಂಬ

PÉÆÃ²UÀgï J¿à vÀÛgï - ¥ÁæaãÀ «ÃgÀ ¥ÀqÉ
qÁ. J£ï.Dgï. ®°vÁA§
Qæ.±À.8£ÉAiÀÄ ±ÀvÀªÀiÁ£ÀPÉÌ ¸ÉÃjzÀ vÀ®PÁqÀÄ UÀAUÀgÀ ªÉÆzÀ®£ÉAiÀÄ ²ªÀªÀiÁgÀ (Qæ.±À. 679-725) ºÁUÀÆ UÀAUÀ ²æÃ¥ÀÅgÀĵÀ£À (Qæ.±À.726-788) PÁ®zÀ vÀUÀgÉ£ÁqÀ vÉÆ¼Àî UÁæªÀÄPÉÌ ¸ÉÃjzÀ ±Á¸À£ÀUÀ¼À°è1 PÉÆÃ²UÀgï J¿àvÀÛgï JA§ «ÃgÀgÀ G¯ÉèÃR PÀAqÀħA¢zÉ. EªÀgÀÄ vÉÆ¼ÀîzÀ ZÉÊvÁå®AiÀÄPÉÌ ©lÖ zÁ£ÀzÀ dªÁ¨ÁÝgÀgÉAzÀÆ ¸ÁQëUÀ¼ÉAzÀÆ ºÉýªÉ. F ªÀÄÆgÀÆ ±Á¸À£ÀUÀ¼À°è F «ÃgÀgÀ£ÀÄß vÉÆ¼Àîgï, vÉÆ¼À® PÁ²PÀgï, vÉÆ¼ÀgÉÆqÉMgï, vÉÆ¼ÀîgÁ PÉÆÃ²PÀgï JAzÀÄ PÀgÉAiÀįÁVzÉ. EªÀgÀ£ÀÄß ¸ÀÄSÁqÀågÉAzÀÆ, J¿àvÀÛgÀÄ ¥ÀæzsÁ£ÀgÉAzÀÆ PÀgÉ¢gÀĪÀÅzÀ®èzÉ EªÀgÀ£ÀÄß £ÀgÀ±Á¸À£ÀgÉAzÀÄ ¥Àæ¹zÀÞgÁzÀªÀgÉAzÀÄ ºÉýgÀĪÀÅzÀÄ PÀÄvÀƺÀ®PÀgÀªÁVzÉ.
F PÉÆÃ²UÀgÀÄ AiÀiÁgÀÄ? J¿àvÀÛgï JA§ÄzÀÄ K£À£ÀÄß ¸ÀÆa¸ÀÄvÀÛzÉ? £ÀgÀ±Á¸À£ÀgÉAzÀÄ ¥Àæ¹zÀÞgÁUÀ®Ä PÁgÀtªÉãÀÄ? vÉÆ¼Àî, vÉÆ¿® JA§ G¥À£ÁªÀÄ EªÀgÀ ºÉ¸Àj£ÉÆA¢UÉ ¸ÉÃgÀ®Ä PÁgÀtªÉãÀÄ? JA§ ¥Àæ±ÉßUÀ¼ÀÄ ªÉÆzÀ® ºÀAvÀzÀ°è K¼ÀÄvÀÛªÉ.
JgÀqÀ£ÉAiÀÄ ºÀAvÀzÀ°è vÀ«Ä¼ÀÄ ¸ÀAWÀA ¸Á»vÀåzÀ°è ªÀÄvÉÛ ªÀÄvÉÛ G¯ÉèÃRUÉÆArgÀĪÀ ¸ÀvÀå¸ÀAzsÀgÀÆ «ÃgÀgÀÆ JAzÀÄ ¥Àæ¹zÀÞgÁVzÀÝ vÀļÀÄ£ÁqÀ PÉÆÃ±ÀgÀjUÀÆ F PÉÆÃ²UÀjUÀÆ ¸ÀA§AzsÀ«zÉAiÉÄà JA§ C£ÀĪÀiÁ£ÀªÉüÀÄvÀÛzÉ. C®èzÉ, ªÀÄÄAzÉ PÀ£ÁðlPÀzÀ PÁëvÀæAiÀÄÄUÀzÀ°è vÀĽ®¸ÀAzÀPÀÄ®zÀªÀgÉAzÀÄ ¥Àæ¹zÀÞgÁzÀ «ÃgÀgÀÆ vÉÆ¿¼À PÉÆÃ²UÀgï MAzÉà ªÀÄÆ®zÀªÀgÉà JA§ C£ÀĪÀiÁ£ÀUÀ¼ÀÄ K¼ÀÄvÀÛªÉ.
F J¯Áè ¥Àæ±ÉßUÀ½UÀÆ GvÀÛgÀªÀ£ÀÄß PÀAqÀÄPÉÆ¼ÀÄîªÀ ¥ÀæAiÀÄvÀß ªÀiÁqÀÄvÀÛ F PÉÆÃ²UÀgï J¿àvÀÛgï CvÀåAvÀ ¥ÁæaãÀ «ÃgÀ¥ÀqÉAiÀiÁVzÀÄÝ, PÀ£ÁðlPÀzÀ «ÃgÀ ¥ÀgÀA¥ÀgÉUÉ ªÀÄvÉÆÛAzÀÄ ºÉªÉÄäAiÀÄ UÀj JA§ÄzÀ£ÀÄß w½¸À®Ä ¸ÀAvÉÆÃµÀªÁUÀÄvÀÛzÉ.
PÉÆÃ²UÀgÀÄ-PÉÆÃZÁgÀ : MAzÀÄ d£ÁAUÀ
F PÉÆÃ²UÀgÀÄ AiÀiÁgÀÄ? JA§ ¥Àæ±ÉßAiÀÄ£ÀÄß ªÉÆzÀ®Ä ¥Àj²Ã°¸À§ºÀÄzÀÄ. ¸ÀAUÀA ¸Á»vÀåzÀ PÁ®zÀ°è  G¯ÉèÃRUÉÆArgÀĪÀ C£ÉÃPÀ d£ÁAUÀUÀ¼À°è PÉÆÃ±ÀgÀgÉA§ d£ÁAUÀªÀÇ MAzÀÄ.2 Qæ.±À.955, DUÀ¸ïÖ 12 ¸ÉÆÃªÀĪÁgÀPÉÌ ¸ÀjºÉÆAzÀĪÀ gÁµÀÖçPÀÆlgÀ 3£ÉAiÀÄ PÀȵÀÚ£À D½éPÉAiÀÄ £ÀgÉÃUÀ®è ±Á¸À£ÀªÉÇAzÀgÀ°è vÉÆÃ¬ÄªÀÄä£ÉA§ «ÃgÀ£À vÀAzÉAiÀÄ ºÉ¸ÀgÀÄ PÉÆÃZÁgÀgÀ PÉÆÃmÉAiÀĪÀÄä JAzÀÄ G¯ÉèÃRUÉÆArzÉ.3 F G¯ÉèÃRUÀ¼À°èAiÀÄ PÉÆÃZÀgï, PÉÆÃZÁgÀ JA§ÄzÀÄ d£ÁAUÀªÁaAiÀiÁVzÀÄÝ, PÉÆÃ±Àgï JA§ÄzÀgÀ §zÀ¯ÁzÀ gÀÆ¥À J£Àß®Ä CrجĮè. (ªÉAPÀl±Á«Ä>AiÀÄAPÀlZÁ«Ä, ±ÁåªÀÄAiÀÄå>ZÁªÀÄAiÀÄå, AiÉÆÃZÀ£É>AiÉÆÃ±Éß EAvÀºÀ ±À>ZÀ DVgÀĪÀ GzÁºÀgÀuÉUÀ¼À£ÀÄß UÀªÀĤ¸À§ºÀÄzÀÄ). zÉêÀ¥Á®£À vÁªÀÄæ±Á¸À£ÀªÀÅ*4 PÁ±À, ºÀÆt, PÀİPÀ, PÀ£Áðl EvÁå¢ d£ÁAUÀUÀ¼À£ÀÄß G¯ÉèÃT¹zÉ. vÀ«Ä¼ÀÄ£Ár£À ¸ÀAWÀA ¸Á»vÀåzÀ PÉ®ªÀÅ ¥ÀzÀåUÀ¼ÀÄ PÉÆÃ±ÀgÀgÀ §UÉUÉ, CªÀgÀ UÀÄt®PÀëtUÀ¼ÀÄ, §ºÀĨsÁµÁeÁÕ£À, DAiÀÄÄzsÀ ¸ÀA§A¢ü ªÀÈwÛAiÀÄ£ÀÄß, ±ËgÀå, ¥ÀgÁPÀæªÀÄPÉÌ, ¸ÀvÀå¸ÀAzsÀvÉUÉ ºÉ¸ÀgÁVzÀÝgÉA§ÄzÀ£ÀÄß ¸ÀÆa¸ÀÄvÀÛªÉ.
F PÉÆÃ±ÀgÀgÀ£ÀÄß PÀÄjvÀÄ vÀļÀÄ£ÁrUÀÆ CªÀjUÀÆ EgÀĪÀ ¸ÀA§AzsÀªÀ£ÀÄß PÀÄjvÀÄ C£ÉÃPÀ «zÁéA¸ÀgÀÄ ZÀað¹zÁÝgÉ. ²gÀÆgÀÄ ²ªÀgÁªÀıÉnÖAiÀĪÀgÀÄ §AlgÀÄ PÉÆÃ±ÀgÀgÀ ªÀÄÆ®zÀªÀgÉA§ÄzÀ£ÀÄß ºÉüÀÄvÁÛgÉ.5 PÉ.«. gÀªÉÄñï CªÀgÀÄ A warrior groups which assisted many Southern Rulers in battles as mercenary troops6 JAzÀÄ ºÉüÀÄvÁÛ vÀļÀÄ£Ár£ÉÆA¢UÉ EªÀgÀ ¸ÀA§AzsÀªÀ£ÀÄß M¦àzÁÝgÉ. µÀ. ±ÉlÖgï CªÀgÀÄ PÀ£ÁðlPÀzÀ PÁ¸ÀgÀUÉÆÃrUÀÆ PÉÆÃ±ÀgÀjUÀÆ ¸ÀA§AzsÀ«gÀ§ºÀÄzÉà JA§ C£ÀĪÀiÁ£À ªÀåPÀÛ¥Àr¸ÀÄvÁÛgÉ.  C®èzÉ, vÀĽ¯Á¼ÀμÀ AiÀÄÄzÀÞ PÀæªÀÄPÀÆÌ PÉÆÃ±ÀgÀgÀÄ ºÁQPÉÆlÖ PÀzÀ£À PÀæªÀÄPÀÆÌ ºÉÆÃ°PÉAiÀÄ£ÀÄß UÀÄgÀÄw¸ÀÄvÁÛgÉ.7 
F «zÁéA¸ÀgÀ «ZÁgÀUÀ¼ÀÄ ¸ÀAWÀA ¸Á»vÀåzÀ PÀ«vÉUÀ¼À°è£À G¯ÉèÃRUÀ¼À£ÀÄß DzsÀj¹ §AzÀªÀÅ. DzÀgÉ EzÀĪÀgÉUÀÆ PÀ£ÁðlPÀzÀ AiÀiÁªÀÅzÉà ±Á¸À£ÀzÀ¯ÁèUÀ°Ã, PÁªÀåUÀ¼À¯ÁèUÀ°Ã PÉÆÃ±ÀgÀgÀ G¯ÉèÃRUÀ¼ÀÄ zÉÆgÀQgÀ°®è. F ¸ÀA§AzsÀzÀ°è vÀļÀÄ£Ár£À, PÉÆqÀV£À, ªÀįɣÁr£À ¥ÁæaãÀ ±Á¸À£ÀUÀ¼À°è PÉÆÃ±ÀgÀgÀ G¯ÉèÃRPÁÌV ºÀÄqÀÄPÁqÀÄwÛzÁÝUÀ PÀtÂÚUÉ ©zÀÝ F vÉÆ¼Àî UÁæªÀÄzÀ eÉÊ£À§¸À¢AiÀÄ ±Á¸À£ÀUÀ¼ÀÄ8 CvÀåAvÀ ªÀĺÀvÀé¥ÀÆtðªÁzÀªÀÅ.
AiÀiÁPÉAzÀgÉ, F ±Á¸À£ÀUÀ¼ÀÄ ¥ÁæaãÀ ¥Àæ¹zÀÞ «ÃgÀ PÉÆÃ±ÀgÀgÀ §UÉV£À J®è «zÁéA¸ÀgÀ HºÉ, ¥Àæ±ÉßUÀ½UÉ DzsÁgÀ MzÀV¸ÀĪÀ CvÀåªÀÄÆ®åªÁzÀ, PÀ£ÁðlPÀzÀ°è zÉÆgÉwgÀĪÀ ªÉÆvÀÛ ªÉÆzÀ® ¥ÁæaãÀ G¯ÉèÃRUÀ¼ÀÄ EªÁVªÉ. F ±Á¸À£À UÀ¼À°è £ÀgÀ¹AºÀgÁd¥ÀÅgÀ vÁ®ÆèQ£À 5£ÉAiÀÄ ¸ÀASÉåAiÀÄ ±Á¸À£ÀzÀ ¸ÀA¸ÀÌøvÀ ¨sÁUÀzÀ°è UÀAUÀ ²æÃ¥ÀÅgÀĵÀ ªÀĺÁgÁd C£ÀÄPÀÆ®ªÀwðUÀ¼À°è CUÀæUÀtå£ÁzÀ UÀAUÀgÁd£ÉAzÀÄ C©ü¶PÀÛ£ÁzÀ ¥À¹ArUÀYÎÁ£ÀéAiÀÄzÀ £ÁUÀªÀªÀÄð £ÉA§ÄªÀªÀ£ÀÄ, PÀzÀA§ PÀÄ® ¨sÁ¸ÀÌgÀ£ÁzÀ ²æÃ vÀļÀÄCr £ÁªÀÄzsÉÃAiÀĪÀżÀî vÀ£Àß ªÉÄÊzÀÄ£À£ÉÆA¢UÉ vÉÆ¼ÀîUÁæªÀÄzÀ ZÉÊvÁå®AiÀÄPÉÌ ªÀÄÆ¼ÀªÀ½î ºÉ¸Àj£À UÁæªÀĪÀ£ÀÄß  zÁ£À ªÀiÁrzÀÄzÀ£ÀÄß ºÉýzÉ.*9
vÉÆ¼À®PÉÆÃ²UÀgÀÄ, vÀĽ®¸ÀAzÀPÀÄ®zÀªÀgÀÄ, PÉÆÃ±ÀgÀgÀÄ MAzÉà ªÀÄÆ®zÀªÀgÀÄ
F vÀļÀÄ Cr ªÀÄvÀÄÛ DvÀ£À ¨sÁªÀ ¥À¹A¤ØUÀAUÀ £ÁUÀªÀªÀÄð£ÉÆA¢UÉ ¸ÉÃj, ©lÖ F eÉÊ£À zÁ£ÀPÉÌ F PÉÆÃ²UÀgï J¿àvÀÛgï, ¸ÁQë ªÀÄvÀÄÛ gÀPÀëPÀgÉA¢zÉ, ±Á¸À£ÀzÀ°è. CzÀPÉð vÉÆ¼ÀîgÁ PÉÆÃ¹UÀgï J¿àvÀÛgï ¸Á£ÁÝgÀÄA ¸ÁQëAiÀÄÄA £ÀgÀ¸Á¸À£ÀªÀiÁUÉ10 CzÀgÀPÉ ¸ÁQë vÉÆ¼À® PÁ¹PÀgÉ¿àvÀgï11 JAzÀÄ ºÉýªÉ. C®èzÉ EªÀgÀ£ÀÄß ‘vÉÆ¼ÀîgÉÆqɪÉÇgï, ¸ÀÄSÁqÀågï, J¿àvÀÛgï¥ÀæzsÁ£Àgï, £ÀgÀ±Á¸À£ÀAUÀ¼ï JAzÀÄ ¥Àæ¹zÀÞgÁzÀªÀgÉAzÀÄ ºÉÆUÀ½ªÉ.12 F «ªÀgÀUÀ¼À£ÀÄß UÀªÀĤ¹zÁUÀ EªÀgÀÄ £ÉÊwPÀªÀiË®åUÀ¼À£ÀÄß, ¸ÁªÀiÁfPÀ ¤Ãw-¤AiÀĪÀÄ £ÀqÁªÀ½UÀ¼À£ÀÄß ¤AiÀÄAwæ¸À§®èªÀgÁVzÀÄÝ, D ªÀiË®åUÀ¼À£ÀÄß gÀPÀÛUÀvÀ ªÀiÁrPÉÆArzÀÝ UÁæªÀÄ ¥ÀæzsÁ£ÀgÁVzÀÝgÉAzÀÄ vÉÆÃgÀÄvÀÛzÉ. vÉÆ¼Àî, vÉÆ¼À®Ä JA§ UÁæªÀÄ£ÁªÀĪÀÅ F PÉÆÃ²UÀgÀ G¥À£ÁªÀÄzÀ PÁgÀt¢AzÀ¯Éà §A¢zÉ. vÀƼÀÄ JA§ ¥ÀzÀPÉÌ zÁ½ ªÀiÁqÀÄ, ºÉÆÃgÁqÀÄ, DPÀæ«Ä¸ÀÄ KjºÉÆÃUÀÄ JA§ CxÀðUÀ½zÀÄÝ, EzÀÄ PÉÆÃ²UÀgÀ ºÉÆÃgÁlzÀ §zÀÄPÀ£Éßà ¸ÀÆa¸ÀÄvÀÛzÉ. vÀļÀÄ¥ÀzÀzÀ ªÀÄÆ®ºÀÄqÀÄPÀÄvÀÛ ©.J. ¸Á®vÉÆgÉAiÀĪÀgÀÄ vÀÆ®Ä ¥ÀzÀ ¸ÀÆa¹zÁÝgÉ. ºÉÆÃgÁlUÀ½UÉ ¥ËgÀĵÀPÉÌ ¥Àæ¹zÀÞgÁVzÀÝ F PÉÆÃ²UÀgÀÄ £É¯É¹zÀÝ PÁgÀt¢AzÀ¯Éà D UÁæªÀÄPÉÌ D ºÉ¸ÀgÀÄ §A¢zÉ JAzÀÄ ºÉüÀ§ºÀÄzÀÄ.
D£ÀAvÀgÀzÀ PÀ£ÁðlPÀzÀ PÁëvÀæAiÀÄÄUÀzÀ°è ªÀįɣÁr£À F ¥ÀæzÉñÀzÀ ±Á¸À£ÀUÀ¼À°è PÁt¹PÉÆArgÀĪÀ vÀĽ®¸ÀAzÀ PÀÄ®zÀªÀgÉAzÀÄ ¥Àæ¹zÀÞgÁzÀ «ÃgÀgÀÄ F vÉÆ¼À®UÁæªÀÄzÀ F PÉÆÃ²UÀgÀÄ MAzÉà ªÀÄÆ®zÀªÀgÉAzÀÄ ºÉüÀ§ºÀÄzÀÄ. (vÉÆ¼ÀîgÀ PÉÆÃ¹UÀgï ¸Á£ÁÝgÀÄA, vÉÆ¼À® ¸ÀAzÀPÀÄ®, vÀĽ¯Á¼Àίï JA§ÄzÀ£ÀÄß ºÉÆÃ°¹) vÉÆ¿Â¯ï vÀ«Ä¼ÀÄ ªÀįÉAiÀiÁ¼ÀzÀ°è EA¢UÀÆ §¼ÀPÉAiÀiÁUÀÄwÛzÉ. vÀĽ¯Á¼ÀμÀÄ PÀ°vÀ£ÀzÀ, C©üªÀiÁ£ÀzÀ zsÀªÀÄð, vÁåUÀ, ¸ÀvÀå, ±ËZÀ JA§ DgÀÄ UÀÄtUÀ¼À£ÀÄß gÀPÀÛUÀvÀ ªÀiÁrPÉÆAqÀÄ «ÃgÀ ¹zÁÞAwUÀ¼ÉAzÀÄ ¥Àæ¹zÀÞgÁVzÀÝgÀÄ. CAvÀºÀ «ÃgÀUÀÄtUÀ¼Éà ªÉÄʪÉvÀÛAwzÀÝ ©üõÀä£ÀÄ «ÃgÀ¹zÁÞAvÀzÀ ±Á¸À£ÀA §gÉzÀ ¥ÉÆwÛUÉAiÀÄAvÉ ±ÀgÀ±ÀAiÉÄåAiÀÄ ªÉÄÃ¯É PÁtÄwÛÛzÀÝ£ÉAzÀÄ ¥ÀA¥À ºÉýzÁÝ£É. EAvÀºÀ «ÃgÀgÀ §zÀÄPÉà ¸ÀªÀiÁdPÉÌ DzÀ±ÀðzÀ vÉÆÃgÀÄUÀA§UÀ¼ÁV PÀArzÀÄÝ CªÀgÀ£ÀÄß £ÀgÀ±Á¸À£À «ÃgÀ¹zÁÞAvÀzÀ ±Á¸À£ÀUÀ¼ÉAzÀÄ PÀgÉAiÀÄ®Ä PÁgÀt. AiÀiÁªÀÅzÉà «ZÁgÀªÀ£ÀÄß CzÀÄ ¸ÀvÀåªÉAzÀÄ w½¸ÀĪÁUÀ PÉÆÃ±ÀgÀgÀ ªÀiÁw£ÀAvÉ CzÀÄ ¸ÀvÀå MAzÉà ªÀiÁw£À PÉÆÃ±Àgï (M£ÀÄæ ªÉÆÃ¿Â PÉÆÃ±Àgï) JAzÀÄ d£À ºÉüÀÄwÛÛzÀÝgÀÄ. CzÀPÉÌ GzÁºÀgÀuÉAiÀiÁV PÀªÀ¬Äwæ CªÉéAiÀiÁgï ªÀÄUÀ¼À ¥ÉæÃªÀÄ PÀlĸÀvÀåªÉAzÀÄ UɼÀwUÉ ºÉüÀĪÁUÀ ±ÀARªÀ£ÀÆzÀÄvÀ ªÀÄzÀÝ¼É ¨Áj¸ÀÄvÀ ºÀ¼ÉAiÀÄ D®zÀ ªÀÄgÀzÀr £ÉgÉzÀ £Á®ÄÌ £É¯ÉUÀ¼À PÉÆÃ±ÀgÀgÀ £À®ÄßrUÀ¼ÀAvÉ CzÀÄ PÀlÄ ¸ÀvÀåªÉAzÀÄ ºÉýzÁݼÉ. PÉÆÃ±ÀgÀgÀÄ F ¸ÀvÀå¸ÀAzsÀvÉUÁV ¥Àæ¹zÀÞgÁVzÀÝgÀÄ. ¥Àæ¸ÀÄÛvÀ ±Á¸À£ÀzÀ PÉÆÃ²UÀgÀ£ÀÄß F PÁgÀtPÁÌVAiÉÄà £ÀgÀ±Á¸À£ÀgÉAzÀÄ ¥Àæ¹zÀÞgÁzÀªÀgÀÄ JA¢gÀĪÀÅzÀÄ.  CªÀgÀ £À®Äßr, CAzÀgÉ ¸ÀvÀåªÁzÀ ªÀiÁvÉà ±Á¸À£À, CªÀgÀ §zÀÄPÉà ±Á¸À£À, ¨ÉÃgÉ ±Á¸À£À §gɹ, ¤AiÀĪÀÄ gÀƦ¸ÀĪÀ CUÀvÀå«gÀ°®è. ¸ÀvÀåªÀ£ÀÄß ¥Àj¥Á°¹ zÀÆgÀzÀÆgÀ zÉñÀzÀ°è SÁåw ¥ÀqÉzÀAvÀºÀªÀgÀÄ (ªÁAiÀiï ªÉÆ¿Â ¤¯É¬ÄAiÀÄ ±Éãï E¼ÀUÀÄ£À¯ï E¸ÉʪÀ¼ÀA PÉ¿ÄPÉÆÃ±Àgï) ºÁUÁV CªÀjUÉ F ©gÀÄzÀÄ §A¢zÉ.
F ‘PÉÆÃ²UÀgï J¿àvÀÛgï ¥ÀæzsÁ£ÀgÀÄ’ PÉêÀ® ¸ÀvÀå¸ÀAzsÀ £ÀgÀ±Á¸À£ÀUÀ¼ÀµÉÖà C®è ºÀÄmÁÖ ºÉÆÃgÁlUÁgÀgÀÄ, J¿àvÀÛgï (70) JA§ÄzÀÄ CªÀgÀ ¸ÀªÀÄÄzÁAiÀĪÀ£ÀÄß, «ÃgÀ¥ÀqÉAiÀÄ «ÃgÀgÀ ¸ÀASÉåAiÀÄ£ÀÄß ¸ÀÆa¸ÀĪÀAwzÉ. F jÃw «ÃgÀ¥ÀqÉUÀ¼À ºÉ¸Àj£ÉÆA¢UÉ CªÀgÀ ¸ÀASÉåAiÀÄ£ÀÄß ºÉüÀĪÀÅzÀÄ ¸ÁªÀiÁ£Àå13 
¸ÀAWÀA ¸Á»vÀåzÀ PÀ« PÀ®èuÁgï (¥Àľ£Á£ÀƾÄ. 283) MAzÀÄ ¥ÀzÀåzÀ°è ‘dAiÀÄgÁV dUÀdV¹ ¸ÀAzÀt¹zÀ PÉÆÃ±ÀgÀgÀ¥ÀAUÀqÀ gÀtgÀAUÀªÀ£ÀÄß ¸ÀÆgÉUÉÆ¼ÀÄîªÀgÀÄ JAzÀÄ G¯ÉèÃT¹zÁÝ£É. E°è PÀ« PÉÆÃ±ÀgÀgÀ£ÀÄß MAzÀÄ ºÉÆÃgÁlzÀ ¥ÀAUÀqÀªÁV UÀÄgÀÄw¹zÁÝ£É. ºÀ®ªÀÅ §UÉAiÀÄ ±ÀÆ®zÀ¼ÀUÀ¼À PÉÆÃ±ÀgÀgÀ£ÀÄß (CºÀ£Á£ÀÆ¾Ä 113-5) G¯ÉèÃT¸ÀÄvÀÛzÉ.  ªÀÄvÉÆÛ§â PÀ« PÁ«gÀ¥ÉàlÖtvÀÛgï (¥Àľ£Á£ÀƾÄ, 169) ±ÀÆ®«ÃgÀ AiÀÄĪÀPÉÆÃ±ÀgÀÄ ±ÀvÀÄæ ¸ÀAºÀj¸À®Ä vÀÆjAiÉĸÉAiÀÄĪÀgÀÄ, D C¸ÀÛçUÀ¼ÁWÁvÀ ¸ÉÊj¸ÀĪÀ ªÀÄÄgÀÄPÀÄÌ (ºÀ®¹£À) ªÀÄgÀzÀ ªÀÄ®èPÀA§zÀAvÉ §ºÀÄPÁ® ¨Á¼À° ¤£Àß QÃwð ¥ÀævÁ¥À ªÉÊjUÀ¼À ªÀÄÄAzÉAzÀÆ PÀÄAzÀzÀAvÉ..... JA§ ¥ÀzÀå¨sÁUÀzÀ°è PÉÆÃ±ÀgÀ AiÀÄĪÀPÀgÀÄ ªÀÄÄgÀÄPÀÄÌ ªÀÄgÀ¢AzÀ vÀAiÀiÁgÁzÀ UÀnÖAiÀiÁzÀ ªÀÄ®èUÀA§UÀ¼À£ÀÄß §¼À¹, CzÀPÉÌ UÀÄj¬ÄlÄÖ ±ÀÆ®UÀ¼À£É߸ÉzÀÄ C¨sÁå¸À ªÀiÁqÀÄwÛzÀÝgÀÄ JA§ÄzÀÄ w½zÀÄ §gÀÄvÀÛzÉ.
PÀ« MqÀªÉÆÃvÀAQ¿õÁgï (¥Àľ£Á£ÀƾÄ, 290) vÀÄgÀÄPÁ¼ÀUÀzÀ°è ªÀÄrzÀ «ÃgÀ£ÉƧâ£À ¸Á«£À avÀæ ¤ÃqÀÄvÀÛ, ±ÀvÀÄæUÀ¼ÀÄ ¸ÀÄj¹zÀ ¸ÀgÀ®ÄªÀļÉAiÀÄ£ÀÄ zÁn ºÉÆÃgÁr UÉÆÃªÀÅUÀ¼À£ÀÄß ªÀÄgÀ½¹ PÀqÉUÉ bÀ®¢AzÀ ¤AvÀ VjUÀA§ªÉÇAzÀÄ vÉÆAiÀiÁÝr ºÉÆAiÀiÁÝr £É® PÀaÑzÀAvÉ ©¢ÝzÉ ºÉt ¸ÀgÀ®Ä¸ÉgÉAiÀİ J£ÀÄßvÁÛ£É. ¸ÀgÀ®Ä¸ÉgÉ JA§ ¸ÀÄAzÀgÀ gÀÆ¥ÀPÀ «ÃgÀgÀ avÀæªÀ£ÀÄß PÀtÂÚUÉ PÀnÖ¸ÀĪÀAwzÉ. E°è ºÀ®ªÁgÀÄ ¸ÀgÀ¼ÀÄUÀ¼ÀÄ ZÀÄaÑPÉÆArgÀĪÀ UÀÄjUÀA§zÀ avÀæt ±ÀÆ®«ÃgÀ PÉÆÃ²UÀgÀ AiÀÄĪÀPÀgÀÄ C¨sÁå¸ÀPÉÌ §¼À¸ÀÄwÛzÀÝ ªÀÄÄgÀÄPÀÄÌ ªÀÄgÀzÀ  ªÀÄ®èPÀA§ªÀ£ÀÄß, ¸ÀgÀ®ªÀÄAZÀzÀ°è £É®ªÀÄÄlÖzÉ ªÀÄ®VzÀÝ ©üõÀä£À£ÀÄß £É£À¦¸ÀÄvÀÛzÉ.
PÀ¥ÀÅà PÀtÂÚ£À PÉÆÃ±ÀgÀgï ªÀÄÄRzÀ°è PÀ©âtzÀ DAiÀÄÄzsÀ ªÀÄÄ¶× Kn£À ªÀÄÄzÉæ JzÀÄÝPÁtÄwÛvÀÄÛ JA§ ªÀtð£É¬ÄzÉ. (E¦ügÀÄA©©qÀA ¥ÀqÀÄvï ªÀqÀÄGqÉÊ ªÀÄĺÀvÀÛgï PÀgÀÄAUÀ£ï PÉÆÃ±ÀgÀ-CºÀ£Á£ÀƾÄ-90)  ªÀÄ®èUÀA§ ªÀÄvÀÄÛ ¯ÉÆÃºÀzÀ ªÀdæ ªÀÄĶ×UÀ¼À£ÀÄß dnÖUÀ¼ÀÄ «±ÉõÀªÁV §¼À¸ÀĪÀÅzÀÄ £ÀªÀÄUÉ w½zÀħgÀÄvÀÛzÉ.  CAzÀgÉ F PÉÆÃ±ÀgÀgÀÄ dnÖPÁ¼ÀUÀzÀ®Æè ¥Àæ¹zÀÞgÁVzÀÝgÉ£Àß§ºÀÄzÀÄ.
¥Àæ¸ÀÄÛvÀ vÉÆ¼ÀîUÁæªÀÄzÀ ±Á¸À£ÀUÀ¼ÀÄ PÉÆÃ±ÀgÀjUÉ vÉÆ¼ÀîgÉÆqɪÀgï, ¸ÀÄSÁqÀågï, ¥ÀæzsÁ£Àgï JA§ «±ÉõÀtUÀ¼À£ÀÄß ºÉýzÉ. EªÀgÀÄ HgÉÆqÉAiÀÄgÀµÉÖà C®è ¸ÀÄSÁqÀågï CAzÀgÉ ¸ÀÄR¥ÀÄgÀĵÀgÀÄ ¹jªÀAvÀgÀÄ JA§ÄzÀÄ CªÀgÀ DyðPÀ ¹ÜwUÀwAiÀÄ ªÉÄÃ¯É ¨É¼ÀPÀÄ ZÉ®ÄèvÀÛzÉ. ¥ÁæaãÀ vÀļÀÄ£ÁqÀ PÉÆÃ±ÀgÀgÀÄ ¹jªÀAvÀgÀÄ ¸ÀÄR¥ÀÅgÀĵÀgÀÄ, C®APÁgÀ ¦æAiÀÄgÀÆ,  gÀ¹PÀgÀÆ  DVzÀÝ gÉA§ÄzÀÄ CªÀgÀ  G¯ÉèÃRUÀ½AzÀ  w½zÀÄ §gÀÄvÀÛzÉ. (¥Àľ£Á£ÀÆ¾Ä PÀÈwAiÀÄ 396, 7£Éà ¸Á®Ä, CUÀ£Á£Àƾ£À 216-11;15-2 ¥ÀzÀåUÀ¼À°è  PÉÆÃ±ÀgÀgÀÄ ¥ÀĵÀàgÀ¸À (eÉãÀÄ)¢AzÀ ªÀiÁrzÀ PÀ¼Àî£ÀÄß PÀÄrzÀÄ D£ÀA¢¸ÀÄwÛzÀÝgÀÄ. ªÀÄļÉÊ(ªÉƯÉè) ºÀƪÀiÁ¯ÉAiÀÄ£ÀÄß ªÀÄÄrzÀÄ QæÃr¸ÀÄwÛzÀÝgÀÄ, ¥ÉgÀÄA¥ÉÇ£ï CAzÀgÉ zÉÆqÀØ zÉÆqÀØ  ¸ÀĪÀuÁð¨sÀgÀtUÀ½AzÀ  C®APÀj¹PÉÆ¼ÀÄîªÀ PÉÆÃ±ÀgÀgÉAzÀÄ CªÀgÀ£ÀÄß UÀÄgÀÄw¹ªÉ. (¥ÉgÀÄA¥ÉÇuï ZɪÀÄäPÉÆÃð±Àgï......  vÀļÀÄ£ÁqÀÄ - ªÀiÁªÀÄÆ®uÁgï) EªÀgÀ£ÀÄß £Á¯ÉÆä½PÉÆÃ±ÀgÀgÉAzÀÄ CAzÀgÉ £Á®ÄÌ £ÀÄr (¨sÁµÉ)UÀ¼À£ÀÄß §®èªÀgÀÄ DVzÀÝgÉAzÀÄ ªÀÄzsÀÄgÉÊPÁÌAa PÀÈwAiÀÄ°è ºÉýzÉ.14
MnÖ£À°è EzÀĪÀgÉUÉ ¥ÁæaãÀ vÀļÀÄ£ÁqÀ PÉÆÃ±ÀgÀ «ÃgÀ d£ÁAUÀzÀ §UÉUÉ ZÀað¹gÀĪÀ «zÁééA¸ÀgÀÄ ¸ÀAWÀA ¸Á»vÀåzÀ G¯ÉèÃRUÀ¼À£Éßà DzsÀj¹zÀÝgÀÄ. DzÀgÉ PÀ£ÁðlPÀzÀ PÁªÀåUÀ¼À¯ÁèUÀ°Ã ±Á¸À£ÀUÀ¼À¯ÁèUÀ°Ã G¯ÉèÃRUÀ¼ÀÄ zÉÆgÉAiÀÄzÉ PÀ£ÁðlPÀzÉÆA¢V£À PÉÆÃ±ÀgÀgÀ PÉÆAr C¸ÀàµÀÖªÁVvÀÄÛ. F vÉÆ¼ÀîUÁæªÀÄzÀ ±Á¸À£ÀUÀ¼À G¯ÉèÃRUÀ¼ÀÄ PÉÆÃ±ÀgÀjUÀÆ vÀļÀÄ£Ár£À CgÀ¸ÀgÁ¼ÀÄwÛzÀÝ vÀUÀgÉ£Ár£À ¥ÀæzÉñÀ (FV£À ¨ÉîÆgÀÄ, aPÀ̪ÀÄUÀ¼ÀÆgÀÄ, PÉÆ¥Àà)PÀÆÌ E°è£À CgÀ¸ÀgÉÆA¢V£À CªÀgÀ MqÀ£Ál, CªÀgÀ vÉÆ¼Àî CxÀªÁ vÉÆ¿®Ä UÁææªÀÄzÀ°è£À CªÀgÀ £É¯ÉAiÀÄ£ÀÄß PÀÄjvÀÄ w½¹PÉÆqÀÄvÀÛzÉ. eÉÊ£À zsÀªÀÄðzÀ zÁ£À gÀPÀëuÉ ªÀiÁqÀÄwÛzÀÝ «ZÁgÀ, CªÀgÀ «ÃgÀ ¹zÁÞAvÀªÀ£ÁßzsÀj¹zÀ fêÀ£ÀPÀæªÀÄ, ªÉʨsÀªÀUÀ¼À «ZÁgÀUÀ¼À£ÀÄß, CvÀåAvÀ ¸ÀAQë¥ÀÛªÁVzÀÝgÀÆ  ¸ÀÄálªÁV MAzÉÆAzÉà «±ÉõÀtUÀ½AzÀ F ±Á¸À£ÀUÀ¼ÀÄ ©aÑnÖªÉ.
vÀļÀ®PÉÆÃ²UÀjUÀÆ vÀĿ®¸ÀAzÀPÀÄ®zÀªÀjUÀÆ EgÀĪÀ fêÀ£ÀPÀæªÀÄzÀ ¸ÁªÀÄåvÉ ºÉÆÃgÁlzÀ §zÀÄPÀÄ MAzÉà JA§ÄzÀÄ w½zÀħA¢zÉ.
F J¯Áè PÁgÀtUÀ½AzÀ £ÀgÀ¹AºÀgÁd¥ÀÅgÀ ¹AºÀt UÀzÉÝAiÀÄ eÉÊ£ÀªÀÄoÀzÀ°è zÉÆgÉwgÀĪÀ vÉÆ¼À® UÁæªÀÄzÀ eÉÊ£À zÁ£ÀvÁªÀÄæ¥ÀlUÀ¼ÀÄ ºÁUÀÆ £ÀgÉÃUÀ°è£À PÉÆÃZÁgÀgÀ PÉÆÃmÉAiÀĪÀÄä£À ªÀÄUÀ vÉÆÃ¬ÄªÀÄä£À Qæ.±À.8 ªÀÄvÀÄÛ 9£ÉAiÀÄ ±ÀvÀªÀiÁ£ÀzÀ ±Á¸À£ÀUÀ¼ÀÄ PÀ£ÁðlPÀzÀ°è zÉÆgÀQgÀĪÀ PÉÆÃ±ÀgÀgÀ ªÉÆlÖ ªÉÆzÀ® zÁR¯ÉUÀ¼ÁVªÉ. ºÀÄqÀÄQzÀgÉ ªÀÄvÀÛµÀÄÖ ±Á¸À£ÀUÀ¼À°è EªÀgÀ G¯ÉèÃR zÉÆgÀPÀĪÀ ¸ÁzsÀåvɬÄzÉ.15
[F ¯ÉÃR£ÀzÀ°è£À PÉ®ªÀÅ «ªÀgÀUÀ¼À£ÀÄß ¸ÀA±ÉÆÃzsÀPÀgÁzÀ J¸ï. PÁjÛPï CªÀgÀÄ ¥ÀjµÀÌj¹ PÉÆnÖzÁÝgÉ. CªÀjUÉ £À£Àß PÀÈvÀdÕvÉUÀ¼ÀÄ.]
£ÀA. 335, ªÀ¹µÀ×, ¸ÀgÀ¸Àéw £ÀUÀgÀ, «dAiÀÄ£ÀUÀgÀ, ¨ÉAUÀ¼ÀÆgÀÄ - 560040.

DzsÁgÀ¸ÀÆa ªÀÄvÀÄÛ n¥ÀàtÂUÀ¼ÀÄ
1.    J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl 12. £ÀgÀ¹AºÀgÁd¥ÀÅgÀ ±Á¸À£À ¸ÀASÉå - 5,6,7. Qæ.±À. 8£ÉAiÀÄ ±ÀvÀªÀiÁ£À.
2.    vÀ«Ä¼ï PÀ¯ÉàlÄÖ ZÉÆ®èUÀgÁ¢AiÀİè (¥ÀÅl 218) PÉÆÃZÀgï; MgÀÄ EtA Qæ.±À. 700. PÉÆÃ¸ÀgÀÄ, ªÀÄļÀªÀgÀÄA, MqÀªÀÄgÀÄ vÀAqÀvÉÆÛÃgÀÄ JA§ G¯ÉèÃR«zÉ.
3.    ºÁ£ÀUÀ¯ï vÁ®ÆQ£À PÉ®ªÀÅ gÁµÀÖçPÀÆl ±Á¸À£ÀUÀ¼ÀÄ, ºÀ£ÀĪÀiÁQë UÉÆÃV, EwºÁ¸À zÀ±Àð£À, ¸ÀA¥ÀÅl-14, 1999, ¥ÀÅl 45-46. [EzÀgÀ°è ¥ÀæPÀlªÁVgÀĪÀ ºÁªÉÃj f¯Éè, ºÁ£ÀUÀ¯ï vÁ®ÆèQ£À £ÀgÉÃUÀ®Äèè ±Á¸À£À] ¥ÀæPÀÈvÀ «ªÉÃZÀ£ÉUÉ CUÀvÀåªÁzÀ ±Á¸À£À ¥ÁoÀ«AwzÉ.
JgÀqÀ£ÉAiÀÄ ¸ÀÛgÀ :
6 [¸ÀAªÀ*]vÀìgÀ ±ÀvÀAUÀ¼ÉtÄé £ÀÆ(¾õÉ*)¿àvÀÛ K¿
7       gÁPÀë¸À ¸ÀAªÀvÀìgÀzÀ ±ÁæªÀtzÀ ¥ÀÄtߪÉÄAiÀÄÄ D¢vÀåªÁgÀ
8         £ÀgÉAiÀÄAUÀ®è PÉÆÃZÁgÀgÀ PÉÆÃmÉAiÀĪÀÄä£À ªÀÄUÀ vÉÆÃ¬ÄªÀÄä£À°è
9 vÀÄ[¾Ä*]¥ÀjAiÉÄ PÁzÀÄ ¸ÀvÀÄÛ ¸Àé[UÀÎð¯ÉÆÃPÀ¥Áæ*]¥ÀÛ£ÁzÀA
4.   Munagir Plates of Devapaladeva-(Ed) L.D.Barnett, Epigraphia Indica, Volume-18,  ¥ÀÅl 304.
5.    §AlgÀ ªÀÄÆ® MAzÀÄ CzsÀåAiÀÄ£À, ¥ÀæPÀl£É : §AlgÀ AiÀiÁ£É £ÁqÀªÀgÀ ¸ÀAWÀ, ªÀÄAUÀ¼ÀÆgÀÄ-1995.
6.    J »¸ÀÖj D¥sï ¸Ëvï PÉ£ÀgÁ, PÉ.«. gÀªÉÄñï, PÀ£ÁðlPÀ «±Àé«zÁå®AiÀÄ, zsÁgÀªÁqÀ-1970, ¥ÀÅl 8-34.
7.    ±ÀAUÀA vÀ«Ä¼ÀUÀA ªÀÄvÀÄÛ PÀ£ÀßqÀ £ÁqÀÄ £ÀÄr, C©ü£ÀªÀ ¥ÀæPÁ±À£À, ¨ÉAUÀ¼ÀÆgÀÄ-2010, ¥ÀÅl 177.
8.    J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl-12. £ÀgÀ¹AºÀgÁd¥ÀÅgÀ, ±Á.¸ÀA. 5.6.7 Qæ.±À. ¸ÀÄ.8 £ÉAiÀÄ ±ÀvÀªÀiÁ£À.
9.    E°è ¥À¹Ar UÀAUÀ PÀÄ® AiÀiÁªÀÅzÀÄ JA§ PÀÄvÀƺÀ® PÉgÀ½¸ÀÄvÀÛzÉ. F UÀAUÀ PÀÄ®PÀÆÌ PÀzÀA§ PÀÄ®PÀÆÌ EzÀÝ ªÉʪÁ»PÀ       ¸ÀA§AzsÀªÀ£ÀÄß  ¸ÀÆa¸ÀÄwÛzÉ.  vÀļÀÄCr JA§ ºÉ¸ÀgÀÆ «±ÉõÀªÁVzÉ. ºÀ°är ±Á¸À£ÀzÀ ªÀÄÆ¼ÀªÀ½îAiÀÄ£ÀÄß «dCgÀ¸À¤UÉ ¤ÃrzÀÄÝ w½zÀ «µÀAiÀĪÉÃ. ¥Àæ¸ÀÄÛvÀ ±Á¸À£ÀzÀ®Æè ªÀļÀªÀ½îîAiÀÄ£ÀÄß zÁ£À ¤ÃqÀ¯ÁVzÉ. F UÁæªÀÄ C¼ÀPÀzÀA§gÀÄ D¼ÀÄwÛzÀÝ ¥ÀæzÉñÀªÁVzÀÄÝ, Qæ.±À.425gÀ ºÉÆwÛUÁUÀ¯Éà CªÀgÀ C¢üãÀzÀ°èvÀÄÛ. vÀļÀÄCrAiÀÄ£ÀÄß PÀzÀA§ PÀÄ®¨sÁ¸ÀÌgÀ£ÉA¢gÀĪÀÅzÀjAzÀ CªÀ£ÀÄ vÀļÀÄ (D¼ÀÄ¥À) PÀzÀA§ªÀA±ÀUÀ¼À ªÉʪÁ»PÀ ¸ÀA§AzsÀzÀ ¸ÀAvÁ£À JA§ HºÉUÉ CªÀPÁ±À«zÉ.
10.   J¦UÁæ¦üAiÀÄ PÀ£ÁðnPÀ (¥ÀjµÀÌøvÀ, aPÀ̪ÀÄUÀ¼ÀÆgÀÄ f¯Éè), ¸ÀA¥ÀÅl-12. £ÀgÀ¹AºÀgÁd¥ÀÅgÀ ±Á.¸ÀASÉå. 6.
11.  J.PÀ. CzÉÃ, ±Á¸À£À ¸ÀASÉå 7. 
12.   J.PÀ. CzÉÃ, ±Á¸À£À. ¸ÀASÉå 5.
13.   JPÀÌnUÀ«ÃgÀ ¥ÀqÉ, J£ï.Dgï. ®°vÁA§, EwºÁ¸À zÀ±Àð£À, 25, 2010, ¥ÀÅl 263-267.
14.   History of The Tamils From The Earliest Times To 600 A.D- P.T. Srinivas Iyengar, Asian Educational Services-1929,  5 pMunagir Plates of Devapaladeva-(Ed) L.D.Barnett, Epigraphia Indica, Volume-18, ¥ÀÅl 304. 526.
15.  F ¥ÁæaãÀ PÉÆÃ±ÀgÀ «ÃgÀ¥ÀqÉ ºÁUÀÆ ºÉÆAiÀÄì¼ÀgÀ PÁ®zÀ ¨sÉÃgÀÄAqÀzÀ ªÉÆvÀÛzÀ PÀƸÀgÀ «ÃgÀ¥ÀqÉAiÀÄ £ÀqÀÄªÉ C£ÉÃPÀ ¸ÁªÀÄåvÉUÀ¼ÀÄ PÀAqÀħgÀÄwÛzÀÄÝ PÉÆÃ²UÀgÉà PÀƸÀgÁVgÀ§ºÀÄzÉA§ £À£Àß HºÉUÉ EwÛÃZÉUÉ ¥ÀæPÀlªÁVgÀĪÀ ªÀÄAqÀå f¯Éè, PÀȵÀÚgÁd¥ÉÃmÉ vÁ®ÆèPÀÄ ¹Ã¼À£ÉgÉ UÁæªÀÄzÀ Qæ.±À.1215, CPÉÆÖçgï-5, ¸ÉÆÃªÀĪÁgÀzÀ vÉâAiÀÄļÀî ±Á¸À£ÀzÀ°è [²ªÀ±ÉÆÃzsÀ-JZï.JA. £ÁUÀgÁdgÁªï, gÀZÀ£Á ¥ÀæPÁ±À£À, ªÉÄʸÀÆgÀÄ-2008, ¥ÀÅl 354-355] vÀÄgÀÄUÁ¼ÀUÀzÀ°è ªÀÄrzÀ PÉÆ¹UÀ JA§ ¥ÀǪÀð £ÁªÀĪÀżÀî «ÃgÀ£ÉƧâ£À G¯ÉèÃRªÀÅ ¥ÀÅ¶Ö ¤ÃqÀÄvÀÛzÉ.



Wednesday, May 22, 2013

ನಾಗಾವಿಯ ಕೋಡಿ ಬಸವಣ್ಣ ದೇವಾಲಯ


ಸಾಂಸ್ಕೃತಿಕ ಕೇಂದ್ರವಾಗಿ ನಾಗಾವಿಯ ಕೋಡಿ ಬಸವಣ್ಣ ದೇವಾಲಯ

ಡಾ. ಎಂ.ಎಸ್. ನರೇಗಲ್ಲ
ಮುಖ್ಯಸ್ಥರು ಇತಿಹಾಸ ವಿಭಾಗ ,
ಕೆ.ಎಸ್.ಎಸ್. ಮಹಾವಿದ್ಯಾಲಯ
, ಗದಗ-೫೮೨೧೦೧.



ದಗದಿಂದ ದಕ್ಷಿಣ-ಪೂರ್ವ ಭಾಗ ಅಂದರೆ ಆಗ್ನೇಯ ದಿಕ್ಕಿನ ದಾರಿಯಲ್ಲಿ ಮೊದಲಿಗೆ ಬರುವ ಗ್ರಾಮವೇ ಕಳಸಾಪೂರ. ಅಲ್ಲಿಂದ ಮುಂದೆ ತಿರುವು ಮುರುವುಗಳಿಂದ ಸಾಗಿದರೆ ನಮಗೆ ಕಾಣುವುದು ನಾಗಾವಿ ಗ್ರಾಮ. ಈ ದಾರಿಯ ತಿರುವಿನಲ್ಲಿ ಎಡಗಡೆ ಗುಡ್ಡದ ಅಡಿಯಲ್ಲಿ ಕಾಣುವುದೆ ಬಸವಣ್ಣನ ದೇವಾಲಯ. ಇದಕ್ಕೆ ಸ್ಥಳೀಯರು ಕೋಡಿ ಬಸವಣ್ಣನ ದೇವಾಲಯವೆಂದು ಕರೆಯುತ್ತಾರೆ. ಕೋಡಿ ಎಂದರೆ ಒಂದು ವಿಶಾಲವಾದ ಕೆರೆಯಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿದ ನಂತರ ಅದರ ರಕ್ಷಣಾತ್ಮಕವಾಗಿ ಕೋಡಿ ಮೂಲಕ ನೀರು ಹೊರಹಾಕಲಾಗುತ್ತದೆ. ಇದೊಂದು ಕೆರೆಗಳಿಗೆ ಸೇಪ್ಟಿವಾಲ್ ಇದ್ದಂತೆ. ಈ ಸ್ಥಳದ ಪಕ್ಕಕ್ಕೆ ನಿರ್ಮಿಸಿದ ದೇವಾಲಯವೇ ಕೋಡಿ ಬಸವೇಶ್ವರ ದೇವಾಲಯ. ಆದರೆ ಈ ದೇವಾಲಯದಲ್ಲಿನ ಯಾವುದೇ ಶಾಸನದಲ್ಲಿ ಈ ಹೆಸರು ಉಲ್ಲೇಖವಿಲ್ಲ. ಅದರ ಬದಲಾಗಿ ಕೋಡಿ ಮಹಾಬಳೇಶ್ವರ ದೇವಾಲಯ ಎಂದು ಉಲ್ಲೇಖವಿದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ಪತನದ ನಂತರ ಅಧಿಕಾರಕ್ಕೆ ಬಂದ ಯಾದವ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿದೆ.
ಕಲ್ಯಾಣ ಚಾಲುಕ್ಯ ಮತ್ತು ಕಳಚೂರಿ ವಂಶಗಳ ಅವಸಾನವು ಕರ್ನಾಟಕದಲ್ಲಿ ಅನೇಕ ಸಣ್ಣಪುಟ್ಟ ರಾಜವಂಶಗಳ ಉಗಮಕ್ಕೆ ದಾರಿಯಾಯಿತು. ಇವರಲ್ಲಿ ಸೇವುಣರು ಪ್ರಮುಖರು. ಇವರನ್ನು ದೇವಗಿರಿ ಯಾದವರೆಂದೂ ಕರೆಯಲಾಗುತ್ತದೆ. ಇವರು ನೆಲೆಸಿದ ನಾಡಿಗೆ ಸೇವುಣ ದೇಶವೆಂದು ಕರೆಯಲಾಯಿತು. ಇಂತಹ ಸೇವುಣರು ೧೨ನೇ ಶತಮಾನದ ಕೊನೆಯಿಂದ ೧೩ನೇ ಶತಮಾನದ ಕೊನೆಯವರೆಗೆ ಆಡಳಿತ ನಡೆಸಿದರು. ೧೩ನೇ ಶತಮಾನದ ವೇಳೆಗೆ ಯಾದವರ (ಸೇವುಣರು) ಹೊಯ್ಸಳರ ಹಾಗೂ ಮುಸ್ಲಿಂ ಅರಸರ ಮಧ್ಯ ಘರ್ಷಣೆಗಳು ಆರಂಭವಾಗಿ ದಕ್ಷಿಣ ಭಾರತ ಅರಸೊತ್ತಿಗೆ ದುರ್ಬಲವಾಯಿತು. ಉತ್ತರ ಭಾರತದ ಮುಸ್ಲಿಂ ದಾಳಿಕೋರರು ದಕ್ಷಿಣಕ್ಕೆ ತಮ್ಮ ಗಮನ ಹರಿಸಿದರು. ಇದರ ಪ್ರತಿಫಲವಾಗಿ ಕ್ರಿ.ಶ.೧೨೯೬ರಲ್ಲಿ ಅಲ್ಲಾವುದ್ದೀನ ಖಿಲ್ಜಿ ದೇವಗಿರಿಯನ್ನು ಲೂಟಿ ಮಾಡಿದನು. ಕ್ರಿ.ಶ.೧೩೦೭ರಲ್ಲಿ ಮಲ್ಲಿಕಾಪುರ್ ದೇವಗಿರಿ ಸಂಪತ್ತನ್ನು ದೋಚಿ ಅಲ್ಲಿನ ದೊರೆ ರಾಮಚಂದ್ರದೇವನನ್ನು ದೆಹಲಿಗೆ ಒಯ್ದನು. ಮುಂದೆ ಮಲ್ಲಿಕಾಪುರ್ ಕ್ರಿ.ಶ.೧೩೧೩ರಲ್ಲಿ ರಾಮಚಂದ್ರದೇವನ ಮಗ ಶಂಕರದೇವನನ್ನು ಕೊಂದನು. ಹೀಗೆ ದಕ್ಷಿಣದ ದೇವಗಿರಿ ಮುಸ್ಲಿಂ ರಾಜ್ಯವಾಯಿತು.
ಗದಗ ಪ್ರದೇಶವನ್ನು ಯಾದವರು ಆಳಿದ ಬಗ್ಗೆ ಹಲವಾರು ಶಾಸನಗಳು ಹಾಗೂ ಅರಸರು ಕಟ್ಟಿಸಿದ ದೇವಾಲಯಗಳು ಇಂದಿಗೂ ಈ ಭಾಗದಲ್ಲಿ ಕಂಡುಬರುತ್ತವೆ. ಅಂತಹ ದೇವಾಲಯಗಳಲ್ಲಿ ವಿನಾಶದ ಅಂಚಿನಲ್ಲಿರುವ ನಾಗಾವಿಯ ಕೋಡಿ ಬಸವೇಶ್ವರ ದೇವಾಲಯ.
ಈ ದೇವಾಲಯದ ಮುಂಭಾಗದ ಮುಖಮಂಟಪದ ನಾಲ್ಕು ಕಂಬಗಳ ಅಡಿಯಲ್ಲಿ ನಾಲ್ಕು ಯಾದವ ದೊರೆಗಳ ಶಾಸನಗಳಿವೆ. ಇವು ಈಗಾಗಲೇ ಪ್ರಕಟಗೊಂಡ ಶಾಸನಗಳಾಗಿವೆ. ಈ ನಾಲ್ಕೂ ಶಾಸನಗಳು ಯಾದವ ದೊರೆ ಸಿಂಘಣದೇವನ ಕಾಲಕ್ಕೆ ಸಂಬಂಧಿಸಿದವುಗಳಾಗಿವೆ. ಕ್ರಿ.ಶ.೧೨೦೦ರಿಂದ ೧೨೪೬ರ ಅವಧಿಯಲ್ಲಿ ಗದಗ ಪ್ರದೇಶವು ಸಿಂಘಣನ ಆಳ್ವಿಕೆಗೆ ಒಳಪಟ್ಟಿತ್ತು.
ಮೊದಲನೇ ಶಾಸನವು ೮ ಸಾಲುಗಳಿಂದ ಕೂಡಿದ್ದು, ಇದರಲ್ಲಿ ಯಾದವ ದೊರೆ ಸಿಂಘಣದೇವನ ಆಳ್ವಿಕೆಯ ೫ನೇ ವರ್ಷದಲ್ಲಿ ಅಂದರೆ ಕ್ರಿ.ಶ.೧೨೧೫ರ ಯುವಸಂವತ್ಸರ ಚೈತ್ರ ಅಷ್ಟಮಿ ಸೋಮವಾರದಂದು ನಾಗಾವಿಯ ಮಹಾಬಳೇಶ್ವರ ದೇವರಿಗೆ (ಈಗಿನ ಕೋಡಿ ಬಸವೇಶ್ವರ ದೇವಾಲಯ) ನಾಗಾವಿ ಗ್ರಾಮದ ಕಮ್ಮಾರ ವೃತ್ತಿ ಮಾಡುವ ಬಮ್ಮೋಜ ಎಂಬುವನು ತಾನು ತಯಾರಿಸಿದ ಕಬ್ಬಿಣ ಸಲಕರಣೆಗಳ ಮೇಲಿನ ಸುಂಕವನ್ನು ದೇವಾಲಯದ ಅರ್ಚಕ ಸೋಮೇಶ್ವರದೇವರ ಪಾದ ತೊಳೆದು ದಾನ ನೀಡಿದನೆಂದು ತಿಳಿದುಬರುತ್ತದೆ.
೨ನೇ ಶಾಸನವು ಕ್ರಿ.ಶ.೧೨೪೪ರಲ್ಲಿ ಕೆತ್ತಲಾಗಿದ್ದು ಇದು ೨೩ ಸಾಲುಗಳಿಂದ ಕೂಡಿದೆ. ಈ ಶಾಸನವೊಂದರಲ್ಲಿ ಮಾತ್ರ ಈ ದೇವಾಲಯವನ್ನು ಕೊಡಿ ಮಹಾಬಳ ದೇವರ್ಗೆ ಎಂದು ಕರೆಯಲಾಗಿದೆ. ಇದೇ ಹೆಸರು ಮುಂದೆ ಸ್ಥಳೀಯರಲ್ಲಿ ಕೋಡಿ ಬಸವಣ್ಣ ಎಂದು ರೂಢಿಯಲ್ಲಿದೆ. ಆದರೆ ಬಸವಣ್ಣ ದೇವರು ಎಂದು ಯಾವುದೇ ಶಾಸನದಲ್ಲಿ ಉಲ್ಲೇಖವಿಲ್ಲ. ಶಾಸನದಲ್ಲಿ ನಾಗಾವಿಯ ೧೦೪ ಮಹಾಜನರು ಈ ದೇವಾಲಯಕ್ಕೆ ಭೂಮಿ ದಾನ ನೀಡಿದ ಉಲ್ಲೇಖವಿದೆ.
೩ನೇ ಶಾಸನವು ಕ್ರಿ.ಶ.೧೨೪೬-೪೭ ರಲ್ಲಿ ರಚನೆಯಾಗಿದೆ. ಇದು ೧೪ ಸಾಲುಗಳಿಂದ ಕೂಡಿದೆ. ನಾಗಾವಿಯ ತೆರಿಗೆ ಅಧಿಕಾರಿಯೊಬ್ಬನು ದೇವಾಲಯಕ್ಕೆ ತೆರಿಗೆಯಿಂದ ಬಂದ ಹಣವನ್ನು ದಾನ ನೀಡಿದ ಉಲ್ಲೇಖವಿದೆ.
೪ನೇ ಕಂಬದ ಕೊನೆಯ ಶಾಸನ ೧೯ ಸಾಲುಗಳಿಂದ ಕೂಡಿದ್ದು ಸಿಂಘಣನ ನಂತರ ಅಧಿಕಾರಕ್ಕೆ ಬಂದ ಕೃಷ್ಣನ ಕಾಲದಲ್ಲಿ ಅಂದರೆ ೧೨೫೫ರಲ್ಲಿ ಇದನ್ನು ರಚಿಸಲಾಗಿದೆ. ಇದರಲ್ಲಿ ಶ್ರೀ ಕೋಡಿ ಮಹಾಬಳೇಶ್ವರ ದೇವರಿಗೆ ಲಾಳಗೌಸಟ ನಾಯಕನು ಭೂಮಿಯನ್ನು ದಾನ ನೀಡಿದನೆಂದು ತಿಳಿದುಬರುತ್ತದೆ. ಇವನು ದಾನ ನೀಡಿದ ಭೂಮಿಯನ್ನು ಕಾಲಡಿ ಎಂಬ ಗ್ರಾಮದಿಂದ ಖರೀದಿಸಿದ್ದನೆಂದು ತಿಳಿದುಬರುತ್ತದೆ. ಕಾಲಡಿ ಎಂಬುದು ಇಂದಿನ ಕದಡಿ ಗ್ರಾಮವಿರಬಹುದು.
ಹೀಗೆ ನಾಲ್ಕು ಶಾಸನಗಳ ಈ ದೇವಾಲಯ ನಮ್ಮ ಪರಂಪರೆಯನ್ನು ಬಿಂಬಿಸುತ್ತದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅದರ ಬಲಭಾಗದಲ್ಲಿ ಗೋಡೆಗೆ ಹೊಂದಿಕೊಂಡು ದೊಡ್ಡದಾದ ತಗ್ಗು ಕಂಡುಬಂದಿದೆ. ಬಹುಶಃ ವಿಗ್ರಹಚೋರರು ವಿಗ್ರಹದ ಪಕ್ಕದಲ್ಲಿ ಸಂಪತ್ತು ಇರಬಹುದೆಂದು ಈ ಕೆಲಸವನ್ನು ಮಾಡಿರಬಹುದು. ಈ ಗರ್ಭಗೃಹ ಇಂದು ಅವಸಾನದ ಅಂಚಿನಲ್ಲಿದೆ. ಇದರ ಬಾಗಿಲು ತೋರಣದ ಭಾಗದಲ್ಲಿ ಸುಂದರವಾದ ಕೆತ್ತನೆ ಇದೆ. ದೇವಾಲಯದ ಕಂಬಗಳು ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪದ ಅಂಶಗಳನ್ನು ಬಿಂಬಿಸುತ್ತವೆ.
ದೇವಾಲಯದ ಪೂರ್ವ ಮತ್ತು ಪಶ್ಚಿಮದ ಗೋಡೆಗಳು ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿವೆ. ಗೋಡೆಯ ರಕ್ಷಣೆಗೆ ತಾತ್ಕಾಲಿಕವಾಗಿ ಕಲ್ಲಿನ ತಡೆಗೋಡೆಗಳನ್ನು ಸ್ಥಳೀಯರು ನಿರ್ಮಿಸಿದ್ದಾರೆ. ದೇವಾಲಯದ ಶಿಖರವು ದ್ರಾವಿಡ ಶೈಲಿಯಲ್ಲಿ ಉತ್ಕೃಷ್ಟ ಕುಸುರಿನ ಕೆಲಸದೊಂದಿಗೆ ನಿರ್ಮಿಸಲಾಗಿದೆ. ಇದೂ ಕೂಡ ಶಿಥಿಲಾವಸ್ಥೆಯಲ್ಲಿದೆ. ಸುಂದರವಾದ ಕೆತ್ತನೆಯಿಂದ ಕೂಡಿದ ಶಿಖರದ ಮೇಲೆ ಗಿಡ-ಗಂಟೆಗಳು ಬೆಳೆದು ಬೀಳುವ ಸ್ಥಿತಿಯಲ್ಲಿದೆ. ಶಿಖರದ ತುದಿಯ ಕಲ್ಲು (ಆಮಲಕ) ಕೆಳಗೆ ಬಿದ್ದು ಒಡೆದುಹೋಗಿದೆ. ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಸಾಂಪ್ರದಾಯಕವಾಗಿ ಜಾತ್ರೆ ನಡೆಯುತ್ತದೆ. ಎನ್ನುವುದು ಸ್ಥಳೀಯರ ಅಭಿಪ್ರಾಯ. ಆದರೆ ಜಾತ್ರೆ ಎಂದರೆ ಕೇವಲ ದೇವರ ಪೂಜೆ ಮಾಡಿ ಕಲ್ಲಿನ ದೇವರಿಗೆ ನೈವೇದ್ಯ ಮಾಡುವುದಲ್ಲ, ಆ ದೇವಾಲಯದ ಸ್ಥಿತಿ-ಗತಿಯನ್ನು ಗಮನಿಸಿ ಅದರ ರಕ್ಷಣೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದೇ ನಿಜವಾದ ಜಾತ್ರೆ.
ಒಟ್ಟಿನಲ್ಲಿ ಈ ಕೋಡಿ ಬಸವಣ್ಣ ದೇವಾಲಯವು ನಾಗಾವಿ ಗ್ರಾಮದ ಧಾರ್ಮಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಇಂದಿಗೂ ಸ್ಥಳೀಯ ಜನರು ಈ ದೇವಾಲಯದ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಊರಿನ ಆರಾಧ್ಯ ದೇವರೆಂದು ಪೂಜಿಸುತ್ತಿದ್ದರು.






Sunday, May 19, 2013

ನರಸಪ್ಪನ ಬೆಟ್ಟ



ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಪರಿಶೀಲನೆ
ಪ್ರೊ. ಜೆ.ಕೆ. ಮಲ್ಲಿಕಾರ್ಜುನಪ್ಪ
ಮುಖ್ಯಸ್ಥರುಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.


ರಪನಹಳ್ಳಿ ತಾಲ್ಲೂಕಿನ ಹೋಬಳಿ ಕೇಂದ್ರ ಅರಸೀಕೆರೆ, ಇದೊಂದು ಐತಿಹಾಸಿಕ ಕೇಂದ್ರವಾಗಿದ್ದು ಪ್ರಾಚೀನ ಕಾಲದಲ್ಲಿ ನೊಳಂಬರ ಆಳ್ವಿಕೆಗೆ ಒಳಪಟ್ಟಿರುವ ನೊಳಂಬ ನರಸೀಕೆರೆ ಎಂಬ ಹೆಸರು ಇತ್ತು. ಹಾಗೂ ಹೊನ್ನರಸೀಕೆರೆ ಎಂದು ಸಹ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ನೊಳಂಬ ಪಲ್ಲವರು, ಉಚ್ಚಂಗಿಯ ಪಾಂಡ್ಯರು ಮುಂತಾದವರ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರ ಕಾಲದಲ್ಲಿ ಅವರ ಆಳ್ವಿಕೆಗೆ ಒಳಪಟ್ಟಿದ್ದ ಅರಸೀಕೆರೆ ಆ ನಂತರ ಹರಪನಹಳ್ಳಿ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿತು.
ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ ಸುಮರು ೧೬ ಕಿ.ಮೀ. ದೂರದಲ್ಲಿ ಇರುವ ಈ ಊರಿನಲ್ಲಿ ಹರಪನಹಳ್ಳಿ ಪಾಳೆಯಗಾರರ ಕಾಲದ ಶಾಸನವೊಂದು ದೊರೆತಿದೆ. ಇತಿಹಾಸ ಪ್ರಸಿದ್ಧ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದ ಶ್ರೀ ಕೋಲಶಾಂತೇಶ್ವರರ ಕೇಂದ್ರ ಸ್ಥಾನವೂ ಇದಾಗಿತ್ತು. ಹರಪನಹಳ್ಳಿ ಪಾಳೆಯಗಾರರ ಕಾಲದ ಅನೇಕ ಕಟ್ಟಡಗಳು ಇಲ್ಲಿ ಕಂಡುಬರುತ್ತವೆ. ಹರಪನಹಳ್ಳಿ ಪಾಳೆಯಗಾರರಲ್ಲಿ ಅತ್ಯಂತ ಪ್ರಸಿದ್ಧವಾದ ಒಂದನೇ ಸೋಮಶೇಖರ ನಾಯಕನ ಮಗನ ಸಮಾಧಿಯೂ ಇಲ್ಲಿಯ ಕೆರೆದಂಡೆಯ ಮೇಲೆ ಕಂಡುಬರುತ್ತದೆ.
ಅರಸೀಕೆರೆಯಿಂದ ಕಂಚೀಕೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೨ ಕಿ.ಮೀ. ಸಾಗಿ ಬಲಗಡೆ ತಿರುವು ಪಡೆದುಕೊಂಡು ಸಾಗಿದರೆ ‘ಯರಬಳ್ಳಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ ಅತಿ ಪ್ರಾಚೀನವಾದ ಶಿವ ದೇವಾಲಯವಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಭೂಮಟ್ಟದಿಂದ ಸುಮಾರು ೮೦೦-೧೦೦೦ ಅಡಿಗೂ ಹೆಚ್ಚು ಎತ್ತರವಾದ ಹಾಗೂ ಸುಮಾರು ೭೦೦ ಎಕರೆ ಭೂಪ್ರದೇಶವನ್ನು ಆವರಿಸಿಕೊಂಡ ಒಂದು ಬೆಟ್ಟ ಪ್ರದೇಶವಿದೆ. ಈ ಬೆಟ್ಟವನ್ನು ಯರಬಳ್ಳಿ ಬೆಟ್ಟ, ನರಸಪ್ಪನ ಬೆಟ್ಟ, ನರಸದೇವರ ಬೆಟ್ಟ, ನರಸಿಂಹದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಭೌಗೋಳಿಕವಾಗಿ ಬಹು ಆಯಕಟ್ಟಿನ ಸ್ಥಳದಲ್ಲಿ ಇರುವ ಈ ಬೆಟ್ಟದ ಸುತ್ತಲೂ ಅರಣ್ಯ ಆವರಿಸಿತ್ತು. ಆದರೆ ಇಂದು ಈ ಅರಣ್ಯ ಪ್ರದೇಶ ಮಾಯವಾಗಿದ್ದು ಭೂಮಿ ಸಾಗುವಳಿಗೆ ಒಳಪಟ್ಟಿದೆ. ಈ ಪ್ರದೇಶದ ಸುತ್ತಮುತ್ತ ಅಡವಿಹಳ್ಳಿ, ಅಡವಿ ಮಲ್ಲನಕೇರೆ, ಅಡವಿಆನಂದಹಳ್ಳಿ, ಅಡವಿಮಲ್ಲಾಪುರ ಮುಂತಾದ ಹೆಸರಿನ ಗ್ರಾಮಗಳು ಕಂಡುಬರುತ್ತವೆ.
ಬೆಟ್ಟಶ್ರೇಣಿಗೆ ಹೊಂದಿಕೊಂಡಂತೆ ಪ್ರಾಚೀನ ಕಾಲದಲ್ಲಿ ಅರಸನಹಳ್ಳಿ ಅರಸಾಪುರ ಎಂಬ ಹೆಸರಿನ ಗ್ರಾಮವೊಂದು ಇತ್ತಂತೆ. ಆ ಗ್ರಾಮದ ಅವಶೇಷಗಳು ಕಂಡುಬರುತ್ತವೆ. ಮುಖ್ಯವಾಗಿ ರೈತರ ಹಗೇವುಗಳು ಕಂಡುಬರುತ್ತವೆ. ಈ ಬೆಟ್ಟದಲ್ಲಿ ನರಸಿಂಹದೇವರ ದೇವಾಲಯ ಇದ್ದುದರಿಂದಾಗಿ ಈ ‘ಬೇಚಿರಾಕ್ ಗ್ರಾಮಕ್ಕೆ ನರಸಾಪುರ ಎಂದು ಸಹ ಕರೆಯಲಾಗುತ್ತಿತ್ತು. ಒಟ್ಟಾರೆ ಈ ಬೆಟ್ಟ ಶ್ರೇಣಿಯನ್ನು ನರಸಿಂಹ ಬೆಟ್ಟ, ನರಸಪ್ಪನ ಬೆಟ್ಟ, ನರಸಿಂಹ ದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಅರಸೀಕೆರೆಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೪ ಕಿ.ಮೀ. ದೂರದಲ್ಲಿ ಇರುವ ಈ ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಕೇಂದ್ರವಾಗಿದ್ದು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸುಮಾರು ೨೫-೩೦ ಕಿ.ಮೀ.ಗಳ ವ್ಯಾಪ್ತಿಯಲ್ಲಿ ಕಂಡುಬರುವ ಬೆಟ್ಟಗುಡ್ಡಗಳಲ್ಲಿ ಅತ್ಯಂತ ಎತ್ತರವಾದ ಬೆಟ್ಟ ಶ್ರೇಣಿ ಇದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಬೃಹತ್ ಗುಹೆ ಯೊಂದು ಕಂಡುಬರುತ್ತದೆ. ಇಲ್ಲಿಯ ಲಕ್ಷಣಗಳನ್ನು ಅವಲೋಕಿ ಸಿದರೆ ಇದು ಮಾನವ ನಿರ್ಮಿತ ಗುಹೆಯಾಗಿರಲಿಕ್ಕೆ ಸಾಧ್ಯ. ಇದನ್ನು ಪರಿಗಣಿಸಿದರೆ ಇಲ್ಲಿ ಬೃಹತ್ ಶಿಲಾಯುಗದ ಮಾನವ ನೆಲೆಸಿದ್ದಿರಬಹುದೆಂದು ಹೇಳಬಹುದು. ಇದಕ್ಕೆ ಪೂರಕವಾಗಿ ಹೇಳುವಂತೆ ನೀರಿನ ಆಸರೆಗಳು ಬೆಟ್ಟದ ಕೆಳಭಾಗದಲ್ಲಿ ಕಂಡುಬರುತ್ತವೆ.
ಐತಿಹಾಸಿಕ ಕಾಲಕ್ಕೆ ಬಂದರೆ ಈ ಬೆಟ್ಟ ಪರಿಸರದಲ್ಲಿ ಅನೇಕ ಕುರುಹುಗಳು ಕಂಡುಬರುತ್ತವೆ. ಈ ಬೆಟ್ಟಕ್ಕೆ ಹೊಂದಿಕೊಂಡಿರುವ ಯರಬಳ್ಳಿ ಗ್ರಾಮದಲ್ಲಿ ಅತಿಪ್ರಾಚೀನ ಈಶ್ವರ ದೇವಾಲಯ ಕಂಡುಬರುತ್ತದೆ. ಈ ಬೆಟ್ಟದ ಪರಿಸರದಲ್ಲಿ ಎರಡು ಶಾಸನಗಳು ಕಂಡುಬರುತ್ತವೆ. ಗುಹೆಗೆ ಅಂಟಿ ಕೊಂಡಿರುವ ಬೃಹತ್ ಶಿಲಾ ಬಂಡೆಯಲ್ಲಿ ಒಂದು ಶಾಸನ ಕಂಡುಬರುತ್ತಿದ್ದು ಓದುವ ಸ್ಥಿತಿಯಲ್ಲಿ ಇರದೆ ಹಾಳಾಗಿದೆ. ಈ ಶಾಸನ ಬಾದಾಮಿ ಚಲುಕ್ಯ ಚಕ್ರವರ್ತಿ ೨ನೇ ಪುಲಕೇಶಿಯ ಕಾಲಕ್ಕೆ ಸಂಬಂಧಿಸಿದ್ದು ಜೈನ ಮುನಿಗಳು ಈ ಬೆಟ್ಟಶ್ರೇಣಿಯಲ್ಲಿ ತಪಸ್ಸು, ಸಲ್ಲೇಖವ್ರತವನ್ನು ಆಚರಿಸುತ್ತಿದ್ದರೆಂದು ಹೇಳಲಾಗಿದೆ. ಆದರೆ ಈ ಪರಿಸರದಲ್ಲಿ ಯಾವುದೇ ಜೈನ ಅವಶೇಷಗಳು ಇಂದು ಕಂಡುಬರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದ ಇಲ್ಲಿನ ನರಸಿಂಹನ ಪೂಜಾರಿ ಮನೆತನದ ಅಡ್ಡಿ ನಾಗಪ್ಪ ಅವರು ಇಂದಿಗೂ ಸಹ ಅನೇಕ ಜೈನರು ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ. ಇದನ್ನು ಪರಿಗಣಿಸಿದಲ್ಲಿ ಬಾದಾಮಿ ಚಲುಕ್ಯರ ಕಾಲದಲ್ಲಿ ಈ ಬೆಟ್ಟ ಜೈನರ, ಜೈನಮುನಿಗಳ ಕೇಂದ್ರವಾಗಿತ್ತು ಎಂದು ಅಭಿಪ್ರಾಯಪಡಬಹುದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಇರುವ ಗುಹೆಯ ಪ್ರವೇಶದಲ್ಲಿ ಶಿವಲಿಂಗದ ಬೃಹತ್ ಶಿಲ್ಪವಿದೆ. ಇದು ಸುಮಾರು ೪-೫ ಅಡಿ ಎತ್ತರದ ಬೃಹತ್ ಶಿವಲಿಂಗವಾಗಿದ್ದು ಈ ಪರಿಸರ ಶೈವಕೇಂದ್ರವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಇದಕ್ಕೆ ಹೊಂದಿಕೊಂಡಂತೆ ೫ ಅಡಿ ಎತ್ತರದ ಭೈರವನ ಶಿಲ್ಪ ಮತ್ತು ೨ ಅಡಿ ಎತ್ತರದ ದುರ್ಗಾಮಾತೆಯ ಶಿಲ್ಪ ಕಂಡುಬರುತ್ತವೆ. ಇದನ್ನು ಪರಿಗಣಿಸಿ ಇಲ್ಲಿ ಭೈರವ ಆರಾಧನೆ ಕಾಳಾಮುಖ ಶೈವ ಆರಾಧನೆ ಇತ್ತು ಎನ್ನಬಹುದು. ಭೈರವನ ಶಿಲ್ಪ ವಿಶಿಷ್ಟವಾಗಿದ್ದು ೬ ಕೈಗಳು, ತ್ರಿಶೂಲ, ರುಂಡ, ಖಡ್ಗಳಿದ್ದು ಬಿಲ್ಲು ಹಿಡಿದಂತೆ ಕಂಡುಬರುತ್ತದೆ. ಕೊರಳಿಗೆ ರುಂಡ ಮಾಲೆಯನ್ನು ಧರಿಸಿದ್ದಾನೆ. ಪಾದತಳದ ಎಡಭಾಗದಲ್ಲಿ ನಾಯಿ ಬಲಭಾಗದಲ್ಲಿ ಒಬ್ಬ ಮಹಿಳೆ ಕೈ ಮುಗಿದು ಕುಳಿತಂತೆ ಇದೆ.
ದುರ್ಗಾಮಾತೆಯ ಶಿಲ್ಪ ನಾಟ್ಯಭಂಗಿಯಲ್ಲಿ ಇದ್ದು ೮ ಕೈಗಳೊಂದಿಗೆ ನರ್ತಿಸುವಂತೆ ಇದೆ. ಇವುಗಳನ್ನು ನಾವು ಪರಿಗಣಿಸಿದಾಗ ಇಲ್ಲಿ ಶೈವ ಕಾಳಾಮುಖ ಶೈವ ಆಚರಣೆ ಪ್ರಚಲಿತ ಇದ್ದವು ಎನ್ನಬಹುದು.
ಇದೇ ಗುಹೆಯಿಂದ ಹರಪನಹಳ್ಳಿ ಪಾಳೆಯಗಾರರ ಬಹುಮುಖ್ಯ ಕೇಂದ್ರವಾದ ಕೂಲಹಳ್ಳಿಯವರೆಗೆ ಸುರಂಗ ಮಾರ್ಗವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಹೇಳಿಕೆಯನ್ನು ಪರಿಗಣಿಸಿದ್ದಲ್ಲಿ; ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಕಾಲದ ಒಂದು ಮುಖ್ಯ ಕೇಂದ್ರವಾಗಿತ್ತು ಎಂದು ಹೇಳಬಹುದು. ಇದನ್ನು ಸಮರ್ಥಿಸಲು ಕೂಲಹಳ್ಳಿಯಲ್ಲಿಯೂ ಸಹ ಒಂದು ಸುರಂಗ ಮಾರ್ಗ ಕಂಡುಬರುತ್ತದೆ. ಗುಹೆಯನ್ನು ದಾಟಿ ಮುಂದೆ ಸಾಗಿದಲ್ಲಿ ನಮಗೆ ಕ್ರಿ.ಶ. ೧೫೧೦ ದಿನಾಂಕವನ್ನೊಳಗೊಂಡ ಶಾಸನವೊಂದು ಕಂಡುಬರುತ್ತದೆ. ಇದು ಸುಸ್ಥಿತಿಯಲ್ಲಿ ಇದ್ದು ದೇವರಸ ಮತ್ತು ಗಂಗೆಯ ಮಗನಾದ ಗಿರಿದೇವನು ಇಲ್ಲಿಯ ಯೋಗಾನರಸಿಂಹ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಿದನು ಎಂಬ ಮಾಹಿತಿ ನೀಡುತ್ತದೆ. ಪ್ರಸ್ತುತ ಈ ಬೆಟ್ಟದ ಮಧ್ಯಭಾಗದಲ್ಲಿ ಇರುವ ಈ ಯೋಗಾನರಸಿಂಹ ದೇವಾಲಯವನ್ನು ಅವಲೋಕಿಸಿ ದರೆ ಇದಕ್ಕೆ ಯಾವ ಶಿಖರವು ಕಂಡುಬರುವುದಿಲ್ಲ. ಹೆಬ್ಬಂಡೆಯನ್ನು ಮೇಲ್ಛಾವಣಿ ಯಾಗಿ ಬಳಸಿ ಕೇವಲ ಸಣ್ಣ ಎರಡು ಗೋಡೆಗಳನ್ನೊಳ ಗೊಂಡು ಈ ದೇವಾಲಯ ನಿರ್ಮಾಣಗೊಂಡಿದೆ. ಈ ದೇವಾಲಯದ ಎದುರುಗಡೆ ದೀಪಸ್ತಂಭ ಕಂಡುಬರುತ್ತದೆ. ಇಲ್ಲಿಯ ಪೂಜಾರಿ ಮನೆತನದ ಅರಸೀಕೆರೆಯ ಅಡ್ಡಿ ನಾಗಪ್ಪ ಹೇಳುವಂತೆ; ಇಲ್ಲಿಯ ಯೋಗಾ ನರಸಿಂಹನ ಪೂಜೆಯನ್ನು ಈತನ ಪೂರ್ವಿಕರು ಮುತ್ತಜ್ಜನ ಕಾಲದಿಂದಲೂ ನಿರ್ವಹಣೆ ಮಾಡಿಕೊಂಡು ಬರುತ್ತಿರು ವರಂತೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕಂಡುಬರುವುದಿಲ್ಲ. ಇಲ್ಲಿಯ ಪೂಜೆಗೆ ಜೈನ ಧರ್ಮದವರು ಸಹ ಬರುತ್ತಾರಂತೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ವಿಜಯನಗರ ಕಾಲದಲ್ಲಿ ಇತರೆಡೆ ಕಂಡುಬಂದಂತೆ ಇಲ್ಲಿಯೂ ಸಹ ವೈಷ್ಣವ ಆರಾಧನೆ ಬಲಗೊಂಡಂತೆ ಕಾಣುತ್ತದೆ. ಹೀಗಾಗಿ ಇಲ್ಲಿ ಯೋಗಾ ನರಸಿಂಹನ ದೇವಾಲಯ ಸ್ಥಾಪನೆಯಾಗಿರಬಹುದು. ದೇವಾಲಯದ ಒಳಗೆ ಉಗ್ರನರಸಿಂಹನ ರೂಪದಂತೆ ಕಾಣುವ ಯೋಗಾನರಸಿಂಹನ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪದ ಎದುರಿಗೆ ಬಸವನ ನೂತನ ವಿಗ್ರಹವನ್ನು ಮಾಡಿಸಿ ಕ್ರಿ.ಶ. ೨೦೦೩ರಲ್ಲಿ ಸ್ಥಾಪಿಸಿದರಂತೆ. ಭಗ್ನಗೊಂಡ ಹಳೆಯ ಶಿಲ್ಪವನ್ನು ಮರುಜೋಡಿಸಿ ಇನ್ನೊಂದು ಭಾಗದಲ್ಲಿ ಇಟ್ಟಿದ್ದಾರೆ. ಕುಂ.ಬಾ. ಸದಾಶಿವಪ್ಪನವರು ಕ್ರಿ.ಶ. ೧೭೦೦ ರಲ್ಲಿ ಅರಸೀಕೆರೆಯ ಕೋಲುಶಾಂತೇಶ್ವರರು ಜೈನರನ್ನು ಮತಾಂತರ ಗೊಳಿಸಿ ಅವರನ್ನು ಲಿಂಗವಂತರನ್ನಾಗಿ ಮಾಡಿದರು ಎಂದು ತಮ್ಮ ಹರಪನಹಳ್ಳಿ ತಾಲ್ಲೂಕು ಪರಿಚಯ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ಈ ನರಸಪ್ಪನ ಬೆಟ್ಟ ಶೈವ, ವೈಷ್ಣವ, ಜೈನರ ಕೇಂದ್ರವಾಗಿತ್ತು. ಈ ನರಸಪ್ಪನ ಬೆಟ್ಟ ಪ್ರಸ್ತುತ ಯೋಗಾನರಸಿಂಹಸ್ವಾಮಿಯ ಆರಾಧನೆಯ ಕೇಂದ್ರವಾಗಿದ್ದು ಬರಗಾಲ ಬಂದಾಗ ರೈತರು ಇಲ್ಲಿಗೆ ಬಂದು ಮಳೆಕೀಲು ಪರ್ವ ನಡೆಸುತ್ತಾರೆ.
ನರಸಪ್ಪನ ಬೆಟ್ಟದ ವಿಶೇಷ ಐತಿಹಾಸಿಕ ಮಹತ್ವ ಮತ್ತು ಪ್ರಾಮುಖ್ಯತೆಯೊಂದಿಗೆ ಇಲ್ಲಿಯ ಆಕರ್ಷಣೆ ಏನೆಂದರೆ, ಬೆಟ್ಟದ ತುದಿಯಲ್ಲಿ ಕಂಡುಬರುವ ಕೋಟೆ ಮತ್ತು ವೀಕ್ಷಣಾ ಬತೇರಿಗಳು. ಬೆಟ್ಟದ ತುದಿಗೆ ಬುರುಜು ಏರಿಕೊಂಡು ಹೋಗಲು ಹಿಂದೆ ಸುಸಜ್ಜಿತವಾದ ಮಾರ್ಗ ಇದ್ದಿರಬಹುದು ಇಂದು ಅದರ ಕುರುಹುಗಳು ಕಾಣಿಸುತ್ತವೆ. ಈಗಲೂ ಸಹ ಹೆಚ್ಚಿನ ಪ್ರಯಾಸವಿಲ್ಲದೆ ಸುಲಭವಾಗಿ ಬೆಟ್ಟವನ್ನು ಏರಿ ತುದಿಯನ್ನು ತಲುಪಬಹುದು. ಆ ತುದಿಯನ್ನು ತಲುಪಿ ವೀಕ್ಷಣೆ ಮಾಡಿದಾಗ ಸುಮಾರು ೫೦-೬೦ ಕಿ.ಮೀ. ದೂರದವರೆಗೆ ಬರಿಗಣ್ಣಿನಿಂದ ನೋಡಬಹುದಾದ ಬಯಲು ಪ್ರದೇಶ ಕಂಡುಬರುತ್ತದೆ. ಈ ಬೆಟ್ಟದ ತುದಿಯ ಭೂ ಪ್ರದೇಶ ಸೀಮಿತವಾಗಿದ್ದು ಸುಮಾರು ೧೦-೧೫ ಸಾವಿರ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಈ ತುದಿಯ ಸುತ್ತಲೂ ರಕ್ಷಣಾ ಗೋಡೆ ಇದ್ದು ಎಂಟು ದಿಕ್ಕಿನಲ್ಲಿ ವೀಕ್ಷಣಾ ಬತೇರಿಗಳಿವೆ. ಇವುಗಳಲ್ಲಿ ೪ ಸುಸ್ಥಿತಿಯಲ್ಲಿದ್ದು ಉಳಿದ ನಾಲ್ಕು ಹಾಳಾಗಿವೆ. ಕೋಟೆಯ ಎಲ್ಲಾ ಲಕ್ಷಣಗಳನ್ನು ಗುರುತಿಸಬಹುದು. ಪ್ರವೇಶದ್ವಾರವನ್ನು ಕೇವಲ ಕುರುಹುಗಳಿಂದ ಗುರುತಿಸ ಬಹುದಾಗಿದೆ. ಈ ಬೆಟ್ಟದ ಮೇಲುತುದಿಯಲ್ಲಿ ಎರಡು ಹಂತಗಳ ರಕ್ಷಣಾ ವ್ಯವಸ್ಥೆ ಇದ್ದಂತೆ ಕಂಡುಬರುವುದು. ಈ ಎರಡೂ ಹಂತಗಳನ್ನು ಪ್ರತ್ಯೇಕ ಗೋಡೆ ಬೇರ್ಪಡಿಸುತ್ತದೆ. ಈ ಗೋಡೆಯ ಸುತ್ತಲೂ ವೀಕ್ಷಣೆ ಮಾಡಲು ಬಂದೂಕಿನ ನಳಿಕೆಗಳ ಕಿಂಡಿಗಳಿವೆ. ಬತೇರಿಗಳ ಮೇಲಿಂದ ನೋಡಿದಾಗ ಉಚ್ಚಂಗಿದುರ್ಗದ ಕೋಟೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಕೋಟೆಯ ಒಳಗಡೆ ಗಾರೆಯಿಂದ ನಿರ್ಮಿಸಿದ ಕೆಲವು ಚಿಕ್ಕ ಚಿಕ್ಕ ಕಟ್ಟಡ ಅವಶೇಷಗಳಿವೆ. ಕೋಟೆಯ ಕಟ್ಟಡಗಳಲ್ಲಿ ವಿಜಯನಗರದ ಅಂತಿಮಕಾಲದ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ಕಟ್ಟಡ ಲಕ್ಷಣಗಳನ್ನು ಗುರುತಿಸ ಬಹುದು, ಹೆಚ್ಚಿನ ಜನವಸತಿಯ ಲಕ್ಷಣಗಳು ಕಂಡುಬರುವು ದಿಲ್ಲ. ಗಾರೆ, ಇಟ್ಟಿಗೆ, ಮಡಿಕೆ ಕುಡಿಕೆಯ ಅವಶೇಷಗಳು ಕಂಡುಬರುತ್ತವೆ. ಇಲ್ಲಿಯ ಮಣ್ಣನ್ನು ಪರೀಕ್ಷಿಸಿದಾಗ ಬೃಹತ್ ಪ್ರಮಾಣದಲ್ಲಿ ಬೂದಿಯ ಮಿಶ್ರಣ ಕಂಡುಬರುತ್ತದೆ. ಈ ಕೋಟೆ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯಭಾಗ ದಲ್ಲಿದೆ. ಕೋಟೆಯ ಒಳಗಡೆ ವಾಸಿಸುವವರಿಗಾಗಿ ನೀರಿನ ಸೌಕರ‍್ಯಕ್ಕಾಗಿ ಮಳೆಗಾಲದಲ್ಲಿ ಬೀಳುವ ನೀರನ್ನು ಸಂಗ್ರಹಿಸಲು ಬೃಹತ್ ಹೊಂಡವನ್ನು ನಿರ್ಮಿಸಿಕೊಂಡಿದ್ದರು.  ಇಲ್ಲಿ ನಿಧಿಚೋರರು ಆಗಾಗ ದಾಳಿಯಿಟ್ಟು ಭೂಮಿಯನ್ನು ಅಗೆದಿರುವ ಗುರುತುಗಳು ಕಂಡುಬರುತ್ತವೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಕಂಡುಬರುವುದೇನೆಂದರೆ; ವಿಜಯನಗರ ಕಾಲದಲ್ಲಿ ಈ ಕೋಟೆ ಈ ಪ್ರದೇಶದ ಆಯಕಟ್ಟಿನ ಸ್ಥಳವಾಗಿತ್ತು ಹಾಗೂ ನಾಣ್ಯ ಟಂಕಿಸುವ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ. ಇದನ್ನು ಸಮರ್ಥಿಸುವ ಅನೇಕ ಅಂಶಗಳು ಪರಿವೀಕ್ಷಣೆಯ ಸಂದರ್ಭದಲ್ಲಿ ಕಂಡುಬರುತ್ತದೆ.
ಸ್ಥಳೀಯರು ಅಭಿಪ್ರಾಯಪಡುವಂತೆ ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಇದೊಂದು ರಕ್ಷಣಾ ಕೇಂದ್ರ ಹಾಗೂ ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಹೇಳುತ್ತಾರೆ. ಉಚ್ಚಂಗಿದುರ್ಗದ ಕೋಟೆಯ ಕಾವಲುಗಾರರಿಗೆ ಇಲ್ಲಿಯ ರಕ್ಷಣಾಪಡೆಯ ಕಾವಲುಗಾರರು ಮುನ್ನೆಚ್ಚರಿಕೆಗಳನ್ನು ಪಂಜುಗಳನ್ನು ಉರಿಸುವ ಮೂಲಕ ನೀಡುತ್ತಿದ್ದರಂತೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಈ ನರಸಪ್ಪನ ಬೆಟ್ಟ ವಿಜಯನಗರ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಸಾಲೆ ಆಗಿದ್ದಿರಬಹುದು ಮತ್ತು ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಒಂದು ರಕ್ಷಣಾ ಆಯಕಟ್ಟಿನ ಕೇಂದ್ರ ಅಥವಾ ರಕ್ಷಣಾ ವೀಕ್ಷಣಾಲಯ ಆಗಿದ್ದಿರಬಹುದೆಂದು ಅಭಿಪ್ರಾಯ ಪಡಬಹುದಾಗಿದೆ.
ಈ ಬೆಟ್ಟದ ಮೇಲೆ ಪದೇಪದೇ ನಡೆಯುವ ನಿಧಿ ಚೋರರ ಆಕ್ರಮಣಗಳು ಹಾಗೂ ಈ ಭಾಗದ ಸ್ಥಳೀಯರು ಹೇಳುವಂತೆ; ಒಮ್ಮೆ ಇಲ್ಲಿ ಹೊನ್ನಿನ ಮಳೆಯಾಗಿತ್ತಂತೆ, ಮಳೆಯ ನೀರಿನ ಜೊತೆಗೆ ಬೃಹತ್ ಸಂಖ್ಯೆಯಲ್ಲಿ ನಾಣ್ಯಗಳು ಹರಿದು ಬಂದಿದ್ದವಂತೆ. ಇದರಿಂದಾಗಿ ಅರಸೀಕೆರೆಗೆ ಹೊನ್ನರಸೀಕೆರೆ ಎಂದು ಸಹ ಕರೆಯುತ್ತಾರಂತೆ. ಅನೇಕರಿಗೆ ನಾಣ್ಯಗಳು ದೊರೆತ್ತಿದ್ದವಂತೆ, ಈ ಎಲ್ಲ ಅಂಶಗಳನ್ನು ಗಣನೆಗೆ  ತೆಗೆದುಕೊಂಡಲ್ಲಿ ಬಹುತೇಕ ಈ ನರಸಪ್ಪನ ಬೆಟ್ಟದ ತುದಿಯಲ್ಲಿ ಇರುವ ಕೋಟೆ ವಿಜಯನಗರ ಕಾಲ ಅಥವಾ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಿಸುವ ಒಂದು ಕೇಂದ್ರವಾಗಿತ್ತು ಎಂದು ಹೇಳಬಹುದು ಇದನ್ನು ಸಮರ್ಥಿಸಲು ಲಿಖಿತ ದಾಖಲೆಗಳು ಬೇಕಾಗಿವೆ.
ಈ ನರಸಪ್ಪನ ಬೆಟ್ಟ ಇಲ್ಲಿರುವ ಕೋಟೆ ಪರಿಸರದ ಅವಶೇಷಗಳು ಹರಪನಹಳ್ಳಿ ಪಾಳೆಯಗಾರರ ಕಾಲಕ್ಕೆ ಅತಿ ಸಮೀಪದ ಹೋಲಿಕೆ ಇರುವುದರಿಂದಾಗಿ ಹಾಗೂ ಪಾಳೆಯಗಾರರ ಕೇಂದ್ರ ಸ್ಥಾನ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯವರ್ತಿ ಸ್ಥಾನದಲ್ಲಿರುವುದರಿಂದಾಗಿ ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಒಂದು ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ.
[ಪ್ರಬಂಧವನ್ನು ಸಿದ್ಧಪಡಿಸಲು ಪ್ರೇರಣೆ ನೀಡಿದ ನನ್ನ ಸಂಶೋಧನಾ ಮಾರ್ಗದರ್ಶಕರಾದ ಡಾ. ಎಂ. ಕೊಟ್ರೇಶ್ ಅವರಿಗೂ ಹಾಗೂ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದು ಸಹಕರಿಸಿದ ಗೆಳೆಯ ಅಜ್ಜಪ್ಪ ಹಾಗೂ ಸ್ಥಳೀಯ ಮಾಹಿತಿ ನೀಡಿದ ಪೂಜಾರಿ ಅಡ್ಡಿ ನಾಗಪ್ಪ ಹಾಗೂ ರೈತರಾದ ಹನುಮಂತಪ್ಪ ಇವರಿಗೂ ಮತ್ತು ನನ್ನ ಜೊತೆಗೆ ಇದ್ದು ಈ ಕಾರ‍್ಯಕ್ಕೆ ನೆರವಾದ ಉಪನ್ಯಾಸಕ ಮಿತ್ರರಾದ ಶಂಕರಯ್ಯ, ಜೆ.ವಿ. ಮಲ್ಲಿಕಾರ್ಜುನ ಹಾಗೂ ನನ್ನ ಪುತ್ರ ಅಶ್ವಿನ್‌ಕುಮಾರ್ ಜವಳಿ ಇವರಿಗೆ ಧನ್ಯವಾದಗಳು.]

ಆಧಾರಸೂಚಿ
೧.         ದೇವರಕೊಂಡಾರೆಡ್ಡಿ ಇತರರು (ಸಂ). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಕ.ವಿ.ವಿ., ಹಂಪಿ, ೧೯೯೮.
೨.         ಡಾ. ಎಂ. ಕೊಟ್ರೇಶ್, ಹರಪನಹಳ್ಳಿ ತಾಲ್ಲೂಕಿನ ರಕ್ಷಣಾ ಸ್ಮಾರಕಗಳು, ಕ.ವಿ.ವಿ., ಹಂಪಿ-೨೦೧೦.
೩.         ಬಸವರಾಜ ಡಿ., ದಂಡಿ ದುರುಗಮ್ಮನ ಸಾಂಸ್ಕೃತಿಕ ಅಧ್ಯಯನ, (ಎಂ.ಫಿಲ್., ಅಪ್ರಕಟಿತ ಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭.
೪.         ಗಿರಿಜ ಟಿ., ದಾವಣಗೆರೆ ಇದು ನಮ್ಮ ಜಿಲ್ಲೆ, ನಿಹಾರಿಕಾ ಪ್ರಕಾಶನ, ದಾವಣಗೆರೆ, ೨೦೦೧.
೫.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ತಾಲ್ಲೂಕು ಪರಿಚಯ, ಮಾಲತೇಶ ಪ್ರಕಾಶನ, ಹರಪನಹಳ್ಳಿ, ೨೦೦೮.
೬.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ಪಾಳೆಗಾರರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೧೯೯೬.
೭.         ಡಾ. ಜೆ.ಎಂ. ನಾಗಯ್ಯ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಲೋಹಿಯಾ ಪ್ರಕಾಶನ, ಬಳ್ಳಾರಿ.

ಮುಖ್ಯಸ್ಥರು, ಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.





Friday, May 17, 2013

ಯಾದಗಿರಿಜಿಲ್ಲೆಯ ಮಣ್ಣಿನ ಕೋಟೆಗಳು

 ಯಾದಗಿರಿ ಜಿಲ್ಲೆಯ ಮಣ್ಣಿನ ಕೋಟೆಗಳು
ಡಾ. ಶಂಭುಲಿಂಗ ಎಸ್. ವಾಣಿ

ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಭಾರತದಲ್ಲಿ ಆಳ್ವಿಕೆ ಮಾಡಿರುವ ಪ್ರತಿಯೊಂದು ರಾಜ ಮನೆತನಗಳು ತಮ್ಮ ರಾಜ್ಯದ ರಾಜಧಾನಿಯ ರಕ್ಷಣೆಗಾಗಿ ಕೋಟೆಗಳನ್ನು ನಿರ್ಮಿಸಿಕೊಂಡಿವೆ. ಕೋಟೆಯ ಮಹತ್ವವನ್ನು ಕುರಿತು ಐತಿಹಾಸಿಕ ಕೃತಿಗಳಲ್ಲಿ ಹೇಳಲಾಗಿದೆ. ಅಪಾರ ಸಂಖ್ಯೆಯ ಸೈನ್ಯ ಮಾಡುವ ಕಾರ್ಯಕ್ಕಿಂತ ಹೆಚ್ಚಿನ ಕಾರ್ಯವನ್ನು ಒಂದು ಕೋಟೆ ಮಾಡುತ್ತದೆ.
ಕ್ರಿ.ಶ.೨೦೧೦ರಲ್ಲಿ ಗುಲಬರ್ಗಾ ಜಿಲ್ಲೆಯಿಂದ ಪ್ರತ್ಯೇಕಗೊಂಡು ಸ್ವತಂತ್ರ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯು ಪ್ರಮುಖವಾಗಿ ಶಹಾಪುರ ಹಾಗೂ ಸುರಪೂರ ತಾಲ್ಲೂಕುಗಳನ್ನು ಒಳಗೊಂಡಿದೆ. ಈ ಜಿಲ್ಲೆಯು ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಭಾಗದಲ್ಲಿ ನಿರ್ಮಾಣಗೊಂಡ ಕೋಟೆಗಳನ್ನು ಕುರಿತು ಅವಲೋಕಿಸುವಾಗ ಕಲ್ಲಿನಲ್ಲಿ, ಕಾಡಿನ ಮಧ್ಯದಲ್ಲಿ, ಬೆಟ್ಟದ ಮೇಲೆ ಹಾಗೂ ಮಣ್ಣಿನಲ್ಲಿ ನಿರ್ಮಿಸಿರುವ ಕೋಟೆಗಳು ಕಂಡುಬರುತ್ತವೆ. ಪ್ರಸ್ತುತ ಲೇಖನದಲ್ಲಿ ಇದುವರೆಗೆ ಬೆಳಕಿಗೆ ಬಾರದೆ ಇರುವ ಮಣ್ಣಿನ ಕೋಟೆಗಳ ರಚನೆ, ವಿನ್ಯಾಸ, ಮಹತ್ವ, ಅವಶ್ಯಕತೆ ಮತ್ತು ತಂತ್ರಜ್ಞಾನವನ್ನು ಕುರಿತು ಹೇಳಲಾಗಿದೆ.
ಯಾದಗಿರಿ ಜಿಲ್ಲೆಯ ಈಶಾನ್ಯ ಭಾಗಕ್ಕೆ ೪೦ ಕಿ.ಮೀ. ಅಂತರದಲ್ಲಿ ಬರುವ ಗುರಮಿಠಕಲ್ ಸುತ್ತಮುತ್ತಲಿನಲ್ಲಿ ಬರುವ ಚಂಡ್ರಕಿ, ಕಾಕಲ್‌ವಾರ, ಪುಟಪಕ್, ಇಟಕಲ್, ಗಾಜರಕೋಟ್, ಶಿಲಾರಕೋಟ್ ಕೋಟಗಿರಿ ಹಾಗೂ ಸೇಡಂ ತಾಲೂಕಿನಲ್ಲಿ ಬರುವ ಮುಧೋಳಗಳಲ್ಲಿ ೧೮ನೆಯ ಶತಮಾನದಲ್ಲಿ ನಿರ್ಮಾಣಗೊಂಡ ಮಣ್ಣಿನ ಕೋಟೆಗಳು ಇವೆ. ಇಂತಹ ಕೋಟೆಗಳು ಹೆಚ್ಚಿನ ಅವಧಿಯವರೆಗೆ ಬಾಳುವುದಿಲ್ಲ. ಈ ಕೋಟೆಗಳ ಕುರಿತು ಮಾಹಿತಿಯು ಕೇವಲ ಪುಸ್ತಕಗಳಲ್ಲಿ ಮಾತ್ರ ಲಭ್ಯವಾಗುತ್ತದೆ. ಮೇಲೆ ಹೇಳಿರುವ ಹಲವು ಭಾಗದಲ್ಲಿಯ ಕೋಟೆಗಳು ಸಂಪೂರ್ಣವಾಗಿ ನಾಶ ಹೊಂದಿವೆ. ಅದರಲ್ಲಿ ಚಂಡ್ರಕಿ, ಕಾಕಲ್‌ವಾರ, ಮುಧೋಳದ ಕೋಟೆಗಳು ಮಾತ್ರ ಉಳಿದುಕೊಂಡಿವೆ. ಮುಂದಿನ ಕೆಲವು ದಶಕಗಳಲ್ಲಿ ಇವುಗಳು ಸಹ ನಾಶ ಹೊಂದಬಹುದು.
ಕಾಕಲ್‌ವಾರದಲ್ಲಿ ಎರಡು ಹಂತದ ಕೋಟೆಯಿದೆ. ಗ್ರಾಮದ ಸುತ್ತಲು ಇರುವ ಕೋಟೆ ಹಾಗೂ ದೇಸಾಯಿಗಳ ಅರಮನೆಯ ರಕ್ಷಣೆಗಾಗಿ ನಿರ್ಮಿಸಿರುವ ಮತ್ತೊಂದು ಭದ್ರವಾದ ಕೋಟೆ. ಗ್ರಾಮದ ಸುತ್ತಲೂ ಇರುವ ಕೋಟೆಯು ನಾಶ ಹೊಂದಿದ್ದು ಅದರ ಕೆಲವು ಭಾಗಗಳು ಮಾತ್ರ ಅಲ್ಲಲ್ಲಿ ಕಂಡುಬರುತ್ತವೆ. ಇದು ಮಣ್ಣಿನಲ್ಲಿ ನಿರ್ಮಾಣಗೊಂಡಿರುವ ಕೋಟೆಯಾಗಿರುವುದರಿಂದ ಗ್ರಾಮಸ್ಥರು ಅದೇ ಮಣ್ಣನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನೈಋತ್ಯ ದಿಕ್ಕಿನಲ್ಲಿರುವ ಇದರ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಕೊತ್ತಳಗಳಲ್ಲಿ ಒಂದು ಮಾತ್ರ ಉಳಿದುಕೊಂಡಿದೆ. ಅದರ ಕೆಳಹಂತದ ರಚನೆಗೆ ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಬಳಸಲಾಗಿದೆ. ಅದರ ಮೇಲ್ಭಾಗದ ರಚನೆಗೆ ಹಾಳು ಮಣ್ಣನ್ನು ಬಳಸಲಾಗಿದೆ. ಬಿಳಿ ವರ್ಣದ ಈ ಮಣ್ಣಿನಲ್ಲಿ ೨ x ೩ ಅಡಿ ಉದ್ದ ಅಗಲದಲ್ಲಿ ಚೌಕಾಕೃತಿ ಅಥವಾ ಆಯತಾಕಾರವನ್ನು ಮೊದಲು ರಚಿಸಿಕೊಂಡು ನಂತರ ಇವುಗಳನ್ನು ಒಂದರ ಮೇಲೊಂದರಂತೆ ಐದು ಹಂತಗಳಲ್ಲಿ ಜೋಡಿಸಿ ಅದರ ಮೇಲೆ ಅರ್ಧವೃತ್ತಾಕಾರದ ಕೋಟೆ ತೆನೆಯನ್ನು ನಿರ್ಮಿಸಲಾಗಿದೆ. ಈ ಮಣ್ಣಿನ ಗೋಡೆಯ ಮಧ್ಯದಲ್ಲಿ ಹಲವು ರಂಧ್ರಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ವೀಕ್ಷಣಾ ರಂಧ್ರಗಳಾಗಿವೆ ಮತ್ತೆ ಕೆಲವು ಮಳೆಯ ನೀರು ಹೊರಗೆ ಬರಲು ಬಿಡಲಾಗಿದೆ. ಈ ರೀತಿಯ ಮತ್ತೊಂದು ಕೊತ್ತಳವು ಗ್ರಾಮದ ಪೂರ್ವಭಾಗದಲ್ಲಿದ್ದು ಇದು ಸಹ ಅವನತಿ ಹೊಂದಿದೆ. ಇನ್ನು ಉಳಿದ ಕಡೆ ಮಣ್ಣಿನ ಗೋಡೆ ಸಂಪೂರ್ಣವಾಗಿ ಅವನತಿ ಹೊಂದಿದ್ದು ತಳಭಾಗದಲ್ಲಿರುವ ಕಲ್ಲಿನ ರಚನೆ ಮಾತ್ರ ಉಳಿದುಕೊಂಡಿದೆ. ದೇಸಾಯಿಗಳ ಸಂಸ್ಥಾನದ ಅರಮನೆಯ ಸುತ್ತಲೂ ಕಲ್ಲಿನ ರಕ್ಷಣಾ ಗೋಡೆ ಮತ್ತು ಕಟ್ಟಿಗೆಯಲ್ಲಿ ನಿರ್ಮಿಸಿರುವ ಅರಮನೆಯು ಇನ್ನೂ ಸುಸ್ಥಿತಿಯಲ್ಲಿದೆ.
ಗುರಮಿಠಕಲ್ ನಗರದ ಕೇಂದ್ರ ಭಾಗದಲ್ಲಿ ಸುಮಾರು ೨ ಕಿ.ಮೀ. ಮಣ್ಣಿನ ಕೋಟೆಯಿದೆ. ಇದರ ಸುತ್ತಲಿನ ರಚನೆಗೆ ತಳಭಾಗದಲ್ಲಿ ೫ ರಿಂದ ೧೦ ಅಡಿ ಎತ್ತರದವರೆಗೆ ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಬಳಸಲಾಗಿದ್ದು ಅದರ ಮೇಲ್ಭಾಗದಲ್ಲಿ ೧೦ ರಿಂದ ೧೫ ಅಡಿ ಎತ್ತರದ ಮಣ್ಣಿನ ಗೋಡೆ ಇದೆ. ತಳಭಾಗವು ೮ ರಿಂ ೧೦ ಅಡಿ ಅಗಲವಾಗಿದ್ದು ಮೇಲೆ ಹೋದಂತೆ ಕಿರಿದಾಗುತ್ತದೆ. ಇನ್ನೂ ಕೆಲವೊಂದು ಭಾಗದ ಮಣ್ಣಿನ ಗೋಡೆಯು ೧೫ ರಿಂದ ೨೦ ಅಡಿ ಎತ್ತರವಾಗಿದೆ. ಈ ಕೋಟೆಯ ವಿಶೇಷತೆ ಎಂದರೆ ತೆನೆಗಳ ಹಿಂದೆ ಸೈನಿಕರಿಗೆ ಕಾವಲು ಮಾಡಲು ಯಾವುದೇ ಸ್ಥಳಾವಕಾಶವಿರುವುದಿಲ್ಲ. ಈ ರೀತಿಯ ರಚನೆಯು ಪ್ರಬಲವಾದ ಕೋಟೆಗಳಲ್ಲಿ ಇರುವುದಿಲ್ಲ. ಆದ್ದರಿಂದ ರಕ್ಷಣೆಯ ದೃಷ್ಟಿಯಿಂದ ಇದೊಂದು ಸಾಮಾನ್ಯ ಕೋಟೆಯಂತೆ ಕಂಡುಬರುತ್ತದೆ. ಕೋಟೆಯು ಆದಿಲ್ ಶಾಹಿಗಳ ಕೊನೆಕಾಲದಲ್ಲಿ ರಚನೆಗೊಂಡಿದ್ದು ನಂತರ ಬಂದ ದೇಸಾಯಿಗಳು ಇದನ್ನು ಬಲಪಡಿಸಿ ಸುತ್ತಲು ಮಣ್ಣಿನ ಕೋಟೆಯನ್ನು ನಿರ್ಮಿಸಿದರು. ಪ್ರಸ್ತುತ ಕೋಟೆಯ ದಕ್ಷಿಣ ಭಾಗವು ಅವನತಿಯ ಹಂತದಲ್ಲಿದೆ. ಅಲ್ಲದೆ ಕೇಂದ್ರಭಾಗದಲ್ಲಿರುವ ೩೦ ಅಡಿ ಎತ್ತರದ ಕಾವಲು ಗೋಪುರವನ್ನು ಸಹ ಮಣ್ಣಿನಲ್ಲಿ ನಿರ್ಮಿಸಲಾಗಿದೆ. ಈ ಮಣ್ಣಿನ ರಾಶಿಯನ್ನು ಸ್ಥಳೀಯ ಜನರು ತಮ್ಮ ತಮ್ಮ ಹೊಲಗಳಿಗೆ ಸಾಗಿಸುತ್ತಿದ್ದಾರೆ.
ಗುರುಮಿಠಕಲ್‌ನ ಪೂರ್ವದಿಕ್ಕಿಗೆ ೬ ಕಿ.ಮೀ. ದೂರ ದಲ್ಲಿರುವ ಚಂಡ್ರಕಿ ಗ್ರಾಮದಲ್ಲಿ ಆಕರ್ಷಕವಾದ ಮಣ್ಣಿನ ಕೋಟೆಯಿದೆ. ಗ್ರಾಮ ಪೂರ್ವಕ್ಕೆ ಅರ್ಧ ಕಿ.ಮೀ. ದೂರ ದಲ್ಲಿರುವ ಈ ಕೋಟೆಯು ಸುಮಾರು ೨ ಕಿ.ಮೀ. ಸುತ್ತಳತೆ ಯಲ್ಲಿ ವೃತ್ತಾಕಾರದಲ್ಲಿದೆ. ೧೭ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ ೧೮ನೆಯ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡಿರುವ ಈ ಕೋಟೆಯು ಹೈದ್ರಾಬಾದ ನಿಜಾಮನ ಆಳ್ವಿಕೆಗೆ ಒಳಪಟ್ಟಿತು. ನಿಜಾಮನ ಜಾಗೀರದಾರನಿಂದ ಸ್ಥಳೀಯರಾದ ಶ್ರೀ ವಿಠಲರಾವ ಭೀಮಶೇನರಾವ ಕುಲಕರ್ಣಿಯವರು ಖರೀದಿಸಿದರು. ಸುಮಾರು ೨೦೦ ವರ್ಷಗಳಿಂದ ಕೋಟೆಯ ಒಳಗಡೆ ಇರುವ ಭೂಮಿಯನ್ನು (೨೨ ಎಕರೆ ೧೧ ಗುಂಟೆ) ಇದೇ ಮನೆತನದವರು ಸಾಗುವಳಿ ಮಾಡುತ್ತಿದ್ದಾರೆ. ಕಾಕಲವಾರದ ಲಕ್ಷ್ಮಣಪ್ಪ ದೊರೆಗಳ ಅಧೀನದಲ್ಲಿ ಈ ಕೋಟೆಯನ್ನು ಕುಲಕರ್ಣಿಯವರು ಖರೀದಿಸಿದ್ದಾರೆಂದು ಅದೇ ಮನೆತನದ ರಘುನಾಥ ರಾವ ಕುಲಕರ್ಣಿಯವರು ಹೇಳುತ್ತಾರೆ. ೧೯೪೭ರ ಪೂರ್ವದಲ್ಲಿ ಈ ಪ್ರದೇಶ ಸಂಪೂರ್ಣವಾಗಿ ಗಿಡ ಮರಗಳಿಂದ ಆವರಿಸಿಕೊಂಡಿದ್ದು ನಂತರದಲ್ಲಿ ಇದನ್ನು ಸ್ವಚ್ಚಗೊಳಿಸಿ ಸಾಗುವಳಿ ಮಾಡಲಾಯಿತು.
ಪ್ರಸ್ತುತ ಈ ಕೋಟೆಯು ಕೇಂದ್ರ ಅಥವಾ ರಾಜ್ಯ ಸರಕಾರದ ಆಧೀನದಲ್ಲಿ ಇರದೆ ಆ ಜಮೀನಿನ ಒಡೆಯರಾದ ಕಿಶನ್‌ರಾವ ಕುಲಕರ್ಣಿಯವರ ಸ್ವತ್ತಾಗಿದೆ. ಇದನ್ನು ಕೋಟೆಯೆಂದು ಪರಿಗಣಿಸದೆ ತಮ್ಮ ಹೊಲಕ್ಕೆ ಇರುವ ಬೇಲಿ ಎಂದು ಪರಿಗಣಿಸಿದ್ದಾರೆ. ಇಂತಹ ಅಪರೂಪದ ಆಕರ್ಷಕ ಕೋಟೆಯು ನಮಗೆ ಈ ಭಾಗದಲ್ಲಿ ಎಲ್ಲಿಯು ಕಂಡುಬರುವುದಿಲ್ಲ.
ಪೂರ್ವ ದಿಕ್ಕಿನಲ್ಲಿ ಇದರ ಪ್ರಮುಖ ಪ್ರವೇಶದ್ವಾರವಿದೆ. ಅದರ ಮುಂಭಾಗದಲ್ಲಿ ಸು. ೯೦% ಪ್ರತಿಶತ ದ್ವಾರವನ್ನು ಕಾಣದಂತೆ ವೃತ್ತಾಕಾರದ ಮಣ್ಣಿನ ತಡೆ ಗೋಡೆಯನ್ನು ರಚಿಸಲಾಗಿದೆ. ಈ ಗೋಡೆಯ ಎರಡೂ ಬದಿಯಲ್ಲಿ ಕಂದಕವನ್ನು ರಚಿಸಿಕೊಂಡಿರುವುದರಿಂದ ಅದು ಸಂಪೂರ್ಣವಾಗಿ ನೀರಿನಲ್ಲಿ ನಿಂತಂತೆ ಕಂಡುಬರುತ್ತದೆ. ದ್ವಾರದ ಮುಂಭಾಗದಲ್ಲಿ ಈ ವಿಶಾಲವಾದ ಸ್ಥಳದಲ್ಲಿ ಕಾವಲುಗಾರರಿಗೆ ರಕ್ಷಣಾತ್ಮಕವಾದ ಸ್ಥಳವಿದೆ. ಕೋಟೆಯ ಒಳಭಾಗದಲ್ಲಿನ ಮಣ್ಣಿನಿಂದ ನಿರ್ಮಿಸಿರುವ ಎಲ್ಲಾ ಕಟ್ಟಡಗಳು ಅವನತಿ ಹೊಂದಿದ್ದರೂ ಕಲ್ಲಿನಲ್ಲಿ ನಿರ್ಮಿಸಿರುವ ಮಲ್ಲಿಕಾರ್ಜುನ ದೇವಾಲಯ ಅತ್ಯಂತ ಸುಭದ್ರ ಸ್ಥಿತಿಯಲ್ಲಿದೆ. ಇದರ ಸುತ್ತಲು ೧೫ ರಿಂದ ೨೦ ಅಡಿ ಎತ್ತರದ ಮಣ್ಣಿನ ರಕ್ಷಣಾಗೋಡೆಯನ್ನು ನಿರ್ಮಿಸಲಾಗಿದೆ. ಕಲಾತ್ಮಕವಾಗಿ ನಿರ್ಮಿಸಿರುವ ಈ ಕೋಟೆಯ ಸುತ್ತಲೂ ೬ ಕಾವಲು ಗೋಪುರಗಳಿವೆ. ಇವುಗಳು ೩೦ ಅಡಿ ಎತ್ತರವಾಗಿದ್ದು, ಅದರಲ್ಲಿ ಅರ್ಧಭಾಗ ಸ್ಥಳೀಯವಾಗಿ ಲಭ್ಯವಾಗುವ ಬೆಣಚು ಕಲ್ಲುಗಳನ್ನು ಮತ್ತು ಕಪ್ಪನೆಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದ್ದು ಮೇಲ್ಭಾಗವನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಮಣ್ಣಿನ ಗೋಡೆಯ ನಿರ್ಮಾಣದಲ್ಲಿ ಒಂದು ವಿಶೇಷ ಕೌಶಲ್ಯ ಕಂಡುಬರುತ್ತದೆ. ಮೊದಲು ಮಣ್ಣನ್ನು ಹದಮಾಡಿ ಅವಶ್ಯವಿರುವ ಆಕಾರದಲ್ಲಿ ಅದನ್ನು ಸಿದ್ಧಪಡಿಸಿ ನಂತರದಲ್ಲಿ ಕೆಲವು ದಿನಗಳವರೆಗೆ ಅದನ್ನು ಒಣಗಿಸಿ ಆಮೇಲೆ ಅವುಗಳನ್ನು ಹಂತಹಂತವಾಗಿ ಒಂದರ ಮೇಲೆ ಒಂದನ್ನು ಜೋಡಿಸಲಾಗುತ್ತಿತ್ತು. ಎರಡು ಮಣ್ಣಿನ ಮುದ್ದೆಗಳ ಮಧ್ಯದಲ್ಲಿ ಸ್ವಲ್ಪ ಹಸಿ ಮಣ್ಣನ್ನು ಬಳಸಿರುವಂತೆ ಕಂಡುಬರುತ್ತದೆ.
ಅಲ್ಲದೆ ಗೋಡೆಯ ಮಧ್ಯದಲ್ಲಿ ಅವಶ್ಯವಿರುವೆಡೆ ರಂಧ್ರಗಳನ್ನು ಮುಂಚಿತವಾಗಿಯೇ ಕೊರೆಯುತ್ತಿದ್ದರು. ಇನ್ನೂ ಕೆಲವು ಕಡೆಯಲ್ಲಿ ಮಣ್ಣಿನ ಕೊಳವೆಗಳನ್ನು ಜೋಡಿಸಲಾಗುತ್ತಿತ್ತು. ಅವುಗಳು ಇಂದಿಗೂ ಯಥಾಸ್ಥಿತಿಯಲ್ಲಿ ಈ ವೀಕ್ಷಣಾ ರಂಧ್ರಗಳಿಂದ ಸುಮಾರು ೧ ಕಿ.ಮೀ. ದೂರದ ವರೆಗೆ ವೀಕ್ಷಿಸಬಹುದು. ಪ್ರತಿಯೊಂದು ಕೊತ್ತಳದ ಸುತ್ತಲು ಕೋಟೆಯ ತೆನೆಗಳಿವೆ. ಅಲ್ಲದೆ ಇಡಿಯ ಕೋಟೆ ಗೋಡೆಯ ಮೇಲ್ಭಾಗದಲ್ಲಿ ವಿಶಾಲವಾದ ತೆನೆಗಳು ಅವುಗಳ ಹಿಂಭಾಗದಲ್ಲಿ ಕಾವಲುಗಾರ ರಕ್ಷಣೆಯ ಸ್ಥಳವಿದೆ.
ಈ ಮಣ್ಣಿನ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಸುಮಾರು ೧೦ ಅಡಿ ದಪ್ಪವಾಗಿದ್ದು, ೧೫ ಅಡಿ ಎತ್ತರವಿದೆ. ನಂತರ ಮುಂದೆ ಐದು ಅಡಿಯಲ್ಲಿ ಗೋಡೆಯನ್ನು ನಿರ್ಮಿಸಿ ಉಳಿದ ಸ್ಥಳವನ್ನು ಕಾವಲುಗಾರರು ಕೋಟೆಯ ಸುತ್ತಲೂ ಮೇಲ್ಭಾಗದಲ್ಲಿ ಸುತ್ತಾಡಲು ಅವಕಾಶ ಮಾಡಲಾಗಿದೆ. ಅಲ್ಲದೆ ಸುಮಾರು ೪ ಅಡಿ ದಪ್ಪ ೬ ಅಡಿ ಎತ್ತರದ ವಿಶಾಲವಾದ ತೆನೆಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಲಾಢ್ಯ ಕೋಟೆಯಂತೆ ಇದು ಕಂಡುಬರುತ್ತದೆ. ಇದರ ಮತ್ತೊಂದು ವಿಶೇಷತೆ ಎಂದರೆ ಸಮತಟ್ಟಾದ ಸ್ಥಳದಲ್ಲಿ ನಿರ್ಮಿಸಿರುವ ಮಣ್ಣಿನ ಕೋಟೆಗೆ ಕಂದಕವಿರುವುದಿಲ್ಲ. ಆದರೆ ಚಂಡ್ರಕಿ ಕೋಟೆಯ ಮೂರು ಭಾಗಗಳಲ್ಲಿ ಕಂದಕವಿದೆ. ಜೊತೆಗೆ ಕೋಟೆಯಿಂದ ಹೊರಭಾಗಕ್ಕೆ ಸಂಪರ್ಕ ಕಲ್ಪಿಸಲು ಎರಡು ಗುಪ್ತದ್ವಾರಗಳು ಹಾಗೂ ಒಂದು ದಿಡ್ಡಿಬಾಗಿಲು ಇದೆ. ಕೋಟೆಯ ಪಶ್ಚಿಮ ಭಾಗದ ಗೋಡೆಗೆ ಅಂಟಿಕೊಂಡಿರುವ ಒಂದು ಕಾವಲು ಗೋಪುರದ ಮೇಲೆ ೧೨ ಅಡಿ ಉದ್ದನೆಯ ತೋಪು ಇದೆ. ಈ ಎಲ್ಲಾ ಅಂಶಗಳಿಂದ ಇದೊಂದು ಬಲಾಢ್ಯ ಮಣ್ಣಿನ ಕೋಟೆ ಎಂದು ಹೇಳಲಾಗಿದೆ.
ಆದರೆ ಪ್ರಸ್ತುತ ಇದರ ಸ್ಥಿತಿ ಶೋಚನೀಯವಾಗಿದೆ. ಕೋಟೆಯ ಪಶ್ಚಿಮ ಭಾಗದ ಗೋಡೆ ಬಹುಮಟ್ಟಿಗೆ ಬಿದ್ದುಹೋಗಿವೆ. ಅಲ್ಲಿಂದ ದನಕರುಗಳು ಒಳಗಡೆ ಬಾರದಂತೆ ಮುಳ್ಳಿನ ಬೇಲಿಯನ್ನು ಹಾಕಲಾಗಿದೆ. ರೈತರು ಉತ್ತರ ಭಾಗದ ಒಳಗೋಡೆಯನ್ನು ಕೆಡವಿ ಅಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಈ ಭಾಗದಲ್ಲಿಯ ತೆನೆಗಳು ನೆಲಕ್ಕೆ ಉರುಳಿ ಬೀಳುತ್ತಿವೆ. ಕೋಟೆಗೋಡೆಯ ಮಣ್ಣನ್ನು ತಂದು ಒಳಭಾಗದಲ್ಲಿರುವ ಬಾವಿಗಳನ್ನು ಮುಚ್ಚುತ್ತಿದ್ದಾರೆ. ಗೋಡೆಯ ನಿರ್ಮಾಣಕ್ಕೆ ಬಳಸಿದ ಮಣ್ಣು ಫಲವತ್ತಾಗಿರುವುದರಿಂದ ಅದರ ಮೇಲೆ ಗಿಡ ಮರಗಳು ಬೆಳೆದು ಅವುಗಳಿಂದ ಕೋಟೆಯು ಅವನತಿ ಹೊಂದುತ್ತಲಿದೆ. ಈ ರೀತಿಯ ಚಟುವಟಿಕೆಗಳಿಗೆ ಕೋಟೆಯು ಒಳಗಾಗಿರುವುದರಿಂದ ಇದರ ರಕ್ಷಣೆ ಅಸಾಧ್ಯವಾಗಿದೆ.
ಗುರಮಿಠಕಲ್ ಸಮೀಪದಲ್ಲಿರುವ ಇಟಕಲ್ ಕೋಟೆಯು ಗ್ರಾಮರಕ್ಷಣಾಕೋಟೆಯಾಗಿದ್ದು ಇದರ ರಚನೆ
ಭಿನ್ನವಾಗಿದೆ. ತಳಪಾಯದಲ್ಲಿ ಕೇವಲ ಎರಡು ಅಡಿಯ ಕಲ್ಲಿನ ಗೋಡೆ ಇದ್ದು ಅದರ ಮೇಲೆ ಒಂದು ಶಹಾಬಾದ ಪರ್ಶಿಯಂತಹ ಕಲ್ಲನ್ನು ಹಾಕಿ ಅದರ ಮೇಲೆ ೨೦ರಿಂದ ೨೫ ಅಡಿ ಎತ್ತರದ ಮಣ್ಣಿನ ಗೋಡೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಹಲವು ಬಗೆಯ ರಂಧ್ರಗಳನ್ನು ಕೊರೆಯಲಾಗಿದೆ ಇಡೀ ಗ್ರಾಮದ ಸುತ್ತಲು ಇರುವ ಈ ಕೋಟೆಯು ಕೆಲವು ಭಾಗಗಳಲ್ಲಿ ಮಾತ್ರ ಉಳಿದುಕೊಂಡಿದೆ ಇದರ ಕೆಲವು ಭಾಗಗಳನ್ನು ಕಲ್ಲಿನಿಂದ ಪುನರ್‌ನಿರ್ಮಿಸಲಾಗಿದೆ. ಆದರೆ ಗ್ರಾಮದ ಚರಂಡಿಯ ನೀರು ಕೋಟೆ ಗೋಡೆಯ ತಳಭಾಗದಿಂದ ಹರಿದು ಹೊರಗಡೆ ಬರುತ್ತದೆ.
ಒಟ್ಟಾರೆ ಯಾದಗಿರಿ ಜಿಲ್ಲೆಯಲ್ಲಿ ಬರುವ ಈ ಮಣ್ಣಿನ ಕೋಟೆಗಳು ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಇವುಗಳ ಅಧ್ಯಯನಕ್ಕೆ ಇನ್ನೂ ಹೆಚ್ಚಿನ ಆಧಾರಗಳ ಅವಶ್ಯಕತೆ ಇದೆ. ಸ್ಥಳೀಯವಾಗಿ ಲಭ್ಯವಾಗುವ ಮಾಹಿತಿ ಹಾಗೂ ಕೋಟೆಯ ಕುರಿತು ರಚನೆಗೊಂಡ ಕೃತಿಗಳಿಂದ ನಮಗೆ ಸಾಮಾನ್ಯ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ಗ್ರಾಮರಕ್ಷಣಾಕೋಟೆಯ ಬಗ್ಗೆ ಯಾವುದೇ ಸ್ಪಷ್ಟವಾದ ದಾಖಲೆಗಳು ಲಭ್ಯವಾಗುವುದಿಲ್ಲ. ಇವುಗಳನ್ನು ಕುರಿತು ಅಧ್ಯಯನ ಕಷ್ಟಕರವಾದುದು. ಆದರೂ ಕ್ಷೇತ್ರ ಅಧ್ಯಯನದಿಂದ ಇವುಗಳ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ
ಸ್ನಾತಕೋತ್ತರ ಕೇಂದ್ರ, ಸರಕಾರಿ ಕಾಲೇಜು
ಗುಲಬರ್ಗಾ-೫೮೫೧೦೩.

ಆಧಾರಸೂಚಿ
೧.         Joshi S.K., Defence Architecture in Early Karnataka..
೨.         ಪಾಟೀಲ ಚನ್ನಬಸಪ್ಪ ಎಸ್., ಕರ್ನಾಟಕದ ಕೋಟೆಗಳು, ಕನ್ನಡ ವಿ.ವಿ. ಹಂಪಿ, ೧೯೯೯.
೩.  .J.N. Kamalpurkar, The Deccan Forts.
೪            Aruni S.K., Surapura Samsthana Historical and Archaeological Study poligar state in south India, Bharatiya Kala Prakashana, Delhi-2004

೫.         ಮುಡಬಿ ಗುಂಡೆರಾವ, ಸೇಡಂ ತಾಲ್ಲೂಕಿನ ಐತಿಹಾಸಿಕ ಸ್ಮಾರಕಗಳು.
೬.         ಎಂ.ಬಿ. ಪಾಟೀಲ, ಗುಲಬರ್ಗಾ ಜಿಲ್ಲಾ ಗ್ಯಾಸೆಟಿಯರ್.
೭.         ಡಾ. ಸಿ. ಮಹದೇವ, ವಿಜಯನಗರೋತ್ತರ ಕಾಲದ ಬಳ್ಳಾರಿ ಪ್ರದೇಶದ ಗ್ರಾಮ ರಕ್ಷಣಾ ವಾಸ್ತು ಮತ್ತು ರಾಜಕೀಯ ಸ್ಥಿತಿಗತಿ.
೮.         ಡಾ. ಶಂಭುಲಿಂಗವಾಣಿ, ರಕ್ಷಣಾ ವಾಸ್ತುಶಿಲ್ಪ, ಗುಲಬರ್ಗಾ ಜಿಲೆ, (ಅಪ್ರಕಟಿತ ಪಿಎಚ್‌ಡಿ ಪ್ರಬಂಧ)Gulbarga city and its Monuments (Unpublished M. Phil Thieses.
೯.         ಶ್ರೀಶೈಲ ಬಿರಾದಾರ, ಸೇಡಂ ಒಂದು ಸಾಂಸ್ಕೃತಿಕ ಅವಲೋಕನ, ಸಂಸ್ಕೃತಿ ಪ್ರಕಾಶನ, ಬಸವನಗರ, ಸೇಡಂ, ಗುಲ್ಬರ್ಗಾ-೨೦೦೫.